ಪುಟ:ಭವತೀ ಕಾತ್ಯಾಯನೀ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--೪--

ಸುಖದುಃಖಗಳು, ಆ ಕೊಡಕೊಳ್ಳುವ ಗಿರಾಕಿಗಳ ಪ್ರೇರಣೆಯಿಂದ ದಲಾಲಿಯನ್ನು ಮಾಡುವವಲಾಲನಿಗೆ ಹೇಗೆ ಹತ್ತಬೇಕು? ಆತನು ದಲಾಲಿಯು ದೊರೆಯುತ್ತ ಹೋದಂತೆ ಪರಿಪುಷ್ಟವಾಗುತ್ತ ಹೋಗುವನು, ದಲಾಲಿಯು ದೊರೆಯದಾದಂತೆ ನಾಶವಾಗುತ್ತ ಹೋ ಗುವನು; ಅದರಂತೆ ಜೀವಾತ್ಮನ ಬಂಧನವೂ, ಇಂದ್ರಿಯಗಳ ಪಾಟವೂ ಹೆಚ್ಚುತ್ತ ಹೋದಂತೆ, ಮನಸ್ಸಿನ ವಿಷಯಾಸಕ್ತಿಯು ಹೆಚ್ಚುತ್ತಹೋಗುವದು; ಮತ್ತು ಜೀವಾತ್ಮನ ಬಂಧನವೂ, ಇಂದ್ರಿಯಪಾಟವವೂ ಕ್ಷೀಣವಾಗುತ್ತ ಹೋದಂತೆ ಮನಸ್ಸು ಕ್ಷೀಣವಾಗುತ್ತ ಹೊಗುವದು. ಆದ್ದರಿಂದಲೇ ಮನಸ್ಸು ಪಾಪಪುಣ್ಯಗಳಿಗೂ, ಅವುಗಳ ಫಲಕ್ಕೂ ಸಂ ಬಂಧಿಸದೆ, ಅದಕ್ಕೆ ದೇಹಾಭಿಮಾನಿಯಾದ ಜೀವಾತ್ಮನು ಸಂಬಂಧಿಸುತ್ತಾನೆಂದು ಶಾಸ್ತ್ರಾ ಧಾರಗಳಿಂದ ಸಿದ್ಧವಾಗಿರುತ್ತದೆ. ಉದಾಹರಣಾರ್ಥ, ಕಳವು ಮಾಡಲಿಕ್ಕೆ ಪ್ರೇರಿಸುವದು ಮನಸ್ಸು, ಬಂದೀಖಾನೆಬೀಳುವದು ದೇಹವು, ದುಃಖವು ದೇಹಾಭಿಮಾನಿಯಾದ ಜೀವನಿಗೆ! ದೇಹಾಂತರ್ಗತ ಇಂದ್ರಿಯಗಳ ದ್ವಾರಾ ಆಗುವ ದುಃಖವನ್ನು ಇಂದ್ರಿಯಾಭಿಮಾನಿಯಾದ ಜೀವನು ಭೋಗಿಸುವನೆಂದ ಬಳಿಕ, ಶ್ರೇಷ್ಟ ಇಂದ್ರಿಯವೆನಿಸುವ ಮನಸ್ಸಿಗೆ ಸ್ವತಃ ಪಾಪ ಪುಣ್ಯಗಳ ಲೇಪವು ಅಥವಾ ಸುಖದುಃಖಗಳ ಭೋಗವು ಎಲ್ಲಿ ಉಳಿಯುವದು? ಆದ್ದ ರಿಂದ ಮನಸ್ಸನ್ನು ನಿರ್ಲಿಪ್ತವೆಂತಲೇ ಹೇಳಬೇಕಾಗುವದು. ಹೀಗೆಮನವು ಯಾತರಲ್ಲಿಯೂ, ಯಾವಪೆರ್ಟಗೂ ಸಿಗದೆ ಹಾಗೆಯೇ ಉಳಿದುಕೊಳ್ಳುತ್ತಲಿರುವದರಿಂದ, ವ್ಯಾಕರಣ ಕರ್ತೃ ವಾದ ಪಾಣಿನಿ ಮುನಿಯು ಇದಕ್ಕೆ ನಪುಂಸಕವೆಂದು ತನ್ನ ವ್ಯಾಕರಣ ಗ್ರಂಥದಲ್ಲಿ ಬರೆದಿಟ್ಟಿರುವನು.

ಇನ್ನು, ಮನಸ್ಸಿನ ಕರ್ತೃತ್ವ ಶಕ್ತಿಯನ್ನು ಕುರಿತು ವಿಚಾರಿಸುವಾ, ಭಗವದ್ಗೀತೆ

ಯಲ್ಲಿ ಶ್ರೀ ಕೃಷ್ಣನು "ಇಂದ್ರಿಯಾಣಾಂ ಮನಶ್ಚಾಸ್ಮಿ” ಎಂದು ಹೇಳಿರುವದರಿಂದ ಮನಸ್ಸು ಯಾವತ್ತು ಇಂದ್ರಿಯಗಳಲ್ಲಿ ಶ್ರೇಷ್ಠವಾದದ್ದಿರುತ್ತದೆಂಬ ಮಾತು ವ್ಯಕ್ತವಾಗುತ್ತದೆ ಯಾವತ್ತು, ಇಂದ್ರಿಯಗಳ ಮೇಲೆ ಮನಸ್ಸು ಅಧಿಕಾರ ನಡಿಸುವದನ್ನು ವಿಚಾರಿಸಿದರೆ ಇದೇ ಮಾತು ನಮಗೆ ಗೊತಾ ಗುತ್ತದೆ. ಒಂದು ದೊಡ್ಡ ಯಂತ್ರದಲ್ಲಿ ಹಲವು ಸಣ್ಣದೊಡ್ಡ ಚಕ್ರಗಳಿರುತ್ತವಷ್ಟೆ ? ಅವುಗಳಲ್ಲಿ ಮುಖ್ಯವಾದ ದೊಡ್ಡ ಚಕ್ರವು ತಿರುಗಹತ್ತಿದ ಕೂಡಲೆ ಸಣ್ಣ ಚಕ್ರಗಳು ತಿರುಗಹತ್ತಿ, ಅದು ನಿಂತಕೂಡಲೆ ಅವೂ ನಿಲ್ಲುವವು. ಅದ ರಂತೆ, ದೇಹವೆಂಬ ಯಂತ್ರದಲ್ಲಿ ಮನಸ್ಸು ಮುಖ್ಯ ಚಕ್ರದಂತೆ ಇರುವದು, ಇಂದ್ರಿಯ ಗಳು ಸಣ್ಣ ಚಕ್ರಗಳಾಗಿರುವವು. ಮನಸ್ಸಿನ ವ್ಯಾಪಾರವು ನಡೆದ ಕೂಡಲೆ, ಅದಕ್ಕೆ ಆಧೀನವಾಗಿರುವ ಇಂದ್ರಿಯಗಳ ವ್ಯಾಪಾರವು ನಡೆಯಹತ್ತುತ್ತದೆ. ಮನಸ್ಸು ಏಕಾಗ್ರ ವಾಗಿರುವಾಗ ಅಥವಾ ಅದು ಯಾವದೊಂದು ಕೆಲಸದಲ್ಲಿ ತೊಡಗಿರುವಾಗ, ಅದರಿಂದ ಪ್ರೇರಿಸಲ್ಪಡದ ಇಂದ್ರಿಯಗಳು ನಿರ್ವ್ಯಾಪಾರವಾಗಿರುತ್ತವೆ. ಅಂದರೆ, ಕಣ್ಣು ತೆರೆದಿ ದ್ದರೂ ಅದಕ್ಕೆ ಪದಾರ್ಥಗಳು ಕಾಣುವದಿಲ್ಲ. ಕಿವಿಗಳಿಗೆ ಸಪ್ಪಳವೂ ಕೇಳಿಸುವುದಿಲ್ಲ. ಇದೇ ಮಾತು ಎಲ್ಲ ಇಂದ್ರಿಯಗಳಿಗೂ ಹತ್ತುವದು, ನಿದ್ರೆಯಲ್ಲಿ ಮನಸ್ಸು ಯಾವ ಇಂದ್ರಿಯಗಳನ್ನು ಸೇರಿಸದೆಯಿರುವದರಿಂದ, ಆಗ ಎಲ್ಲ ಇಂದ್ರಿಯಗಳ ನಿರ್ವಾಹಾರ