ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೧ ಮಾಡಿದ್ದು ಕ್ಯೂ ಮಹರಾಯ. ಹಾಗೆ ಇರುವುದು ಬಹು ಅಪೂರ, ಮಹಾ ಪದವಿಯನ್ನು ಅನುಭವಿಸತಕ್ಕವರಿಗೆ ಇಂಧಾ ಗುಣ ನಿರತಕ್ಕದ್ದು ಪೂರಾ ರ್ಜಿತ ಫಲವಾಗಿದೆ. ತತ್ರಾಪಿ ಈ ಕಾಲಗಳಲ್ಲಿ ಸರಾದ ಒಂದು ಸಾಧಾರಣವಾದ ಉದ್ಯೋಗ ದೊರೆತಾಗ್ಯೂ ಜನರು ಅಟ್ಟಹಾಸದಿಂದ ಮೆರೆಯುತ್ತಾರೆ. ಗಣ್ಯವಾದ ಉದ್ಯೋಗ ದೊರೆತರೆ ತನ್ನ ಗರ್ವವನ್ನು ಜನರಮೇಲೆ ತೋರಿಸಿ ಅವ ರಿಗೆ ಬಗೆ ಬಗೆಯಾದ ಬಾಧೆಗಳನ್ನು ಹುಟ್ಟಿಸುತ್ತಾರೆ. ಅವರ ದೂರುಗಳನ್ನು ಕೇಳದೆ ಅವರ ಸಂಗಡ ಮಾತನಾಡಿದರೆ ತಮ್ಮ ಗೌರವ ಭಂಗವಾಯಿತೆಂದು ಮೆಡ ಮೆಟ್ಟಿಯನ್ನು ಹತ್ತುತಾ, ಸುಮ್ಮನಿದ್ದರೆ ಅವರ ದೂರೇ ಏನೂ ಇಲ್ಲವೆನ್ನು ತಾ, ಮಾತ ನಾಡಿದರೆ ತುಂಬನೆನ್ನು ತಾ, ನಾಲ್ಕು ಮಾತ ಹೆಚ್ಚಾಗಿ ಆಡಿದರೆ ಅಂಧವರಮೇಲೆ ದ್ವೇಷವನ್ನಿಟ್ಟು ಅವರನ್ನು ನಾಶಮಾಡುತಾ, ತಾವು ಅಜ್ಞಾನದಿಂದಲೂ ಅವಿವೇಕದಿಂದಲೂ ಕೊಧದಿಂದ ಊ ಮಾಡುವ ಕೆಲಸವೆಲ್ಲಾ ದೊರೆಯ ಅಪ್ಪಣೆಯಂತೆ ಮಾ ಡಿದೆನೆನ್ನು ತಾರೆ. ಆಗಭೋಗ ಅಗಸ್ಯೆಶರನಿಗೆ ಸತ್ಯ ಪ್ರಮಾಣ ಮಾರ್ಕಂಡೇಶ್ವರನಿಗೆ ಎಂಬ ಗಾಧೆಗೆ ಸರಿಯಾಗಿ, ಒಳ್ಳೆ ಕೆಲಸವೇನಾದರೂ ಆದರೆ ಅದನ್ನು ತಾವು ಮಾಡಿದೆ ವನ್ನು ತಾ, ಕೆಮ್ಮದೇನಾದರೂ ಆದರೆ ಅದಕ್ಕೆ ದೊರೆಯ ತಲೆ ಯನ್ನು ಗುರಿಮಾಡಿ ಜನರು ಅರಸನ ಸಮೀಪಕ್ಕೆ ಯಾವಾ ಗಲೂ ಯಾರೂ ಹೊದ್ದದಹಾಗೆ ಮಾಡುತ್ತಾ, ತನ್ನ ಮೇಲೆ ಯಾರು ಏನ ಹೇಳಿಯಾರೋ ಎಂದು ಕಾದುಕೊಂಡಿರುತಾ, ಅರಸನನ್ನು ಮುಂದೆ ಹೊಗಳುತಾ ಹಿಂದೆ ಬೈಯುತಾ