ಪುಟ:ಇಂದ್ರವಜ್ರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಂ ಇಪ್ಪತ್ತೆಂಟನೆಯ ಸಾರಿ ಭೋಜಮಹಾರಾಜನು ವಿಕವವಿರದ ಸಮೀಪಕ್ಕೆ ಬರಲ,,ಪೀಠದ ಮೇಲಿನ ಆ ಸಂಬೈಯ ಪ್ರತಿಮೆಯ - ಹೀಗೆಂದಿ ಕು: ~ ಒಂದು ಸಲ ವಿಕ್ರಮಭೂಮಿಶನು ದೇಶಸಂಚಾರಮಾಡು ತಿರಲು, ಒಂದೂರಿನಲ್ಲಿ ನಾರು ವಿದೇಶಿಗಳನ್ನು ಕಂಡ ನು. ಅವ ರನ್ನು ತನು ವಿಶೇಷವೇನೆಂದು ಕೇಳಲಾಗಿ, ಅವರಿರೀತಿ ವಿವರಿಸಿ ದರ: ಈ ಅಯ್ಯಾ, ಇಲ್ಲಿಗೆ ಓಲ್ಪದರದಲ್ಲಿ ಭೇತಾಳಪುರಿಯೆಂಬ ಪಟ್ಟಣವುಂಟು, ಅಲ್ಲಿನ ಗ್ರಾಮದೇವತೆಯಾದ ಚಂಡೀದೇವಿಗೆ ಆ ವೂರಿನವರು ವರ್ಷಕ್ಕೊಂದು ಬಾರಿ ಜಾತ್ರೆ ನಡೆಯಿಸಿ, ಆ ಜಾತ್ರೆ ಯ ದಿನ ನರಬಲಿಯನ್ನರ್ಪಿಸುವರು. ಆದಲಿಗಾಗಿ, ಆವೇಳೆಗೆ ಅ ಲ್ಲಿಗೆ ಬಂದಿರುವ ಪರದೇಶೀಯರನ್ನೇ ಅವರು ಹಿಡಿಯುವರು, ನಿನ್ನೆ ಅಲ್ಲಿ ನಾವುಗಳು ಈ ವರ್ತ ಮಾನವನ್ನು ಕೇಳಿ, ಭಯಭಾಂತ ರಾಗಿ, ಚಿತ್ರಣವನ್ನುಳಿಸಿ ಕೊಳ್ಳುವ ನಿಮಿತ್ತ ಇಲ್ಲಿಗೆ ಓಡಿಬಂದಿರು ವೆವು. ಈ ಸದ್ದಿ ಯನ್ನು ಕೇಳಿದೊಡನೆಯೆ ವಿಕ್ರಮಾದಿತ್ಯನು ಭೇತಾಳ ಪುರಿಗೆ ಪಯಣವಾಡಿ, ಚಂಡಿಕಾಲಯಕ್ಕೆ ಹೋಗಿ ಅಲ್ಲಿನವರು ಬಲಿಕೊಡುವುದಕ್ಕೆ ತಂದಿದ್ದ ಕೃಶನಾದ ಮನುಷ್ಯ ಇನ್ನು ಬಿಡಿಸಿ, ಪುಪ್ಪಾಂಗನಾದ ತಾನೇ ದೇವತೆಗೆ ಆಹುತಿಯಾಗಿ ರಲು ಒಪ್ಪಿಕೊಂಡನು, ಆತನು ಬಲಿಕೊಡುವ ಹೊತ್ತಿಗೆ ಪಕುಸ್ಥಾನದಲ್ಲಿ ನಿಂತು ಶಿರಚ್ಛೇದನ ಆಗಿ ಕತ್ತಿಯನ್ನೆತ್ತಲು, ದೇವತೆಯು ಪ್ರತ್ಯಕ್ಷಳಾಗಿ ಆತನ ಭೂತದಯೆಯನ್ನೂ, ಪರೋ ಪಕಾರ ಬುದ್ಧಿಯನ್ನೂ ಕೊಂಡಾಡಿ, ವಿಕ್ರಮನನ್ನು ಹರಸಿದಳು. ಅಲ್ಲಿಂದ ಮುಂದಕ್ಕೆ ನರಬಲಿಯನ್ನು ಮಾಡಿಸದಿರಬೇಕೆಂದು ಆತ ನು ಕೇಳಿಕೊಳ್ಳಲು, ಅದರಂತೆಯ ಒಪ್ಪಿ, ಆ ಊರಿನವರಲ್ಲಿ ಅನುಗ್ರಹಿಸಿದರು.”