ಪುಟ:ಅನುಭವಸಾರವು.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 m

2

- ನಡೆ ದೇವಯಾತ್ರೆ ನಿಂದೆಡೆ ವಾಣಾಣಸಿ ಮನಂ | ಹಿಡಿದುದೇ ಸುಮತ ಮಹುದು ಯೋಗೀಚ್ಚರಂ ನುಡಿದುದೇ ಮಂತ್ರವೆನಿಸುವುದು | ೧೧ ಜನಿಯಿಂ ದಾತಂಗೆ ಮನುಜ ವೆಲ್ಲಿಯದು | ಮನುಜತ್ತವಿಲ್ಲ ದವನಿಗಾ ಶ್ರಮಧರ್ಮ ವನು ಪೇಳಲಾಗದೆಲೆವತಾ|| ಇಂತಾಗೆ ಮರಣಭಯ ಮುಂತಾದವಿಕೃತಿಗಳ | ವೆಂತೊರೆಯಬರ್ಸ್ಸು ದವನಲ್ಲಿ ಮರಳ ಜನ್ಮಾಂತರದ ಸುದ್ದಿಗೊಳ ಲುಂಟೇ! ೧೩ ಇದನರಿಯದನ್ಯಭಾವದೊಳು ದೇವತೆಯ ಭಜೆ | ನಿದೊಡೆ ಭವದಲಿ ಬಹನೆಂದುದೇತಿಶ್ರುತಿ |ಣಿದವಿತಾನೊರೆವುದೆಲೆಪುತ್ರಾ ೧೪ ಧ್ಯಾಯತಿವೆತಿಲಾಯತೀತಿಸು | ದಾಯವಾಕ್ಯಂಗಳಿಹವಾಗಿ ಯೋಗಿ ನಿಜ |ದಾಯತದೊಳಪ್ಪನೊಲಿದಂತೆ | ೧೦ ಮತ್ತು ಆತನಿಗೆ ಸಂಚಾರವೇ ದೇವತಾ ಯಾತ್ರೆ, ನಿಂತಸ್ಥಳವೇ ಕಾಶೀ ಕ್ಷೇತ್ರವು, ಮನಸ್ಸು ಹಿಡಿದದ್ದೇ ಒಳ್ಳೆ ಮತವು, ಮಾತನಾಡುವದೇ ಶಿವಮಂತ್ರವೆನಿಸುವದು. - ಆ ಜ್ಞಾನಿಗೆ ಜನ್ಮನೇ ಇಲ್ಲ, ಮನುಷ್ಯತ್ವವೆಲ್ಲಿದ್ದೀತು? ಮನುಷ್ಯತ್ವವಿಲ್ಲದವನಿಗೆ ಆಶ್ರಮಧರ್ಮವನ್ನು ಹೇಳುವದಸಾಧ್ಯವಯಾ, ಮಗನೇ, ಹೀಗಾಗಿರಲು ; ಮರಣ ಭಯ ಮುಂತಾದ ವಿಕಾರಗಳು ಆತನಿಗುಂಟೆಂದು ಹೆಂಗೆ ಹೇಳಲಾದೀತು ? ತಿರಿಗಿ ಜನ್ಮಾಂತರದ ಸಮಾಚಾರವನ್ನು ತೆಗೆಯುವದಕ್ಕಾಗುವದೇ? ಇದನ್ನು ತಿಳಿಯದೆ ಅನ್ಯಭಾವನೆಯಿಂದ ದೇವತಾಂತರಗಳನ್ನು ಭಜಿಸಿದರೆ ಜನ್ಮವ ನ್ನು ಎತ್ತುತ್ತಾನೆ ಎಂದು ಉದೇತಿ ಶ್ರುತಿಯು ಹೇಳುತ್ತದೆ. ಶ್ರುತಿ-ಉದೇತಿಭೆದವಕ್ತಾತು ನಾನಾಯೊನಿಷಸತ್ವದಾ. ಭೇದವಾದಿಯಾದವನು ಯಾವಾಗಲೂ, ಅನೇಕ ವಿಧವಾದ ಯೋನಿಗಳಲ್ಲಿ ಹುಟ್ಟುತ್ತಾನೆ. ೧೪ ಧ್ಯಾಯತಿ ಎಂದೂ, ವೇ ಎಂದೂ, ಲಾಯತಿ ಎಂದೂ ಸಮುದಾಯವಾಕ್ಯಗ ಳಿರುವುದರಿಂದ ಯೋಗಿಯಾದಾತನು ಇಚ್ಛೆ ಬಂದಹಾಗೆ ಬ್ರಹ್ಮತತ್ಪರನಾಗಿದ್ದಾನೆ. ಶ್ರುತಿ.-ಧ್ಯಾಯತಿನಕದಾಪಿದೈವತಾನೈಂ. ಯಾವ ಕಾಲದಲ್ಲಾದರೂ ಇತರ ದೇವರನ್ನು ಧ್ಯಾನಿಸುವದಿಲ್ಲವೆಂದಲ್ಲ. ಶ್ರುತಿ ~ವೆತ್ತಿ ಸ್ವಮೇವಾದ್ವಯಂ ಬ್ರಹ್ಮ, ತನ್ನನ್ನೇ ಸ್ವಗತಾದಿ ಭೇದಶೂನ್ಯನಾದ ಪರಮಾತ್ಮನನ್ನಾಗಿ ತಿಳಿಯುತ್ತಾನೆಂದಲ್ಲ. ಶ್ರುತಿ-ಲಾಯತೀವಸದಾಭಾತಿಯೋಗೀವಸ್ತುಜನಾರ್ಪಿತಂ। - ನಾದಾತಾನಸಭೋಕ್ತಾಚಕಿಂತುಬ್ರಹ್ಮವಕೆವಲಂ ಜ್ಞಾನಿಯು ಜನಗಳಿಂದ ಕೊಡಲ್ಪಟ್ಟ ಪದಾರಗಳನ್ನು ತೆಗೆದುಕೊಂಡವನಂತೆಯಾವಾಗ ಲೂ ಕಾಣುತ್ತಾನೆ, ಆತನು ತೆಗೆದುಕೊಳ್ಳುವವನೂ ಅಲ್ಲ, ತಿನ್ನುವವನೂ ಅಲ್ಲ, ಮತ್ತೆ ನೆಂದರೆ ಶುದ್ಧ ಬ್ರಹ್ಮವೇ ಎಂದಲ್ಲ.