ಪುಟ:ಕಥಾ ಸಂಗ್ರಹ - ಭಾಗ ೨.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಕಥಾಸಂಗ್ರಹ-೪ ನೆಯ ಭಾಗ ಕಣ್ಣುಗಳನ್ನು ಇರಿಯುತ್ತಿರುವುದನ್ನೂ ಕಬ್ಬಿಣದ ಕಾಗೆಗಳಿಂದ ಮಾಂಸಖಂಡಗೆ ಳನ್ನು ಕೀಳಿಸುತ್ತಿರುವುದನ್ನೂ ಕೆಂಪಗೆ ಕಾಯ್ದ ಉಕ್ಕಿನ ಕಂಬಗಳನ್ನು ತಬ್ಬಿಸುತ್ತಿ ರುವುದನ್ನೂ ಕೀವು ರಕ್ತ ಇವುಗಳನ್ನು ಕುಡಿಸುತ್ತಿರುವುದನ್ನೂ ವೈತರಣಿಯೆಂಬ ನರಕಕೂಪದಲ್ಲಿ ನೂಕಿ ಮುಳುಗಿಸುತ್ತಿರುವುದನ್ನೂ ನೋಡಿ ಕರುಣದಿಂದ ಕೂಡಿ ಆ ಯಮಭಟರ ಮೇಲೆ ಬಾಣಪ್ರಯೋಗವನ್ನು ಮಾಡಿ ಅವರನ್ನೆಲ್ಲಾ ಓಡಿಸಲು ; ಆಗ ಪಾಪಿಗಳೆಲ್ಲಾ ಕೂಡಿ- ಈ ಮಹಾತ್ಮನಿಂದ ನಮ್ಮ ಬಾಧೆಗಳೆಲ್ಲಾ ತಪ್ಪಿದುವೆಂದು ಸಂತೋಪಿಸಿ ರಾವಣನ ಬಳಿಗೆ ಬಂದು ನಮಸ್ಕರಿಸಿ ನಿಂತು ಕೊಂಡು--ನಾವೂ ನಿನ್ನೊ ಡನೆ ಸೇರಿ ಯ ಮನ ಸಂಗಡ ಯುದ್ಧ ಮಾಡುವುದಕ್ಕೆ ಬರುತ್ತೇವೆಂದು ಬೊಬ್ಬಿರಿದು ಕೂಗಿದರು. ರಾವಣನು ಆ ಪ್ರೇತಗಳನ್ನೂ ಜತೆಯಲ್ಲಿ ಕರೆದು ಕೊಂಡು ಬರುತ್ತ ಅಲ್ಲಿ ಮತ್ತೊಂದು ಸ್ಥಳದಲ್ಲಿ ಒಪ್ಪುತ್ತಿರುವ ದಿವ್ಯಸಭೆಯಲ್ಲಿ ಹಸಿವು ಬಾಯಾರಿಕೆಗಳಿ ಲ್ಲದೆ ದಿವ್ಯ ದೇಹಗಳನ್ನು ಧರಿಸಿಕೊಂಡು ಅಮೂಲ್ಯ ವಸ್ತ್ರಾಭರಣಗಳನ್ನು ಟ್ಟು ತೊಟ್ಟು ಉತ್ತಮ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು, ನಿತ್ಯ ಸುಗಂಧ ಯುಕ್ತವಾದ ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು ಮನೋಜ್ಞವಾದ ಗಾನಗಳನ್ನು ಸಾವಧಾನ ದಿಂದ ಆಕರ್ಣಿಸುತ್ತಿರುವ ಪುಣ್ಯಶಾಲಿಗಳನ್ನು ನೋಡುತ್ತ ಬಂದು ಜವನರಮನೆಯ ಹೆಬ್ಬಾಗಿಲಲ್ಲಿ ನಿಂತು ಸಂಯಮನೀನಗರವು ತಲ್ಲಣಿಸುವಂತೆ ಬೊಬ್ಬಿರಿದನು. ಆಗ ಯಮನು ಅಕಸ್ಮಾತ್ತಾಗಿ ಉಂಟಾದ ಬಲುಬೊಬ್ಬೆಯನ್ನು ಕೇಳಿ ಬೆಚ್ಚಿ ಖಳನು ಜಗಳಕ್ಕೆ ಬಂದನೆಂದೆದ್ದು ಕಾಲದಂಡವೇ ಮೊದಲಾದ ಸಮಸ್ಯಾ ಯುಧಗಳನ್ನೂ ತೆಗೆದು ಕೊಂಡು ಕೋಣನ ಮೇಲೇರಿ ರೂಪವನ್ನು ಧರಿಸಿರುವ ಕ್ಷಯವೇ ಮೊದಲಾದ ಸರ್ವರೋಗಗಳನ್ನೂ ಭಯಂಕರವಾದ ಕಾಲಮೃತ್ಯುವನ್ನೂ ಸಂಗಡ ಕರೆದು ಕೊಂಡು ಹೊರಟುಬಂದು ರಾವಣನೆದುರಿನಲ್ಲಿ ನಿಂತು ಧನುಷ್ಟಂಕಾರವನ್ನು ಮಾಡಿ ನಿಶಾತಮಾ ರ್ಗಣ ವೃಷ್ಟಿಯನ್ನು ಸುರಿಸಲು ; ಮಹೋದರ ಮಾರೀಚ ಪ್ರಹಸ್ತಾದಿ ರಾಕ್ಷಸ ವೀರರು ಯಮನ ಬಾಣಪ್ರಘಾತಗಳನ್ನು ತಡೆಯಲಾರದೆ ಕಂಗೆಟ್ಟು ನೆಲದಲ್ಲಿ ಬಿದ್ದು ಮೂರ್ಛಿಯನ್ನು ಹೊಂದಿದರು. ಲೋಕದಲ್ಲಿ ದೇವ ದಾನವಮಾನವಾದಿ ಸಮಸ್ತ ಪ್ರಾಣಿಗಳಿಗೂ ಅಂತ್ಯವನ್ನುಂಟುಮಾಡುವುದರಲ್ಲಿ ಅಧಿಕರ್ತೃವಾದ ಯಮನು ಎದು' ರಿಗೆ ಬಂದು ಕಾಳಗಕ್ಕೆ ನಿಂತರೆ ಅವನೆದುರಿನಲ್ಲಿ ನಿಂತು ಬದುಕಬಲ್ಲವರಾರುಂಟು ? ಇಂಥವನಿಗೆದುರಾಂತು ನಿಂತ ರಾವಣನ ಶೌರ್ಯಧೈರ್ಯಗಳನ್ನು ಬಣ್ಣಿಸುವವರಾರು? ಅಚಲಸದೃಶವಾದ ಧೈರ್ಯದಿಂದ ಕೂಡಿ ಯಮನಿದಿರಿನಲ್ಲಿ ನಿಂತು ಶಕ್ತಿ ತೋಮರಗದೆ ಕುಂತ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಪ್ರಹರಿಸಲು ; ಯಮನವು ಗಳನ್ನೆಲ್ಲಾ ಕ್ಷಣಕಾಲದಲ್ಲಿ ಕಡಿದು ತನ್ನ ಕ್ರೂರವಾದ ಬಾಣಪ್ರಹಾರಗಳಿಂದ ದಶಗ ಳನ ಪುಷ್ಪಕವೆಂಬ ವಿಮಾನವನ್ನು ಕಡಿದಿಡಲು ಅದು ಸರೋಜಭವನ ವರಪ್ರಭಾವ ದಿಂದ ತಿರಿತಿರಿಗಿ ಮೊದಲಿನಂತೆಯೇ ಬೆಳೆಯುತ್ತಿದ್ದಿತು. ಆಗ ರಾವಣನು ಬಹು ಕೋಪೋದ್ದೀಪಿತನಾಗಿ ಬತ್ತಳಿಕೆಯಿಂದ ಹತ್ತು ಭಾಣ ಗಳನ್ನು ತೆಗೆದು ಶಿಂಜಿನಿಯಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ಗುರಿಗಟ್ಟಿ ಯಮನ