ಆಹಾರವ ಕಿರಿದು ಮಾಡಿರಣ್ಣಾ,

ವಿಕಿಸೋರ್ಸ್ದಿಂದ


Pages   (key to Page Status)   

ಆಹಾರವ ಕಿರಿದು ಮಾಡಿರಣ್ಣಾ
ಆಹಾರವ ಕಿರಿದು ಮಾಡಿ. ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ. ಆಹಾರದಿಂ ನಿದ್ರೆ
ನಿದ್ರೆಯಿಂ ತಾಮಸ
ಅಜ್ಞಾನ
ಮೈಮರಹು
ಅಜ್ಞಾನದಿಂ ಕಾಮವಿಕಾರ ಹೆಚ್ಚಿ
ಕಾಯವಿಕಾರ
ಮನೋವಿಕಾರ
ಇಂದ್ರಿಯವಿಕಾರ
ಭಾವವಿಕಾರ
ವಾಯುವಿಕಾರವನುಂಟುಮಾಡಿ
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿಪೋಷಣ ಬೇಡ. ಅತಿ ಪೋಷಣೆ ಮೃತ್ಯುವೆಂದುದು. ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು. ತನು ಪೋಷಣೆಯಿಂದ ತಾಮಸ ಹೆಚ್ಚಿ
ಅಜ್ಞಾನದಿಂ ವಿರಕ್ತಿ ಹಾನಿ
ಅರಿವು ನಷ್ಟ
ಪರವು ದೂರ
ನಿರಕೆ ನಿಲವಿಲ್ಲದ ಕಾರಣ. ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ ಕೆಡಿಸದೆ ಉಳಿಸಿಕೊಳ್ಳಿರಯ್ಯಾ.