ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಮಾಡಿದ್ದು ಸ್ಫೋ ಮಹಾರಾಯ, ಡುವುದಕ್ಕೆ ಹತ್ತು ಕಂಣು ಸಾಲದಹಾಗೆ ಇತ್ತು. ಈಚೆಗೆ ಸಿಡ ಬು ಎದ್ದು ಹಾಗಾಯಿತು. ಮಖವೆಲ್ಲಾ ಗುಣಿಯಾಗಿ ಬೂದು ಕಪ್ಪು ಕವಿಚಿಕೊಂಡಿತು. ಹೀಗಿತ್ತೆ ? ಏನೋ ಹೇಗಾದರೂ ಇನ್ನು ಬದುಕಿಕೊಳ್ಳಿ. ಇದೂ ಅಲ್ಲದೆ, ಆ ಮೈಸೂರಿನವರ ಒಡಿಪು ಆ ಶೃಂಗಾರ ಆ ಬಿನ್ನಾಣ ಯಾರಿಗೆ ಬರುತ್ತೆ ? ಆ ನಡಗೆ ಯಾರಿಗೆ ಬರುತ್ತೆ ? ಇಷ್ಟೂ ಆಯಿತು, ಆ ಸಿಸ್ತನ್ನೆ ಲ್ಯಾ ಕಟ್ಟಿಕೊಂಡು ನನ್ನು ಸಾಕಿ ಏನಮಾಡೀತು ? ಗರತಿ ಲಕ್ಷ ಣಕ್ಕೆ ಇದ್ದು ಗಂಡನಿಗೆ ಹೆಂಡತಿಯಾಗಿ ಮಕ್ಕಳಿಗೆ ತಾಯಾಗಿ ಹೊಟ್ಟೆತೆರೆದು ಎರಡು ಮಕ್ಕಳಾದರೆ ಸಾಕು. ಈ ಪ್ರಕಾರದಲ್ಲಿ ಅಲ್ಲಿದ್ದ ಹೆಂಗಸರ ಸಭೆಯಮುಂದೆ ತಿನ್ನು ಹೇಳಿದಳು. ಇವಳಮಾತ ಎಲ್ಲವನ್ನೂ ಕೇಳಿ ಅಲ್ಲಿ ಮುತ್ತೈದೆಯರು ಒಬ್ಬರಿಗೊಬ್ಬರು ಮುಖಾ ನೋಡಿಕೊಂ ಡು ಹುಶಿನಗೆ ನಗುತಾ ಸುಮ್ಮನಾದರು. ಈ ಗರತಿಯರೆಲ್ಲಾ ಎಲೆ ಅಡಕೆ ತೆಗೆದುಕೊಂಡು ಮನೆಗೆ ಹೋಗುತಾ ದಾರಿಯಲ್ಲಿ ತಂತಮ್ಮೊಳಗೆ- ನಿಮ್ಮ ನ ಮಾತ ಕಟ್ಟಿಕೊಂಡೇನು, ಹೊ ಟೈಕಿಚ್ಚಿನ ಮಾತ ? ಅವಳು ಹೇಳುವುದನ್ನೆಲ್ಲಾ ಹೇಳಲಿ ಎಂ ದು ಸುಮ್ಮನೆ ಕೂತು ತಡೆದುತಡೆದೂ ಸಾಕಾಯಿತು. ಒಂದು ಬಗೆ ಪಿಶಾಚಿಯಹಾಗೆ ಇದೆ, ಆ ಹಾಳಸಾಕಿ ಎನ್ನುವ ಹೆಂಣು, ಆ ಮೂದೇವಿಯ ಚೇಷ್ಮೆಯೋ ಅದರ ಬುದ್ಧಿಯೋ ಅದರ ರೂಪಿಗೆ ತಕ್ಕಹಾಗೆಯೇ ಇದೆ, ಕುರೂಪೀ ಬಹುಚೇಷ್ಟಿತಾ 22 ಎಂದಹಾಗೆ, ನೋಡಿದರೆ ಓಕರಿಕೆ ಬರುತ್ತೆ. ಆ ಹೆಂಣನ್ನು ಹೊಗಳಿ ಸೊಸೆಯನ್ನು ಹೇಳಿದಳಲ್ಲಾ; ನನಗೇನು ಕಂಣಿ