ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಮಾಡಿದ್ದುಣೋ ಮಹಾರಾಯ, ಗಿ ಒಂದಗುಳನ್ನೂ ಬಿಡದೆ ಚೆನ್ನಾಗಿ ಕುಮ್ಮರಿಸುತಾಳೆ ಹೊ ಟೈಯೊಳಕ್ಕೆ, ಎಂದು ಮನನ್ನು ಬಂದಹಾಗೆ ಸೀತನನ್ನು ಹಳಿದಳು. ಅದಕ್ಕೆ ಭಾರತಮ್ಮ ನು- ಯಾಕೆ ಹಾಗೆಲಾ ಹೊಡೆದಮಾರಿ ಗೀರಿ ಎನ್ನುತೀಯ ಬಸರಿನ ? ಬಯಕೆ ಸಂಕ , ಅನ್ನ ಸೇರುವುದಿಲ್ಲ, ನಿಜವೇ, ಎಂದಳು. ಅಷ್ಟು ಮಾತ್ರ ಸಹಿಸಲಾರದ ತಿನ್ನು ಮೃನು- ಅದೇನು ಹೇಳಿಕೊಳ್ಳು ತೀರಿ, ಅದೇನು ಕೊಚ್ಚಿ ಕೊಳ್ಳುತೀರಿ ? ಬಸರಿಯಂತೆ ಬೆಸರಿ; ಆದರೆ ಆದಳು, ಏನು ಉದ್ಘಾರ, ಅದನ್ನು ಎಷ್ಟು ಹಾಡಿ ಹೊ ಗಳಿಕೊಳ್ಳಬೇಕಂತೆ ? ಆದರೆ ಆಗುತಾಳೆ. ಸಗಣಿ ಮೇಲೆ ಸಗಣಿ ಹಾಕಿದರೂ ಹುಳುಬರುತ್ತೆ, ತಾನು ಬನರಿ ಅಂತ ಎಲ್ಲರೂ ಉಪಚರಿಸಲಿ ಎಂದು ಅವಳ ಮನಸ್ಸಿನಲ್ಲಿ. ಅನ್ನ ಬಡಿ ಸಿಕೊಳ್ಳುವುದು ಬೇಕು ಅಂತ ಚೆಲ್ಲುವುದು, ತಾನು ಬನರಿ ಎಂತ ಎಲ್ಲರಿಗೂ ತಿಳಿಯಬೇಕಲ್ಲ. ನೀವು ಮಾತುಮಾತಿಗೂ ವಹಿಸಿಕೊಂಡು ಬರುತ್ತೀರಿ. ಅವಳು ಎತ್ತಲಾಗಾದರೂ ಹಾಳಾ ಗಲಿ, ಅವಳ ಗಂಧಗಾಳಿಗೇ ನಾನು ಬರುವುದಿಲ್ಲ, ಹೀಗೆಲ್ಲಾ ಮಾತನಾಡಿದಳು. ನಾ ರತನ್ನು ನು ಇನ್ನು ಮಾತಿಗೆ ಮಾತು ಬೆಳೆಯುತ್ತೆ, ಯಾಕೆ ಬೇಕು ಎಂದು ಸುನ್ನು ನಾದಳು. ಇನ್ನೊಂದುದಿನ ಬೇರೊಂದು ರಗಳೆ ಜರಗಿತು. ಸೀತಮ್ಮ ನು ಯೋಗ್ಯರಾಗಿಯ ನಿಷ್ಟರಾಗಿಯೂ ಇರತಕ್ಕವರ ಮನೆ ಯಲ್ಲಿ ಹುಟ್ಟಿದವಳು. ಇವಳಲ್ಲಿ ಅನೇಕವಾಗಿ ಒಳ್ಳೆ ಅಭ್ಯಾ ಸಗಳೇ ಇದ್ದವು. ಸೀತಮ್ಮ ನು ನಿತ್ಯವೂ ರಾತ್ರೆ ಮಲಗಿಕೊ ಳ್ಳುವಾಗ ದೇವರಿಗೆ ಪ್ರಾರ್ಥನೆ ಮಾಡಿ ಮಲಗುವ ಅಭ್ಯಾಸ