ಪುಟ:ರಾಣಾ ರಾಜಾಸಿಂಹ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ರಾ ರಾಜಸಿಂಹ [ಪ್ರಕರ < ರಾಣಿಯವರೆ ! ನಾವೆಲ್ಲರೂ ಸಿದ್ಧರಿದ್ದೇವೆ ತಾವು ಹೇಳು? ಪವಿತ್ರ ಕಾರ್ಯದಲ್ಲಿ ಪ್ರಾಣವನ್ನು ಕೊಡಲಿಕ್ಕೆ ತತ್ಪರರಿದ್ದೇವೆ ” ಎಂದ ಯಾವತ್ತು ವೀರರು ಒಳ್ಳೆ ಆವೇಶದಿಂದ ಹೇಳಿದರು. ರಾಣಿ _“ ವೀರರೆ, ನೀವೇ ಶ್ರೇಷ್ಟರು ಹೀಗೆ ದೃಢಮನಸು ಇವರಿಗಿರಿ ಈಶ್ವರನು ನಮ್ಮ ಬಯಕೆಯನ್ನು ಪೂರ್ಣಮಾಡುವನು.' ಆ ಬಳಿಕ ವರಮಹಂಸನು ತನ್ನ ಆಸನದಿಂದೆದ್ದು ಸಿಂಹಾಸನದ ಸಮಿಾಪಕ ಹೋದನು ಅಲ್ಲಿ ವೀರಾಸನದಿಂದ ಕುಳಿತ ರಾಣಿಯವರ ಕೈಯನ ತನ್ನ ಕೈಯಲ್ಲಿ ತಕ್ಕೊಂಡು , ಕುಳಿತಂಧ ಯಾವತ್ತು ಸೈನಿಕರ ಕಡೆ ನೋಡಿ ಮಾತಾಡಲಾರಂಭಿಸಿದನು 66 ವೀರಬಾಂಧವರೆ, ಈಶ್ವರ ಕೃಪೆಯಿಂದ ನಮಗೆ ಈ ರಾಣಿಯವರು ದೊರೆತಿರುವರು ಅವ ಶೌರ್ಯ, ಧೈರ್ಯಗಳು ಅವರ್ಣನೀಯವಾದವುಗಳುಂಟು ಅವರಿ ಯಾವ ಮೋಹವೂ ಇಲ್ಲ, ಯವನರ ಸೊಕ್ಕನ್ನು ಮುರಿಯಲಿಕ್ಕೆ ತವ ಯಾವತ್ತು ಸುಖಕ್ಕೆ ತಿಲಾಂಜಲಿಯನ್ನು ಕೊಟ್ಟಿರುತ್ತಾರೆ ಮೊಗಲ ಬಲಾತ್ಕಾರವನ್ನು ಕಂಡು ಅವರಿಗೆ ಅಪಾರವಾದ ಸಿಟ್ಟು ಬಂದಿರುತ್ತರ ಅವರಿಗೆ ಸುಖಕರವಾದ ವಿಷಯೋಪಭೋಗದ ಸ್ವಪ್ನವೂ ಬೀಳುವಂತಿಲ್ಲ ಯಾವಾಗಲೂ ಮೊಗಲರ ಬಲಾತ್ಕಾರವೇ ಅವರ ಹೃದಯವನ್ನು ಕ ಯುತ್ತಿರುತ್ತದೆ. ಈ ಹೊತ್ತು ಸ್ವತಃ ಅವರ ಮೇಲೆಯೆ ಅಂಧ ಪ್ರಸ ಗವು ಬಂದಿತ್ತು ಆದರೆ ಅದರೊಳಗಿಂದ (ವೀರಸಿಂಹ, ಪ್ರತಾಪಸಿಂಹ ಕಡೆಗೆ ಬೊಟ್ಟು ಮಾಡಿ) ಈ ಎದುರಿಗೆ ಕುಳಿತ ವೀರರು ತಮ್ಮ ಶೌಯ ದಿಂದ ಅವರನ್ನು ಬಿಡಿಸಿರುವರು. ರಾಣಿಯವರು ಸ್ತ್ರೀಯರಾದರ ತಾವು ಕೈಕೊಂಡಕೆಲಸವನ್ನು ಕೊನೆಗಾಣಿಸುವದರಲ್ಲಿ ಹಗಲು ರಾತ್ರಿಯ ಚಿಂತಿಸುತ್ತಿರುವರು, ಅಬಲೆಯು ಭೀರುವೆಂದು ಹೇಳುತ್ತಾರೆ. ಆದ ಇವರ ಧೈರ್ಯವನ್ನು ಕಂಡು ಪುರುಷರು ತಲೆಬೊಗ್ಗಿಸುವಂತಿರುವದು ನನ್ನ ಪ್ರಿಯ ಬಾಂಧವರೆ ! ನಾನು ನಿಮ್ಮಲ್ಲಿರತಕ್ಕೆ ಗುರುವು ; ನನ್ನನ್ನು ನೀವು ಪೂಜ್ಯನೆಂದೆಣಿಸುವಿರಿ, ಆದರೆ ನಾನು ಈ ಭರತ ಭೂಮಿಯ