ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದುಣ್ಣೆ ಮಹಾರಾಯ, ೧೬೯ ವು ಮೊದಲಿನಿಂದ ಇತ್ತು. ಒಂದುದಿನ ಮಹಾದೇವ ವೂರಲ್ಲಿ ರಲಿಲ್ಲ, ಯಾವುದೋ ಕೆಲಸಕ್ಕೆ ಹಳ್ಳಿಗೆ ಹೋಗಿದ್ದನು. ಹೆಂ ಗಸರೆಲ್ಲರೂ ಹಜಾರದಲ್ಲಿ ಮಲಗಿಕೊಳ್ಳುತಿದ್ದರು. ಸೀತಮ್ಮ ನು ತನ್ನ ಹಾಸಿಗೆಯನ್ನು ಹಾಸಿಕೊಳ್ಳಲು ಸ್ಥಳ ನೃಲ್ಪವೇ ಬಿಟ್ಟಿತ್ತು. ಅಲ್ಲಿ ಮಲಗಿಕೊಂಡಳು. ತೊಲೇಕೆಳಗೆ ಸೀತನಹಾ ಸಿಗೆ ಬಂತು. ಇವಳ ಹಾಸಿಗೇ ಮಗ್ಗಲಲ್ಲಿಯೇ ಸಾಕಷ್ಟು ನ ಹಾಸಿಗೆ ಇತ್ತು. ಸೀತಮ್ಮ ನು ರಾತ್ರೆ ಮಾಡಬೇಕಾದ ಕಸನು ಸುರೆಯ ಕೆಲಸವನ್ನು ತೀರಿಸಿಕೊಂಡು ಮಲಗಿಕೊಳ್ಳುವಾಗ್ಗೆ ಬಹಳ ಹೊತ್ತಾಗಿತ್ತು. ಅವಳು ಬಂದು ಮಲಗಿಕೊಂ ಡಳು. ಕೂಡಲೆ ತೊಲೆಯ ಕೆಳಗೆ ತನ್ನ ಹಾಸಿಗೆ ಬಂದದ್ದನ್ನು ನೋಡಿ-ಅಯ್ಯೋ ಕೊಲೆ ಕೆಳಗೆ ಹಾಸಿಗೆ ಬಂತು, ತೊಲೆಯೇ ತೋಲೆಯೇ ನಾನೇ ಮರ, ನೀನೇ ಮನುಷ್ಯ, ಹಾವಿಗೆ ಹರನ ಆಣೆ, ಚೇಳಿಗೆ ದರವನ ಆಣೆ, ಇರುವೆ ಎಂಭತ್ತು ಕೋಟಿ ಜೀವರಾಶಿಗೂ ಬಿಬಳಿ ಬಿಟ್ಟು ಇತ್ತಿತ್ತ ಬಂದರೆ ತಾಯಿಯು ವೈಯ ನಾದದಾಸ ; ಹರಾ ಎಂತ ಬಲದ ಮಗ್ಗಣ ಹೂಡಿ ದೆ, ಹರಿ ಎಂತ ಎಡದ ಮಗ್ಗಲ ಹೂಡಿದೆ, ಚಿಹೋಗಿ ಅಚ್ಚು ತನನ್ನು ಕೂಡಿತು, ಮನಹೋಗಿ ಮಾಧವನನ್ನು ಕೂಡಿ ತು, ನಾನು ಹೋಗಿ ಕಾಶೀ ವಿಶ್ವೇಶ್ವರನನ್ನು ಕೂಡಿದೆ. ಸ್ವಾ ಮಿ ನಂಜುಂಡೇಶ್ವರ, ತಾಯಿ ಚಾಮುಂಡೇಶ್ವರಿ, ಸಜ್ಜನಸಂಗ ಕೊಡು ದುರ್ಜನರ ದೂರ ಇಡು, ತಾಯೇ ! ) ಹೀಗೆಂದು ದೇವರ ಪ್ರಾರ್ಥನೆಮಾಡಿ ಕಂಣ ಮುಚ್ಚಿಕೊಂಡಳು. ನಿದ್ರೆಬಂ ತು, ಉಳಿದ ಎಲ್ಲರಿಗೂ ನಿದ್ರೆ ಬಂದಿತ್ತು, ಹತ್ತಿರ ಮಲಗಿ 22