ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

268 ಕಥಾಸಂಗ್ರಹ-೫ ನೆಯ ಭಾಗ ಆ ದಿವ್ಯರೂಪವನ್ನು ಅಡಗಿಸಿ ಶಿಶುರೂಪವನ್ನು ಕೈಕೊಂಡು ವಸುದೇವದೇವಕಿಯರನ್ನು ತನ್ನ ಮಾಯೆಯಿಂದ ಮರುಳೊ ಳಿಸಿ ಅವರು ಬಹಿರ್ವ್ಯಾಪಾರ ವಿರಹಿತರಾಗಿ-ಈಗ ನಾವು ಯಾರೊಡನೆ ಮಾತನಾಡಿದೆವು ? ನಮಗೆ ಯಾರು ಉತ್ತರವನ್ನು ಕೊಟ್ಟರು ? : ಶಿಶು ಬೇರೆ ಅಲ್ಲ. ಸಾಕ್ಷಾನ್ನಾರಾಯಣನೇ ಬಂದು ನುಡಿದು ಹೋದನೋ ಏನೋ ಎಂದು ಭ್ರಾಂತಿಗೊಂಡರು. ಆ ಬಳಿಕ ಕಂಸನು ವಸುದೇವನ ಕಾಲಿಗೆ ಹಾಕಿದ್ದ ಸಂಕೋಲೆಯು ತನಗೆ ತಾನೆ ಕಳಚಿ ನೆಲಕ್ಕೆ ಬಿದ್ದುದರಿಂದ ವಸುದೇವನು ಬಂದು ಶಿಶುವನ್ನು ಬೇಗ ಎತ್ತಿಕೊಂಡು ಹೊರಡುವಲ್ಲಿ ಕಾವಲುಗಾರರೆಲ್ಲರೂ ವಿಷ್ಣು ಮಾಯೆಯಿಂದ ಮೋಹಿತರಾಗಿ ಎಚ್ಚರವಿ ಲ್ಲದೆ ಬಿದ್ದಿದ್ದರು. ಅಗುಳಿಗಳಿ೦ದ ಭದ್ರಪಡಿಸಿದ್ದ ಊರುಬಾಗಿಲ ಕದಗಳು ತಮ್ಮಿಂದ ತಾವೇ ತೆರೆದು ನಿಂತುವು. ವಸುದೇವನು ಈ ಪ್ರಕಾರವಾದ ಅದ್ಭುತ ವ್ಯಾಪಾರಗ ಳನ್ನು ನೋಡುತ್ತ ಕಾರಕಗ್ಗತ್ತಲೆಯಲ್ಲಿ ಊರನ್ನು ಬಿಟ್ಟು ಹೊರಗೆ ಬರಲು ಆಗ ಮಹಾಶೇಷನು ಬಂದು ಶಿಶುವು ಮಳೆಯಿಂದ ನೆನೆಯದ ಹಾಗೆ ತನ್ನ ಸಾವಿರ ಹೆಡೆ ಗಳನ್ನು ಆ ವಸುದೇವನ ಮೇಲೆ ಕೊಡೆಯಂತೆ ಹಿಡಿದು ತನ್ನ ಹೆಡೆಗಳ ಮಾಣಿ ಕ್ಯಗಳ ಪ್ರಕಾಶದಿಂದ ಗೋಕುಲಕ್ಕೆ ಹೋಗುವ ದಾರಿಯನ್ನು ಚೆನ್ನಾಗಿ ಕಾಣಿ ಸುವ ಹಾಗೆ ಮಾಡಿದನು. ಆ ಮೇಲೆ ವಸುದೇವನು ವಿಷ್ಣು ಮಾಯಾಶಕ್ತಿಯಿಂದ ಕ್ಷಣಮಾತ್ರದಲ್ಲಿ ಗೋಕುಲದ ಬಳಿಗೆ ಬರಲು ಅಲ್ಲಿ ಎರಡು ದಡಗಳನ್ನೂ ಮೀರಿ ಹರಿಯುತ್ತಿರುವ ಯಮುನಾನದಿಯು ಕಾಲುಹೊಳೆಯಂತಾಗಿ ದಾರಿಯನ್ನು ಕೊಡಲು ಅದನ್ನು ದಾಟಿ ಬಂದು ನಂದಗೋಪನ ಹೆಂಡತಿಯಾದ ಯಶೋದೆಯು ಹೆತ್ತಿದ್ದ ಮನೆ ಯನ್ನು ಹೊಕ್ಕು ಆ ಶಿಶುವನ್ನು ಅಲ್ಲಿಟ್ಟು ಒಬ್ಬರೂ ಅರಿಯದಂತೆ ಅಲ್ಲಿದ್ದ ಹೆಣ್ಣು ಶಿಶು ವನ್ನು ಎತ್ತಿಕೊಂಡು ಯಮುನಾ ನದಿಯನ್ನು ದಾಟಿ ಆಚೆಯ ದಡಕ್ಕೆ ಬಂದಕೂಡಲೆ ಆ ನದಿಯು ಮೊದಲಿನಂತೆ ನೀರು ತುಂಬಿ ಹರಿಯಿತು. ವಸುದೇವನು ಅಲ್ಲಿಂದ ಹೊರಟು ಮಧುರಾಪುರಿಯನ್ನು ಪ್ರವೇಶಮಾಡಲು ಊರುಬಾಗಿಲ ಕದಗಳೂ ಅಗಣಿಗಳೂ ಮೊದಲಿನಂತೆ ಹಾಕಿಕೊಂಡವು. ಅಲ್ಲಿಂದ ಬಂದು ಅರಮನೆಯನ್ನು ಸೇರಿ ಆ ಹೆಣ್ಣು ಮಗುವನ್ನು ತನ್ನ ಹೆಂಡತಿಯಾದ ದೇವಕೀದೇವಿಯ ಕೈಯಲ್ಲಿ ಕೊಟ್ಟು ಕಳಚಿಹೋ ಗಿದ್ದ ಸಂಕೋಲೆಯನ್ನು ತೆಗೆದು ತನ್ನ ಕಾಲುಗಳಿಗೆ ತೊಡಿಸಿಕೊಳ್ಳಲು ಅವು ಯಥಾ ಪ್ರಕಾರವಾಗಿ ಸೇರಿಕೊಂಡವು. - ಅತ್ತ ಗೋಕುಲದಲ್ಲಿ ಯಶೋದೆಯು ಎಚ್ಚೆತ್ತು ತನ್ನ ಮಗು ಅಲ್ಲಿರುವ ಪುರುಷ ಶಿಶುವನ್ನು ನೋಡಿ ಬಹಳವಾಗಿ ಸಂತೋಷಪಟ್ಟಳು, ಇತ್ಯ ಮಧುರಾ ನಗರ ದಲ್ಲಿ ಈ ಹೆಣ್ಣು ಕೂಸು ಆರ್ಭಟಿಸಿ ಅಳುತ್ತಿರುವುದನ್ನು ಕೇಳಿ ಕಾವಲುಗಾರರೆಲ್ಲರೂ ಎದ್ದು ಶೀಘ್ರವಾಗಿ ಓಡಿಬಂದು ಮಲಗಿದ್ದ ಕಂಸನನ್ನು ಎಬ್ಬಿಸಿದೇವಕಿಯು ಹೆತ್ತಳೆಂದು ಹೇಳಲು ಆತನು ಆ ಕೂಡಲೆ ಎಡವಿ ಬೀಳುವುದನ್ನೂ ಕಾಣದೆ ವೇಗ ದಿಂದ ಓಡಿಬಂದು ಆ ಹೆಣ್ಣು ಮಗುವನ್ನು ಸೆಳೆದುಕೊಂಡು ವಧ್ಯಸ್ಥಾನದ ಅರೆಬಂ ಡೆಯ ಬಳಿಗೆ ತೆಗೆದುಕೊಂಡು ಬಂದು ಶಿಶು ವಿನೆರಡು ಕಾಲುಗಳನ್ನೂ ಕೈಯಲ್ಲಿ ಹಿಡಿದು