ಜೈಮಿನಿ ಭಾರತ/ಹತ್ತನೆಯ ಸಂಧಿ
ಜೈಮಿನಿ ಭಾರತ ಹತ್ತನೆಯ ಸಂಧಿ[ಸಂಪಾದಿಸಿ]
ಪದ್ಯ :-:ಸೂಚನೆ:[ಸಂಪಾದಿಸಿ]
ಸೂಚನೆ: ಹರಿ ಶಿಲೆಯಮೇಲೆ ನಡೆಗೆಡೆ ಸವ್ಯಸಾಚಿ ಸೌ | ಭರಿಯ ದೆಸೆಯಿಂದಮುದ್ದಾಲಕನ ಕಥೆಗೇಳು | ತಿರದೆ ಹಂಸದ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು || |
[ಆವರಣದಲ್ಲಿ ಅರ್ಥ];=
(ಪದ್ಯ - ಸೂಚನೆ)XVII-VIII |
ಪದ್ಯ :-:೧:[ಸಂಪಾದಿಸಿ]
ಆಲಿಸೆಲೆ ಜನಮೇಜಯಕ್ಷಿತಿಪ ಮುಂದಣ ಕ | ಥಾಲಾಪ ಕೌತುಕವನುಚಿತದಿಂ ಫಲುಗುಣಂ| ನೀಲದ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ || |
[ಆವರಣದಲ್ಲಿ ಅರ್ಥ];=
(ಪದ್ಯ - ೧) |
ಪದ್ಯ :-:೨:[ಸಂಪಾದಿಸಿ]
ಸಹದೇವನಾಗಿ ಸಮುದಿತ ನಕುಲನಾಗಿ ಸ | ನ್ನಿಹಿತಾರ್ಜುನನುಮಾಗಿ ವರ ವೃಕೋದರನಾಗಿ | ಮಹದಿಳಾಭೃದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುಮಾಗಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೨) |
ಪದ್ಯ :-:3:[ಸಂಪಾದಿಸಿ]
ಎಸೆದುದಾ ಗಿರಿ ಗಗನ ಮಂಡಲವನಂಡಲೆವ | ಲಸದುನ್ನತದ ಶೃಂಗದುತ್ಕರದ ಸತ್ಕರದ ಶಶಿಕಾಂತಮಯವಾದ ರಮಣೀಯ ಕಮಣೀಯ ಕಮನೀಯ ಕಂದರದ ಸೌಂದರದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೩) |
ಪದ್ಯ :-:೪:[ಸಂಪಾದಿಸಿ]
ಪಕ್ಷಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ | ಯಕ್ಷ ಕಿನ್ನರ ಕಿಂಪುರುಷ ಗಂಧರ್ವ | ರಕ್ಷೋಗಣಂಗಳಿಂದಲ್ಲಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೪) |
ಪದ್ಯ :-:೫:[ಸಂಪಾದಿಸಿ]
ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ | ವಿಭವಾಸ್ಪದಂ ಕಲಾ ನಿಧಿಯಂತೆ ಮೃಗಧರಂ | ನಭದಂತೆ ಕುಜಯುತರ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೫)XVIII |
ಪದ್ಯ :-:೬:[ಸಂಪಾದಿಸಿ]
ನಾಗಭೂಷಣನಾಗಿ ಶಿವನಲ್ಲ ಹರಿಗಿರ್ಕೆ | ಯಾಗಿ ಪಾಲ್ಗಡಲಲ್ಲ ಶಿಖಿ ನಿವಾಸಸ್ಥಾನ | ಮಾಗಿ ದಿಗ್ಭಾಗಮಲ್ಲಷ್ಟಾಪದೋದ್ಭಾಸಮಾಗಿ ನೈಪಥ್ಯಮಲ್ಲ || |
[ಆವರಣದಲ್ಲಿ ಅರ್ಥ];=
(ಪದ್ಯ - ೬) |
ಪದ್ಯ :-:೭:[ಸಂಪಾದಿಸಿ]
ಶೃಂಗಮಯಮುರುಶಿಲಾ ಸಂಗಮಯಮಧಿಕ ಮಾ | ತಂಗಮಯಮನುಪಮಭುಜಂಗಮಯಮುನ್ನತ(ಪ್ಲ)ಲ | ಮಂಗಮಯಮಮಿತ ಸಾರಂಗಮಯದ್ಭುತದ ಸಿಂಗಮಯ ಶರಭಮಯವು || |
[ಆವರಣದಲ್ಲಿ ಅರ್ಥ];=
(ಪದ್ಯ - ೭) |
ಪದ್ಯ :-:೮:[ಸಂಪಾದಿಸಿ]
ಬಹು ಕಾಲಮೆನಗೆ ನೀರ್ಮಳೆಗೆರೆದ ಪುರುಷಾರ್ಥಾ | ಕಹಹ ಮೃದ್ಬಿಂದುಗಳನೀಗ ಸುರಿದಪೆನೆಂದು | ಮಹಿ ನಭಸ್ಥಳಕೂಧ್ರ್ವಮುಖಮಾಗಿ ಸೂಸುವ ರಜದಸೋನೆಯೆನೆ ದೂಳಿಡೆ || |
[ಆವರಣದಲ್ಲಿ ಅರ್ಥ];=
ಬಹಳ ತರು ಗುಲ್ಮ(ಪೊದೆ) ಲತೆ ಮೃಗ ಪಕ್ಷಿ ಕ್ರಿಮಿ ಕೀಟ ಗುಹೆ ದೊಣೆ(ತಗ್ಗು) ಮೊರಡಿ ಪಳ್ಳ(ಹಳ್ಳ) ಕೊಳ್ಳ ಜರಿ ಸರಿ ಜಲುಗು(ಜಲ) ಗಹನ ಗಹ್ವರ(ಗುಹೆ)ದ ವಿಂಧ್ಯ ಅದ್ರಿಯ(ಬೆಟ್ಟ)ವನ್ನು ಫಲ್ಗುಣನ ಸೇನೆ ಹತ್ತಿ ಅಸಿ(ಕ್ಷಯಿಸು) ಆಯಾಸಪಟ್ಟಿತು.
(ಪದ್ಯ - ೮) |
ಪದ್ಯ :-:೯:[ಸಂಪಾದಿಸಿ]
ಹರಿಯ ಸೇವಕರ ಬರವಂ ಕಾಣುತಾ ವಿಂಧ್ಯ | ಗಿರಿಯ ದುರ್ಮಾರ್ಗಮುಂ ಸನ್ಮಾರ್ಗಮಾಯ್ತು ದು | ರ್ಧರ ಹೃದಯವನಜಾಂಧಕಾರಮುಂ ಸುಪ್ರಕಾಶಿತವಾಯ್ತು ವಿಕೃತಿಯಡಗಿ || |
[ಆವರಣದಲ್ಲಿ ಅರ್ಥ];=
(ಪದ್ಯ - ೯) |
ಪದ್ಯ :-:೧೦:[ಸಂಪಾದಿಸಿ]
ಮಂದಿ ಸಂದಣೀಸಿ ಬೆಂಕೊಂಡು ನಡೆತೆರ ಕುದುರೆ | ಮುಂದೆ ಬರೆಬರೆ ಕಂಡುದೊಂದು ಯೋಜನದಗಲ | ದಿಂದೆಸೆವೆ ಶಿಲೆಯನದರೊಳ್ ಪೊರಳ್ದಪೆನೆಂಬ ತವಕದಿಂದತಿಭರದೊಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೦) |
ಪದ್ಯ :-:೧೧:[ಸಂಪಾದಿಸಿ]
ಕಾಲಿಡಲ್ಕಾ ಶಿಲೆಯೊಳಾ ತುಂರಗದ ಖುರಂ | ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ | ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೊರಥದಂತೆ ನಿಜ ತನುವಿನ | |
[ಆವರಣದಲ್ಲಿ ಅರ್ಥ];=
(ಪದ್ಯ - ೧೧) |
ಪದ್ಯ :-:೧೨:[ಸಂಪಾದಿಸಿ]
ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ ಕೀಳಲಾರದೆ ನಿಂದು ದರೆಯೊಳೇನಚ್ಚರಿಯೊ | ಪೇಳೆಬೇಕೆಂದು ಚರರೈ ತಂದು ಪಾರ್ಥಂಗೆ ಕೈಮುಗಿದು ಬಿನ್ನೈಸಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೨) |
ಪದ್ಯ :-:೧೩:[ಸಂಪಾದಿಸಿ]
ಬಳಿಕ ಚಿಂತಿಸಿದನರ್ಜುನನಿದೇನಾದೊಡಂ | ಮುಳಿದ ಮುನಿಪನ ಶಾಪಮಾಗಬೇಕೀ ವನ | ಸ್ಥಳದೊಳಾಶ್ರಮಮುಂಟೆ ನೋಳ್ಬುದಗಲದೊಳೆಂದು ಚಾರರಂ ಕಳುಹಲವರು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೩) |
ಪದ್ಯ :-:೧೪:[ಸಂಪಾದಿಸಿ]
ವೆಗ್ಗಳಿಸರಿನ ಚಂದ್ರ ಪವನ ಶಿಖಿ ಪರ್ಜನ್ಯ | ರೊಗ್ಗಿಹವು ವೈರಮಿಲ್ಲದೆ ನಿಖಿಳ ಮೃಗಪಕ್ಷಿ | ಮೊಗ್ಗಲರ್ ಕಾಯ್ಪಣ್ತಳಿರ್ಗಳಿಂ ಬೀಯವೆಂದೆಂದುಮೆಲಾ ತರುಗಳು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೪) |
ಪದ್ಯ :-:೧೫:[ಸಂಪಾದಿಸಿ]
ವೇದಶಾಸ್ತ್ರಾಗಮ ಸ್ಮೃತಿ ಪುರಾಣಾವಳಿಯ | ನೋದಿಸುವ ಕುಶ ಸಮಿತ್ಪುಷ್ಪ ಫಲ ಮೂಲ ಪ | ರ್ಣಾದಿ ಗಳನೊದಮಿಸುವ ಜಪ ತಪಸ್ಸ್ನಾನಾಗ್ನಿಹೋತ್ರ ವಿಧಿ ವೇಳೆಗಳನು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೫)XIX |
ಪದ್ಯ :-:೧೬:[ಸಂಪಾದಿಸಿ]
ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ | ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ | ಮೈಡನೋ ರಜಮಂ ಪೊರ್ದದಂಬುಜಾಸನನೊ ಫಣಿ ತಲ್ಪನಲ್ಲದ ವಿಷ್ಣವೊ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೬) |
ಪದ್ಯ :-:೧೭:[ಸಂಪಾದಿಸಿ]
ಬಂದು ಸಾಷ್ಟಾಂಗದಿಂದೆರಗಿ ಸೌಭರಿ ಮುನಿಯ | ಮುಂದೆ ಕೈ ಮುಗಿದು ನಿಲಲಾ ಪಾರ್ಥನಂ ಪ್ರೀತಿ | ಯಿಂದೆ ಸತ್ಕರಿಸಿ ಕುಶಲಂಗಳಂ ಕೇಳ್ದಿಲ್ಲಿಗೇಕೆ ಬರವಾಯಿತೆನಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೭) |
ಪದ್ಯ :-:೧೮:[ಸಂಪಾದಿಸಿ]
ಎಲೆ ಮುನೀಶ್ವರ ತವಾನುಗ್ರಹದೊಳಲ್ಲದೀ | ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ | ನಳುಹಬೇಕೆಂದರೆಗಲರ್ಜುನನ ಮೋಗ ನೋಡಿ ನಗುತೆ ಸೌಭರಿ ನುಡಿದನು || |
[ಆವರಣದಲ್ಲಿ ಅರ್ಥ];=
(ಪದ್ಯ - ೧೮) |
ಪದ್ಯ :-:೧೯:[ಸಂಪಾದಿಸಿ]
ಶ್ರೀ ಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ | ಬೀ ಕೃತ್ಯದಿಂ ಪಾತಕಂ ಬಹುದೆ ನಿಮ್ಮೊಳ್ ಸ | ದಾ ಕೃಪಾನಿಧಿಯ ಸಾನ್ನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೧೯) |
ಪದ್ಯ :-:೨೦:[ಸಂಪಾದಿಸಿ]
ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ | ಕಟ್ಟಿರಣ್ಯದ ಪುಲಿಯನರಸಿ ಕರೆಯಲ್ಕೊದೆ(ಡೆ)ಯ | ಕಟ್ಟುವೆಯಲಾ ತುರಗಮೇಧಮೇಗೈವುದಾ ಹರಿಯ ಸಾನ್ನಿಧ್ಯಮಿರಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೦) |
ಪದ್ಯ :-:೨೧:[ಸಂಪಾದಿಸಿ]
ಹರಿಯನುಳಿದಾವು ಬದುಕುವರಲ್ಲ ಚಿತ್ತದೊಳ್ | ಭರಿತನಾಗಿಹನಾವಗಂ ಧರ್ಮಸೂನು ಮರೆ | ದಿರನಾ ಮುರಾರಿಯ ನಿರೂಪದಿಂ ತೊಡಗಿ ಮಾಡುವನೀ ಮಹಾಕ್ರತುವನು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೧) |
ಪದ್ಯ :-:೨೨:[ಸಂಪಾದಿಸಿ]
ಇನ್ನು ಚಿಂತಿಸದೆ ಕೃಷ್ಣಸ್ಮರಣೆಯಂ ಮಾಡಿ | ನಿನ್ನ ಹಸ್ತಸ್ಪರ್ಶನಂ ಗೆಯ್ದೊಡಾ ಕುದುರೆ | ಮುನ್ನಿನಂತವನಿಯೊಳ್ ನಡೆದಪುದು ಪೋಗು ನೀನೆಂದು ಶೌಭರಿ ನುಡಿಯಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೨) |
ಪದ್ಯ :-:೨೩:[ಸಂಪಾದಿಸಿ]
ಆಲಿಸರ್ಜುನ ಮುನ್ನ ವಿಪ್ರನುಂಟೋರ್ವನು | ದ್ದಾಲಕಾಖ್ಯಂ ತಿಳಿದನಖಿಳಶಾಸ್ತ್ರಂಗಳಂ | ಮೇಲೆ ವೈವಾಹದೊಳ್ ವಧುವಾದಳಾತಂಗೆ ಚಂಡಿಯೆಂಬಾಕೆ ಬಳಿಕ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೩) |
ಪದ್ಯ :-:೨೪:[ಸಂಪಾದಿಸಿ]
ಎಳ್ಳನಿತು ನಿನ್ನ ಮಾತಂ ಕೇಳ್ವಳೆಂದೆಣಿಕೆ | ಗೊಳ್ಳದಿರ್ ಪರಿಚರ್ಯೆ ಮನೆವಾಳ್ತೆಯೆಂದೆಂಬ | ತಳ್ಳಿಯಿವಳಲ್ಲ ನೀನೆಂದುದಂ ಮಾಡೆನೆಂದಾ ಚಂಡಿ ಚಂಡಿಗೊಳಲು(ಚಂಡಿಪೊರೆ) || |
[ಆವರಣದಲ್ಲಿ ಅರ್ಥ];=
(ಪದ್ಯ - ೨೩) |
ಪದ್ಯ :-:೨೫:[ಸಂಪಾದಿಸಿ]
ಇಂತಿರುತಿರೆಲ್ಕೆ ಕೌಂಡಿನ್ಯನೆಂಬೊರ್ವಮುನಿ | ಪಂ ತನ್ನ ಮನೆಗೆ ಬರಲಾತನಂ ಸತ್ಕರಿಸಿ | ಚಿಂತೆವೆತ್ತಿರಲವನಿದೇನೆಂದು ಬೆಸೆಗೊಂಡೊಡವಳ ಪ್ರತಿಕೂಲತೆಯನು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೫) |
ಪದ್ಯ :-:೨೬:[ಸಂಪಾದಿಸಿ]
ಉದ್ದಾಲಕಂ ಬಳಿಕ ತನ್ನ ಮಂದಿರದೊಳಿರುತಿದ್ದ ಸಮಯಕೆ ಪಿತೃಶ್ರಾದಿವಸಂ ಬಂದೊಡೆದ್ದು ಚಂಡಿಯೊಳೆಲಗೆ ನಾಳೆ ಪೈತೃಕಮದಂ ನಾಡಿದಲ್ಲದೆ ಮಾಡೆನು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೬) |
ಪದ್ಯ :-:೨೭:[ಸಂಪಾದಿಸಿ]
ನಾಳೆ ಮಾಡಿಸುವೆನಾ ಪೈತೃಕವನುತ್ತಮದ | ಶಾಲಿಧಾನ್ಯ ವ್ರೀಹಿ ಶಾಕಮಂ ಕೊಂಡು ಬಹೆ | ನಾಲಯವನತಿಶುದ್ಧಮಾದ ವಸ್ತುಗಳಿನಲ್ಲದೆ ಕೂಡೆನಳ್ತಿಯಿಂದೆ || |
[ಆವರಣದಲ್ಲಿ ಅರ್ಥ];=
(ಪದ್ಯ - ೨೭)XX |
ಪದ್ಯ :-:೨೮:[ಸಂಪಾದಿಸಿ]
ಆದೊಡೆ ಕುತುಪಕಾಲಮಂ ಬಿಡುವೆನರ್ಚನೆಯೊ ಳಾದರಿಸೆ ನಾಂ ಬಂದ ವಿಪ್ರರಂ ಪಾಕದ ನ | ವೋದನ ಸುಪಾಯಸ ಗುಡಾಜ್ಯ ಮಧು ತೈಲ ಮೃದುಭಕ್ಷ್ಯ ಭೋಜ್ಯಾದಿಗಳನು |
[ಆವರಣದಲ್ಲಿ ಅರ್ಥ];=
(ಪದ್ಯ - ೨೮) |
ಪದ್ಯ :-:೨೯:[ಸಂಪಾದಿಸಿ]
ಎಂದೊಡೆ ಕುತುಪಕಾಲಮಂ ಮೀರಲೀಯೆನಾಂ | ಬಂದ ವಿವ್ರರನಾದರಸಿ ಪೂಜೆಗೈಸದಿರೆ | ನಿಂದೊಲ್ಲೆನೆಂದೊಕ್ಕಣಿಸಿದಿನಿತನೆಲ್ಲಮಂ ಸಂಪಾದಿಸದೆ ಮಾಣೆನು || |
[ಆವರಣದಲ್ಲಿ ಅರ್ಥ];=
(ಪದ್ಯ - ೨೯) |
ಪದ್ಯ :-:೩೦:[ಸಂಪಾದಿಸಿ]
ಕಂಡನೀತೆರನನುದ್ದಾಲಕಂ ಸಂತಸಂ | ಗೊಂಡು ಮನದೊಳ್ ವೊರಗೆ ತಾನೊಪ್ಪದವನಾಗಿ | ಚಂಡಿ ಪೇಳಿದವೊಲಾ ಶ್ರಾದ್ಧಮಂ ಮಾಡಿ ಸಂಪ್ರೀತಿಯಿಂ ವಿಪರೀತದ || |
[ಆವರಣದಲ್ಲಿ ಅರ್ಥ];=
(ಪದ್ಯ - ೩೦) |
ಪದ್ಯ :-:೩೧:[ಸಂಪಾದಿಸಿ]
ಎಲೆಗೆ ನಿನ್ನೊಡನೆ ನಾನೇಂ ಹಗೆ(ರಿ)ಯಹೋರುವೆಂ | ಛಲಿತನಕಲಸಿದೆ ನೀನರೆಯಾಗಿ ಹೋಗೆಂದು | ಸಲೆ ಮುಳಿದು ಶಾಪವಂ ಕೊಟ್ಟು ಕಾರುಣ್ಯದಿಂದಾ ದ್ವಿಜಂ ಕೂಡೆ ತಿಳಿದು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೧) |
ಪದ್ಯ :-:೩೨:[ಸಂಪಾದಿಸಿ]
ಮೋಕ್ಷಮಹುದಾಗಿ ಚಂಡಿಗೆ ಶಾಪಪಮೀಗಳುಪ | ಸಾಕ್ಷಿಗೈತಂದು ನಿಂದುದು ಹಯಂ ನೀಂ ಮುಟ್ಟ | ಲೀಕ್ಷಣದೊಳೆದ್ದು ಪೋದಪುದು ಪÉÇೀಗಿನ್ನು ಮುಂದಣ ನೃಪರ್ ಬಲವಂತರು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೨) |
ಪದ್ಯ :-:೩೩:[ಸಂಪಾದಿಸಿ]
ತದನಂತರದೊಳರ್ಜುನಂ ಬಂದು ಕುದುರೆಯಂ | ಮುದದಿಂದೆಮುಟ್ಟಲದು ಬಿಟ್ಟು ನಡೆದುದು ಮುಂದ | ಕೊದರಿಕೊಳುತೆದ್ದು ನರನಂ ಕಂಡು ಚಂಡಿತಪಕಾಗಿ ಕಳುಹಿಸಿಕೊಂಡಳೂ || |
[ಆವರಣದಲ್ಲಿ ಅರ್ಥ];=
(ಪದ್ಯ - ೩೩) |
ಪದ್ಯ :-:೩೪:[ಸಂಪಾದಿಸಿ]
ಘನಘೋಷದಿಂದ ವಾಹಿನಿಗಳೈತರುತಿರಲ್ | ವನಧಿ ಮೇರೆಯನತಿಕ್ರಮಿಸಿ ಬಂದಪುದೆಂದು | ಮುನಿದು ಭೂಮಂಡಮಿರದೆ ನಭಸ್ಥಳಕೆ ಪೋಪಂತೆ ದೂಳೇಳುತಿರಲು || |
[ಆವರಣದಲ್ಲಿ ಅರ್ಥ];=
(ಪದ್ಯ - ೩೪)XXῚ |
ಪದ್ಯ :-:೩೫:[ಸಂಪಾದಿಸಿ]
ತವೆ ಸರ್ವಮಂಗಳಾಸ್ಪದಮಾದೊಡಂ ಪರಾ | ಭವಯುಕ್ತಮಾಗಿರ್ಪುದೆಂದು ಕೈಲಾಸಾಚ | ಲವನತುಳಕ್ಷ್ಮೀನಿಳಯಮಾದೊಡಂ ಭಂಗಸಹಿತಮಾಗಿರ್ಪುದೆಂದು || |
[ಆವರಣದಲ್ಲಿ ಅರ್ಥ];=
(ಪದ್ಯ- ೩೫) |
ಪದ್ಯ :-:೩೬:[ಸಂಪಾದಿಸಿ]
ಇದು ಪುರಸ್ತ್ರೀಯ ಮಣಿಕಾಂಚೀವಲಯಮೊ ಭೂ | ಸುದತಿಯ ಕೊರಳ ವಿರಾಜಿಪ ರತ್ನ ಮಾಲಿಕೆಯೊ | ತ್ರಿದಶಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರುಪಿದ ಕುಲಿಶದಾ || |
[ಆವರಣದಲ್ಲಿ ಅರ್ಥ];=
(ಪದ್ಯ- ೩೬) |
ಪದ್ಯ :-:೩೭:[ಸಂಪಾದಿಸಿ]
ಆ ನಗರದರಸು ಹಂಸಧ್ವಜಂ ಕೇಳ್ದನೀ | ಸೇನೆ ಸಹಿತರ್ಜುನಂ ವರಮಖ ತುರಂಗ ರ | ಕ್ಷನಿಮಿತ್ತಂ ಬಂದು ಸೀಮೆಯಂ ಪೊಕ್ಕುದಂ ದೂತಮುಖದಿಂದೆ ಬಳಿಕ || |
[ಆವರಣದಲ್ಲಿ ಅರ್ಥ];=
(ಪದ್ಯ- ೩೭) |
ಪದ್ಯ :-:೩೮:[ಸಂಪಾದಿಸಿ]
ಈ ಧನಂಜಯನ ತುರಗವನೀಗ ಕಟ್ಟಿದೊಡೆ | ಮಾಧವಂ ತಾನೆ ಮೈದೋರುವನೆಮಗೆ ಕೃಷ್ಣ | ನೀಧರೆಯೊಳಿರುತಿರ್ದುಮಿನ್ನೆಗಂ ಕಂಡುದಿಲ್ಲಚ್ಯುತನ ಮೂರುತಿಯನು || |
[ಆವರಣದಲ್ಲಿ ಅರ್ಥ];=
(ಪದ್ಯ- ೩೮) |
ಪದ್ಯ :-:೩೯:[ಸಂಪಾದಿಸಿ]
ಆ ನರಾಧಿಪತಿ ನಿಶ್ಚೈಸಿದಂ ಕದನಮಂ | ಭೂನಾಥ ಕೇಳವನ ಕಟ್ಟಳೆಯನೆಲ್ಲಮಂ | ತಾನಾಳ್ವ ದೇಶದೊಳ್ ತನ್ನನಗರದೊಳೇಕಪತ್ನೀವ್ರತದೊಳಿರದೊಡೆ || |
[ಆವರಣದಲ್ಲಿ ಅರ್ಥ];=
(ಪದ್ಯ- ೩೯) |
ಪದ್ಯ :-:೪೦:[ಸಂಪಾದಿಸಿ]
ಅಂತುಮದರಿಂದೆಲ್ಲರೇಕಪತ್ನೀವ್ರತರ | ನಂತಪೂಜಾರತರ್ ಸೌಭಾಗ್ಯಸಂಯುತರ್ | ಸಂತತಮಲಂಕಾರಮಂಡಿತರ್ ನೀತಿಶಾಸ್ತ್ರಸ್ಮೃತಿವಿಚಾರರತರು || |
[ಆವರಣದಲ್ಲಿ ಅರ್ಥ];=
(ಪದ್ಯ- ೪೦))XXῚῚ |
ಪದ್ಯ :-:೪೧:[ಸಂಪಾದಿಸಿ]
ಏಕಪತ್ನೀವ್ರತಂ ಪ್ರಾಯತಂ ಕೋಮಲಂ | ಮಾಂಕಾಂತ ಕಿಂಕರನಲಂಕಾರ ಪೂಜ್ಯಂ ಶು | ಭಾಕಾರನಾರೋಗ್ಯಪಟು ಕರಣನಿರ್ಮಲನಕೈತವಂ ಬಲವಂತನು || |
[ಆವರಣದಲ್ಲಿ ಅರ್ಥ];=
(ಪದ್ಯ- ೪೧) |
ಪದ್ಯ :-:೪೨:[ಸಂಪಾದಿಸಿ]
ಉಣಲುಡಲ್ ತೊಡಲೀಯಲಿರಲೆಯ್ದಲುಂಟಾಗಿ | ತಣಿದಿಹುದಲಂಕಾರಪೂಜ್ಯದಿಂ ವಸ್ತ್ರಭೂ | ಷಣ ಗಂಧ ಮಾಲ್ಯಾನುಲೇಪನಂಗಳ ಪರಿಮಳಂಗಳಿಂ ಸೋಗಸಿರ್ಪುದು || |
[ಆವರಣದಲ್ಲಿ ಅರ್ಥ];=
(ಪದ್ಯ- ೪೨) |
ಪದ್ಯ :-:೪3:[ಸಂಪಾದಿಸಿ]
ಮಣಿಮಯ ವರೂಥಮೆಪ್ತತ್ತೊಂದು ಸಾಸಿರಂ | ಗಣನೆಗೆಪ್ಪತ್ತೊಂದುಸಾಸಿರಗಜಂ ತುರಗ | ಮೆಣಿಸುವೊಡೆ ಲಕ್ಕಂ ಪದಾತಿ ಸಾಸಿರಮುಳಿಯೆ ಲಕ್ಷಮೊರ್ವನ ಬಳಿಯೊಳು || |
[ಆವರಣದಲ್ಲಿ ಅರ್ಥ];=
(ಪದ್ಯ- ೪೩)XXῚῚῚ |
ಪದ್ಯ :-:೪೪:[ಸಂಪಾದಿಸಿ]
ಆತಂಗೆ ಧನಬಲಂ ಚಂದ್ರಸೇನಂ ಚಂದ್ರ | ಕೇತು ವರಚಂದ್ರದೇವಂ ವಿಡೂರಥನತಿ | ಖ್ಯಾತನಹ ಧರ್ಮವಾಹಂ ನ್ಯಾಯವರ್ತಿಯೆಂಬಿವರನುಜರೇಳುದುಂದಿ || |
[ಆವರಣದಲ್ಲಿ ಅರ್ಥ];=
(ಪದ್ಯ- ೪೪) |
ಪದ್ಯ :-:೪೫:[ಸಂಪಾದಿಸಿ]
ವರಶಂಖಲಿಖಿತರೆಂಬವರಣ್ಣತಮ್ಮಂದಿ | ರಿರಲವರೊಳಾ ಲಿಖಿತನಾಶ್ರಮಕೆ ಶಂಖನೈ | ತರುತೆ ಪೇಳದೆ ಬಿದ್ದ ಪಣ್ಣನಾಸ್ವಾದಿಪಲ್ ಕರೆದಿವಂ ದೋಷಿಯೆಂದು || |
[ಆವರಣದಲ್ಲಿ ಅರ್ಥ];=
(ಪದ್ಯ- ೪೫) |
ಪದ್ಯ :-:೪೬:[ಸಂಪಾದಿಸಿ]
ಆ ಶಂಖಲಿಖಿತರೆಂದವೊಲಾತನಿರ್ದಪನಿ | ಳೇಶ ಕೇಳವನದಿನ್ನೊಂದು ಕಟ್ಟಳೆಯಂ ಹು | ತಾಶನಜ್ವಾಲೆಯಿಂ ಕಾಯ್ದುಕ್ಕು ವೆಣ್ಣೆಗೊಪ್ಪರಿಗೆಯೊಳ್ ತಾಂ ಸಮರಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೭:[ಸಂಪಾದಿಸಿ]
ಬಳಿಕನಿಬರೆಲ್ಲರಂ ಕರೆಸಿ ಹಂಸಧ್ವಜಂ | ಸೆಲವಿತ್ತು ಫಲುಗುಣನ ತುರಗಮಂ ಪಿಡಿತಂದು | ಪೊಳಲೊಳಗೆ ಕಟ್ಟಬೇಕೆಂದು ಸಾರಿಸಿ ಡಂಗುರಬೊಯ್ಸಿ ಪೊರಮಡುತಿರೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೮:[ಸಂಪಾದಿಸಿ]
ಸುರಪಸುತನೆಂಬ ವೈರಕೆ ಧನಂಜಯನ ಮೇ | ಲಿರದೆ ಮುಳಿದೆದ್ದುದೊ ಕುಲಾದ್ರಿಗಳ ಬಳಗಮೆನೆ | ಕರಿಗಳೈದಿದುವು ತನ್ನ ಮಗನಂ ಕೊಂದನೆಂದು ನರನೊಳ್ ಕನಲ್ಡು|| |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೮:[ಸಂಪಾದಿಸಿ]
ಕಂಸಾರಿ ಬಾರದೆ ನರಂಗೆ ಸೋಲ್ವವನಲ್ಲ | ಹಂಸಧ್ವಜಂ ಧುರದೊಳಿನ್ನು ಕೃಷ್ಣನ ದರ್ಶ | ನಂ ಸುಲಭಮೆಲ್ಲರ್ಗೆ ಸಂದೇಹಮಿಲ್ಲ ದೇಹಮನಾಂತು ಜನಿಯಿಸಿರ್ದ ||
|
[ಆವರಣದಲ್ಲಿ ಅರ್ಥ];=
|
ಪದ್ಯ :-:೫೦:[ಸಂಪಾದಿಸಿ]
ಅಳಿಲಾದ ನಿರಿಯ ಬಳಲಿದ ಮುಡಿಯ ಸೊಪ್ಪಾದ | ತಿಲಕದ ಕೆದರ್ದ ಕಾಡಿಗೆಯ ಬೆಮರಿದ ಮೈಯ | ಪುಳಕದದಯವದ ಕೆಂಬಾಸುಳೇರುಗಳ ಪರೆದ ನುಲೇಪನದ ತೊಡಕಿದ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೦:[ಸಂಪಾದಿಸಿ]
ಇನ್ನು ಮರ್ಜನಕೃಷ್ಣರೊಡನೆ ಸಂಗರಕೆ ಸಂ | ಪನ್ನಪಟುಭಟಿರೊದಗಿ ಗಾಯವಡೆಯದಮುನ್ನ | ನಿನ್ನಧರಕೆಂತ ದುದಬಲೆ ಕೃಷ್ಣ ಕ್ಷತಂ ಪೇಳೆಂದಸಿಯಳೊರ್ವಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೨:[ಸಂಪಾದಿಸಿ]
ಒದಗದಿನ್ನು ಮುರಾರಿಯ ಸಮರಮರ್ಜುನನ | ಕದನಂ ಪ್ರವರ್ತಿಸದು ಪ್ರದ್ಯುಮ್ನನಾಹವಂ | ಮೊದಲೆ ತಲೆದೋರಿತಿಂದೂರೊಳೆಂದೊರ್ವಳೀ ಪೊಸವಾರ್ತೆಯಂ ಪೇಳಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೨:[ಸಂಪಾದಿಸಿ]
ಇಂದುಂಂಡಲದ ಸಿರಿಯಂ ಸೂರೆಯಾಡಿದರ್ | ಬಂದು ವಿಷಯದೊಳೂರುಗಳನಿರಿದರೊತ್ತಾಯ | ದಿಂದ ದುರ್ಗಂಗಳಂ ಕೈಕೊಂಡರೊದಗಿದರ್ ಸೆಳೆಸೂರೆಗಾತುರದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೫೪:[ಸಂಪಾದಿಸಿ]
ವಿಮಲ ದಧಿ ಲಾಜ ದೂರ್ವಾಕ್ಷತೆಗಳಂ ತಳಿದು | ಕ್ರಮದೊಳಾರತಿಗಳಂ ತಂದೆತ್ತಿ ಯಕ್ಷಕ | ರ್ದಮ ವಿಲೇಪನ ಕುಸುಮ ತಾಂಬೂಲಮಂ ಕೊಟ್ಟು ಪರಸಿ ಸೇಸೆಗಳನಿಟ್ಟು || |
[ಆವರಣದಲ್ಲಿ ಅರ್ಥ];=
|
- (ಸಂಧಿ ೧೦ಕ್ಕೆ ಪದ್ಯ ೫೨೫.)
ಹೋಗಿ[ಸಂಪಾದಿಸಿ]
ನೋಡಿ[ಸಂಪಾದಿಸಿ]
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ[ಸಂಪಾದಿಸಿ]
ಕನ್ನಡ ವಿಕಿಸೋರ್ಸ್[ಸಂಪಾದಿಸಿ]
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ[ಸಂಪಾದಿಸಿ]
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.