ಪುಟ:ಬತ್ತೀಸಪುತ್ತಳಿ ಕಥೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಬತ್ತೀಸಪುತ್ತಳೆ ಕಥೆ. ನಿನ್ನಿಂದ ತೀರಬೇಕೆನ್ನಲಾಗಿ ; ಅವನ ಆ ಮಾತಿಗೆ ರಾಯ ಮಜ್ಜೆ ಕಟ್ಟಿ ದ್ರವ್ಯವು ಕೊಟ್ಟು, ಮನ್ನಿಸಿ, ಆ ಬಳಕ -1 ನೀನು ಚರಿಸಿದ ದೇಶದಲ್ಲಿ ಏನು ಅತಿಶಯವುಂಟ ?!' ಎನ್ನಲಾಗಿ ; ಅವನಿಂತೆಂದನು :-ಭಾರತವರ್ಷ ವಂ ದಾಂಟಿ ಹರಿವರ್ಷಕ್ಕೆ ಬರುವ ದಾರಿಯಲ್ಲಿ ಒಂದು ಬೆಟ್ಟದ ಬಳಯಲಿ: ಶೃಂಗಾರವನದ ಮಧ್ಯದಲ್ಲಿ ಭಾಸ್ಕರ ಕ್ಷೇತ್ರದಲ್ಲಿ ದೇವೇಂದ್ರನಿಂದ ಪ್ರತಿಷ್ಠ ಮಾಡಲ್ಪಟ್ಟ 'ಪುರಂದರೇಶ್ವರನೆಂಬ ಶಿವಲಿಂಗವಿರುವುದು. ಅದಕ ಸನ್ನಿಧಿಯಲ್ಲಿ ಒಬ್ಬ ದಿವ್ಯ ಪುರುಷ ನಿರಂತರವೂ ಹೆಣನ ಭಕ್ಷಿಸುವುದ ಕಂಡು ಇರುವ ನೆನ್ನಲಾಗಿ ;2 ರಾಯ ಚೋದ್ಯಂಬಟ್ಟು ಅದ ನೋಡಬೇಕೆಂದು, ಆ ವಿಸ್ತ ನನ್ನು ಕರೆದುಕೊಂಡು ಬೇಚರನಾರ್ಗದಲ್ಲಿ ಹರಿವರ್ಷದ ಮಕರಾದಿಯೆಂಬ ಬೆಟ್ಟದ ಬಳಿಯಲ್ಲಿ ಹೋಗಿ ಇರಲಾಗಿ ; ಎಂದಿನಂತೆ ದಿವ್ಯಪುರುಷ ಬಂದು ಹೆಣ ತಿನ್ನುವುದ ರಾಯ ಕಂಡು-ಎಲೈ ಮಹಾನುಭಾವನೇ ? ನೀನು ಹೇಗೆ ವಂ ಭಕ್ಷಿಸುವ ಕಾರಣವೇನೆಂದು ಕೇಳಿ, ಕೈಗಳಂ ಪಿಡಿಯಲಾಗಿ ; ಅವನು ತನ್ನ ಆಹಾರಕ್ಕೆ ಇವನಾರೋ ಅಡ್ಡ ಬಂದನೆಂದು ರಾಯನ ಹೊಡೆಯಲಾಗಿ ; ರಾಯ ಖತಿಗೊಂಡು ಅವನ ಹೊಡೆದುದಂದ ಅವನು ಆಯುಧ ತೆಗೆದು ಕೊಳ್ಳಲಾಗಿ ; ರಾಯ ತಿತಾಳಪತ್ರವಂ ಕೈಕೊಂಡು ಹಣಾಹಣಿ ಕೇಶಾ ಕೇಶಿ ನೋಡಾವೋಡಿ ಯುದ್ಧವಂ ಮಾಡುತ್ತ, ಗಂಧರ್ವನ ಶಿಖೆಯಂ ಪಿಡಿದು ನೆಲಕ್ಕೆ ಮೆಟ್ಟಿ ನಿಲ್ಲಲಾಗಿ ; ಅವನು-ನೀನಾರು ? ದೇವನೋ ? ಪಾ-1. ನೀನು ನಾನಾ ದೇಶಂಗಳಂ ತೊಳಲಿ ಬಂದೆಯಲ್ಲ, ಆಯ ದೇಶಂ ಗಳಲ್ಲಿ ಏನೇನು ಚೋದ್ಯವ ಕಂಡುದುಂಟು ? 2. ಪುರಂದರೇಶ್ವರನ ಸವಿಾಸದಲ್ಲಿ ಒಬ್ಬ ದಿವ್ಯ ಪುರುಷನು ನಿತ್ಯ ಬೆಣ ನಂ ತಿನ್ನು ತಿರ್ಪನು, ಅದಂ ಕಂಡನೆಂತೆನೆ-ಸುವರ್ಣಮಯವಾದ ರಥವನ್ನೆ ಟಿವಿ ಒಳ್ಳಿತ್ತಾದ ದಿವ್ಯಾಭರಣಂಗಳಂ ಧರಿಸಿಕೊಂಡು ಗಂಧಯ್ಯ ಪುರುಷನಂತೆ ಖೇಚರಮ ರ್ಗದಿಂದ ಬಂದು ಆ ಬೆಟ್ಟದ ಬಳಿಯಲ್ಲಿ ಒಂದು ಗವಿಯೊಳು ತನ್ನ ಒಡವೆ ವಸ್ತು ಗಳಂ ಇರಿಸಿ, ಆ ರಥವು ಅಲ್ಲಿ ನಿಲ್ಲಿಸಿ, ಆ ಬಳಿಯಲ್ಲಿರುವ ಸ್ಮಶಾನವ ಹಕ್ಕು, ಅಲ್ಲಿರ್ದ ಬೂದಿಯಂ ಮೈಗೆ ಲೇಪನವಂ ಮಾಡಿಕೊಂಡು, ಅವೆಗಳು ಕಾಲಿಗೆ ಕಟ್ಟಿಕೊಂಡು, ಆ ಶವದ ಬಸಿಲಿ೦ ಸೀಳಿ, ಅಲ್ಲಿದ್ದ ಅನ್ನವಂ ಭಕ್ಷಿಸಿ, ಅನಂತರ ಮು ನಿನಂತ ಒಡವೆ ವಸ್ತುಗಳಂ ತೊಟ್ಟು ಕೊಂಡು, ಆ ರಥದಮೇಲೆ ಕುಳಿತುಕೊಂಡು ಖೇ ಚರ ಮಾರ್ಗದಿಂದ ಸ್ವರ್ಗಕ್ಕೆ ಪೋಪುದೊಂದಾಶ್ಚರಮಂ ಕಂಡೆಯೆಂದು ಹೇಳಲು