ಪುಟ:ಕಥಾಸಂಗ್ರಹ ಸಂಪುಟ ೨.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಾವತಾರದ ಕಥೆ 269 ಕೊಂಡು ಬಂಡೆಯ ಮೇಲೆ ಬಡಿಯುವುದಕ್ಕೆ ಎತ್ತಲು ಆಗ ಆ ಶಿಶುವು ಇವನ ಕೈ ಯಿಂದ ನುಣುಚಿಕೊಂಡು ಆಕಾಶಕ್ಕೆ ಹಾರಿ ಅಲ್ಲಿ ಮಹಾ ಭಯಂಕರವಾದ ದುರ್ಗಿಯ ರೂಪವನ್ನು ತಾಳಿ ಎಂಟು ತೋಳುಗಳುಳ್ಳ ಆಕಾರವನ್ನು ಧರಿಸಿ ಅಟ್ಟಹಾ ಸವನ್ನು ಮಾಡಿ---ಎಲೆ ಹೆಡ್ಡನಾದ ಕಂಸನೇ ! ನಾನು ನಿನ್ನ ಪ್ರಾಣಗಳನ್ನು ಕೊಲ್ಲು ವುದಿಲ್ಲ, ನಿನ್ನ ಪ್ರಾಣಗಳಿಗೆ ಮುನಿಯುವವನು ಆಗಲೇ ಹುಟ್ಟಿ ಭೂಮಿಯಲ್ಲಿ ಬೆಳೆ ಯುತ್ತಿದ್ದಾನೆ ಎಂದು ಹೇಳಿತು. ತರುವಾಯ ಕಂಸನು ದುರ್ಗಿಯ ಮಾತುಗಳನ್ನು ಕೇಳಿ ಬಹಳವಾಗಿ ಆಶ ರ್ಯಪಟ್ಟು ಬಹು ಚಿಂತಾಕ್ರಾಂತನಾಗಿ ಅಯ್ಯೋ, ಸುಳ್ಳಾದ ಆಕಾಶವಾಣಿಯನ್ನು ಕೇಳಿ ನನ್ನ ತಂಗಿಯಾದ ದೇವಕೀ ದೇವಿಯನ್ನೂ ವಸುದೇವನನ್ನೂ ಬಹಳವಾಗಿ ಹಿಂಸಿಸಿ ಅನ್ಯಾಯವಾಗಿ ಅವರ ಶಿಶುಗಳನ್ನು ಕೊಂದೆನು ಎಂದು ಪಶ್ಚಾತ್ತಾಪಗೊಂಡು ಅವರ ಬಳಿಗೆ ಹೋಗಿ ಒಳ್ಳೆಯ ಮಾತುಗಳಿಂದ ಅವರನ್ನು ಸಮಾಧಾನಪಡಿಸಿ ವಸುದೇ ವನ ಕಾಲುಗಳ ಸಂಕೋಲೆಯನ್ನು ತೆಗೆಸಿ ಸೆರೆಯಿಂದ ಬಿಡಿಸಿ-ಸುಖದಿಂದ ಬಾಳಿರಿ ಎಂದು ಹೇಳಿ ತಾನು ಏಕಾಂತದಲ್ಲಿ ಕುಳಿತುಕೊಂಡು ತನಗೆ ಆಪ್ತರಾದ ಪೂತನಿ ಶಕಟಾ ಸುರ ಧೇನುಕಾಸುರ ಪ್ರಲಂಬಾಸುರ ಅರಿಷ್ಮಾಸುರ ಕೇಶಿರಾಕ್ಷಸ ಎಂಬಿವರೇ ಮೊದಲಾ ದವರನ್ನು ಕುಳ್ಳಿರಿಸಿಕೊಂಡು ನನ್ನ ಶತ್ರುವು ಯಾವುದೋ ಒಂದು ಸ್ಥಾನದಲ್ಲಿ ಹುಟ್ಟಿ ಬೆಳೆಯುತ್ತಿರುವನಂತೆ. ಮಹಾಶಕ್ತರಾದ ನೀವೆಲ್ಲರೂ ಒಂದೊಂದು ಕಾರಣ ದಿಂದ ಒಂದೊಂದು ವಿಧವಾದ ವೇಷವನ್ನು ತಾಳಿಕೊಂಡು ಲೋಕದಲ್ಲಿ ಎಲ್ಲಾ ಕಡೆಗೆ ಳಲ್ಲೂ ತಿರುಗುತ್ತ ಹುಟ್ಟಿರುವ ಶಿಶುಗಳನ್ನೆಲ್ಲಾ ಬಿಡದೆ ಕೊಂದುಹಾಕುತ್ತ ಒಂದು ವೇಳೆ ಏನಾದರೂ ಕಾರಣದಿಂದ ತಪ್ಪಿಸಿಕೊಂಡಿದ್ದರೆ ಆ ಶಿಶುಗಳನ್ನು ಮತ್ತೊಂದು ವೇಳೆ ಬಂದು ಕೊಲ್ಕು ತ ಈ ಪ್ರಕಾರ ಈಗ ಲೋಕದಲ್ಲಿ ಹುಟ್ಟಿರುವ ಶಿಶುಗಳನ್ನೆಲ್ಲಾ ಕೊಂದುಹಾಕಿರಿ ಎಂದು ಹೇಳಿಕಳುಹಿಸಿ ತಾನು ಮಹಾ ಶಂಕಾತಂಕ ಹೃದಯನಾಗಿ ದ್ದನು. ಹೀಗಿರುವಲ್ಲಿ ಈ ಕಂಸನಿಗೆ ಕಟ್ಟಳೆಯ ಮೇರೆಗೆ ಪ್ರತಿ ಸಂವತ್ಸರವೂ ಕೊಡುವ ಪೊಗದಿಯನ್ನು ತೆಗೆದುಕೊಂಡು ಗೋಕುಲದಿಂದ ಬಂದು ಆ ಕಪ್ಪವನ್ನು ಕಂಸನಿಗೆ ಒಪ್ಪಿಸಿ ಬೀಡಾರದಲ್ಲಿಳಿದು ಕೊಂಡಿರುವ ನಂದಗೋಪನ ಬಳಿಗೆ ವಸುದೇವನು ರಹಸ್ಯ ವಾಗಿ ಬಂದು--ಎಲೈ ಪ್ರಿಯನೇ ! ನಿನ್ನ ಹೆಂಡತಿಯಾದ ಯಶೋದಾದೇವಿಯು ಗಂಡುಮಗುವನ್ನು ಹೆತ್ತಳೆಂದು ವರ್ತಮಾನವನ್ನು ಕೇಳಿ ನನಗೆ ಬಹಳ ಸಂತೋಷ ವಾಯಿತು. ಅಲ್ಲಿ ನನ್ನ ಹಿರಿಯ ಹೆಂಡತಿಯಾದ ರೋಹಿಣೀದೇವಿಯು ಹೆತ್ತಿರುವ ನನ್ನ ಮಗನನ್ನೂ ಕೂಡ ನಿಮ್ಮ ಮಗನ ಜೊತೆಯಲ್ಲಿ ಇವನೊಬ್ಬ ಮಗನೆಂದೆಣಿಸಿ ನನ್ನ ಮಗನು ಪರಾಕ್ರಮಿಯಾಗುವ ವರೆಗೂ ಪ್ರೀತಿಯಿಂದ ಕಾಪಾಡಬೇಕೆಂದು ಹೇಳಲು ನಂದಗೋಪನು ಆ ಮಾತುಗಳನ್ನು ಕೇಳಿ ಬಹಳವಾಗಿ ಸಂತೋಷಪಟ್ಟು ವಸುದೇ ವನನ್ನು ಕುರಿತು-ಅಯ್ಯಾ ಪರಮ ಪ್ರಿಯನೇ ! ಈ ಭಾಗದಲ್ಲಿ ಸಂದೇಹವುಂಟೇ ? ನಿಮ್ಮ ಮಗನನ್ನು ನನ್ನ ಮಗನಿಗಿಂತಲೂ ಹೆಚ್ಚೆ೦ದು ಸಹಜವಾಗಿ ಭಾವಿಸಿಕೊಂಡಿ