ಪುಟ:ಭವತೀ ಕಾತ್ಯಾಯನೀ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬ೦ಧವಿಮೋಚನ

೧ ನೆಯ ಪ್ರಕರಣ – ಮನಸ್ಸು

मनएव मनुष्याणां कारणं बंधमोक्षयोः ।।

बंधाय विषयासक्तं मुक्यै निर्विषय॑स्मृतं ।। १ ||

-ब्रझ, वेदूपनिषत.

ಸೃಷ್ಟಪದಾರ್ಥಗಳಲ್ಲಿ ಮನಸ್ಸೆಂಬ ತತ್ವವು ಮಹತ್ತರವಾದದ್ದು , ಮೇಲಿನ ಉಪ

ನಿಷದ್ವಾಕ್ಯದಂತೆ ಅದು ಬಂಧಮೋಕ್ಷ್ಗಗಳೆರಡಕ್ಕೂ ಕಾರಣವಾಗಿರುವದರಮೇಲಿಂದಾದರೂ ಅದರ ಗೌರವವು ಚೆನ್ನಾಗಿ ವ್ಯಕ್ತವಾಗುತ್ತದೆ. ಮನುಷ್ಯ ಮಾತ್ರರಲ್ಲಿ ಮನಸ್ಸಿನ ವ್ಯಾಪಾರದ ಪ್ರಭಾವವನ್ನರಿಯದವರು ಯಾರಿರುವರು? ಪಂಡಿತರಿಂದ ಪಾಮರರವರೆಗೆ ಎಲ್ಲರೂ ಮನಸ್ಸಿನ ಎಳತಕ್ಕೆ ಒಳಗಾಗಿರುವರು. ಆದರೆ ಜ್ಞಾನಿಗಳು ಮಾತ್ರ ಮನಸ್ಸಿನ ಸ್ವರೂಪವನ್ನು ವಿಚಾರಿಸಿ , ಅದನ್ನು ಸ್ವಾಧೀನಪಡಿಸಿಕೊಂಡಿರುವರು ; ಮತ್ತು ಮನಸ್ಸು ಯಾವ ಸ್ಥಿತಿಯಲ್ಲಿ ಬಂಧಕ್ಕೆ ಕಾರಣವಾಗುವದು, ಯಾವಸ್ಥಿತಿಯಲ್ಲಿ ಮೋಕ್ಷಕ್ಕೆ ಕಾರಣವಾಗುವದು , ಎಂಬದನ್ನು ಕುರಿತು ಸ್ವಾನುಭವದಿಂದ ಹೇಳಿರುವರು. ಈ ಮಾತು ಎಲ್ಲರಿಗೂ ಗೊತ್ತಿರುವುದು ಹಿತಕರವಾಗಿರುವುದರಿಂದ, ಮನಸ್ಸನ್ನು ಕುರಿತು ಕೆಲವು ಸಂಗತಿಗಳನ್ನು ಶಾಸ್ತ್ರ ಸಮ್ಮತವಾಗಿ ಯಥಾಮತಿ ಬರೆಯಲುಪಕ್ರಮಿಸಿರುತ್ತೇವೆ ; ನಮ್ಮ ಬರಹವು ಅನುಭವವನ್ನು ತೀರ ಬಿಟ್ಟಿರಲಾರದೆಂಬುದನ್ನು ವಾಚಕರಿಗೆ ನಾವು ತಿಳಿಸು ವೆವು. ಮನಸ್ಸನ್ನು ಕುರಿತು ಬರೆಯಲಿಕ್ಕೆ ಮನೋಜಯಮಾಡಿದ ಮಹಾತ್ಮರೇ ಮುಖ್ಯಾಧಿಕಾರಿಗಳಾಗಿದ್ದರೂ, ಮನಸ್ಸಿನ ಮಂಗಚೇಷ್ಟೆಗಳನ್ನು ವರ್ಣಿಸಲಿಕ್ಕೆ, ಮನಸ್ಸಿಗಧೀ ನರಾದವರೇ ಅನುಭವದದೃಷ್ಟಿ ಯಿಂ ದ ಯೋಗ್ಯಾಧಿಕಾರಿಗಳಾಗಿರುತ್ತಾರೆ. ತಾತ್ಪರ್ಯ ವಿಷ್ಟೇ, ಮುಖ್ಯವಾಗಿ ನಮ್ಮಲೇಖದಲ್ಲಿ ನಾವು ಜ್ಞಾನಿಗಳ ಮತವನ್ನು ಉಲ್ಲೇಖಿಸುವೆವಲ್ಲದೆ, ಪ್ರಸಂಗವಿಶೇಷದಲ್ಲಿ ಮನಸ್ಸಿನ ಮಂಗಚೇಷ್ಟೆಗಳನ್ನಾದರೂ ಅನುಭವದಿಂದ ಹೇಳುವೆವು.

ದೇಹವೆಂಬುದೊಂದು ರಾಜಧಾನಿಯು; ಜೀವಾತ್ಮನೆಂಬವನೇ ಅಲ್ಲಿಯ ಅರಸನು;

ಮನಸ್ಸು ಆತನ ಮಂತ್ರಿಯು; ಪಂಚಪ್ರಾಣಗಳು ದ್ವಾರಪಾಲಕರು; ಜ್ನಾನೇಂದ್ರಿಯಕರ್ಮಂದ್ರಿಯಗಳೇ ಆತನ ಪರಿಚಾರಕರು. ಇವರೆಲ್ಲರೂಕೂಡಿ ಆ ದೇಹದೊಡೆಯನಾದ ಜೀವಾತ್ಮನಿಗೆ ವಿವಿಧಉಪಭೋಗ್ಯವಿಷಯಗಳನ್ನು ಸಂಪಾದಿಸಿಕೊಡುತ್ತಾರೆ. ಆ ವಿಷಯಗಳ ಉಪಭೋಗದಿಂದ ಜೀವಾತ್ಮನಿಗೆ ಸುಖದುಃಖಗಳಾಗುತ್ತವೆಂಬುದು ಅನುಭವಸಿದ್ದ ಮಾತಾಗಿರುತ್ತದೆ. ಮೂಲತಃ ಜೀವಾತ್ಮನು ಸ್ವತಂತ್ರನು, ಆನಂದಸ್ವರೂಪನು; ಆದರೆ, “ಜಾಲಿಯಬಿತ್ತಿ ಕಾಲಿಗೆಮೂಲ ಮಾಡಿಕೊಂಡಂತೆ" , ಆತನು ಮೇಲೆ ಹೇಳಿದ ತನ್ನ ಪರಿವಾ