ಪುಟ:ನಿರ್ಮಲೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ನಿರ್ಮಲೆ ದೂತಿ:-ಸಿರಲೆ, ಅಷ್ಟೇ ಅಲ್ಲ, ನೀನು ಈ ಉಡುಪನ್ನು ಧರಿಸಿ ಕೊಂಡು ಓಡಾಡುತಿರುವುದರಿಂದ ರಾಮವರ್ಮನು ನಿನ್ನನ್ನು ಒಬ್ಬ ದಾದಿ ಯೆಂದೇ ತಿಳಿದುಕೊಂಡಿರುವನು, ನೀನೊಬ್ಬ ಸೇವಕಳಂತೆ ! ಎಲ್ಲವೂ ಚಿತ್ರವಿಚಿತ್ರ !!. ನಿರ:-ಹಾಗೊ ! ಸರಿ, ಅದೂ ಸರಿ, ಅವರು ಈ ಭ್ರಾಂತಿಯಲ್ಲಿ ರುವುದೇ ಮೇಲು. ಈ ಉಡುಪನ್ನು ಧರಿಸಿರುವ ನಾನು ಹೇಗೆ ಕಾಣಿಸು ವೆನು ? ಹೇಳು, ದೂತಿ:-ಹಳ್ಳಿಯ ಹುಡುಗಿಯರು ನೀನು ಧರಿಸಿರುವಂತಹ ವಸ್ತ್ರ ವನ್ನೇ ಧರಿಸುವರು. ನಿಲ್ಮ:-ಅವರಿಗೆ ನನ್ನ ಮುಖವೂ ಮೈ ಕಟ್ಟ ಜ್ಞಾಪಕವಿಲ್ಲ ಎಂಬ ನಂಬುಗೆಯು ನಿನಗಿದೆಯೋ ? ದೂತಿ:-ಓಹೋ ! ಅದೇನೋ ನನಗೆ ಚೆನ್ನಾಗಿ ನಂಬುಗೆಯಿದೆ. ಸಿರ:- ನನಗೂ ಹಾಗೆಯೇ ತೋರುವುದು ಏಕೆಂದರೆ, ನಾನು ಅವ ರೊಡನೆ ಮಾತನಾಡುತಿದ್ದಾಗ ಒಂದು ಸಲವಾದರೂ ಅವರು ನನ್ನನ್ನು ಕತ್ತೆ ನೋಡಲಿಲ್ಲ. ಅಬ್ಬಾ ! ಅವರಿಗೆಷ್ಟು ಹೆದರಿಕೆ ? ನನ್ನನ್ನು ಒಂದು ಸಾರಿ ಯಾದರೂ ನೋಡಿದ್ದರಲ್ಲವೆ ಪರಿಚಯವಾಗುವುದು ? ಪಾಪ ! ಹೇಗೆ ತಿಳಿಯ ಬೇಕು ? ದೂತಿ:-ಅವರನ್ನು ಭ್ರಾಂತಿಯಲ್ಲಿಯೇ ಇಟ್ಟರೆ ನಿನಗೆ ಬರುವೆ ಲಾಭವೇನು ? ನಿಮ್ಮ:-ಲಾಭವೆ ? ಹೀಗೆಯೇ ನಾನು ಅವರನ್ನು ನೋಡಿದರೆ, ಅವರು ನನ್ನನ್ನು ಚೆನ್ನಾಗಿ ನೋಡುವರಲ್ಲ ವೊ ? ವರನನ್ನು ಸಂಪಾದಿಸಬೇಕೆಂದಿರುವ ಯುವತಿಯು ಅವನ ಗುಣಾವಗುಣಗಳನ್ನು ತಿಳಿಯಬೇಕಲ್ಲವೊ ? ಈ ಉವಾ ಯದಿಂದ ನಮ್ಮ ಪರಿಚಯವು ಬಳೆವುದು, ಪೂರೈಕಾಲದ ಕಥೆಗಳಲ್ಲಿರುವಂತೆ ಮರೆಯಾಗಿದ್ದು ಶತ್ರುವಿನ ಬಲಾಬಲಗಳನ್ನರಿತು, ಅನಂತರ ಕದನವನ್ನು ಆರಂ