ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಮಹಾಭಾರತ ಸಭಾವರ್ಪ] ಹಿರಿಸಿದನು ಧರಣಿಯಲಿ ಕಾಲಿನ ಲೋರಸಿದನು ನೋಟಕರ ಧರಣೀ ಸುರಜನದ ಪರಿಜನದ ಹಾ ಹಾ ರವದ ರಹಿ ಮಸಗೆ | ತೆರಳಿತಲ್ಲಿಯದಲ್ಲಿ ಮಾಗಧ ನರಸಿಯರು ಬಿಡುಮುಡಿಯ ಜ ಠರದ ಕರಗ ಬಿಕ್ಕಹೊಯ್ಲಿನಲಿ ಹೊಲಿವಿಂಟರು ನಿಜಾಲಯವ || ಆಗ ಸರ್ವರೂ ಭಯದಿಂದೊಡುತ್ತಿರಲು) ಅಂಜದಿರಿ ಯುದು ಶ್ರೀಕೃಷ್ಣನು ಹೇಳುವಿಕ. ಮನೆಮನೆಯ ಕದವಿಕ್ಕಿದುವು ನೃಪ ವನಿತೆಯರು ಹೊಅವಂಟರಲ್ಲಿಯ ದನುಜರಡಗಿದರದ್ರಿಗುಹೆಯಲಿ ಬೇಹಬೇಹವರು | ಜನದ ಕೋಲಾಹಲವನಾತನ ತನುಜರೋಟವನವನ ಸತಿಯರ ನಿನದವನು ಕಂಡಸುರರಿಪು ಸಾರಿದನು ಕೊನೆಗಹಿ || ೧೪೦ ಅಂಜದಿರಿ ಪುರಜನವು ವನಿತೆಯ ರಂಜದಿರಿ ಮಾಗಧನ ಪರಿಜನ ವಂಜದಿರಿ ಸಕಲಪ್ರಧಾನವಸಾಯ ಸಂದೋಹ | ಅಂಜದಿರಿ ಕರೆ ಯಿವನ ಮಗನನು ಭಂಜಿಸುವುದಿಲ್ಲಕಟ ಭೀಮಧ ನಂಜಯರು ಕೊಟ್ಟಭಯವೆಂದನು ಜನಕ ಮುರವೈರಿ | ೧೪೩ ಮುಲಿದು ಕೆಡಹಿದರರಿಯನಲ್ಲಿಯ ಸೆಲೆಯ ಮನೆಗಳ ಹೊಕ್ಕು ರಾಯರ ಸೆಖೆಗಳನು ಬಿಡಿಸಿದರು ನಾನಾದೀಪವಾಕರ ? 1 ನಗುತ,