ಪುಟ:ಕಥಾಸಂಗ್ರಹ ಸಂಪುಟ ೨.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಣಾವತಾರದ ಕಥೆ 267 ಕೊಂದುಬಿಟ್ಟರೆ ನಾನು ಯಾವ ಭಯವೂ ಇಲ್ಲದೆ ಸುಖದಿಂದಿರಬಹುದು ಎಂದು ಯೋಚಿಸಿ ಮೊದಲಿಗಿಂತಲೂ ಬಹು ಜಾಗರೂಕತೆಯಾಗಿ ಆಕೆಯ , ಬಳಿಯಲ್ಲಿ ಕಾವಲಿಟ್ಟು ತಾನೂ ಬಹಳ ಜಾಗರೂಕತೆಯಿಂದ ವಿಚಾರಿಸಿಕೊಳ್ಳುತ್ತಿದ್ದನು. ಇತ್ತಲಾ ನಂದಗೋಕುಲದಲ್ಲಿ ವಸುದೇವನ ಹಿರಿಯ ಹೆಂಡತಿಯಾದ ರೋ ಹಿಣೀ ದೇವಿಯು ಪೂರ್ಣಗರ್ಭವತಿಯಾಗಿ ಶುಭಮುಹೂರ್ತದಲ್ಲಿ ಮಹಾಶೇಷನು ಮು೦ದೆ ಹುಟ್ಟುವ ಭಗವಂತನಿಗೆ ಸಹಾಯಭೂತನಾಗಿ ಶುಭ್ರವರ್ಣವುಳ್ಳ ಶಿಶುರೂಪ ದಿಂದ ಹುಟ್ಟಲು ನೋಡಿದ ಸಮಸ್ತ ಜನರೂ ಮೇಘಮಾರ್ಗದಲ್ಲಿ ಪ್ರತಿಸಮಯದಲ್ಲೂ ನಡೆದು ನಡೆದು ಆಲಸ್ಯವನ್ನು ಹೊಂದಿ ವಿಶ್ರಮಿಸಿಕೊಳ್ಳುವದಕ್ಕೋಸ್ಕರವಾಗಿ ಅಮೃತ ಕಿರಣನಾದ ಚ೦ದ್ರನು ಭೂಲೋಕದಲ್ಲಿ ಈ ಶಿಶುರೂಪದಿಂದ ಹುಟ್ಟಿರುವನೆಂದು ಯೋಚಿ ಸುತ್ತಿದ್ದರು. ತರುವಾಯ ಮಧುರಾನಗರದಲ್ಲಿ ಶ್ರಾವಣ ಬಹುಳ ಅಷ್ಟಮಿಯ ಸಮ ರಾತ್ರಿಯಲ್ಲಿ ಎಳಗಸೆ ಹೂವಿನಂತೆ ನೀಲವಾದ ಮೈಬಣ್ಣವುಳ್ಳವನಾಗಿ ಹೊಂಬಟ್ಟೆ ಯನ್ನು ಧರಿಸಿ ಕೌಸ್ತುಭರತ್ತ ದಿಂದ ಹೊಳೆಯುವ ಎದೆಯ ಶಂಖಚಕ್ರಗದಾಪದ್ಮಗೆ ಳೆಂಬ ಆಯುಧಗಳಿಂದ ಒಪ್ಪುತ್ತಿರುವ ಕೈಗಳೂ ಉಳ್ಳವನಾಗಿ ದೈತ್ಯಸಮೂಹವೆಂಬ ಮಹಾರಣ್ಯಕ್ಕೆ ದಾವಾಗ್ನಿ ಪ್ರಾಯನಾದ ಮಹಾವಿಷ್ಣು ವು ಆ ವಸುದೇವ ದೇವಕಿ ಯರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡನು. ಆತನನ್ನು ನೋಡಿ ವಸುದೇವನು ಸಂತೋಷಸಮುದ್ರದಲ್ಲಿ ಮುಳುಗಿ ಕಣ್ಣುಗ ಳಿಂದ ಆನಂದಬಾಷ್ಪವನ್ನು ಸುರಿಸುತ್ತ ಬಾರಿಬಾರಿಗೂ ಅಡ್ಡ ಬಿದ್ದು ವಿವಿಧವಾಗಿ ಹೊಗುಳುತ್ತ ಎದ್ದು ಕೈಮುಗಿದು ನಿಂತು ಕೊಂಡು ರೋಮಾಂಚಕಂಚುಕಿತಾ೦ಗನಾಗಿ ಆ ಮಹಾವಿಷ್ಣುವನ್ನು ಕುರಿತು ದುರಾತ್ಮನಾದ ಕಂಸನು ತಮಗೆ ಮಾಡಿದ ದ್ರೋಹ ಗಳನ್ನೆಲ್ಲಾ ಹೇಳಿಕೊಳ್ಳಲು ಆಗ ಕಮಲನಾಭನು ಕರುಣಾಸಾರಹೃದಯನಾಗಿ ಮೊದಲು ನಿಮಗೆ ಹುಟ್ಟಿದ ಆರು ಮಕ್ಕಳುಗಳು ಪಾತಾಳಲೋಕದಲ್ಲಿರುವ ಹಿರಣ್ಯಕ ಶಿಪುವಿನ ಮಕ್ಕಳು ಗಳು. ಅವರು ನನ್ನ ಅಪ್ಪಣೆಯಿಂದಲೇ ನಿಮ್ಮಲ್ಲಿ ಹುಟ್ಟಿ ಮೃತರಾ ದರು. ಏಳನೆಯ ಬಸುರಿನಲ್ಲಿದ್ದ ಶಿಶುವನ್ನು ಕಂಸನು ಕೊಲ್ಲುವನೆಂಬ ಯೋಚನೆ ಯಿಂದ ನಾನೇ ನನ್ನ ಮಾಯೆಯಿಂದ ತೆಗಿಸಿ ನಿನ್ನ ಹಿರೀ ಹೆಂಡತಿಯಾದ ರೋಹಿಣಿ ಯಲ್ಲಿ ನಿಲ್ಲಿಸಿದೆನು. ಆ ಮಹಾತ್ಮನು ಗೋಕುಲದಲ್ಲಿ ಹುಟ್ಟಿ ಬೆಳೆಯುತ್ತಿರುವನು. ನನ್ನ ಒಡಹುಟ್ಟು ಗಳಾದ ಶಿಶುಗಳನ್ನು ಕೊಂದು ತನ್ನ ತಂದೆಯಾದ ಉಗ್ರೇಸನನ್ನು ಬಂಧನದಲ್ಲಿರಿಸಿ ನಿಮ್ಮನ್ನು ಹಿಂಸಿಸುತ್ತಾ ಲೋಕಕಂಟಕನಾಗಿರುವ ಈ ಕಂಸನನ್ನು ಕೊಂದುಹಾಕಿ ನಿಮ್ಮೆಲ್ಲರಿಗೂ ಸಮಾಧಾನವನ್ನುಂಟುಮಾಡುವೆನು. ನೀನು ಶಿಶುರೂ ಪದಿಂದಿರುವ ನನ್ನನ್ನು ತೆಗೆದುಕೊಂಡು ಹೋಗಿ ನಂದಗೋಕುಲದಲ್ಲಿ ಒಂದು ಹೆಣ್ಣು ಕೂಸನ್ನು ಹೆತ್ತು ನನ್ನ ಮಾಯೆಯಿಂದ ಜ್ಞಾನತಪ್ಪಿ ಬಿದ್ದಿರುವ ನಂದಗೋಪನ ಹೆಂಡ ತಿಯಾದ ಯಶೋದೆಯ ಮಗ್ಗುಲಲ್ಲಿಟ್ಟು ಅಲ್ಲಿ ಹುಟ್ಟಿರುವ ಹೆಣ್ಣು ಶಿಶುವನ್ನು ತೆಗೆದು ಕೊಂಡು ತಿರಿಗಿ ಬಂದು ದೇವಕೀದೇವಿಗೆ ಕೊಡು. ಈ ಕೆಲಸವನ್ನು ಮಾಡುತ್ತಿರುವ ನಿನ್ನ ನ್ನು ಒಬ್ಬರೂ ಅರಿಯದಂತೆ ನನ್ನ ಮಾಯೆಯು ಸಹಾಯಮಾಡುವುದು ಎಂದು ಹೇಳಿ