ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭ್ಯಾ. ೩.] ಏಕದಳಕ್ಕಂಧರ, MIL ನಿನ್ನನ್ನು ಯಾವಸಾಧನಗಳಿಂದ, ಎಲ್ಲೆಲ್ಲಿ, ಯಾವವಿಧವಾಗಿ ಪೂಜಿಸುವರೆಂ ಬುದನ್ನು ಹೇಳು : ಪೂಜ್ಯನಾದ ನಾರದನೂ, ವ್ಯಾಸಮಹರ್ಷಿಯೂ, ದೇವಗುರುವಾದ ಬೃಹಸ್ಪತಿಯೂ, ಇನ್ನೂ ಅನೇಕಮಹರ್ಷಿಗಳೂ ಕೂಡ, ಕರಯೋಗಗಳೊಳಗೆಲ್ಲಾ ನಿನ್ನ ಆರಾಧನರೂಪವಾದ ಕರವೇ ಉತ್ತಮ ಪುರುಷಾರಸಾ ಧಕವೆಂದು ಹೇಳಿರುವರು. ಈ ನಿನ್ನ ಆರಾಧನಕ್ರಮವು ಮೊದಲು ನಿನ್ನ ಬಾಯಿಂದಲೇ ಹೊರಟು ಚತುರಖಬ್ರಹ್ಮನಿಗೆ ಉಪ ದೇಶಿಸಲ್ಪಟ್ಟಿತು. ಆ ಬ್ರಹ್ಮನು, ಭ್ರಗು ಮೊದಲಾದ ತನ್ನ ಪುತ್ರರಿಗೆ ಉಪ ದೇಶಿಸಿರುವನು. ಭಗವಂತನಾದ ರುದ್ರನು ಇದನ್ನೇ ತನ್ನ ಪತ್ನಿಯಾದ ಪಾಶ್ವತಿಗೆ ಉಪದೇಶಿಸಿರುವನು ಓ ಪುರುಷೋತ್ತಮಾ ! ನಿನ್ನ ಆರಾಧನವು ಎಲ್ಲಾ ವರ್ಣಾಶ್ರಮಗಳಿಗೂ, ಶೂದಾಜಗಳಗ, ಉತ್ತಮವಾದ ಶ್ರೀ ಯಸ್ಕಾಧನೆಗೆ ಸುಲಭೋಪಾಯವಾಗಿರುವುದು. ಓ ಪುಂಡರೀಕಾಕ್ಷಾ! ಕಮ್ಮ ಬಂಧವನ್ನು ಬಿಡಿಸತಕ್ಕ ಆ ನಿನ್ನ ಆರಾಧನಕ್ರಮವನ್ನು ಭಕ್ತನೂ, ನಿನ್ನಲ್ಲಿ ಅಮರಕ್ಕನೂ ಆದ ನನಗೆ ಉಪದೇಶಿಸಬೇಕು. ಈ ಉಪದೇಶವ ಬ್ರಹ್ಮಾದಿ ಗಳಿಂದ ಉಪದೇಶಪರಂಪರೆಯಾಗಿ ಲೋಕದಲ್ಲಿ ಹರಡಿದ್ಧರೂ, ಆ ಬ್ರ ಹ್ಯಾ ಸಗಳಿಗೂ ಪ್ರಭುವಾದ ನಿನ್ನ ಮುಖಾರವಿಂದದಿಂದಲೇ ಕೇಳುವುದು ನನ್ನ ಪರಮಭಾಗ್ಯವಲ್ಲವೆ?” ಎಂದನು. ಆದಕ್ಕಾ ಭಗವಂತನು 1 ಉದ್ಯವಾ ! ಕೇಳು ' ಲೋಕದಲ್ಲಿ ಕಮ್ಮ ಬೋಧಕಗಳಾದ ಶಾಸ್ತ್ರಗಳು ಅಪಾರವಾಗಿರುವವ ಹಾಗಿದ್ದರೂ ನಿನಗೆ ಅದನ್ನು ಸಂಕ್ಷೇಪಿಸಿ ಯಥಾಸ್ಥಿತವಾಗಿ ಹೇಳುವೆನು ಕೇಳು. ನನ್ನ ಆರಾಧನ ರೂಪವಾದ ಯಜ್ಞದಲ್ಲಿ, ವೈದಿಕವೆಂದೂ, ಶಾoತ್ರಿತವೆಂದೂ, ಮಿಶ್ರವೆಂ ದೂ ಮೂರುಪಿಧಗಳುಂಟು. ಈ ಮೂರರಲ್ಲಿ !ಅವರವರಿಗೆ ಇಷ್ಟವಾದ ವಿಧಿಯಿಂದ ನನ್ನ ನಾರಾಧಿಸಬಹುದು. ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಂಬ ತ್ರಿವರ್ಣದವರೂ, ವೇದೋಕ್ತ ವಿಧಿಯಿಂದ ಉಪನಯನಸಂಸ್ಕಾರವನ್ನು ಹೊಂದಿ, ದ್ವಿಜತ್ವವನ್ನು ಪಡೆದಮೇಲೆ, ನನ್ನನ್ನು ಭಕ್ತಿಯಿಂದಲೂ, ಶ್ರದ್ದೆ ಯಿಂದಲೂ ಆರಾಧಿಸಬೇಕಾದ ಕ್ರಮವನ್ನು ಮೊದಲು ಹಸುವೆನು ಕೇಳು. ಪ್ರತಿಮೆ (ಎಂದರೆ ಅರ್ಚಾವಿಗ್ರಹಗಳು), ಸಂ(ವೆಂದರೆ ಜಾ