ತೊಳೆದ ಮುತ್ತು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ತೊಳೆದ ಮುತ್ತು  (1952) 
by ಕೆರೂರ ವಾಸುದೇವಾಚಾರ್ಯ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ವಾಸುದೇವ ಸಾಹಿತ್ಯರತ್ನಮಾಲೆ
ಮತ್ತು
ಮನೋಹರ ಗ್ರಂಥಮಾಲೆಯ ೧೧೪ನೆಯ ಕುಸುಮ
೨೦ನೆಯ ವರ್ಷದ ಮೊದಲ ಗ್ರಂಥ


ತೊಳೆದ ಮುತ್ತು

(ಬೆಳ್ಳೀಚಿಕ್ಕೆ ಸಹಿತ)

(ಸಾಮಾಜಿಕ ಮತ್ತು ಪತ್ತೇದಾರಿ ಕಥೆಗಳು)

ಬರೆದವರು :
ಕೆರೂರ, ವಾಸುದೇವಾಚಾರ್ಯರು.

ಎಪ್ರಿಲ್
೧೯೫೨

ಬೆಲೆ
೩-೨-೦


ಪ್ರಕಾಶಕರು:
ಧೀರೇಂದ್ರ ವಾಸುದೇವಾಚಾರ್ಯ ಕೆರೂರ




ಸಂಪಾದಕರು :
ಜಿ, ಬಿ, ಜೋಶಿ

( ಮೊದಲನೆ ಆವೃತ್ತಿ ೨೫೦೦ ಪ್ರತಿಗಳು )

ಪುಸ್ತಕ ಮಾರಾಟಗಾರರು:

ವಾಸುದೇವ ಪುಸ್ತಕಾಲಯ
ಬಾಗಿಲಕೋಟೆ.

ಮನೋಹರ ಗ್ರಂಥಮಾಲೆ
ಧಾರವಾಡ.

ಮುದ್ರಕರು:
ವಿ. ವಾಯ್. ಜಠಾರ
ಕರ್ನಾಟಕ ಪ್ರಿಂಟಿಂಗ್ ವರ್ಕ್ಸ್, ಧಾರವಾಡ.


ಅರಿಕೆ[ಸಂಪಾದಿಸಿ]

ವಾಸುದೇವಾಚಾರ್ಯರು ಆಗೀಗ ತಮ್ಮ ' ಸಚಿತ್ರ ಭಾರತ ' ದಲ್ಲಿ ಈ ಕತೆಗಳನ್ನು ಬರೆದು ಪ್ರಕಟಿಸಿದರು, 'ಸಂಪೂರ್ಣಕಥೆ' ಎಂದು ಇವಕ್ಕೆ ಅವರೇ ನಾಮಕರಣ ಮಾಡಿದರು. ಅವುಗಳಲ್ಲಿ ಕಾಲ್ಪನಿಕ ಮತ್ತು ಐತಿಹಾಸಿಕ ಕಥೆಗಳದೊಂದು, ಚಾರಿತ್ರಿಕ ಕಥಗಳದೊಂದು, ಪತ್ತೇದಾರಿ-ಕಥೆಗಳದೊಂದು, ಸಾಮಾಜಿಕ ಕಥೆಗಳದೊಂದು ಹೀಗೆ ಬೇರೆ ಬೇರೆ ಸಂಕಲನಗಳನ್ನು ಮಾಡಿ, ಪ್ರತಿಯೊಂದು ಸಂಕಲನಕ್ಕೂ ಬೇರೆ ಬೇರೆ ಹೆಸರಿಟ್ಟು ಪ್ರಕಟಿಸಲಾಗಿದೆ. 'ಪ್ರೇಮ ವಿಜಯ' ಅವುಗಳಲ್ಲಿಯ ಮೊದಲನೆಯ ಸಂಕಲನ. 'ಬೆಳಗಿದ ದೀಪಗಳು' ಎರಡನೆಯದು. 'ತೊಳೆದ ಮುತ್ತು'ಮತ್ತು ಮೂರನೆಯದು. 'ಬೆಳ್ಳಿ ಚಿಕ್ಕೆ' ನಾಲ್ಕನೆಯದು.

ಏಕಸಮಯದಲ್ಲಿ ಈ ಗ್ರಂಥಗಳು ವಾಸುದೇವ ಸಾಹಿತ್ಯರತ್ನ ಮಾಲೆಯಲ್ಲಿ ಪ್ರಕಟವಾಗಿಯೂ, ಮನೋಹರ ಗ್ರಂಥಮಾಲೆಯಲ್ಲಿಯ ಗ್ರಾಹಕರಿಗೂ ದೊರೆಯುವಂತಾದುದು, ಮತ್ತು ಅದಕ್ಕೆ ಅನುಕೂಲ ಮಾಡಿಕೊಟ್ಟುದು ಶ್ರೀ ಧೀರೇಂದ್ರ ವಾ. ಕರೂರ ಅವರ ಸಹಕಾರ ಸಹಾಯದಿಂದ ಎಂಬದನ್ನು ಬೇರೆ ಹೇಳಬೇಕಾಗಿಲ್ಲ. ಆದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ

- ಜಿ, ಜೋಶಿ.


ಪ್ರಕಾಶಕರ ಮಾತು[ಸಂಪಾದಿಸಿ]

ನಾನು ಮನೋಹರ ಗ್ರಂಥಮಾಲೆಯ ಸಂಪಾದಕರಾದ ಶ್ರೀ ಜಿ ಬಿ. ಜೋಶಿಯವರ ಸಹಾಯದಿಂದ ದಿವಂಗತ ಕೆರೂರ ವಾಸುದೇವಾಚಾರ್ಯರು ಬರೆದ ಸಾಹಿತ್ಯವನ್ನೆಲ್ಲ ಒಂದು ಕ್ರಮಬದ್ದವಾದ ರೀತಿಯಲ್ಲಿ ಪುಸ್ತಕರೂಪವಾಗಿ ಪ್ರಕಟಿಸಬೇಕೆಂದೆಣಿಸಿ ಈ ವಾಸುದೇವ ಸಾಹಿತ್ಯರತ್ನ ಮಾಲೆಯನ್ನು ಪ್ರಾರಂಭಿಸಿದ್ದೇನೆ ಹನ್ನೆರಡು ಸಾಮಾಜಿಕ ಕಥೆಗಳ ಸಂಕಲನವಾದ "ತೋಳದ ಮುತ್ತಿ" ನೊಡನೆ ಬೇರೆಯಾಗಿ ಪ್ರಕಟಿಸಬೇಕೆಂದಿದ್ದ ಮೂರು ಪತ್ತೇದಾರಿ ಕಧೆಗಳು ಕೂಡಿದ "ಬೆಳ್ಳಿ ಚಿಕ್ಕೆ"ಯೂ ಕೂಡಿದ ಈ ಗ್ರಂಥವು ಆ ಮಾಲೆಯಲ್ಲಿಯ ಏಳನೆಯು ರತ್ನವಾಗಿದೆ.

ನಂಜನಗೂಡಿನ ಸತಿಹಿತೈಷಿಣೀ ಗ್ರಂಥಮಾಲೆಯ ಸಂಪಾಪಿಕೆಯರಾದ ಶ್ರೀಮತಿ ತಿರುಮಲಾಂಬಾ ಅವರು ದಿವಂಗತ ವಾಸುದೇವಾಚಾರ್ಯರ ಮೇಲಿನ ತಮ್ಮ ಗೌರವದಿಂದ ತಮ್ಮಲ್ಲಿದ್ದ : ಸಚಿತ್ರ ಭಾರತ 'ದ ಮೊದಲ ಸಂಪುಟವನ್ನು ಸಮಯಕ್ಕೆ ಒದಗಿಸಿಕೊಟ್ಟು ಸಹಾಯ ಮಾಡಿದ್ದಾರೆ ; ಅದಕ್ಕಾಗಿ ನಾನು ಅವರಿಗೆ ಉಪಕೃತನಾಗಿದ್ದೇನೆ ಅಲ್ಲದೆ ಈ ಮೊದಲೆ ಸಚಿತ್ರ ಭಾರತದ ಮೂರೂ ಸಂಪುಟಗಳನ್ನು ಕೊಟ್ಟು ಗ್ರ೦ಧಪ್ರಕಟನೆಗೆ ಸಹಾಯ ಮಾಡಿದ ಹುಬ್ಬಳ್ಳಿಯ ಶ್ರೀ ಸರಸ್ವತಿ ವಿದ್ಯಾರಣ್ಯ ವಾಚನಾಲಯದ ಸಂಚಾಲಕರಿಗೂ ಮೂರನೆಯ ಸಂಪುಟವೊಂದನ್ನು ಕೊಟ್ಟ ಶ್ರೀ ಮಂಗಳವೆ, ಶ್ರೀನಿವಾಸರಾಯರಿಗೂ ನಾನು ಋಣಿಯಾಗಿದ್ದೇನೆ.

––ಧೀರೇಂದ್ರ ನಾ, ಕರೂರ


ಪರಿವಿಡಿ[ಸಂಪಾದಿಸಿ]

ಸಾಮಾಜಿಕ-ಕಥೆಗಳು

. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೪೯
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೭೫
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೯೬
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೩೪
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೪೩
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೬೫
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೮೦
೧೦
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೮೯
೧೧
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೦೭
೧೨
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೨೬

ಪತ್ತೇದಾರಿ-ಕಥೆಗಳು

೧೩
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೪೨
೧೪
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೫೯
೧೫
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೭೭

ಪ್ರಥಮ ದರ್ಶನದ ಪ್ರೇಮ[ಸಂಪಾದಿಸಿ]

ಭಾಗೀರಥೀ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಬಿಕ್ಕದಾದ ನಗರವಿತ್ತು ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ ಮಾಲತೀ, ಪುನ್ನಾಗ, ಗುಲಾಬ, ಸೇವಂತಿ ಮುಂತಾದ ಸಕಲ ಪುಪ್ಪಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ ಆ ನಗರಕ್ಕೆ ಕುಸುಮವುರವೆಂಬ ಹೆಸರು ಈ ವಿಶೇಷವಾದ ಗುಣಕ್ಕಾಗಿಯೇ ಚಿತ್ರರಧಾದಿ ಗಂಧರ್ವರು ಮೆಚ್ಚಿ ಆ ಸ್ಥಳದಲ್ಲಿ ಮನಸೋತು ವಿಹಾರ ಮಾಡುತ್ತಿದ್ದರೆಂದು ಗ್ರಾಮ ಪುರೋಹಿತರು ಹೇಳುವುದುಂಟು, ಆ ಕುಸನಪುರದ ಪೂರ್ವದಿಕ್ಕಿಗೆ ಗೋಪುರಾಕಾರದ ದಿನ್ನೆಯು ವಿವಿಧವಾದ ವೃಕ್ಷಲತೆಗಳಿಂದ ಆಚ್ಛಾದಿತವಾಗಿ ಅದೊಂದು ಪಚ್ಚ ಮಣಿಗಳ ಅಗಾಧವಾದ ರಾಶಿಯೇ ಆಗಿ ತೋರುತ್ತಿತ್ತು. ಆ ಮರಳಘಗಿರಿ ಬದಿಯ ಮೇಲಿರುವ ವಿಸ್ತಾರವಾದ ತಪ್ಪಲಿನ ಮೇಲೆ ಕಾರಜಾಪ್ರಸಾದ ಕಾಲೇಜದ ಶೋಭಾನುಯವಾದ ಮಂದಿರಗಳು ಉಳಿದು ತೋರಣ ಬಾಳೆಗಂಬಗಳಿಂದ ಅಲಂಕೃತವಾದ ಹೆದ್ದೇರಿನ ತುದಿಗಿರುವ ಪ್ರೇಕ್ಷಣೀಯವಾದ ಕಳಸಗಳ ಮೆರೆಯುತ್ತಿದ್ದವು ಕಾಲೇಜದ ಮಂದಿರ ಗಳಿಂದ ದಿನೈ ಯನ್ನಿಳಿದು ಕೆಳಗೆ ಬಗಬೇಕಾಗಿ ಮಲಸೂತ್ರದಾಕಾರವುಳ್ಳ ವಿಸ್ತಾರವಾದ ಬೀದಿಯಿದ್ದು, ಈ ಬೀದಿಗೆ ಕೆ೦ಪುಗಸಿನ ನೆಲಗಟ್ಟು ಮಾಡಿರುವದರಿಂದ ಆ ಪ್ರದೇಶಕ್ಕೆ ಅದೊಂದು ವಿಲಕ್ಷಣವಾದ ಅಲಂಕಾರವೇ ಆಗಿ ತೋರುತ್ತಿತ್ತು, ಕಾಲೇಜದ ಉನ್ನತವಾದ ಮಂದಿರಗಳಲ್ಲಿ ಇಂತು ನೋಡಿದರೆ ಆನೇಕ ಯೋಜನೆಗಳವರೆಗೆ ಹಬ್ಬಿ ಕೊಂಡಿರುವ ಭೂಶೋಭೆಯು ಜಗ್ಗನೆ ಹೊಳೆದು ತೋರಿ ಪ್ರೇಕ್ಷಕರ ಚಿತ್ರಗಳನ್ನು ಬಲವತ್ತರವಾಗಿ ಆಕರ್ಷಿಸಿ ಕೊಳ್ಳುತ್ತಿತ್ತು. ಎತ್ತ ನೋಡಿದ ನೆಲ್ಲು ಹುಲ್ಲುಗಳ ಗದ್ದೆಗಳ ಹೂದೋಟಗಳೂ ಹಣ್ಣು ಗಿಡಗಳ ತೋಪುಗಳೂ ಅವಿಚ್ಛಿನ್ನವಾಗಿ ಕಂಗೊಳಿಸುವವು. ಭವನಿತೆಯು ಉಟ್ಟಿರುವ ಮರಕತಮಯವಾದ ಮಹಾವಸ್ತ್ರದ ಮೇಲೆ ಚಿತ್ರ ವಿಚಿತ್ರವಾಗಿ ಭೆಗೆದಿರುವ ಕಶೀದೆಗಳಂತೆ ಅಲ್ಲಲ್ಲಿ ಮೆರೆಯುವ ಹಳ್ಳಿಪಳ್ಳಿ ಗಳೂ ವುರವತ್ರನಗಳೂ ಬಹು ಚಮತ್ಕಾರವಾಗಿ ತೋರುತ್ತಿದ್ದವು. ಧರ್ಮದ ಮಾರ್ಗವು ಪ್ರಶಸ್ತವಾಗಿಯೂ ನಿಷ್ಕಂಟಕವಾಗಿಯೂ ಸಮನಾಗಿಯ ಇರುವದಾಗಿ ಭಕ್ತಜನರಿಗೆ ತೋರಿಸಬೇಕೆಂದು ಗಂಗಾದೇವಿಯು ತಾನು ಪೂರ್ವಗಾಮಿಯಾಗಿ ನಡೆದಿರುವ ಶೋಭೆಯಾದರೂ ಬಹು ಪ್ರೇಕ್ಷಣೀಯ ವಾಗಿತ್ತು ಕಾಲೇಜದ ಉನ್ನತವಾದ ಪ್ರದೇಶದಲ್ಲಿರುವ ಹವೆಯ ನಿರ್ಮಲ ವಾಗಿಯೂ ಅರೆ ಗ್ಯಕರವಾಗಿಯ ಮಕರಂದಮಯವಾಗಿಯೂ ಇರುವದ ರಿಂದ ಅಲ್ಲಿಯ ವಿದ್ಯಾರ್ಥಿಗಳಿಗೆ ವಿನ್ಯಾಲಾಭದಿಂದ ಮನಸ್ತುಷ್ಟಿಯಾಗು ವಂತೆಯೇ ದೇಹವುಷ್ಟಿಯು ಕೂಡಾ ಆಗುತ್ತಿತ್ತು

ಬ್ರಿಟಿಶ್ ಸಾಮ್ರಾಜ್ಯವು ನಮ್ಮಲ್ಲಿ ನೆಲೆಗೊಂಡಾಗಿನಿಂದ ಪಾಶ್ಚಾತ್ಯ ಪದ್ಧತಿಯ ವಿದ್ಯಾಭಿರುಚಿಯು ನಮ್ಮಲ್ಲಿ ಹಚ್ಚಿ ಅಲ್ಲಲ್ಲಿ ಹಾಯಸ್ಕೂಲುಗಳೂ ಕಾಲೇಜಗಳೂ ಸ್ಥಾಪಿತವಾದವು. ಸಚಸಾವಧಿ ಜನ ಶರಣರು ವಿಶ್ವವಿದ್ಯಾ ಲ ಗುದ ಪದವೀಧರರಾದರು ಪುರೋಪಿಯನ್ ಗುರುಗಳಿಗೆ ಬುದ್ಧಿ ಗಳಿಸು ವಂದ ಪಂಡಿತರೂ, ಮೆಕಾಲೇಸಂಧ ದುರಭಿಮಾನ ಹೃಪ್ತನ ಜೊಟ್ಟೆಯಲ್ಲಿ ಬೆಂಕಿಬೀಳುವಂತೆ ನಾಗಾತುರ್ಯದಿಂದಲೂ ಪ್ರಮಾಣ ಶಾಸ್ತ್ರಕ್ಕನುಸರಿ ಸಿಯ ಪ್ರೌಢವಾದ ಬ್ಯಾರಿಷ್ಟರರು ನ್ಯಾಯಸಭೆಗಳಲ್ಲಿ ವಾದವಿವಾದಗಳನ್ನು ನಡಿಸಿದರು ನ್ಯಾಯಾಧೀಶ, ಕೌನ್ಸಿಲರ, ಕಮಿಶನರ, ಕಲೆಕ್ಷದ ಮುಂತಾದ ಅಧಿಕಾರಗಳನ್ನು ನಮ್ಮವರು ಒಳ್ಳೆ ಚಾತುರ್ಯದಿಂದ ಘಡಿಸಿದರು. ಕೌನ್ಸಿಲಿನಲ್ಲಿ ಹೊಕ್ಕರೆ ನಾನೇ ಪ್ರಬಲರು, ಯುನಿವರ್ಸಿಟಿಗಳಲ್ಲಿ ಹೊಕ್ಕರೆ ನಾವೇ ಸೀನಿಯರ್ ಲ್ಯಾಂಗ್ಲಭರು. ಹೀಗೆ ವಿದ್ಯಾಪ್ರಸಾದಣವು ಪುರುಷರಲ್ಲಿ ಹಬ್ಬುತ್ತಲಿರಲು ನನ್ನ ಅರ್ಧಾಂಗಿಯರೂ ಅಕ್ಕತಂಗೆಂದಿರೂ ವಿದ್ಯೆಯಲ್ಲಿ ಹಿಂದುಳಿಯಲಾಗದೆಂದು ನೆನಿಸಿ ನಾವು ಸ್ತ್ರೀಶಿಕ್ಷಣವನ್ನು ಕೂಡ ಕೈಕೊಂಡೆವು. ಹೆಣ್ಣು ಮಕ್ಕಳಿಗಾಗಿ ತಕ್ಕಮಟ್ಟಿಗೆ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳಾದವು. ಆದರೆ ಉಚ್ಚ ಪ್ರತಿಯ ಶಿಕ್ಷಣದ ಸ್ವತಂತ್ರವಾದ ಶಾಲೆಗಳ ಸಂಖ್ಯೆಯು ಕಡಿಮೆ; ಕಾಲೇಜಗಳಂತೂ ಇಲ್ಲವೇ ಇಲ್ಲ. ಅಲ್ಪ ವಯಸ್ಸಿನಲ್ಲಿ ಹೆಣ್ಣು ಗಂಡುಮಕ್ಕಳು ಒತ್ತಟ್ಟಿಗೆ ಕಲೆತು ಶಿಕ್ಷಣವನ್ನು ಹೊಂದಬಹುದು; ಆದರೆ ತರುಣ ತರುಣಿ ಕುರು ಒಂದೇ ಸಂಸ್ಥೆಯಲ್ಲಿರುವದು ವಿಹಿತವೋ ಅಲ್ಲವೋ ಎಂಬ ಮಾತಿನ ಬಗ್ಗೆ ಮತಭೇದವು, ಆದರೆ ಸ್ತ್ರೀ ಪುರುಷರ ಮಿಶ್ರ ಶಾಲೆಗಳು ಪ್ರಶಸ್ತ ವಾದದ್ದವೆಂಬ ಅಭಿಪ್ರಾಯವನ್ನು ಕಳೆದ ಸುಧಾರಕರು ತೀರ ಕಡಿಮೆ. ಸ್ತ್ರೀಯರಿಗೆ ಸ್ವತಂತ್ರವಾದ ಕಾಲೇಜಗಳಿರಬೇಕೆ೦ಬ ಜನರೇ ಬಹಳ. ಹೀಗಿರಲು ಹೆಣ್ಣು ಮಕ್ಕಳಿಗಾಗಿ ಕಾಲೇಜಗಳನ್ನು ಸ್ಥಾಪಿ ಪಿಸುವ ಸುಬುದ್ಧಿಯು ಇನ್ನೂ ನಮ್ಮ ಪುರಸ್ಕರ್ತರಲ್ಲಿ ಉಂಟಾಗಿಲ್ಲ. ಶಿಕ್ಷಣಾಭಿರುಚಿಯುಳ್ಳ ನವದನೆಯರು ಆ ನಿರ್ವಾಹಕ್ಕಾಗಿ ಗಂಡುಮಕ್ಕಳ ಕಾಲೇಜಗಳಿಗೆ ಹೋಗುತ್ತಿರುವರು

ಗಂಡುಮಕ್ಕಳ ಕಾಲೇಜುಗಳಲ್ಲಿ ಅನೇಕವಾಜೆ ವಿದ್ಯಾ ಕಲೆಗಳ ಶಿಕ್ಷಣವು ಯಥೇಷ್ಟವಾಗಿ ದೊರಕುತ್ತಿದ್ದರೂ ಅಲ್ಲಿ ಧಾರ್ಮಿಕ ಹಾಗೂ ಜೈತಿಕ ಶಿಕ್ಷಣ ಗಳ “ ಭಾವವೇ ಆಗಿರುವದರಿಂದ ಅನೇಕ ಜನ ತರುಣರು ಆ ಸತರ್ಷಿಗಳಾಗು ತಿರುವದನ್ನು ಕಂಡು, ಅತ್ಯಂತವಾಗಿ ಉದ್ರರಾಗಿರುವ ರಾಜಾ ದೀನ ದಯಾಲವೆಂಬ ಘನವಂತರಾದ ಶ್ರೀಮಂತರು ಪರ್ವ ತಪ್ರಾಯವಾದ ಹಣ ವೆಚ್ಚ ಮಾಡಿ ಶಾರದಾಪ್ರಸಾದವೆಂಬ ಕಾಲೇಜವನ್ನು ಗುಸುವ ಪುರದ ಸಮಾಸ ದಲ್ಲಿ ಸ್ಥಾಪಿಸಿದರು ರಾಮಕಿಶೋರ ಆಚಾರ್ಯ ಚೌಧ ಎದೆ”, ಏ,, ಎಲ್ಎಲ್, ಡೀ, ಎಂಬ ಅನೇಕ ಶಾಸ್ತ್ರವುರಂಗತರಾದ ಮ ಪಂಡಿತರ ಸೌಜನ್ಯ ಸದಾಚರಣಗಳನ್ನೂ ಅವರಲ್ಲಿರುವ ವಿದ್ಯಾಪ್ರ ದ ನ ಮುಡುವ ಟವಾದ ಅಭಿಲಾಷೆಯನ್ನೂ ಕಂಡು ಭಾಳಾ ಎಎಯ'ರವರು ಅವರನ್ನು ಬಹು ಸನ್ಮಾನದೊಂದಿಗೆ ಕರ೦ಗು ತಮ್ಮ ಕಾಲೇಜಿನ ಮುಖ್ಯ ನಿಯಾಮಕರನ್ನಾಗಿ ಮಾಡಿದರು. ಉಳಿದ ಶಿಕ್ಷಕವರ್ಗವಾರ್ದಣ ಸಾಮಾನ್ಯ ವಾದದ್ದಲ್ಲ. ಈ ಆಲಭ್ಯ ಲಾಭಕ್ಕಾಗಿ ಮಾನವಪ್ರಸಾದ ಘಾಜದಲ್ಲಿ ಕಲಿಯುವದಕ್ಕಾಗಿ ಅನೇಕ ಪ್ರಾಂಶಗಳಿಂದ ಬುದ್ಧಿವಂತಿರುವ ವಿದ್ಯಾರ್ಥಿಗಳು ಬರುತ್ತಲಿದ್ದರು

ಡಾಕ್ಟರ ಚೌಧರಿಯವರ ಧರ್ಮಪತ್ನಿ ಯವಾದ ಜನ ದೇಸಿಯ ಕಾದಲೂ ಕಲಕತ್ತಾ ವಿಶ್ವವಿದ್ಯಾಲಯದ ವಿಧವೆಯರಿಗೆ ಐದು ಒಳರು, ಪ್ರಚಲಿತವಾದ ಸ್ತ್ರೀಶಿಕ್ಷಣದ ಪದ್ಧತಿಯಲ್ಲಿರುವ ದೋಷಗಳ& ತಿಳಿದುಕಿ ಭರತಭೂಮಿಗೆ ಭೂಷಣರಾಗತಕ್ಕೆ ಮಹಿಳೆಯರಿಗೆ ಉಚ್ಚಸತಿಯ ಶಿಕ್ಷಣವು ಬೊರಕುವದಲ್ಲದೆ ಸ್ವಧರ್ಮ ನೀತಿಗಳು ಕೂಡ ಇವರಿಗೆ ಸಂಪೂರ್ಣವಾಗಿ ಪ್ರಾಪ್ತವಾಗಬೇಕೆಂಬ ಪ್ರಯತ್ನದಲ್ಲಿ ಜನರೇಜೀನಿಯರಿದ್ದರು ಉತ್ಕಟ ಪ್ರಸಾದ ಕಾಲೇಜದಲ್ಲಿ ಕಲಿಯಲಿಕ್ಕೆ ಬಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮದ ಮೇಲ್ವಿಚಾರಣೆಯನ್ನು ಆ ಸಾದ್ವಿಯರು ಮನಃಪೂರ್ವಕವಾಗಿ ಅಂಗೀಕರಿಸಿ ದ್ವಲ್ಲದ, ಆ ವಿದ್ಯಾರ್ಥಿನಿಯರ ವ್ಯಾಯಾಮ ಮನೋರಂಜನ ಸ್ನಾನ ಭೋಜ ನಾದಿಗಳಲ್ಲಿಯಾದರೂ ಅವರು ದಕ್ಷತೆಯಿಂದ ಲಕ್ಷವನ್ನಿಟ್ಟಿದ್ದರು. ಗೃಹಿಣ ಜನೋಡಿ ಶವಾದ ಕರ್ತವ್ಯ ಜಾಗ್ರತಿಯು ಅಲ್ಲಿಯ ವಿದ್ಯಾರ್ಥಿನಿಯರಲ್ಲಿ ಈಗ ಭತವಾಗಿರಬೇಕೆಂದು ನೆನಿಸಿ ಪ್ರತಿ ರವಿವಾರ ಇಬ್ಬರು ವಿದ್ಯಾರ್ಥಿನಿಯರನ್ನು ಜಾನಕೀದೇವಿಯರು ತಮ್ಮ ಮನೆಗೆ ಕರೆಸಿಕೊಂಡು ತಾವು ಮಾಡುತ್ತಿರುವ ಮನೆಕೆಲಸಗಳ ವ್ಯವಸ್ಥೆಯನ್ನೂ ಅತಿಧಿಗಳ ಆದರಾತಿಥ್ಯವನ್ನೂ, ಪತಿ ಕುಶೂಷೆಯ ಕ್ರಮವನ್ನೂ ನಿತ್ಯ ನಿಯಮ ದೇವತಾರಾಧನಗಳನ್ನೂ ಅವರಿಗೆ ತೋರಿಸಿಕೊಡುತ್ತಿದ್ದರು.

ಶಾರದಾ ಕಾಲೇಜದಲ್ಲಿ ಇಪ್ಪತ್ತು ಇಪ್ಪತ್ತೈದು ಜನ ಹೆಣ್ಣು ಮಕ್ಳಿ ದ್ದರು. ಅವರಲ್ಲಿ ರಮಾಸುಂದರಿಯೂ ಓರ್ವಳಾಗಿದ್ದಳು ರಿಯು ದಕ್ಷಿಣ ದೇಶದಲ್ಲಿರುವ ಕನಕಗಿರಿಯಂಬ ಊರಿನ ಜಾಗೀರದಾರನ ಮಗಳು: ಅವಳ ತಂದೆಯು ಸುಸಂಸ್ಕೃತವಾದ ಆಚಾರ ವಿಚಾರಗಳುಳ್ಳ ವನ ವಿದ್ಯಾ ಪಕ್ಷಪಾತಿಯ ದೇಶ ಸಂಚಾರ ಮಾಡಿದವನ ಆಗಿರುವದರಿಂದ ಅವನು ರಮಾಸುಂದರಿಗೆ ಉಚ್ಚ ಪ್ರತಿಯ ಶಿಕ್ಷಣವನ್ನು ಕೊಡಿಸುತ್ತಿರುವದು ಆಶ್ಚರ್ಯವಿಲ್ಲ. ಉತ್ತರ ದೇಶದಲ್ಲಿ ಸಂಚಾರ ಮಾಡುತ್ತಿರುವಾಗ ಅವನು ಶಾರದಾ ಕಾಲೇಜದ ಖ್ಯಾತಿಯನ್ನು ಕೇಳಿ ಅದನ್ನು ನೋಡಹೋಗಿ, ಅಲ್ಲಿ ರಾಮಕಿಶೋರ ಜಾನಕೀದೇಏಯರ ಪರಿಚಯವನ್ನು ಮಾಡಿಕೊಂಡು, ತನ್ನ ಪ್ರೀತಿಯ ಮಗಳಾದ ರಮಾಸುಂದರಿಯನ್ನು ಜಾನಕೀದೇವಿಯರ ಈಡಿ ಯಲ್ಲಿ ಹಾಕಿದಂತೆ ಮಾಡಿ ಅವಳನ್ನು ಶಾರದಾ ಕಾಲೇಜದಲ್ಲಿ ಕಲಿಯಲಿಕ್ಕೆ ಇದ್ದನು,

ರಮಾಸುಂದರಿಯ ನಿರುಪಮವದ ರೂಪವತಿಯ, ವಿನಯ ಶೀಲೆಯ, ಪಾಪಭೀರುವೂ, ಬುದ್ಧಿಮತಿಯು ಆಗಿರುವದರಿಂದ ಅವಳು ಜಾನಕೀದೇವಿಯ ಪ್ರೀತಿಪಾತ್ರಳಿಗಿದ್ದಳು, ಇಂದುಮತಿ ಬಾನರ್ಜಿ, ಕಂದಾವರೀ ತ್ರಿವೇದಿ ಹಾಗೂ ರಮಾಸುಂದರಿಯರು ಎಫ್, ಏ, ತರಗತಿ ಯಲ್ಲಿ ಕಲಿಯುತ್ತಿರುವದರಿಂದ ಅವರೆಲ್ಲರೂ ಒಟ್ಟಿಗೆ ಒಂದೇ ಕೋಣೆಯಲ್ಲಿ ಇದ್ದು ಕೊಂಡು ಅಭ್ಯಾಸ ಮಾಡುತ್ತಿದ್ದರು. ನವಕ ತೀಕ್ಷ್ಮವಾದ ಬುದ್ದಿ ಯುಳ್ಳವರೂ ನಿರ್ಮಲಾಂತಃಕರಣದವರೂ ವಿಶುದ್ಧವಾದ ಆಚರಣ ವುಳ್ಳವರೂ ಆಗಿದ್ದರು. ಇಂದುಮತಿಯ ವಿನೋದದ ನುಡಿಗಳ, ಚಂದ್ರಾ ವಲಿಯ ತಿದ್ದಿ ತೀಡಿದ ಉಡಿಗೆ ತೊಡಿಗೆಗಳೂ ರಮಾಸುಂದರಿಯ ಸ್ವಚ್ಛತೆ ಸುವ್ಯವಸ್ಥೆಗಳೂ ಆ ಮೂವರಲ್ಲಿ ಸರಿಯಾಗಿ ಕಲೆತು ಹೂ ಅವರು ನಾರೀ ಕುಲಕ್ಕೆ ಅಲಂಕಾರವಾಗಿ ಮೆರೆಯುತ್ತಿದ್ದರು.

ವಾರಶಾಲೆಯಲ್ಲಿ ನದದ ವಿಷಯದ ಊಹಾಪೋಹವನ್ನು ಗಂಡು ಮಕ್ಕಳು ಮಾಡುತ್ತಿರುವವನ್ನೂ, ಅವರು ತೆಗೆದ ಕುಶಲನಾದ ಶಂಕೆಗಳಿಗೆ ಗುರುಗಳು ಹೇಳುತ್ತಿರುವ ಸಮರ್ಪಕವಾದ ಸಮಾಧಾನಗಳನ್ನೂ ಆ ಚತುರೆ ಯರು ಮನಸ್ಸು ಕೊಟ್ಟು, ಆಳುತ್ತಿದ್ದರು, ಆ ಮkವರಿಗೂ ಭಾಷಾವಿಷಯ ಗಳಲ್ಲಿ ವಿಶೇಷವಾದ ಅಭಿರುಚಿಯಾಗಿರುವದರಿಂದ ಬಿ ಎ , ಎಂ. ಏ ವರ್ಗ ಗಳಲ್ಲಿ ಇಂಗ್ಲಿಶ್ ಸಂಸ್ಕೃತ ವಿಷಯಗಳು ನಡೆದಿರುವಾಗ ಒಮ್ಮೊಮ್ಮೆ ಹೋಗಿ ಅವರು ಕೇಳುತ್ತೆ ಕೂಡುವರು, ಪುರುಷ ವಿದ್ಯಾರ್ಥಿಗಳ ಪರಿಚಯವನ್ನು ಅವರು ಮಾಡಿ ಕೊಳ್ಳುತ್ತಿದ್ದಿಲ್ಲವಾದರೂ ಆ ಕಾಲೇಜದಲ್ಲಿ ಒಳ್ಳೆ ಬುದ್ಧಿಶಾ ಗಳಾದ ವಿದ್ಯಾರ್ಥಿಗಳಾರೆಂಬದು ಅವರಿಗೆ ಗೊತ್ತಾಗಿತ್ತು.

ವಿಜಯಪುರದ ಧುವರಾಯನಲಬ ಅದ್ವಿತೀಯನಾದ ಬುದ್ಧಿಶಾಲಿಯು ಬಿ. ಏ. ತರಗತಿಯಲ್ಲಿ ಉತ್ತಮ ಪರೀಕ್ಷೆಯನ್ನು ಕೆಟ್ಟದ್ದನಾದ್ದರಿಂದ ಆ ತರುಣನನ್ನು ಡಾಕ್ಟರ ಚೌಧರಿಯವರು ತಮ್ಮ ಕಾಲೇಜದ ಫೆಲೋt (ವಿದ್ಯಾರ್ಥಿಯಾಗಿದ್ದ ದೂ ಶಿಕ್ಷಕರ ಕಲಸವನ್ನು ಮುಡುವವ)ನನ್ನಾಗಿ ಮಾಡಿ ಎಂ. ಎ: ತರಗತಿಯಲ್ಲಿ ಅಭ್ಯಾಸ ಮಾಡಲು ಆಸ್ಥೆಯಿಂದ ಇಟ್ಟುಕೊಂಡರು. ಭುವರಾಯನು ಸಂಸ್ಕೃತದಲ್ಲಿ ಅಸದೃಶನೂ ಇಂಗ್ಲಿಶದಲ್ಲಿಯ ಆತಿ ಪ್ರವೀ ಣನೂ ಆಗಿರುವದರಿಂದ ಎಫ್, ಏ, ತರಗತಿಯವರಿಗೆ ಆ ಎರಡು ವಿಷಯ ಗಳನ್ನು ಕಲಿಸಲು ಶಿವನನ್ನು ಆಯಾ ವಿಷಯಗಳ ಪಂಡಿತರ ಸಹಾಯಕಾರಿ ಯಾಗಿ ನಿಯಮಿಸಿದ್ದರು.

ಒಂದು ದಿನ ಡಾಕ್ಟರ ರಾಮಕಿಶೋಧ ಆಚಾರ್ಯರವರು ಮೇಜಿನ ಮೇಲಿರುವ ಲೇಖಗಳಲ್ಲಿ ಒಂದನ್ನೆತ್ತಿಕೊಂಡು ನೆರೆದಿರುವ ವಿದ್ಯಾರ್ಥಿ ವಿದ್ಯಾ ರ್ಥಿನಿಯರನ್ನು ಕುರಿತು "ಇದು ನಮ್ಮ ಧ್ರುವರಾಯನು ಬರೆದಿರುವ ಸಂಭೂಭರ್ತಿ-ಕಥೆಗಳು ಸೀಯರ್* ಕಾಳಿದಾಸ ಕವಿತಾಚಾತುರ್ಯದ ತುಲನ ' ಎಂಬ ಸರಸವಾದ ಲೇಖವು ಇದರಲ್ಲಿಯ ಭಾಷಾ ಸರಣಿಯ, ವಿಷಯನಿರೂಪಣಶಕ್ತಿಯ, ಮಾರ್ಮಿಕವಾದ ಪರೀಕ್ಷಳವೂ ಪಂಡಿತರಿಂದ ಕೂಡ ಅನುಕರಣೆಯ ವಾಗಿವೆ ನೀವೆಲ್ಲರೂ ಈ ಲೇಖವನ್ನು ಮತ್ಸರವಿಲ್ಲದೆ ಓದಿಕೊಳ್ಳಬೇಕೆಂದು ನಾವು ಸೂಚಿಸುತ್ತೇವೆ ಧವರಾಯ, 'ನಿನ್ನನ್ನು ನಾವು ಮನಃಪೂರ್ವಕ ವಾಗಿ ಅಭಿನಂದಿಸುತ್ತವೆ ಈ ಸುವರ್ಣಪದಕವನ್ನು ರಾಜಾ ದೀನದಯಾಳ ರವರು ಪರಮ ಸಂತುಷ್ಟರಾಗಿ ನಿನಗೆ ಕಾಣಿಯಾಗಿ ಕೊಟ್ಟಿರುವರು ” ಎಂದು ಹೇಳಿ ಪದಕವನ್ನು ಧ್ರುವರಾಯನ ಅಂಗಿಗೆ ಕಟ್ಟಿದರು. ಧ್ರುವರಾಯನು ಬರೆದ ಸುಶ್ಯವಾದ ಲೇಖವನ್ನೊ ದಬೇಕೆ೦ಬ ಕುತೂ ಹಲವುಳ್ಳವಳಾಗಿ ಮಾಸುಂದರಿಯು ಲಗಬಗೆಯಿಂದ ಒಂದು ಪತ್ರವನ್ನು ಬರೆದು ಕಾಲೇಜದ ಜವಾನನ ಕೈಯಲ್ಲಿ ಕೊಟ್ಟು, ಧು, ವರರು ತಮ್ಮ ಲೇಖನವನ್ನು ಕೊಟ್ಟರೆ ತಂದುಕೊಡೆಂದು ಹೇಳಿದಳು ಧವಳಯ ನು ಸಾಯಂಕಾಲದಲ್ಲಿ ತಿರುಗಾಡಿ ವಸತಿಗೃಹಕ್ಕೆ ಬರುವಷ್ಟರಲ್ಲಿ ಜವಾನರು ರಮಸುಂದರಿಯ ಪತ್ರವನ್ನು ತಂದು ಇಟ್ಟನು ಮುಕ್ಕಾವಲಿಗಳಂತೆ ಮನೋಹರವಾಗಿರುವ ಸ್ವಹಸ್ತಾರ್ಕ್ಷ ದಿಂದ ಬರೆದ ಮೇಲ್ವಿಳಾಸವನ್ನು ನೋಡಿ ಚಕಿತನಾಗಿ ಅವನು ಔಟ್ಟು ಕ್ಯದಿಂದ ಪತ್ರವನ್ನೂ ಗೆದು ಓದಿದನು. ಓದೋದುವಾಗ ಆವನ ಹೃದಯದಲ್ಲಿ ಅಭಿಮಾನ ಧನ್ಯತೆ ಸಂತೋಷ ಮುಂತಾದ ಮನೋವಿಕಾರಗಳು ಉಕ್ಕೇರಿಬಂದವು. ಶವಾಸುಂದರಿಯು ತನ್ನ ಲೇಖಭ ಸ್ತುತಿಮಾಡಿರುವದು ಅವನಿಗೆ ಜಾಜಿ ನೀನದಯಾಲರ ಸುವಣ ಪದಕಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳದ್ದಾಗಿ ತೋರಿತು. 14 (ಮಾಸದರಿ ಯಂತ ಆಸ್ಥೆಯಿಂದ ವಿದ್ಯಾ ಸಂಪಾದನೆ ಮಾಡಿ ಆ ಆಲಿಚ್ಛಿಸುವಂಥ ಸ್ತ್ರೀಯರು ನಮ್ಮ ಸಮಾಜದಲ್ಲಿ ಹತ್ತೇ ಜನರು ಹುಟ್ಟಿದ ನಮ್ಮ ಸಮಾಜವು ಉಚ್ಚಿ ತವಾಯಿತೆಂದೂ ನಮ್ಮ ಜಾನಕೀ ದೇವಿಯವರು ಕೃತಾರ್ಥರಾದರೆಂದೂ ನಾನು ನಂಬುತ್ತೇನೆ ನನ್ನ ಲೇಖವನ್ನು ಅನೇಕ ಜನರು ಬೇಡಿದ್ದಾರೆ. ಆದರೆ ನಾನದನ್ನು ಈ ಜಿಜ್: ಸುನಾದ ವಧುವಿಗೆ ಮೊದಲು ಕೊಡುವೆನು ” ಎಂದು ತನ್ನೊಳಗೆಯೇ ಚಿಂತಿಸಿ ಫshಯನು ಆ ಲೇಖವನ್ನು ತೆಗೆದು ಜವಾನನ ಕೈಯಲ್ಲಿ ಕೊಟ್ಟು ರಮಾಸ೦ದರಿಗೆ ಪುಟ:ತೊಳೆದ ಮುತ್ತು.pdf/೧೭ es ಸಂಪೂರ್ಣ-ಕಥೆಗಳು 64 64 ಹೋದರ ಮಲಗಿಕೊಳ್ಳುವ ವಿಚಾರವಿಲ್ಲವೆ ? ಏನು ಓದುತ್ತಲಿದ್ದಿ ರಮಾ? ಆದಬದಿಯt? ಈ ಇಲ್ಲಾ ತಮ್ಮ ಅನುಜ್ಞೆಯಿಲ್ಲದೆ ಕಾದಂಬರಿಯನ್ನು ಹೇಗೆ ಓದಲಿ ? ಧ್ರುವರಾಯರು ಬರೆದಿರುವ ಲೇಖವನ್ನು ಪಂಡಿತನಯರು (ಡಾಕ್ಟರ ಚೌಧರಿ) ಬಹುಪರಿಯಾಗಿ ಕಂಡಿದ್ದರಿಂದ ಅದನ್ನು ತರಿಸಿ ಕೊಂಡು ನಾನು ಓದುತ್ತಲಿದ್ದೆನು - ಇದಕ್ಕೆ ನಮ್ಮ ಅಪ್ಪಣೆ ಬೇಡವೇನು ? ?” ಎಂದು ಜಾನಕೀದೇವಿ ಯರು ಮಂದಸ್ಮಿತೆಯರಾಗಿ ಕೇಳಿದರು,

  • ನಿಯಾಮಕರೇ ಈ ಲೇಖದ ಪ್ರಶಂಸೆಯನ್ನು ಮಾಡಿರುವದರಿಂದ

ಇದನ್ನು ಓದಲು ಪ್ರತ್ಯವಾಯ ತೋರಲಿಲ್ಲುದ್ದರಿಂದ ಆಪ್ಪಣೆ ಕೇಳುವದನ್ನು ಬಿಟ್ಟೆನು ಆ ಲೇಖವನ್ನು ಓದಿದ್ದ ರಲ್ಲಿ ದೋಷವಿಲ್ಲ ಭನಾ, ಆದರೆ ಅದನ್ನು ನೀನು ಸಂವಾದಿಸಿದ್ದು ಹೇಗೆ ? 14 ಯಾಕೆ ? ಧುವರಾಯರಿಗೆ ಪತ್ರ ಬರೆದು ಈ ಲೇಖವನ್ನು ತರಿಸಿ ಕೊಂಡೆನು, 11 ಆಯಿತು, ಪುರುಷರೊಡನೆ ಪತ್ರವ್ಯವಹಾರ ಮಾಡಬೇಕಾದರೆ ನಮ್ಮ ಅಪ್ಪಣೆ ಅವಶ್ಯವಾಗಿ ಬೇಕಾಗಿತ್ತಷ್ಟೆ ? ಈ ಮಾತು ಕೇಳಿ ರಮಾಸುಂದರಿಯು ಕಳ್ಳನ ನಾಲಿಗೆಯನ್ನು ಕಚ್ಚಿ ಗಳ ತಪ್ಪಾಯಿತು ಸರಿ ! ಆದರೆ ಅನುಸಾರೆ, ನಾನು ಪತ್ರ ಬರೆದದ್ದು ಅನುಚಿತವಾಯಿತೇನು ? ” ಎಂದು ಆಂಜಂಜತ್ತ ಕೇಳಿದಳು, ಈ ಮಾತಿನ ಚರ್ಚೆಯನ್ನು ವಿಶೇಷವಾಗಿ ಮಾಡಿದರೆ ಪುರುಷರ ವಿಷಯವಾಗಿ ನಾರಿಯರಲ್ಲಿ ಹೆಚ್ಚಾದ ಕುತೂಹಲವನ್ನು ಬೆಳಿಸಿದಂತಾಗುವ ದೆಂದು ತಿಳಿದು ನೋಡಿ ಜಾನಕೀದೇವಿಯರು ವಿಷಯವನ್ನು ಅಲ್ಲಿಯ Codern h- << ಹೋಗಲಿ ಬಿಡು, ಅನುಚಿತವೇನೂ ಆಗಿಲ್ಲ. ಸಂಸ್ಥೆಯ ನಿಯ ಮದ ಧನಪು ಕೆಟ್ಟೆನು ಹೊರತಾಗಿ ಇದರಲ್ಲಿ ಮತ್ತೇನಿಲ್ಲ ಇನ್ನೊಮ್ಮೆ ಇಂಥ ಅವಿಚಾರದ ಕೆಲಸವನ್ನು ಮಾಡುವದಿಲ್ಲೆಂದು ರಮಾಸುಂದರಿಯು ತನ್ನ ಭವರ್ತಿಮಾತೆಗೆ ಅಭಿವಚನವನ್ನಿತ್ತಳು.

"ಆಗಲಿ ಓದುಬರಹಕ್ಕಾದರೂ ಸಮಯಾಸಮಯದ ವಿಚಾರವಿರ ಬೇಕು, ಮಗುವೆ, ಗಡಿಯಾರವನ್ನು ನೋಡಬಾರದೆ ? ಸರಿರಾತ್ರಿ ಮಿರಿ ಹೋಗಿದೆ ನೋಡು, ಹಾಸಿಗೆಯನ್ನು ಕೂಡ ಬಿಚ್ಚಿಲ್ಲ” ಎಂದು ಜಾನಕೀ ದೇವಿಯರು ರಮಾಸುಂದರಿಯ ಮಂಚದ ಮೇಲಿದ್ದ ಹಾಸಿಗೆಯನ್ನು ಉರುಳಿ ಸಿದಳು.

"ಆಯೋ ಪಾಪನೆ ! ನನ್ನ ಕೈಗಳೇನು ಮುರಿದಿವೆಯೇನು ? ತಾವೇಕೆ ಹಾಸಿಗೆಯನ್ನು ಉರುಳಿಸಿದಿರಿ ? " ಎಂದು ರಮಾಸುಂದರಿಯು ಖಿನ್ನಳಾಗಿ ನುಡಿದಳು, ಮತ್ತೂಂದು ಮಾತಾಡದೆ ಮಲಗಿಬಿಡು ಇನ್ನು ಇಂದಿನಿಂದ ರಾತ್ರಿಯ ಹತ್ತು ಗಂಟೆಯ ತಿರುವಾಯದಲ್ಲಿ ನಿನ್ನ ಕೋಣೆಯಲ್ಲಿ ದೀಪವು ಉರಿದದ್ದು ಜರೆ ನಾನು ನಿನ್ನನ್ನು ಕ್ಷಮಿಸಿದವಳಲ್ಲ! ?” ಎಂದು ಹೇಳಿ ಜಾನಕೀ ದೇಏಯರು ಹೊರಟಳೋದರು. ರಮಾಸುಂದರಿಯಾದರೂ ದೀಪಕ್ಕೆ ಅಪ್ಪಣೆಕೊಟ್ಟು ಮಲಗಿಕೊಂಡಳು,

ಮರುದಿವಸ ರಮಾಸುಂದರಿಯು ನಿನ್ನೆ ರಾತ್ರಿ ನಡೆದ ಸಂಗತಿಯನ್ನೆಲ್ಲ ಇಂದುಮತಿ ಚಂದಾವಲಿಯರಿಗೆ ತಿಳಿಸಿ ಜಾನಕೀದೇಏಯರ ಶಿಷ್ಯ ವಾತ್ಸಲ್ಯ ವನ್ನು ಕಂಡಾಡಿದಳು.

"ಸರಿ ಸರಿ, ರಮಾ ಸುಂದರಿ, ನೀನು ಧುವರಾಯನಿಗೆ ಬರೆದ ಪತ್ರ ದಲ್ಲಿ ಲೇಖವನ್ನು ಕಳಿಸಿಕೊಡೆಂದು ಇಷ್ಟೆಯ ಬರೆದಿದ್ದೆಯೋ ಮತ್ತೇನಾ ದರೂ ಬರೆದಿದ್ದೆಯೋ ?"

"ತಲೆ ಇಲೆ ನಿನ್ನದು ! ಮತ್ತೇನು ಬರೆಯುತ್ತಾರೆ ? * ಎಂದು ಧನಾ ಸುಂದರಿಯು ಕ್ರುದ್ಧಳಾಗಿ ಕೇಳಿದಳು.

"ಇಲ್ಲವಾದರೆ ಇಲ್ಲವೆನ್ನು, ಕೊಪವೇಕೆ ? ” ಎಂದು ಚಂದ ಪಳಿಯು ನಕ್ಕು ನುಡಿದಳು.

"ಸುಸ್ವಭಾವದವರಾದ ಸ್ತ್ರೀ ಪುರುಷರೀರ್ವರನ್ನು ಒಟ್ಟಿಗೆ ಇದು ಬಹುದಂತೆ. ಆದರೆ ಸಮಾನವಯಸ್ಕರಾದ ಮಿಂಡೆಯರೀರ್ವರನ್ನು ಒಪ್ಪ ಟ್ಟಗೆ ಇಡಚಣಡದೆಂದು ಹಿರಿಯರಾಡುವದು ಅನುಭವಸಿದ್ಧವಾದ ಮಾತು" 00 ಸಂಪೂMF-ಕಥೆಗಳು ಇಬ್ಬರು

ಎ೦ದು ರವಾಸುಂದರಿಯು ಜಿಗುಪ್ಪೆಯಿಂದ ತನ್ನ ಸಖಿಯರನ್ನು ನೋಡುತ್ತಿ ನುಡಿದಳು ಅನುಭವಸಿದ್ಧ ವಾದ ಮಾತುಗಳನ್ನ ಹಿರಿಯರು ಹೇಳುತ್ತಿರುವ ದುಂಟು ಮಂಡೆಯರು ನಿರಂತರವಾಗಿ ಒತ್ತಟ್ಟಿಗೆ ಇರಬಹುದಾದರೆ ಗಂಡಂದಿರಿಗೆ ನಮೋ ನಮೋ ಎಂದು ನಡಕೊಳ್ಳುವ ಹಣೆಬರಹವು ಹೆಣ್ಣು ಮಕ್ಕಳ ಪಾಲಿಗೆಲ್ಲಿ ಬರುತ್ತಿತ್ತು ? ೨೨ ಎಂದು ಇಂದುಮತಿಯ, ವಿನೋದ ಗೈಯುತ್ತ ನುಡಿದಳು, ಈ ಮಾತಿಗೆ ಚಂದಾವಲಿಯು ತಾನು ಒಳಿತಾಗಿ ನಕ್ಕ LS ಇಂದು ಮತೀ, ಅತಿಕ್ರಮಣವಾಯಿತು, ಈ ವಿಷಯವು ಸಾಕಿನ್ನು, ಎಂದು ನಿಷೇಧಿಸಿ ರಮಾಸುಂದರಿಯನ್ನು ಕುರಿತು, ರಮಾಸುಂದರಿ, ಧ್ವುವರಾಯರ ಲೇಖವನ್ನು ಮರಳಿ ಅವರಿಗೆ ಕಳಿಸಿದಿ ? " ಎಂದು ಕೇಳಿದ, ರಮಾಸುಂದರಿಗಾದರೂ ಇಂದುಮತಿಯ ಚೇಷ್ಟೆಯ ಗಂಟಿಯನ್ನು ನಿಲ್ಲಿಸಬೇಕಾದ್ದರಿಂದ ಇಂದದ್ದು . ( ಇನ್ನೂ ಕಳಿಸಿಲ್ಲ ಚಂದ್ರಕು, ಆ ನ್ನು ನಮ್ಮ ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಇಟ್ಟುಕೊಂಡಿದ್ದೇನೆ. ಕೆಲವು ದಿವಸಗಳಾದ ಮೇಲೆ ಒಂದು ದಿನ ಸಂಸ್ಕೃತಾಧ್ಯಾಪಕರು ಎಫ. ಏ ತರಗತಿಯ ವಿದ್ಯಾರ್ಥಿಗಳ ವರ್ಗಕ್ಕೆ ಕಲಿಸಲು ಬರಲಿಲ್ಲ. ನಿಯಾವುಕ ರಾದ ಡಾಕ್ಟರ ಚೌಧರಿಯವರು ಧುವರಾಯನಿಗೆ ಅಂದು ಕೆಲಸ ಮಾಡೆಂದು ಆಜ್ಞಾಪಿಸಿದರು. ಧ್ರುವರಾಯನು ಬಂದಿರುವದನ್ನು ಕಂಡು ವಿದ್ಯಾರ್ಥಿಗಳು ಹದರಿಕೆಯಿಲ್ಲದೆ ತಲೆಗೊಂದೊಂದು ಪ್ರಶ್ನವನ್ನು ಮಾಡಿ ಅವ ನನ್ನು ಪೀಡಿಸಹೋದರು. ಆದರೆ ಆ ಚಿಕ್ಕ ಪಂಡಿತನು ನಿರಾಯಾಸವಾಗಿ ಅನ ರೆಲ್ಲರಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟು ಮತ್ತೇನಾದರಣ ಪಕ್ಷ ಗಳಿದ್ದರೆ ಕೇಳಿಕೊಳ್ಳಿರೆಂದು ಮುಂಡಿಗೆಯೊಗೆದನು, ಬಳಿ ಕುಪ್ಪವಾದ ಪ್ರಶ್ನೆ ಗಳೆಲ್ಲ ನಿಂತುಹೋದವು. ಒಂದೆರಡು ವ್ಯಾಕರಣ ಅಲಂಕಾರಗಳ ಮೇಲಿನ ಪ್ರಶ್ನೆಗಳ ಸಮಾಧಾನವಾದ ಮೇಲೆ ಆ ದಿವಸದ ವಿಷಯವು ನಡೆಯಿತು, ಈgTaataafa stagr ಎಂಬ ಶಾಕುಂತಲದಲ್ಲಿಯು ಶ್ಲೋಕದ ಅರ್ಧವು ನಡೆಯಿತು ಆನೇಕವಾಜ ಪಾಶಾಂತರಗಳ ವಿಚಾರವಾಯಿತು, ಸ್ವಹಸ್ವಚ್ಛತವಾದ ದಂಡವುಳ್ಳ ಆಪತ್ರಕ್ಕೂ ಧಾಜ್ಯಕ್ಕೂ ಇರುವ ಸಾಮ್ಮ ce ಪ್ರಥಮ ದರ್ಶನದ ಪ್ರೇಮ ವನ್ನು ಕುರಿತು ವಿಶದವಾದ ಊಹಾಪೋಹವಾಯಿತು ನಮ್ಮ ವಿದ್ಯಾರ್ಥಿ ಇಯರಿಗೆ ಸಂಶಯ ನಿವಾರಣವೇ ಬೇಕಾಗಿತ್ತು ಹೊರತಾಗಿ ಸ್ವಪಾಂಡಿತ್ಯದ ಪ್ರದರ್ಶನವು ಅವರಿಗೆ ಬೇಕಾಗಿದ್ದಿಲ್ಲ. ಶ್ಲೋಕಾರ್ಧವು ಮುಗಿದ ಬಳಿಕ ಮತ್ತೆ ಪ್ರಶ್ನೆಗಳ ಸುಗ್ಗಿಯೆದ್ದಿತು ಆಗ ಚದ್ರಾವಲಿಯು ತನ್ನ ಸ್ತ್ರೀ ಸ್ವಭಾವಕ್ಕನುಸರಿಸಿ ಮೆಲ್ಲನೆ ಇಂದುಮತಿಯನ್ನು ಕುರಿತು “ಧ್ರುವರಾಯನ್ನು ವಿವಾಹಿತನೋ ಅವಿವಾಹಿತ ? ” ಎಂದು ಕೇಳಿದಳು ಇದಕ್ಕಿಷ್ಟೊಂದು ವಿಚಾರವೇಕೆ ? ಕಾಲೇಜದ ವಿದ್ಯಾರ್ಥಿಗಳಲ್ಲಿ ವಿವಾಹಿತರಾ ಇವರ ನಾಮಾವಲಿಯು ಪುಸ್ತಕವು ಒಂದು ಬೇರೆಯಾಗಿಯೂ, ಅವಿವಾಹಿತರ ನಾಮಾವಲಿಯು ಪುಸ್ತಕವು ಬೇರೆಯಾಗಿಯೂ ಸಿದ್ಧವಾಗಿಯೇ ಇವೆ ಆ೩11ಳನ್ನು ಬೇಕಾದವರು ಬೇಕಾದಾಗ ನೋಡಿಕೊಳ್ಳಬಹುದಷ್ಟೆ ? ಧ್ರುಪರಾ ಬಗರು ಅವಿವಾಹಿತರ ಪುಸ್ತಕದಲ್ಲಿ ಕಂಡುಬರುತ್ತದೆ ಎಂದು ಇದುವAು ಹಳಿದ. ಅಭ್ಯಾಸ ನಡೆದಿದ ವ ಸಮಯದಲ್ಲಿ ಈ ಕುಚೋದ್ಯವೇಕೆ ಗೆಳತಿ ಧರೆ ? ೬ಧ್ಯಾಪಕರು ಹೇಳುವದನ್ನು ಕೇಳಿಕೊಂಡರೆ ಹಿತವಾದೀತು ! ಎದು ರವರು ಸಿವಿಲ್ಲದcಯ ಬುದ್ಧಿವಾದ ಮಾಡಿದಳು, ಹೀಗೆ ಆ ಕಲಭಾಷಿಣಿಯ ಗು ನಡಿಸಿರುವ ಕಲ ಕಲಾಟವನ್ನು ಕೇಳಿ ಧವರಾಯನು ಅವರ ಕಡೆಗೆ ನೋಡಿ 1 ನಿಮ್ಮೊಳಗೆಯ ಗುಜುಗುಜರಿ ನದಿ ಸಿರಿವದೇಕೆ? ನಿಮಗೇನಾದರೂ ಕೇಳುವದಿದ್ದರೆ ಸಂಕೋಚವಿಲ್ಲದೆ ನನ್ನನ್ನೇ ಕೇಳಿದರಾಯಿ: … ಎ೦ದು ಸುಮತಿಖವನ್ನು ತಾಳಿ ನುಡಿದರೂ ಕಲಕಲಾಟ ವನ್ನು ಮಾಡಬೇಡಿರೆಂದು ಅವನು ಫರ್ ಾಯದಿಂದ ಸೂಚಿಸಿದನು, ಆದರೆ ಆ ಲಲನೆಯರು ಧು ವರಾಯನ ವಿವಾಹ ವಿಗ್ರಹವನ್ನು ಕುರಿತು ವಹಿಸಿದ ತಟೆಗೆ, ಅತನಾಡಿದ ಮಾಘು ಕಾಳಶಾಶ{ಯವಾf ಸಮರ್ಪಕ ವಾದದ್ದು ಕಂಡು ಆ ಮಾನಿನಿಯರೆಲ್ಲರಿಗೆ ನಗೆ ಬಂದಿತು. ಅತಿ ಮರ್ಯಾದ ಶೀಲೆಯಾದ ರಮಾಸುಂದರಿಯು ಕೂಡ ನಕ್ಕದ್ದನ್ನು ಕಂಡು ಧು ವರಾಯನು ತಾನು ಅಪಹಾಸಕ್ಕೆ ಪಾತ್ರನಾಗಿರುವೆನೇನೆಂದು ಶಂಕಿಸಿ 14 ಏನು ಸಮಾ

  • ರವದು ರವಾಸುಂದರೀಬಾಯಿ?” ಎಂದು ಮುಂದಸ್ಮಿತನಾಗಿ ಕೇಳಿದನು.

ಅವನ ಮಂದಹಾಸವು ಆ ಸುಂದರಿಯರ ವಿನೋದವನ್ನು ಕೊಂದಿತು, ಧ್ರುವ ಸಂಪೂರ್ಣ-ಕಥಗಳು ರಾಯನ ಪ್ರಶ್ನೆಗೆ ಏನು ಉತ್ತರವೆಂದು ಇಂದುಮತಿ ಚಂ ಬಿನ್ನಿಪಳಿಯರು ಬೆದರಿ ನಿರುತ್ತರರಾಗಿ ಕುಳಿತರು ರಮಾಸುಂದರಿಯ ಅನಿರ್ವಾ ಕ್ಕಾಗಿ ಲಜ್ಜೆಯಿಂದ ಆರಕ್ತವಾಗಿರುವ ತನ್ನ ಮುಖವನ್ನು ಬಾಗಿಸಿ ಏನೂ ಇಲ್ಲ, ನಮಗೆ ಸ್ಪಷ್ಟವಾಗಿ ತಿಳಿಯುತ್ತಿರುವ ವಿಷಯದ ಮೇಲೆ ವ್ಯರ್ಥವಾಗಿ ಪ್ರಶ್ನೆ ಕೇಳುವದೇಕೆಂದು ನಾವು ಮಾತಾಡುತ್ತಿದ್ದೆವು. ಗಲಾಟವಾದದ್ದಕ್ಕೆ ಕ್ಷಮೆ ಇರಬೇಕು ' ಎಂದು ಬಿನ್ನಯಿಸಿದಳು, ರಮಾಸುಂದರಿಯ ಧುವರಾಯನ ಶಾರದಾ ಪ ಜಾದ ಕಾಲೇಜ ದಲ್ಲಿರಹ ಏಳೆಂಟು ತಿಂಗಳು ಆಗಿ ಹೋಗಿದ್ದ ರ ಆವರವಲ್ಲಿ ಪರಿಚಯ ವುಂಟಾಗಿದ್ದಿಲ್ಲ. ಮೊನ್ನೆ ಯೇ ಅವಳು ಅವನಿಗೆ ಪತ್ರ ಬರದು ಲೇಖವನ್ನು ತರಿಸಿಕೊಂಡಿದ್ದಳು. ಇಂದು ಅವರವರ ನಡುವೆ ಮಲೆ ಎವಲಸಿದ ಒಂದೇ ಒಂದಾದ ಪ್ರಶೋತ್ತರವು ನಡೆಯಿತು. ಚಕಮಕಿ ಕನ ಒಳ ಹೊಡೆತ ದಿಂದ ಒಮ್ಮೊಮ್ಮೆ ಬೆಂಕಿಯ ಕಿಡಿಯು ಹೊರಡುವದುಂಟು. ಒಂದೇ 'ಬೆಂಕಿಯ ಕಿಡಿಯುವ ಏನೇನು ಚಮತ್ಕಾರಗಂಟಾಗಬಲ್ಲವೆಂಬುದನ್ನು ಯಾರು ಹೇಳಬಲ್ಲರು ? ಕುಚೋದ್ಯ ಮಾಡಿದನೆಂದ ಇಂದುಮತಿ ಚಂದ್ರಾ ವಲಿಯರೊಟ್ಟಿಗೆ ಉಳಿದರು, ಛು ವರಾಡುವ ಪ್ರಶ್ನವು ರಮಾಸುಂದರಿಯ ಮೇಲೆ ಬಿದ್ದಿತು. ಆ ಚಮತ್ಕಾರವಾದ ಪ್ರಶ್ನೆ ಕೈ ನಿರ್ವಾಹವಿಲ್ಲದೆ ಉತ್ತರ ವನ್ನು ಕೊಡುವಾಗ ದಮಾಸುಂದರಿಯು ಒಳಿತಾಗಿ ನಾಚಿಕೊಂಡಳು, ನಾಚಿಕೆಯ ಹಿಡಿತಕ್ಕಾಗಿ ಸಖಿಯರ ಮುಖವ ನೋಡಲು ಅವಳಿಗೆ 'ಧೈರ್ಯಸಾಲಲಿಲ್ಲ, ಇತ್ತ ನೋಟಕ್ಕೆ ಹಾದಿ ಕಟtNC 9; ಆ ನೋಟವು ಫಕ್ಕನೆ ಧ್ರುವರಾಯನ ಸುಂದರವಾದ ಮುಖದ ಕಡೆಗೆ ಧ: ಪಿಸಿ . ಹ ಪಂಜಿನ ಚಮತ್ಕಾರವಾದ ಪ್ರಕಾಶದಲ್ಲಿ ವಸ್ತುಗಳ ಸೌಂದರ್ಯವು ಎದ್ದು “ ಕಾಣುವಂತೆ ರಮಾಸುಂದರಿಯ ಹೃದಯದಲ್ಲಿ ಉದ್ಭವಿಸಿದ ಕೆಲವೊಂದು ವಿನೂತನವಾದ ಜ್ಯೋತಿಯ ಮಡಿಲಕ ಧ್ರುವರಾಯಸ ಮುಖದ ಸೌಂದರ್ಯ ಆ ಕ್ಷಣದಲ್ಲಿ ಮನ್ಮಥನ ಸೌಂದರ್ಯವನ್ನು ಉಜ್ಜಿಸುವಂತೆ ಕಂಡಿತು. ಒಂದು ಪಳದ ಎಷ್ಟನೆಯ ಅಂಶವೋ, ಅಷ್ಟು ಅಲ್ಪಕಾಲ ಮಾತ್ರ ರವಾಸುಂದರಿಯ ದೃಷ್ಟಿಯು ಸಾಭಿಲಾಷವಾಗಿ ಧ್ರುವರಾಯನ ಮುಖಚಂದ್ರಮದಲ್ಲಿ ಸಚಿಸಿ ಇದ್ದರೂ ಅಲ್ಪಾವಧಿಯಲ್ಲಿ ಅನುರಾಗಯುಕ್ತವಾದವುಗಳಾದ ಪರಸ್ಪರರ ಮೂರ್ತಿಗಳು ಪರಸ್ಪರರ ಹೃದಯಪಟಗಳ ಮೇಲೆ ಬಿಂಬಿತವಾದವು (ಫೋಟೋ ಹೊರಟವು.) ತತ್ಕ್ಷಣವೇ ಕಮಾಸುಂದರಿಯು ಪ್ರಜ್ಞೆಯನ್ನು ತಳಿ ತನ್ನ ದೃಷ್ಟಿಯನ್ನು ಮರಳಿ ಎಳಕೊಂಡು ಇನ್ನು ಮಳೆ ಇಂಧ ಪ್ರಮಾದವಾಗಕಣಗದೆಂದು ನಿಶ್ಚಯಿಸಿಕೊಂಡಳು ಪಾಪ, ಬಿಂಬವಿರ್ದೇಶದ ವಾರ್ತೆಯೇ ಆ ಸಮಯದಲ್ಲಿ ಅವಳಿಗಿರಲಿಲ್ಲ ತಲೆನೋವಿನ ನೆಪಮಾಡಿಕೊಂಡು ರಮಾನ೦ದರಿಗಳು ಅಲ್ಲಿಂದೆದ್ದ ವಳೇ ಮನೆಗೆ ಬಂದುಬಿಟ್ಟಳು.

ಈ ಸಂಗತಿಗಳೆಲ್ಲ ಮರೆಮಾಕಿಗೆ ಬಿದ್ದು ಹೋದವು ಮತ್ತೆ ಆ ಸತಿಯರೆಲ್ಲರೂ ಯಾವ ಪ್ರಕಾರದ ವ್ಯವಧಾನವಿಲ್ಲದೆ ತಮ್ಮ ಅಭ್ಯಾಸಕ್ರಮವನ್ನು ನಡಿಸಿದಳು ಗಾನವಾಗನ ಕಲೆಗಳ ಅಭಿವೃದ್ಧಿಯಾಯಿತು ಸೂಪಶಾಸ್ತ್ರ ಪ್ರಾವೀಣ್ಯದ ಪ್ರಯೋಗಗಳಾದವು, ರಂಗವಲ್ಲಿ ಚಿತ್ರ ಕಲೆಗಳ ಪ್ರದರ್ಶನಗಳಾಧವು. ಹೀಗೆ ವಿಳಾಸದಿಂದಲೂ ಉಲ್ಲಾಸದಿಂದ ಆಸ್ಥೆಯಿಂದಲೂ ಸ್ತ್ರೀ ಶಿಕ್ಷಣದ ಮಹತ್ಕಾರ್ಯವು ಯಶಸ್ಮರವಾಗಿ ನಡೆಯಿತು. ಹೀಗೆ ಕೆಲವು ದಿವಸಗಳು ಬೆಳೆದ ಬಳಿಕ ಒಂದು ರವಿವಾರ ದಿನ ರಮಾಸುಂದರಿಯ ಸಹಧ್ಯಾಬನಿಯರಾದ ಇಂದುಮತಿ ಚಂಡಾವಲಿಯರು ಗೃಹವ್ಯವಸ್ಥೆಯ ಶಿಕ್ಷಣಕ್ಕಾಗಿ ಜಾನಕೀದೇವಿಯರ ಮನೆಯಲ್ಲಿ ಇರಜೋದರು. ರಮಾಸುಂದರಿಯು ಓರ್ವಳೇ ಬೇಸತ್ತು ಸೀಯಾನೋಪೇಟಿಯನ್ನು ತೆಗೆದು, ನಲದಮಯಂತೀನಾಟಕ ಜೊಳಗಿನ ಬಳಿದಿಯಾ ಮದನಾ, ನಮಗಾಗಿ' ಎಂಬ ಪದವನ್ನು ಬಾರಿಸುದ್ದಳು, ಕರುಣಾರಸವ್ಯಂಜಕವಾದ ಸ್ವರಗಳು ಪಿಯಾನದಲ್ಲಿ ಬಹಃ ಮನೋಧಕವಾಗಿ ಪರಿವರ್ತಿಸುತ್ತಿರಲು ಆ ನವ ಸುಂದರಿಯರು ತಲ್ಲೀನಳಾಗಿ ಹೊರಗಿನ ಜಗತ್ತನ್ನು ಮರೆತು ಕುಳಿತಿದ್ದಳು, "ಬಾಳಿದಿಯಾ ಮದನಾ ” ಎಂದು ಪುನರಾವರ್ತನವನ್ನು ಅವಳು ಮಾಡುವಷ್ಟರಲ್ಲಿ ಯಾವನೋ ಅವಳಿ ದೂರಿನಲ್ಲಿ ಬಂದು ನಿಂತನು. ವಂದನನೇ ಏನು ? ಅಲ್ಲ, ಅವಳು ಅವನ ಪರಿಚಯದವನಾದ ಧ್ರುವರಾಯನೇ, ನೋಡನೋಡುವಷ್ಟರಲ್ಲಿ ಕಾಶ ಪಾತ್ರೆಯು ಒಡೆದು ಪುಡಿಪುಡಿಯಾಗುವಂತೆ ಧುವರಾಯನ ಪಾದಾಘಾತ ಬಂದ ರವಾಸುಂದರಿಯ ಬಾಹಭಂಗವಾಗಕಾಗಿ ಅವಳು ತಟಸ್ಥಳಾಗಿ ನಿಂತುಕೊಂಡಳು. "ಯಾಕೆ ಬದಿರುವನಾದೀತು?" ಎಂದು ಅವಳು ಮನಸ್ಸಿನಲ್ಲಿ ಚಿಂತಿಸಿದ ಹಾಗೆ ಕೇಳಲು ಅವಳಿಗೆ ಬಾಯಿ ಬರಲೊಲ್ಲದು. ಎದೆ ಡವಡವನೆ ಹಾರುತ್ತಿತ್ತು.

ಧ್ರುವರಾಯನ ಮನಸ್ಸಿನ ಸ್ಥಿತಿಯಾದರೂ ಹಾಗೆಯೇ ಆಗಿತ್ತು. ಸಮಯದಲ್ಲಿ ರಮಾ ಸುಂದರಿಯು ತನ್ನ ಮಂದಿರದಲ್ಲಿ ಓರ್ವಳೇ ಆಗಿರಬಹುದೆಂದು ನೆನಿಸಿ ಅವನು ಸಮಯವನ್ನು ಸಾಧಿಸಿ ಅಲ್ಲಿಗೆ ಬಂದಿದ್ದನಾದರೂ ಅಲ್ಲಿ ಅವಳನ್ನೇ ಕಾಕಿನಿಯನ್ನು ಕಂಡಾಕ್ಷಣವೇ ಅವನೆದೆಯಲ್ಲಿ ವಿದ್ಯುದಾಘಾತವಾದಂತಾಯಿತು. ಉದ್ವೇಗದಿಂದ ಒಮ್ಮೆಲೆ ಎದೆಯುಬ್ಬಿ ಅವನ ಅಂಗಾಂಗಗಳಲ್ಲೆಲ್ಲ ಒಳಗಿಂದೊಳಗೆ ರಕ್ತವು ಚಮ್ಮಾಡಿ ಹರಿದಾಡಲಾರಂಭಿಸಿದ್ದರಿಂದ ಪಂಚೇಂದ್ರಿಯ ವ್ಯಾಪಾರಗಳಿಲ್ಲ ಕಟ್ಟಾಗಿ ನಿಂತವು. ಕೆಲವೊಂದು ಮನೋಗತವನ್ನು ಅವನು ರವಾಸುಂದರಿಗೆ ಅರುಹಬೇಕೆಂದು ಬಂದದ್ದು ನಿಜ; ಆದರೆ ಒಡೆದುಹೋದ ಅವನ ಹೃದಯದೊಳಗಿನ ವಿಚಾರಗಳೆಲ್ಲ ಸೋರಿ ಹೋಗಿದ್ದವು. ಮೂಢನಂತೆ ನಿಂತುಕೊಂಡನು. ಮರ್ಯಾದಶೀಲೆಯಾದ ಆ ತರುಣಿಯ ಸಮಯವನ್ನರಿತು "ಬನ್ನಿರಿ, ಏನು ಸಮಾಚಾರ? ” ಎಂದು ಹಾಗೂ ಹೀಗೂ ಮಾಡಿ ಶಿಷ್ಟಾಚಾರದ ಋಣದಿಂದ ಮುಕ್ತಳಾದಳು.

"ವಿಶೇಷವೇನೂ ಇಲ್ಲ. ಆ ನನ್ನ ಲೇಖವನ್ನು ಓದಿದ್ದಾಯಿತೇನು ?" ಎಂದು ಧ್ರುವರಾಯನು ಆಸ್ವಾಧೀನಚಿತ್ತನಂತೆ ವಿಚಾರ ವಾಕ್ಯರಚನೆಗಳನ್ನು ಏಕೀಕರಿಸಲು ಪ್ರಯತ್ನ ಮಾಡುತ್ತೆ ಕೇಳಿದನು

"ತಂದ ದಿವಸವೇ ಓದಿದೆನು. ಈಗಲೇ ಬೇಕಾಗಿರುವದೇನು? ಈ ಸುಲಲಿತವಾದ ಲೇಖವನ್ನು ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಮಾಡಿದ್ದೇನೆ ” ಎಂದು ಆ ಚಾರುಹಾಸೆಯು ಬಹು ವಿನಯದಿಂದ ನುಡಿದಳು.

"ಅವಶ್ಯ ಅವಶ್ಯ. ಬೇಕಾದಷ್ಟು ದಿವಸ ಇಟ್ಟುಕೊಳ್ಳಿರಿ. ಲೇಖವು ನಿಮ್ಮ ಮನಸ್ಸಿಗೆ ಬಂದಿರುವದೇನು ?"

ರಮಾಸುಂದರಿಯು ಈಗ ಪ್ರಶಸ್ತವಾಗಿ ನಕ್ಕಳು. “ದ್ರುವರಾವ್, ಪ್ರತ್ಯಕ್ಷ ಪಂಡಿತಜೀಯವರು ( ಡಾಕ್ಟರ ಚೌಧರಿ ) ತಲೆದೂಗಿದ ಲೇಖದ ವಿಷಯವಾಗಿ ನಾನು ಅಭಿಪ್ರಾಯವನ್ನು ಕೊಡಲು ಯೋಗ್ಯಳೆ ? ಇದಕ್ಕೂ ದೊಡ್ಡ ದೊಡ್ಡ ವಾದ ಲೇಖಗಳನ್ನು ನೀವು ಬರೆದದ್ದು ನೋಡುವ ಭಾಗ್ಯವು ನನ್ನದಿರಲಿ!

"ರಮಾಸುಂದರೀಬಾಯಿ, ನಿಮ್ಮ ಅಭಿಪ್ರಾಯವನ್ನು ಕೇಳಿ ನಾನು ಕೃತಾರ್ಧನಾದೆನು. ನೀವು ಹೇಳಿದಂತೆ ಅನೇಕ ಲೇಖಗಳನ್ನು ಬರೆಯಬಹುದಾದರೂ ಮನಸ್ಸಿಗೇಕೊ ಉತ್ಸಾಹವಿಲ್ಲದಂತಾಗಿದೆ" ಎಂದು ಧ್ರುವರಾಯನು ಧೀನಮುಖವಾಗಿ ನುಡಿದನು.

"ಹಾಗೆ ಕಾಣುತ್ತದೆ. ನಿಮ್ಮ ಮುಖದ ತೇಜಸ್ಸು ಕಡಿಮೆಯಾಗಿದೆ. ಸೊರಗಿಯ ಇರುವಿರಿ ಏನು ಚಿಂತೆಯಾಗಿದೆ ? ಮನೆಯಲ್ಲಿ ಎಲ್ಲರೂ ಕ್ಷೇಮದಿಂದಿರುವರಷ್ಟೆ ?"

ಧ್ರುವರಾಯನು ವಿಷಾದದಿಂದ ನಕ್ಕು “ದೇವರ ಕೃಪೆಯಿಂದ ಮನೆಯಲ್ಲಿ ಎಲ್ಲರೂ ಕ್ಷೇಮದಿಂದಿರುವರು" ಎಂದು ಹೇಳಿದನು

ಹಾಗಾದರೆ ಚಿಂತೆಗೆ ಮುತ್ತಿನ್ನೇನು ಕಾರಣ?"

"ಚಿಂತೆಗೆ ಸಾವಿರ ಕಾರಣಗಳು. ಸೌಖ್ಯದ ಕಲ್ಪ ನೆಯನ್ನು ಏರಿಸಿ ಕಟ್ಟುತ್ತೆ ನಡೆದರೆ ಅಲ್ಲಿಯೇ ಚೆಂತೆಯು. ಮರದ ತುದಿಯಲ್ಲಿರುವ ಹಣ್ಣನ್ನು ಬಯಸಿದರೆ ಅದು ಹೇಗೆ ತಾನೆ ಸುಲಭವಾಗಿ ಸಾಧ್ಯವಾದೀತು ? ” ಎಂದು ಆ ತರುಣನು ರಮಾಸುಂದರಿಯ ಮುಖಾರವಿಂದವನ್ನು ಔತ್ಸುಕ್ಯದಿಂದ ನೋಡುತ್ತ ನುಡಿದನು.

ಚಿಂತೆಯ ಕಾರಣದ ಭಾಸವು ರಮಾಸುಂದರಿಯ ಮನಸ್ಸಿಗೆ ಆಕಸ್ಮಾತ್ತಾಗಿ ಜಗ್ಗನೆ ಹೊಳೆದಂತಾಯಿತು. ಧ್ರುವರಾಯನಿನ್ನು ಏನು ಹೇಳುವನೋ ಏನು ಬಿಡುವನೋ ಹೇಗೆ ಮಾಡಲೆಂದು ಆವಳು ಕಾತರಳಾದಳು

"ರಮಾಸುಂದರಿ, ಕಾತರಳಾಗದೇಡ. ಆವಿಚಾರದ ಮಾತುಗಳನ್ನೇ ನಾನು ಆಡತಕ್ಕವನಲ್ಲ. ನನ್ನ ಚಿಂತೆಯ ಕಾರಣವನ್ನು ನಿನ್ನ ಮುಂದೆ ಹೇಳಿದರೆ ಪ್ರಯೋಜನವಾಗುವದೋ ಇಲ್ಲವೋ ಎಂಬ ಮಾತಿನ ಪೂರ್ವಾಪರವನ್ನು ಚನ್ನಗಿ ತೂಗಿ ನೀಡಿದ ಬಳಿಕ ನಿನಗೆ ತಿಳಿಸಬಹುದಾದರೆ ತಿಳಿಸುವೆನು," ಎಂದು ಮುಗಿಸಿದವನೇ ಆ ಪಂಡಿತನು ಮೂಢನಂತೆ ಓಡಿ ಹೋದನು.

ದೇವರು ಹೇಳುವ ಪೂಜಾರಿಯ ಸಂದಿಗ್ಧವಾದ ನುಡಿಗಳಂತೆ ಧ್ರುವರಾಯನೇನೂ ಮಾತನಾಡಿ ಹೋದಬಳಿಕ ರಮಾಸುಂದರಿಗೆ ಒಳ್ಳೇ ವಿಚಾರ ಉಂಟಾಯಿತು. "ಅವನ ಮನಸ್ಸಿನೊಳಗಿನ ಭಾವವೇನಿರುವದೋ ಇರಲಿ. ಅವನ ಚಿಂತೆಯ ಚಿಂತೆ ನನಗೇಕೆ ?. ಮನೋಜ್ಞನಾದ ತರುಣನ ನಡೆ ನುಡಿಗಳನ್ನು ನಿರೀಕ್ಷಿಸುವದೂ, ಅವನ ಹಿತಾಹಿಕಗಳ ವಿಷಯವಾಗಿ ವಿಚಾರ ಮಾಡುವದೂ ಸ್ತ್ರೀಯರಲ್ಲಿ ಪ್ರೇಮದ ಪ್ರಥಮ ಲಕ್ಷಣವೆಂದು ಅನುಭವಿಕರ ಅಭಿಪ್ರಾಯವು ಇದೊಂದೇಕೆ, ಮೊನ್ನೇದಿನ ಆ ಹೊಯ್ಮಾಲೆಯಾದ ಇಂದುಮತಿಯ ಪ್ರೇಮದ ಮಿಮಾಂಸೆಯನ್ನು ಕುರಿತು ಹರಟಿ ಕೊಚ್ಚುತ್ತಿರುವಾಗ ಅಂದದ್ದು : 'ರಮಾಸುಂದರಿ, ಪ್ರಿಯನಲ್ಲಿ ನಿನ್ನ ಪ್ರೇಮವಿನ್ನೂ ಫಲಿಸಿಲ್ಲವೆಂದು ತಿಳಿ; ಆದರೆ ನಿನ್ನ ತಂದೆಯವರು ನಿನ್ನನ್ನು ವಿಜಯಪುರದ ಧ್ರುವರಾಯನಿಗೆ ಕೊಡುವೆವೆಂದು ಸಂಕಲ್ಪ ಮಾಡಿದರೆ ಒಲ್ಲೆನೆನ್ನಲು ನೀನು ಸಿದ್ಧಳಾಗಿರುವೆಯೇನು ? ಒಲ್ಲೆನೆಂದು ಸಹಸಾ ಹೇಳುವದಾಗದಿದ್ದರೆ ಅಲ್ಲಿಯೇ ಪ್ರೇಮದ ಉತ್ಪತ್ತಿಯು.' ಆ ಗೈಯಾಳಿಯ ವಾದವು ಇನ್ನೂ ನನ್ನ ಎದೆಯಲ್ಲಿ ಕಟೆಯುತ್ತಲಿದೆ. ವಿಚಾರ ಮಾಡಿಮಾಡಿದ ಹಾಗೆ ಪ್ರೇಮದ ಬೇರು ಹೆಚ್ಚು ಹೆಚ್ಚಾಗಿ ತಳವೂರಿಕೊಂಡಂತೆ ಕಾಣುತ್ತದೆ?

"ಸಾಕು ಸಾಕು ! ಈ ವಿಚಾರವೇ ಬೇಡ" ಹೀಗೆ ಪ್ರತಿಜ್ಞೆ ಮಾಡಿಕೊಂಡು ರಮಾಸುಂದರಿಯು ಒಳ್ಳೆ ಆಧ್ಯತೆಯಿಂದ ತಲೆ ಎತ್ತಿ ಎಡೆಯಾಡಲಾರಂಭಿಸಿದಳು. ಒಳ್ಳೆ ವೇಗದಿಂದ ಭ್ರವಿಸುತಿರುವ ವಿಚಾರಚಕ್ರವನ್ನು ತಟ್ಟನೆ ತಡೆದು ನಿಲ್ಲಿಸುವನೆಂದರೆ ಯೋಗಿಯಾದವನಿಗೆ ಅಸಾಧ್ಯವು. ರಮಾಸುಂದರಿಯ ಮನಸ್ಸು ಮತ್ತೆ ಆ ವಿಚಾರಚಕ್ರದ ಗಿರಕಿಗೆ ಸಿಕ್ಕಿ ಸುತ್ತಿಕೊಂಡು ನಡೆಯಿತು.

"ಇಲ್ಲಿಗೆ ಧ್ರುವರಾಯನು ಬಂದ ಉದ್ದೇಶವೇನು ? ಲೇಖವನ್ನು ಮರಳಿ ತೆಗೆದುಕೊಳ್ಳಲಿಕ್ಕೆಯ ? ಹಾಗೆ ತೋರುವದಿಲ್ಲ. ಕಾಲೇಜದಲ್ಲಿ ನನಗೆ ಸಮಕ್ಷಮವಾಗಿ ಹಾಗೆ ಹೇಳಿದ್ದರೆ ನಾನು ಅದನ್ನು ಕಳಿಸಿಕೊಡುತ್ತಿದ್ದೆನು; ಇಲ್ಲವೆ, ಜವಾನನೊಡನೆ ಹೇಳಿ ಕಳಿಸಿದ್ದರೂ ಆಗುವಂತಿತ್ತು. ಈ ಸಂಸ್ಥೆಯ ಕಾರ್ಯಕ್ರಮವನ್ನು ಓದಿದವರಿಗೆ ಇಂದು ಈ ಕೋಣೆಯಲ್ಲಿ ನಾನೋರ್ವಳೇ ಇರುವೆನೆಂಬ ಮಾತು ಇಳಿಯದೆ ಇರದು. ಈ ಸಂಗತಿಯನ್ನರಿತು ಧ್ರುವರಾಯನು ಹೊತ್ತು ಸಾಧಿಸಿಕೊಂಡು ಬಂದಿದ್ದನೇನು ? ಇರಬಹುದು. ಆದರೆ ಆ ಸುಶೀಲನು ದುರ್ವಿಚಾರಪ್ರೇರಿತನಾಗಿ ಬರಲಿಲ್ಲ. ಅವನ ಆಚರಣವೇ ತಾನಾಗಿ ಹೇಳುತ್ತದಲ್ಲ ! ಹಾಗಾದರೆ ಆ ಅವಿವಾಹಿತನಾದ ತರುಣನು ಪ್ರೇಮಪರವಶನಾಗಿ ತನ್ನ ಮನೋಗತವನ್ನು ನನಗೆ ತಿಳಿ ಸಲು ಬಂದಿದ್ದನೇನು ?ಆಗಿದ್ದಿತು. ನಾನೋರ್ವಳೇ ಸರ್ವಗುಣ ಸಂಪನ್ನಯಾದ ಚದುರೆಯೇನು ?” ಈ ಪ್ರಶ್ನಕ್ಕೆ ಅವಳ ಆತ್ಮವಿಶ್ವಾಸದ ನಗೆಯ ಸಮರ್ಪಕವಾದ ಉತ್ತರವಾಗಿತ್ತು.

ಪ್ರಾತಃಸ್ತಾನ, ಅಭ್ಯಾಸ, ಭೋಜನ, ಕಾಲೇಜದಲ್ಲಿಯ ಶಿಕ್ಷಣ, ಸಖೀ ಜನರ ಸಹವಾಸಗಳು ಚಕ್ರನೇ ವಿಕ್ರಮದಿಂದ ನಡೆಯುತ್ತಿದ್ದರೂ ಧ್ರುವನ ನಿಶ್ಚಲವಾದ ಮೂರ್ತಿಯ ರವಾಸುಂದರಿಯ ಕಣ್ಣು ಮುಂದೆ ಕಟ್ಟಿಯೇ ಇರುತ್ತಿತ್ತು ಏಕಾಂತವಾಸದಲ್ಲಿದ್ದರಂತೂ ಆ ವಿಚಾರದಲ್ಲಿ ಅವಳು ಸವಗ್ರವಾಗಿ ಮುಳುಗಿಹೋಗುತ್ತಿದ್ದಳು. ಅದಕ್ಕಾಗಿ ಅವಳು ಸಹಸಾ ಏಕಾಕಿನಿಯಾಗಿರುತ್ತಲೇ ಇದ್ದಿಲ್ಲ ಒಂದು ದಿನ ಅವಳ ಈ ಸ್ಥಿತಿಯಲ್ಲಿ ಅಂಚೆವನು ಅವಳ ಕೈಯಲ್ಲಿ ಒಂದು ಪತ್ರ ವನ್ನು ತಂದುಕೊಟ್ಟನು. ಮೇಲ್ವಿಳಾಸವು ಧ್ರುವರಾಯನ ಹಸ್ತಾಕ್ಷರದ್ದು. ಹಶ್ರದ ಅಭಿಪ್ರಾಯವು ಆಗಲೆ ಅವಳಿಗೆ ಹುಟ್ಟಿನಲ್ಲಿ ಜೇನಿರುವದೆಂಬದನ್ನು ಹಿಂಡಿ ತೋರಿಸಲೆಬೇಕೆ ? ರಮಸುಂದರಿಯು ಆ ಪತ್ರವನ್ನು ಮೇಜಿನ ಮೇಲಿಟ್ಟು ಓದುವಷ್ಟು ಮನಃಸ್ವಾಸ್ಥವಾಗಲೆಂದು ಎರಡೂ ಕೈಗಳಿಂದ ಕಣ್ಣು ಮುಚ್ಚಿಕೊಂಡು ಒಳಿಕಾಗಿ ಉಸುಕಾಡಿ ಸುತ್ತಿ ಕುಳಿತುಕೊಂಡಳು.

ಅಂಥ ಪತ್ರವನ್ನು ಹಾಗೆ ಇಟ್ಟು ಕೊಂಡರೆ ಅದು ಸುಮ್ಮನೆ ಕುಳ್ಳಿರ ಕೊಡಿಸುವದೆ? ಎರಡು ಮೂರು ನಿಮಿಷಗಳಲ್ಲಿಯೇ ಅವಳು ಅದನ್ನು ಒಡೆದು ಓದಿದಳು. ಓದುವಾಗಲೆ ಅವಳ ಸರ್ವಾಭಿಗವೆಲ್ಲ ಬೆವತಿತು. ಅವಳ ಮುಖದಲ್ಲಿ ಒಮ್ಮೆ ದರ್ಷವೂ ಒಮ್ಮೆ ಮಂದಹಾಸವೂ ಒಮ್ಮೆ ಲಟ್ಟೆಯ ರಕ್ತಜೆಯ ಒಮ್ಮೆ ವಿಚಾರದ ಗಾಂಭೀರ್ಯವೂ ಕ್ರಮಕ್ರಮವಾಗಿಯ ಸಂಬಬಿತವಾಗಿಯೂ ಘೋರಿದವು, ಓದುವದಾದ ಕೂಡಲೆ ಆವಳು ಆ ಪತ್ರವನ್ನು ತನ್ನ ಉಡಿಯಲ್ಲಿಟ್ಟು ಕೊಂಡು, ಉಪವನದಲ್ಲಿ ಅಚ್ಚಾಡ ಹೋದಳು. ಅಕೋಳಿ, ಅವಸರದಲ್ಲಿ ಆ ಪತ್ರವು ಇಲ್ಲಿ ಜಾರಿ ಬಿದ್ದಿದೆಇದೇ ಸಮಯ ಕೊಳ್ಳಿರಿ.

ಪ್ರಿಯ ರಮಾಸುಂದರಿ,

ನನ್ನಲ್ಲಿ ಜನಿಸಿದ ಕೆಲವೊಂದು ಅಭಿಪ್ರಾಯವನ್ನು ನಿನಗೆ ನಿವೇದಿಸಲೆಂದು ಮೊನ್ನೆ ದಿನ ಬಂದಿದ್ದನು. ಆದರೆ ಆಗ ನನ್ನ ಮನಸ್ಸು ಯಾಕೋ ಸಂಕೋಚಗೊಂಡಿದ್ದರಿಂದ ಹಾಗೆಯೇ ಹೊರಟುಹೋದೆನು ಪ್ರಾಯವು ಚತುರೆಯಾದ ನಿನಗೆ ಅವಶ್ಯವಾಗಿ ವಿದಿತವಾಗಿರಲಿಕ್ಕೆ ಬೇಕು. ಸಂದೇಹಕ್ಷೇದವಾಗದಿದ್ದಲ್ಲಿ ಈ ಪತ್ರದ ಮೊದಲನೆಯ ವಳಿಯಲ್ಲಿಯ ಸಂಬೋಧನವು ಸೂಚಕವಾಗಿರುವದು ನಾಳಿಗೆ ನಾನು ಮತ್ತೆ ನಿನ್ನ ಸನ್ನಿ ಧಾನಕ್ಕೆ ಬಂದು ನನ್ನ ಮನಸ್ಸನ್ನು ನಿನ್ನ ಮುಂದೆ ತೋಡಿಕೊಳ್ಳುವೆನು, ಇದು ನಾಳಿನ ಸಂದರ್ಶನದ ಪೂರ್ವಪೀಠಿಕೆಯು.

ನಿನ್ನ *** (ಯಾರೆಂದು ಹೇಳಲಿ?)
ಧ್ರುವರಾಯ

ಭ್ರಮಿಷ್ಟಳಂತೆ ರವಾಸುಂದರಿಯ ಉಪವನದಲ್ಲಿ ಆಸ್ತಿ ಅಡ್ಡಾಡಿದಳು. ಸ್ನಿಗ್ಧವಾದ ತರಚ್ಛಾಯೆಯಲ್ಲಿರುವ ಶಿಲುಶಲದಲ್ಲಿ ವಿಶ್ರಮಿಸಿಕೊಳ್ಳಬೇಕೆಂದು ಹೊರಟವಳು ಅದನ್ನು ಮರೆತು ಕಾರಂಜಿಯ ಪುಟಿಯು ಇರುವ ಸ್ಥಳಕ್ಕೆ ಬಂದಳು. "ಈ ಸ್ಥಳಕ್ಕಾದರೂ ಏನಾಗಿದೆ ? ” ಎಂದು ಸಮಾಧಾನ ಹೊಂದಿ ಆ ಸುಂದರಿಯು ಅಲ್ಲಿರುವ ಅಂದವಾದ ಚಿಕ್ಕ ಹೊಂಡದಲ್ಲಿ ಕೈ ಕಾಲು ಮೋರೆಗಳನ್ನು ತೊಳೆದು ಬಳೆಯಲ್ಲಿಯೇ ಇರುವ ಕಟ್ಟಿಯ ವೇಳೆ ಕುಳಿತು ವಿಚಾರ ನಡಿಸಿದಳು.

ಇದಕ್ಕೂ ವ್ಯಕ್ತವಾಗಿ ಅವರು ಇನ್ನೆಂತು ಬರೆಯಬೇಕು? ನಾಳಿಗೆ ಬಂದು ಎರತರಲ್ಲಿ ಒಂದು ಹೇಳಿದರೆ ಏನು ಹೇಳಲಿ ? ಅನುಮತಿಸಲೆ? ಅನುಮತಿಸಲು ನಾನು (ತಂತ್ರಳಲ್ಲ; ತಂದೆ ತಾಯಿಗಳು ಕೊಟ್ಟ ಮನೆಗೆ ಹೋಗತಕ್ಕವಳು, ಒಲ್ಲೆನೆಂದು ಹೇಳಲಿಕ್ಕಾದರೂ ನಾನೆಲ್ಲಿ ಸ್ವತಂತ್ರಳು? ಮನಸ್ಸು ಮೊದಲೇ ಅವರ ಸ್ವಾಧೀನವಾಗಿ ಹೋಗಿದೆ," ಎಂದು ವಿಚಾರಿಸುತ್ತೆ ರಮಾಸುಂದರಿಯು ಫಕ್ಕನೆ ಎದ್ದು ಪ್ರಫುಲ್ಲಿತವಾದ ದವನದ ದಳವನ್ನು ಚಿವುಟ ಮೂಸಿನೋಡಿ "ದವನದ ಸುಗಂಧವೇ ಇದು, ನನಗೆ ಮುಖಭ್ರಮವಿನ್ನೂ ಆಗಿಲ್ಲ” ಎಂದು ಒಳಿತಾಗಿ ನಕ್ಕು, ಮತ್ತೆ ನೋ ವಿಚಾರಸು ಅಡ್ಡಾಡಿ ಮತ್ತೆ ಮೊದಲಿನ ಸ್ಥಳದಲ್ಲಿ ಬಂದು ಕುಳಿತಳು. ಬ್ರಹ್ಮನುಕೂಲವಿದ್ದಂತೆ ಆದೀತು. ಆದರೆ ಇಂದಿಗೆ ನನ್ನ ವಿದ್ಯಾಭ್ಯಾಸಕ್ಕೆ ಕೃಷ್ಣಾರ್ಪಣವಂದಂತಾಯಿತು, ಗಡಿಯಾರದ ಅಂದೋಲನದಂತೆ ಏಚಾಳಗಳು ಸಂತತವಾಗಿ ನನ್ನ ತಲೆಯಲ್ಲಿ ಹೊಯ್ದಾಡುತ್ತಿರುವಾಗ ನಾನು ಓದುವದೇನು ಬರಿಯುವದೇನು ?

ನನ್ನ ದೇನಾದರೂ ಆಗಲಿ, ಈ ಕಧಾನಾಯಕನ ಅವಸ್ಥೆಯೇನು ? ದೃಢಾಂಗರೂ ತೇಜಸ್ಸುಳ್ಳ ರಕ್ತದವರೂ ಅದವರ ವಿಕಾರವಶತೆಯು ಅಧಿಕವಾಗಿರಲೇಬೇಕು. ಅವರು ಅಂಧ ವಿಕಾರವಶತೆಯನ್ನು ವಿವೇಕದಿಂದ ದಬ್ಬಿಡಬಹುದು. ಆದರೆ ಆ ವಿವೇಕ ಸಾಮರ್ಥ್ಯವಷ್ಟಿರಬೇಕು ಬಲ್ಲಿರಾ? "ಧ್ರುವರಾಯನ ಬಲವು ಕುಂದಿಹೋಗಿದೆ. ಅವರ ಮುಖವು ಕಳೆಗುಂದಿ ಹೋಗಿದೆ. ಅವರ ಅಭ್ಯಾಸಕ್ಕೆ ಮವು ನಿಂತುಹೋಗಿದೆ." ಎಂದು ಪ್ರತ್ಯಕ್ಷ ಪಂಡಿತಜಿಯವರು ಚಿಂತಾತುಲರಾಗಿದ್ದರೆ ಹಿಂಡಿ ತಜಿಯವರ ತರುವಾಯ ಈ ಕಾಲೇಜದ ಚಾಲಕರು ಧು ವರಾಯರೇ ಎಂದು ರಾದಾ ದೀನದಯಾಲರೇ ಮುಂತಾದ ಮಹಾತ್ಮರು ಆಕೆಯನ್ನು ತಳೆದಿರಲು ನನಗೋಸ್ಕರವಾಗಿ ಚಿಂದ ಮಹತರ್ಯದ ಹಾನಿಯಾಗುವ ಹೊತ್ತು ಬಂದೊದಗಿದಂಗಿದೆ, ಏನು ಮಾಡಲಿ ? ಬಹಳೊತ್ತು ಅವಳು ಆಲೋಚಿಸಿದಳು ಬಹಳೊತ್ತು ಅಡ್ಡಾಡಿದಳು, ಬಗೆ ಹರಿಯಲಿಲ್ಲ, 4 ಆಗಲಿ, ನಾಳಿನತನಕ ಅವಕಾಶವಿರುವದು; ಅಷ್ಟರಲ್ಲಿ ದೇವರು ಬುದ್ಧಿ ಕೊಟ್ಟಂತೆ ಮಾಡಬಹುದು."

ಬೆಳಗಾಗುವದರೊಳಗಾಗಿ ಧುವರಾಯನ ಕೈಯಲ್ಲಿ ರಮಾಸುಂದರಿಯ ಬರೆದ ಕಾರ್ಡು :

ಶಾರದಾಪ್ರಸಾದ ಕಾಲೇಜದ "ಫೆಲೋ” ಇವರಿಗೆ ಮಾಸುಂದರಿಯ ವಿನಂತಿ :

ಏನು ನಿಮಿತ್ತವೂ ತಲೆನೋವು ಹೆಚ್ಚಾಗಿದೆ. ಅದಕ್ಕಾಗಿ ಇಂದು ವಿದ್ಯಾಮಂದಿರಕ್ಕೆ ಬರುವದಾಗುವದಿಲ್ಲ. ಶ್ರುತವಿರಬೇಕು.

ತಮ್ಮ ವಿಧೇಯಳಾದ
ರಮಾಸುಂದರಿ

ಧ್ರುವರಾಯನು ಆ ಕಾರ್ಡನ್ನು ಮೇಜಿನಮೇಲಿಟ್ಟು ಅದರ ಮೇಲೆ ತನ್ನ ಹಸ್ತವನ್ನು ಒಳಿತಾಗಿ ಅಪ್ಪಳಿಸಿದನು. ಆ ರಭಸದ ಹೊಡೆತಕ್ಕೆ ಮೇಜು ಒಳಿತಾಗಿ ಆದರಿತು ಆಫೀಸದ ಕೋಣೆಯಲ್ಲೆಲ್ಲ "ಧಮ್ಮೆಂದು" ದರವು ಹಿಡಿಯಿತು. "ಏನು ಮಾಡಿದಳೀಕೆ! ಇಂದು ನಾನು ಅವಳ ಸನ್ನಿಧಾನಕ್ಕೆ ಬರುವನೆಂದು ಬೇಡಿಕೊಂಡಿದ್ದೆವು. ನಾನು ಬರಬಾರದೆಂಬದೇ ಈ ಕಂಡೀನ ಸಂಪೂರ್ಣಿ-ಆಥಿಗಳು ಆರ್ಧವಿರಬಹುದೇನು?” ಮತ್ತೆ ಅಡ್ಡಾಡಿ ವಿಚಾರಿಸಿ <ಹೀಗಾ ಇರಬಹುದು: ಪ್ರಾತಃ ಕಾಲದಲ್ಲಿ ಹೋದರೆ ಆ ಚತುಶಿಯ ಸಖಿಯರಾದ ಇಂದುಮತಿ ಮುಂತಾದವರು ಬಳಿಯಲ್ಲಿಯೇ ಇರುವರು ಮಧ್ಯಾಹ್ನದಲ್ಲಿಯಂತೂ ಕಾಲೇಜಕ್ಕೆ ಬರತಕ್ಕದ್ದು : ಮಧ್ಯಾಹ್ನದಲ್ಲಿ ಮನೆಯಲ್ಲಿ ನಾನೋರ್ವಳೆ ಇರುತ್ತೇನ. ಆಗ ನೀವು ಬನ್ನಿ' ಎಂಬದೇ ಈ ಕಾರ್ಡಿನ ನಿಜವಾದ ಅಭಿಪ್ರಾಯವು "ಎಂದವನೇಶart=fafaravagga/Ragig ಇತಜ್ಞತೆ fam2 at afಕಾer: ಎಂದು ಕೂಗಿ ಹಾಡಿದನು. ಆಮೇಲೆ ಅವನು ಆ ಕಾರ್ಡನ್ನು ಜೋಡಿಸಿ ಕಾಲೇಜದ ವೈದ್ಯರಾದ ಕವಿರಾಜ ನರೇಂದ್ರನಾಧ ಚತರ್ಜಿಯವರಿಗೆ ಒಂದು ಪತ್ರ ಬರೆದು ಈ ವಿದ್ಯಾರ್ಥಿನಿಗೆ ಬೇಗನೆ ಆರೋಗ್ಯವಾಗುವಂತೆ ಮಾಡಬೇಕು.” ಎಂದು ವಿಶೇಷ ಸೂಚನೆಯನ್ನು ಕೂಡಾ ಬರೆದನು, ಮಧ್ಯಾಹ್ನ ಮೂರುವದರೊಳಗಾಗಿ ಕವಿರಾಜರಿ ಉತ್ತರ ಒಂದಿತು, ೧ ರಮಾ ಸುಂದರೀದೇವಿಯ ತಲೆನೋವಿಗೆ ಮನಸ್ತಾಪವೇ ಕಾರಣವು. ಮೇಲುಪಚಾರದಿಂದ ವಿಶೇಷವಾದ ಪ್ರಯೋಜನ ವಾಗದು, ಆದರ ನೋವು ಕಡಿಮೆಯಾಗುವಂತೆ ವ್ಯವಸ್ಥೆ ಮಾಡಿದೆ ? ಆಯತ್ನವಾಗಿ ನೆಟ್ಟಗಾಯಿತು. ರಮಾಸುಂದರಿಯ ಮನಕ್ಕೆ ಹೋಗಿದ್ದೆ ಯಂದು ಯಾರಾದರೂ ಕೇಳಿದರೆ ರೋಗಿಯಾದ ವಿದ್ಯಾರ್ಥಿನಿಯ ಸಮಾಚಾರಕ್ಕೆ ವ್ಯವಸ್ಥಾಪಕನಾದ ನಾನು ಹೋಗಬೇಡವೆ ? ಬಗಪಿಗೆಯಿಂದ ಪೋಷಾಕು ಮಾಡಿಕೊಂಡು ಅವನು ರಮಾಸುಂದರಿಯು ಇರುವ ಸ್ಥಳದ ಕಡೆಗೆ ಎಡವುತ್ತ ಮುಗ್ಗುತ್ತೆ ಓಡಿದನು, ಇವನು ಬರುವನೆಂದು ನಿಶ್ಚಯವಾಗಿ ತಿಳುಕೊಂಡು ಆ ರಮಣಿಯುತಿ ತನ್ನ ವ್ಯವಸ್ಥೆಯಲ್ಲಿಯೇ ಇದ್ದಳು. ಕನಕಲೋನ ನಾಟಕದಲ್ಲಿ ( ಒಂದು ಪ್ರಕಾರದ ಓಷಧಿಯ ನೀರು ತೋಯಿಸಿದ ವಪ್ಪ, ವನ್ನು ತಲೆಗೆ ಕಟ್ಟಿಕೊಂಡು ಅವಳು ಹಾಸಿಗೆಯಲ್ಲಿ ಮಲಗಿದ್ದಳು. ಸಮೀಪ ಬೆಲ್ಲಿಯೇ ಧ್ರುವರಾಯನಿಗಾಗಿ ಒಂದು ಕುರ್ಚಿಯ ಮೇಜಿನ ಮೇಲೆ 'ಚಿನೀ ಚಂದುವಿನಲ್ಲಿ ತುಂಬಿಟ್ಟ ಹಾಲನ್ನೂ ಇರಿಸಿದ್ದಳು. ಬಾಗಿಲನು ತೆರೆದೇ ಧ್ರುವರಾಯನು ಬಂದವನೇ ಸಂತೋಷವ್ಯಂಜಕವಾಗಿ ಮಂದಹಾಸ ತನ್ನು ತಳೆದು 11 ಪ್ರಕೃತಿ ಹೇಗಿದೆ ? ” ಎಂದು ಕೇಳಿದನು. "ಹೇಗೇನು? ನೆಗಡಿ ಕೆಮ್ಮುಗಳು ಬೇನೆಯಲ್ಲ, ನತ್ತು ಬುಗುಡಿ ಆಭರಣಗಳಲ್ಲವೆಂಬ ನಾಣ್ಣುಡಿ ಇರುವದಿಲ್ಲವೆ ?” ಎಂದು ರಮಾಸುಂದರಿಯಾದರೂ ಅಹುದೋ ಅಲ್ಲವೋ ಎಂಬಷ್ಟು ನಗೆ ತಳೆದು ನುಡಿದಳು

ಧ್ರುವರಾಯನು ನಾಲ್ಕಾರು ನಿಮಿಷದವರೆಗೆ ಕೆಳಗೆ ಮೋರೆಯನ್ನು ಮಾಡಿಕೊಂಡು ತನ್ನ ಕೈಯಲ್ಲಿರುವ "ಮಲಕ್ಕಾ" ಬೆತ್ತದಿಂದ ನೆಲವನ್ನು ಗೀಚುತ್ತೆ ವಿಚಾರಗೈದ ಮನಸ್ಸಿನ ನಿಶ್ಚಯವಾದ ಬಳಿಕ ರವಾಸುಂದರಿಯ ಮುಖವನ್ನು ದಿಟ್ಟಿಸಿ ನೋಡಿ “ನಿನ್ನೆ ನಾನು ಬರೆದ ಪತ್ರವು ನಿಮಗೆ ತಲ್ಪಿರಬಹುದು?" ಎಂದು ಕೇಳಿದನು.

"ಅಹುದು ಧ್ರುವರಾವ್, ನಿಮ್ಮಂಧ ಸದಸದ್ವಿವೇಕವುಳ್ಳ ಪಂಡಿತರು ಅಂಧ ಅಪ್ರಯೋಜಕವಾದ ಪತ್ರವನ್ನು ಹೇಗೆ ಬರೆದಿರೋ ಏನೋ !" ಎಂದು ಆ ಧೀರೆಯ ಗಂಭೀರವಾದ ಮುಖಮುದ್ರೆಯನ್ನು ತಳೆದು ಕೇಳಿದಳು.

ಆ ಮಾತು ಕೇಳಿ ಧ್ರುವರಾಯನು ಸಿಡಿಲುಬಡಿದವನಂತೆ ಬೆರಗಾಗಿ ಬಾಯ್ದೆದು ಕಲ್ಲುಮೂರ್ತಿಯಂತೆ ಕುಳಿತನು.

"ಏನೆಂದಿ ರವಾಸುಂದರಿ? ” ಎಂದಿಷ್ಟು ಕೇಳಬೇಕಿದರೆ ಅರ್ಧಾ೦ಗ ವಾಯುಗ್ರಸ್ತನಿಗಾಗುವಷ್ಟು ಶ್ರಮವು ಆ ಮದನಪೀಡಿತನಿಗಾಯಿತು.

"ನೀವು ನನ್ನನ್ನು ಏಕವಚನದಿಂದ ಸಂಭೋದಿಸಿದರೂ ನನಗೆ ಕೋಪವಿಲ್ಲ ಆದರೆ ನೀವು ಆ ಪತ್ರವನ್ನು ಬರೆಯಲೇಬಾರದಾಗಿತ್ತು.”

"ಕ್ಷಮಿಸಿರಿ! ಪ್ರೇಮಪರವಶನಾದ ನನಗೆ ಜೀವಿಧಾರದ ಬೇರೆ ಉಪಾಯವು ತೋಚಲಿಲ್ಲಾದ್ದರಿಂದ ಹಾಗೆ ಬರೆದೆನು.” ಎಂದು ಅವನು ಬಹು ದೀನವಾಗಿ ನುಡಿದನು.

"ಧ್ರುವರಾವ್, ನಾನು ಕಾಲೇಜವನ್ನು ಬಿಟ್ಟು ಹೋದ ಬಳಿಕ ನೀವು ಇಂಥ ವಿಚಾರಗಳನ್ನು ಪ್ರಕಟಗೊಳಿಸಿದ್ದರೆ ವಿಶೇಷವಾದ ಬಾಧಕವಿದ್ದಿಲ್ಲ. ನೀವಿಲ್ಲಿ ನಮ್ಮ ಅಭ್ಯಾಸದ ನಿಯಾಮಕರು. ನೀವೇ ಕರ್ತವ್ಯಪರಾಙ್ಮುಖರಾಗಿ ನಿಮ್ಮ ಅಭ್ಯಾಸಕ್ಕೆ ವ್ಯತ್ಯಯವನ್ನು ತಂದುಕೊಳ್ಳುವದಲ್ಲದೆ ನಮ್ಮಂಥ ಅಬಲೆಯರ ಮನಸ್ಸಿನಲ್ಲಿ ಚಂಚಲತೆಯನ್ನು ಉಂಟುಮಾಡಬಂದಿರುವಿರಿ. ವಿಹಿತವೇ ಇದು?"

"ಪ್ರಿಯೆ, ಇಂದು ಬೇಡ, ಇನ್ನು ಹತ್ತು ವರ್ಷಕ್ಕಾದರೂ ನನ್ನ ಪ್ರಣಯವನ್ನು ನೀನು ಸ್ವೀಕರಿಸುವಿಯಾ ?” ಎಂದು ಭಕ್ತನ ಗುಡಿಯಲ್ಲಿಯ ಮೂರ್ತಿಯ ಮುಂದೆ ಕೈಜೋಡಿಸಿಕೊಂಡು ನಿಂತಂತೆ ನಿಂತು ಧ್ರುವರಾಯನು ಬೆಸಗೊಂಡನು

ರಮಾಸುಂದರಿಗೆ ನಗೆ ತುಂಬಿ ಬಂದಿತು. ಅವಳು ತನ್ನ ಎರಡೂ ಕೈಗಳಿಂದ ಮೋರೆಯನ್ನು ಮುಚ್ಚಿಕೊಂಡು ನಗೆಯನ್ನು ಅಡಗಿಸಿಕೊಂಡಳು. ಧ್ರುವರಾಯನ ಪ್ರಾರ್ಥನೆಗೆ ಉತ್ತರವನ್ನು ಕೊಡುವ ಗೋಜಿಗೆ ಅವಳು ಹೋಗಲಿಲ್ಲ. ಮತ್ತೆ ಅವಳು ಗಾಂಭೀರ್ಯವನ್ನು ತಳೆದು, "ಶಿಕ್ಷಕರೆ, ನೀವು ಸಂಬೋಧನಗಳನ್ನು ಉಪಯೋಗಿಸುವಾಗ ವಿಚಾರ ತಿಳಿದು ಉಪಯೋಗಿಸಿರಿ ನಿಮ್ಮಂಧವರಿಗೆ ಅಬಲೆಯಾದ ನಾನು ಬುದ್ಧಿಯ ಮಾತು ಹೇಳಲು ವಿಷಾದಪಡುತ್ತೇನೆ. ”

ಧ್ರುವರಾಯನು ಚಟ್ಟನೆ ತನ್ನ ಆಸನವನ್ನು ಬಿಟ್ಟಿದ್ದು "ರಮಾ ಸುಂದರೀಬಾಯಿ, ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿರಿ ಪ್ರೇಮನಿರ್ಜಿತನಾದ ನಾನು ಮರ್ಯಾದೆಯನ್ನು ಉಲ್ಲಂಘಿಸಲಿಲ್ಲವೆಂದು ನಂಬುತ್ತೇನೆ. ಇರಲಿ, ನಾಳಿನಿಂದ ನಾನು. ಕಾಲೇಜದಲ್ಲಿರುವದರಿಂದ ನಿಮಗೆ ಸಂಕೋಚವಾಗುತ್ತಿದ್ದರೆ ಹಾಗೆ ಹೇಳಿರಿ, ನಾನು ಹೊರಟು ಹೋಗುತೇನೆ ” ಎಂದು ಸಂಕ್ಷುಬ್ಧನಾಗಿ ಕೇಳಿದನು

"ಹಾಗೆ ಮಾತ್ರ ಮಾಡಬೇಡಿರಿ ಹೀನಸತ್ವರ ವಿಚಾರವಿದು. ನೀವು ಇಲ್ಲಿ ಇರುವದರಿಂದ ನನ್ನ ಸಮಭಾವವು ಕೆಡಲಾರದು. ಅಷ್ಟು ಮಾನಸಿಕ ಧೈರ್ಯವು ನನ್ನಲ್ಲಿದೆ" ಎಂದು ಆ ಪ್ರೌಢೆಯು ತಾಳ್ಮೆಯಿಂದ ನಗುತ್ತೆ ನುಡಿದಳು

ಮತ್ತೊಂದು ಮಾತಾಡದೆ ಧ್ರುವರಾಯನು ಆ ಸ್ಥಳವನ್ನು ಬಿಟ್ಟು ರಭಸದಿಂದ ಹೊರಗೆ ನಡೆದನು. ಆ ಸುಂದರಾಂಗನ ಮೂರ್ತಿಯು ಕಣ್ಮರೆಯಾದ ಕೂಡಲೆ ದಮಾಸುಂದರಿಯ ಕಣ್ಣುಗಳೊಳಗಿಂದ ಅಶ್ರುಧಾರೆಗಳ ಜೀಕಳಿಗಳು ಪುಟಿದವು ಚಟ್ಟನೆ ಮಂಚದಿಂದಿಳಿದು ಅವಳ ಕಿಟಕಿಯಲ್ಲಿ ಬಂದು ನಿಂತು ತನ್ನ ಮನೋರಮಣನ ವ್ಯಾಪಾರಗಳನ್ನು ನೋಡುವ ಕುತೂ ಹಲವುಳ್ಳವಳಾಗಿ ನಿಂತುಕೊಂಡಳು ಅಶ್ವತ್ಥಾಮನ ಸೆಟಿಯಿಂದ ಎದೆಯುಬ್ಬಿಸಿಕೊಂಡು ಅಡ್ಡಾಡುವ ಆ ತರುಣನು, ಈ ಸಮಯದಲ್ಲಿ ಮುಪ್ಪಿನಿಂದ ಮುಟ್ಟಿಗೆಯಾದವನಂತೆ ಅಧೋಮುಖನಾಗಿ ಹೆಜ್ಜೆಗಳನ್ನೆಣಿಸುತ್ತೆ ನಡೆದಿದ್ದನು. ಅವನನ್ನು ಕಂಡು ರಮಾಸುಂದರಿಯು ಒಳಿತಾಗಿ ಬಿಸಿಸುಯ್ದು "ಅವರ ಹಿತಕ್ಕಾಗಿ ನನ್ನ ಕಾಲಮೇಲೆ ನಾನು ಕಲ್ಲು ಹಾಕಿಕೊಂಡನು. ಆಗಲಿ, ಅವರದಾದರೂ ಕಲ್ಯಾಣವಾಗಲಿ ನನ್ನ ಕಥೆಯಂತೂ ಮುಗಿಯಿತು. ಮುಂದೆ ಈ ಕಾಲೇಜದಲ್ಲಿ ಜಾನಕೀದೇವಿಯರ ಸ್ಥಾನಾಪನ್ನಳಾಗದಕ್ಕವಳು ನಾನೇ ಎಂದು ತಿಳಿಸಿಕೊಂಡಿದ್ದೆನು. ” ಎಂದು ನುಡಿದು ಅವಳು ಮತ್ತೆ ಕಣ್ಣಿಗೆ ನೀರು ತಂದಳು

"ನಡೆ ಧ್ರುವರಾಯ್, ನಿನಗಿನ್ನು ಸನ್ಯಾಸವು ಬಂದಡರುತು ಕರ್ಮಯೋಗಿಯಂತೆ ನೀನಿನ್ನು ನಿಷ್ಮಮವಾದ ಕರ್ಮವನ್ನು ಮಾಡು ಆನೇಕ ಜನ ಮಹಾತ್ಮರು ಕೂಡಿ ಈ ಕಾಲೇಜ ಸಂಸ್ಥೆಯ ಭಾರವನ್ನು ನಿನ್ನ ತಲೆಯು ಮೇಲೆ ಹೊರಿಸಬೇಕೆಂದು ಮಾಡಿದ್ದಾರೆ, ಹೊರ ನಡೆ ಆಯತ್ತವಾಗಿ ಸಂಸಾರದ ಭಾರವು ನಿನ್ನ ತಲೆಯ ಮೇಲಿಂದ ಇಳಿದಿದೆ ಎಂದು ಉದ್ಗಾರ ತೆಗೆದು ಧ್ರುವರಾಯನು ಮನೆಗೆ ಬಂದವನೇ ಮನೋನಿಗ್ರಹದಿಂದ ಸಕಲ ವ್ಯಾಮೋಹಗಳನ್ನು ಮೆಟ್ಟಿ ಎಮ್. ಎ. ಪರೀಕ್ಷೆಯ ಸಿದ್ಧತೆ ಮಾಡಲುದ್ಯುಕ್ತನಾದನು.

ದ್ರುವರಾಯನು ಹೋದನೋ ಇಲ್ಲವೋ ಅಷ್ಟರಲ್ಲಿ ಇಂದುಮತಿಯು ರಮಾಸುಂದರಿಯ ಎದುರಿನಲ್ಲಿ ಬಂದು ನಿಂತಳು

"ಇಂದುಮತೀ, ಅಡ್ನಾಡಿ ಹೊತ್ತಿನಲ್ಲಿ ನೀನು ಕಾಲೇಜವನ್ನು ಬಿಟ್ಟು ಹೇಗೆ ಬಂದಿ ?"

"ಇದೊಂದು ವಿನೋಬಾಸ್ಪದವಾದ "ಟ್ರ್ಯಾಜೆಡಿ" (ದುಃಖಪರ್ಯ ವಸಾಯಿ ನಾಟಕ) ಪ್ರಯೋಗವು. ಅದರಲ್ಲಿ ನನಗೂ ಒಂದು ಚಿಕ್ಕದಾದ ಭೂಮಿಕೆಯನ್ನು ಕೊಟ್ಟಿದ್ದಾರೆ. ಪಾಠ ಮಾಡುವದಕ್ಕಾಗಿ ಬಂದೆನು.”

"ಏನೇನು ?” ಎಂದು ರಮಾಸುಂದರಿಯು ಚಕಿತಳಾಗಿ ಕೇಳಿದಳು.

"ಏನೇನೆಂದರೆ, ಧ್ರುವರಾಯರು ನಿನ್ನಲ್ಲಿಗೆ ಬಂದಿದ್ದರಲ್ಲ, ಅವರಿಗೆ ನೀನು ನಿಷ್ಠುರವಾದ ಉತ್ತರವನ್ನು ಕೊಟ್ಟಂತೆ ಕಾಣುತ್ತದೆ.” ಎಂದು ಇಂದುಮತಿಯು ನಟಿಯಂತೆ ಹಾವಭಾವ ಮಾಡುತ್ತೆ ಕೇಳಿದಳು.

"ಅಂದರೆ ! ದ್ರುವರಾಯರು ಇಲ್ಲಿಗೆ ಬಂದಿದ್ದರೆಂದು ಯಾರು ಹೇಳಿದರು? ನಾನು ನಿಷ್ಠುರವಾದ ಉತ್ತರವನ್ನಾದರೂ ಕೊಟ್ಟಿದ್ದು ಯಾರು ಹೇಳಿ 94 ಸಂಪೂರ್ಣ-ಕಥೆಗಳು 6 ದರು ? ” ಎಂದು ರವಾಸುಂದರಿಯು ಕ್ರುದ್ಧಳಾಗಿ ಪ್ರಶ್ನೆ ಮಾಡಿದಳು. ಧುವರಾಯರಿಗೆ ನೀನು ಆನುಕೂಲವಾದ ಉತ್ತರವನ್ನು ಕೊಟ್ಟ ದ್ದರೆ ಅವರು ಉತ್ತರದಿಂದ ಹುಲಿಯಂತೆ ಹಾರುತ್ತೆ ಹೋಗುತ್ತಿದ್ದರು. ಈಗ ಹೋದಂತೆ ಅಳುಮೋರೆ ಮಾಡಿಕೊಂಡು ಹೆಜ್ಜೆಗಳನ್ನೆಣಿಸು ಉಶ್ ಉಶ್" ಎಂದು ಯಾಕೆ ಹೋಗುತ್ತಿದ್ದರು ? ” • ನಾನೇಕೆ ನಿಷ್ಠುರವಾಡಿ ಅವರಿಗೆ ? ಯಾವ ಸಂದರ್ಭದಿಂದ ನೀನು ಕೇಳುಏ ಪ್ರಿಯ ಸಖಿ ? ?? ಈ ಸಂದರ್ಭವು ಈ ಪತ್ರದಲ್ಲಿ ಇದೆ ನೋಡಿದಿಯಾ ? ” ಎಂದು ಇಂದುಮತಿ ಯು ಧವರಾಯನ ಕಮಾಸುಂದರಿಗೆ ಬರೆದಿರುವ ಪತ್ರವನ್ನು ಆವಳ ಮುಖಕ್ಕೆ ಹಿಡಿದು ನುಡಿದಳು ರಮಾಸುಂದರಿಯ ಕಳ್ಳೆಯಂತಾಗಿ 44 ಸಖಿ, ಇ೦ಧ ಪಕ್ಕಕ್ಕೆ ನಿಷ್ಟುರವಾದ ಉತ್ತರವೇ ತಕ್ಕದ್ದಲ್ಲವೆ ? ?” ಎಂದು ನಾಚಿ ಸತ್ತವಳಾಗಿ ನುಡಿದಳು,

  • ವಾಸ್ತವ, ವಾಸ್ತವ ! ಆದರೆ ನನ್ನ ಜೀವದ ಗೆಳತಿಯೋ, ಈ

ಪತ್ರದ ಬೆನ್ನು ಮೇಲೆ ನೀನು ನಿನ್ನ ಸ್ವಹಸ್ತಾಕ್ಷರದಿಂದ ಏನು ಬರೆದಿರುವ ? " ಎಂದು ಇಂದುಮತಿಯು ಆ ಚಕ್ರವನ್ನು ರಮಾಸುಂದರಿಯ ಮುಂದೆ ತಿರಿವಿ ಹಿಡಿದು ಬೆಳ್ಳನೆ ನಕ್ಕಳು 14 ಏನು ಬರೆದಿದ್ದೆನೆ ? ” ಎಂದು ರವಾಸುಂದರಿಯ ಆ ಪತ್ರವನ್ನು ನೆಳಕೊಳ್ಳ ಹೋದಳು ಇಂದುಮತಿಯಕಿ ಅದನ್ನು ಗಟ್ಟಿಯಾಗಿ ಹಿಡಿದು ಕೊಂಡು 14 ನೀನು ಬರೆದದ್ದು ಓದಿ ಹೇಳಲಿಯಾ ? ಏನತಿಯನಾಲಿಸೊ ಮನಮೋಹನಾ | ಪಲ್ಲಾ ! ನಲಿನೀಯ ಸಿಕ್ಕಳು ಬಸವ ಸಾರಸನು } ಸೆಳೆವ ತೆರದಲೆನ್ನ ಮನವ ಸೆಳೆದಿ ರಾಜೇಂದ್ರ } ೧ || ೫ ಎಂಬ ಪದವನ್ನು ಒಳ್ಳೆ ಸುಸ್ವರವಾಗಿ ಹಾಡಿ ತೋರಿಸಿದಳು 11 ಇಂದುಮತಿ, ನೀನು ಹೀಗೆ ಅವರ ಪತ್ರಗಳನ್ನು ಕದ್ದು ಓದ ಬಹುದೆ ? ನಿನಗೆ ಕನ್ನಡವನ್ನು ಕಲಿಸಿದಾಕೆ ನಾನೇ ಮೂರ್ಖಳು, * 40 ಮೂರ್ಖಳೋ ಆವಳೋ ನನಗೆ ಗೊತ್ತಿಲ್ಲ. ನೀನು ನನಗೆ ಕನ್ನಡ ವನ್ನು ಕಲಿಸದಿದ್ದರೆ ನಾನು ಈ ಸಚಿತ್ರ ಭಾರತದ ಸಂಚಿಕೆಯನ್ನಾಗಲಿ, ಅದರಲ್ಲಿ ನೀನಿಟ್ಟಿರುವ ಈ ಪತ್ರವನ್ನಾಗಲಿ ಎತ್ತಿಕೊಂಡು ಹೋಗುತ್ತಿದ್ದಿಲ್ಲ ಸರಿ."

ಮುಂದೆ ಯಥಾಕಾಲವಾಗಿ ಯುನಿವರ್ಸಿಟಿಯ (ವಿಶ್ವವಿದ್ಯಾಲಯದ) ಪರೀಕ್ಷೆಗಳಾದವು. ಒಟ್ಟಿನಲ್ಲಿ ಶಾರದಾ ಪ್ರಸಾದ ಕಾಲೇಜದ ಬೆಳಕು ಬಹಳಾಯಿತು. ಎಮ್. ಏ ಪರೀಕ್ಷೆ ಪಾಸಾದವರಲ್ಲಿ ಧ್ರುವರಾಯನಿಗೆ ಪ್ರಥಮ ಸ್ಥಾನವು ಸ್ತ್ರೀ ವಿದ್ಯಾರ್ಥಿಗಳಲ್ಲಿ ನಾಲ್ವರು ಬೀ. ಏ. ಪಾಸಾಗಿದ್ದರು ಇಂದುಮತಿ, ಚಂದ್ರಾವಳಿ, ರಮಾಸುಂದರಿಯರು ಎಫ್. ಎ ದಲ್ಲಿ ಪಾಸಾದವರು ಅಂದು ಡಾಕ್ಟರ ಚೌಧರಿಯವರಿಗೆ ಪರಮಾನಂದವು ಜಾನಕೀ ದೇವಿಯರಾದರೂ ಪಾಸಾಗಿರುವ ತಮ್ಮ ಶಿಷ್ಯಯರನ್ನು ಕೂಡಿಸಿಕೊಂಡು ಸಂತೋಷಪ್ರದರ್ಶನವನ್ನು ಮಾಡಿದರು. ಧುವರಾಯನು ಸೊರಗಿದಂತೆ ತೋರಿದರೂ ಒಣಗಿದ ದ್ರಾಕ್ಷದಂತಿರುವ ಆವನ ಮುಖವು ಸ್ವಾದಿಷ್ಟವಾಗಿ ತೋರಿತು. ರಮಾಸುಂದರಿಯು ಮಾತ್ರ ಬಾಡಿದ ಕಲಿಕೆಯಂತ ವಿಷಾದಾಸ್ಪದಳಾಗಿ ಕಂಡಳು.

"ಹೀಗೇನು ? ಈ ಮಾತು ನನಗೆ ನೀನು ಮೊದಲೆ ಯಾಕೆ ತಿಳಿಸಲಿಲ್ಲ?" ಎಂದು ಜಾನಕೀದೇವಿಯರು ಇಂದುಮತಿಯನ್ನು ಕುರಿತು ಮಾತಾಡಿದರು.

"ಆ ಮಾತಿಗೆ ನೀವು ಒಪ್ಪುವಿರೋ ಕೋಪಿಸಿಕೊಳ್ಳುವಿರೋ ನನಗೆಂತು ತಿಳಿಯಬೇಕು? ಕೋಪಿಸಿಕೊಂಡರೆ ಅನರ್ಥವಾಗುವದೆಂದು ತಿಳಿದು ನಾನು ಹಲ್ಲಲ್ಲಿ ನಾಲಿಗೆಯನ್ನಿಟ್ಟುಕೊಂಡು ಸುಮ್ಮನಿದ್ದೆನು"

"ಹಾ: ! ಹಾ: ! ಹಾ: ! ರಮಾಸುಂದರಿಯು ಧ್ರುವರಾಯನ ಪ್ರಾಯಶ್ಚಿತ್ತವನ್ನು ಚನ್ನಾಗಿ ಮಾಡಿದಳು.” ಎಂದು ದೇವಿಯವರು ನಕ್ಕು ನುಡಿದರು.

"ಅಮ್ಮನವರೆ, ವಿನೋದವು ಹಾಗಿರಲಿ. ಇನ್ನು ಮೇಲೆ ಮಾಡುವ ಬಗೆಯೇನು? ರಮಾಸುಂದರಿಯು ಎರಡು ಬಗೆಯ ಚಿಂತೆಯಿಂದ ಸೊರಗುತ್ತಿರುವಳು ಕಾಣಿರಾ ?"

"ಓಹೋ, ವೆಂಕಟೇಶ್ವರನಿಗೆ ಕಲ್ಲಿಲೊಗೆದ ಪದ್ಮಾವತಿಯು ಈಗ ಆತನ ಪಾದಗಳನ್ನು ನಂಬಲು ಒಪ್ಪಿರುವಳೆ ? ” "ಒಪ್ಪದೆ ಪದ ಹಾಡುವಳು"

ಜಾನಕೀದೇವಿಯರು ಗಂಟೆಯನ್ನು ಬಾರಿಸಿ ಜವಾನನನ್ನು ಕರೆದು "ಅಖಾಯ್, ಪ್ರೊಫೆಸರ್ ಧ್ರುವರಾಯರನ್ನು ನಾನೀಗಲೆ ಕರೆದಿರುವೆನೆಂದು ಹೇಳಿ ಬೇಗನೆ ಕರಕೊಂಡು ಬಾ ” ಎಂದು ಆಜ್ಞಾಪಿಸಿದರು.

ಧ್ರುವರಾಯನು ಬಂದು ಆ ಮಾತೆಯ ಬಳಿಯಲ್ಲಿ ವಿನಯದಿಂದ ನಿಂತ ಬಳಿಕ,

"ಪಂಡಿತ ಮಹಾಶಯ, ನಿನ್ನ ಹಿತಕ್ಕಾಗಿ ನಿಮ್ಮ ಪತ್ನಿಯು ನಿನಗೊಂದು ಬಿರಿನುಡಿಯಾಡಿದರೆ ನೀನು ಅವಳನ್ನು ಕ್ಷಮಿಸುವಿಯಲ್ಲವೆ ?" ಎಂದು ಜಾನಕೀದೇಏಯರು ಕೇಳಿದರು

"ಸಹಜವಾದ ಮಾತಿದು. ಆದರೆ ನನಗೆಲ್ಲಿಯ ಪತ್ನಿಯು ? "

"ರಮಾಸುಂದರಿ, ಕೇಳಿದಿಯಾ ಈ ಪ್ರೊಫೆಸರರು ನಿನ್ನ ಅನುನಯವನ್ನು . ನಿನಗಾದರೂ ಏನು ಅಡಗಾಣಿಸಿ, ಆಷ್ಟೇಕೆ ಆತುರಳಾಗಿರುವ?" ಎಂದು ಜಾನಕೀದೇವಿಯರು ವಿನೋದ ಮಾಡಿ ನುಡಿದರು. ಧ್ರುವರಾಯನ ಮುಖವು ಸಂತೋಷದಿಂದ ಹಿಗ್ಗಿ ಇಮ್ಮಡಿಯಾಯಿತು. ಇಂದ್ರಜಾಲದ ಮಂತ್ರದಿಂದಲೋ ಎಂಬಂತೆ ರಮಾಸುಂದರಿಯ ಬಾಡಿದ ಮುಖವು ಪ್ರಫುಲ್ಲಿತವಾದ ಕಮಲದಂತೆ ಕಂಗೊಳಿಸಿತು.

"ಮಾತಾಜೀ ರಮಾಸುಂದರೀಬಾಯಿಯವರು ಪದವೀಧರೆಯರಾಗಿ ಈ ಕಾಲೇಜವನ್ನು ಬಿಟ್ಟ ಬಳಿಕ ನನ್ನ ಪ್ರಾರ್ಥನೆಯ ವಿಚಾರ ಮಾಡುವರಂತೆ !" ಎಂದು ನುಡಿದು ಧ್ರುವರಾಯನು ಲಜ್ಞಾವನತಮುಖಿಯಾಗಿ ನಿಂತಿರುವ ತನ್ನ ರಮಣಿಯ ಮುಖವನ್ನು ನೋಡಿ ನಕ್ಕನು.

"ಅಹುದೇನು ರಮಾಸುಂದರೀ? ವಿವಾಹಿತರಾಗಿ ಕಾಲೇಜಗಳಲ್ಲಿ ಕಲಿಯುತ್ತಿರುವ ಪುರುಷರೆಷ್ಟಿರವರು ನಿಮಗೆ ಗೊತ್ತುಂಟೇನು ? ಹೆಂಗಸರೇಕೆ ವಿವಾಹಿತರಾಗಿ ಕಾಲೇಜದಲ್ಲಿರಳೊಡದು?" ಎಂದು ಜಾನಕೀದೇವಿಯರು ಕೇಳಿದರು.

ಧ್ರುವ ರಮಾಸುಂದರಿಯರ ವಿವಾಹವು ಸಾರ್ವಜನಿಕ ಮಹೋತ್ಸವದಂತ ನ ಭೂತೋ ನ ಭವಿಷ್ಯತಿಯಾಗಿ ವಿಜೃಂಭಣಗೊಂಡಿತು. ಆ ಕಾಲೇಜದ ವ್ಹಾಯಿಸ್ ಪ್ರಿನ್ಸಿಪಲ್ಲರಾದ ಧ್ರುವರಾಯರ ಹೆಂಡತಿಯ ವಿದ್ಯಾಭ್ಯಾಸಕ್ಕೆ ಆತಂಕವೆ? ಜೋಯಿಸನ ಮಗನ ಮದುವೆಗೆ ಮುಹೂರ್ತ ತೆಗೆದು ಕೊಡುವವರನ್ನು ಹುಡುಕಿದ್ದುಂಟೆ ?

ಶಾರದಾ ಪ್ರಸಾದ ಕಾಲೇಜದ ಭಾವೀ ನಿಯಾಮಕರಾದ ಪ್ರೊಫೆಸರ್ ಧ್ರುವರಾವ್ ಹಾಗೂ

ರಮಾಸುಂದರೀದೇವಿಯರು ಡಾಕ್ಟರ್ ಚೌಧರಿ ಹಾಗೂ ಜಾನಕೀದೇವಿಯರಿಗೆ ಸಮಾನಾಧಿಕಾರಿಗಳಾಗಿದ್ದುಕೊಂಡು ಆ ವೃದ್ಧ ದಂಪತಿಗಳ ಮೇಲಿನ ಭಾರವನ್ನು ಸಾವಕಾಶವಾಗಿ ಇಳಿಸುತ್ತಲೂ ಉಚ್ಚ ಪ್ರತಿಯ ಶಿಕ್ಷಣದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚ್ಚ ಪ್ರತಿಯ ಧಾರ್ಮಿಕ ಹಾಗೂ ನೈತಿಕ ಬೋಧಾಮೃತವನ್ನು ನೀಡುತ್ತಲೂ ದೇಶದ ರಾಜಕೀಯ ಸಾಮಾಜಿಕ ಉನ್ನತಿಗಾಗಿ ಶ್ರಮಪಡುತ್ತಲೂ ಶಾರದಾ ಪ್ರಸಾದ ಕಾಲೇಜದ ಹೆಸರನ್ನ ಅಜರಾಮರವಾಗಿ ಮಾಡಿದರು

ಅಲಿಪ್ತವಾದ ಪ್ರೇಮಸಂಯೋಗ

ಮಹಾಮಹೋಪಾಧ್ಯಾಯರಾದ ವಿದ್ಯಾಧೀಶ ಪಂಡಿತರು ಸ್ನಾನ ತೀರಿಸಿಕೊಂಡು ಇನ್ನು ದೇವತಾರ್ಚನಕ್ಕೆ ಕೂಡತಕ್ಕವರು. ದೇವತಾಯತನವನ್ನು ಪ್ರವೇಶ ಮಾಡುತ್ತೆ ಮಾಡುತ್ತೆ ಅವರು "ಪ್ರದ್ಯುಮ್ನನೆಲ್ಲಿ ಕಾಣುವದಿಲ್ಲ ?" ಎಂದು ತಮ್ಮ ಪತ್ನಿಯಾದ ನರಸಮ್ಮನನ್ನು ಕೇಳಿದರು.

"ನಾನೇನು ಬಲ್ಲೆ? ಎಲ್ಲಿಗಾದರೂ ಮೆರೆಯಲಿಕ್ಕೆ ಹೋಗಿರುವನಾದೀತು," ಎಂದು ನರಸಮ್ಮನು ತಿರಸ್ಕಾರದಿಂದ ನುಡಿದಳು.

ಮಹಾಮಹೋಪಾಧ್ಯಾಯರ ಪೂಜೆಯು ಎರಡು ಗಳಿಗೆಯವರೆಗೆ ಒಳ್ಳೇ ವಿಧಾನಪೂರ್ವಕವಾಗಿ ನಡೆಯಿತು ಒಬ್ಬ ಶಿಷ್ಯನು ಗಂಧತೇಯತ್ತಿದ್ದನು, ಮತ್ತೊಬ್ಬನು ಸಾಲುದೀಪಗಳನ್ನು ಹಚ್ಚಿಡುತ್ತಿದ್ದನು. ಪಂಡಿತರು ದೇವರಿಗೆ ತುಲಸಿಯನ್ನು ಏರಿಸುವಾಗ ಮೂರನೆಯವನು ನಾಮಾವಳಿಯನ್ನು ಹೇಳುತ್ತಿದ್ದನು. ಜಾಗಟಿ, ಗಂಟೆ, ತಾಲಗಳ ಘನವಾದ ಸಪ್ಪಳದೊಂದಿಗೆ ದೇವರಿಗೆ ಮಂಗಳಾರತಿಯಾದ ಬಳಿಕ ವಿದ್ಯಾಧೀಶರು ಮತ್ತೆ "ಪ್ರದ್ಯುಮ್ನನೆಲ್ಲಿ?" ಎಂದು ಆಡಿಗೆಯವನನ್ನು ಕೇಳಿದರು.

"ಎಲ್ಲಿಗೆ ಹೋಗಿರುವರೋ ಕಾಣೆನು ಸ್ವಾಮಿ. ಪ್ರಹರ ಹೊತ್ತೀರಿದಾಗಿನಿಂದ ಪ್ರದ್ಯುಮ್ಮು ಪಂಡಿತರು ಮನೆಯಲ್ಲಿಯೇ ಇಲ್ಲ” ಎಂದು ಅಡಿಗೆಯನನು ಬಹು ವಿನೀತನಾಗಿ ಹೇಳಿದನು

'ಏನೇ? ” ಎಂದು ಹೆಂಡತಿಯನ್ನು ಕುರಿತು "ಏನೇ, ಪ್ರದ್ಯುಮ್ನನ ಸ್ನಾನವಾದರೂ ಆಗಿರುವದೇನು ?"

"ಏನಾಗಿದೆಯೋ, ಏನು ಬಿಟ್ಟಿದೆಯೋ ಇಪ್ಪತ್ತು ವರ್ಷದ ಟೊಣಪನಾದ ನಿಮ್ಮ ಮಗನನ್ನು ಯಾರೂ ಓಡಿಸಿಕೊಂಡು ಹೋಗುವದಿಲ್ಲ ಕಂಡಿರಾ! ಯಾಕೆ ಹಾಗೆ ಸೊಲ್ಲಿಗೊಮ್ಮೆ ಪ್ರದ್ಯುಮ್ನ ಪ್ರದ್ಯುಮ್ನನೆಂದು ಕೂಗುವದು?” ಎಂದು ಪ್ರದ್ಯುಮ್ನನ ಮಲತಾಯಿಯಾದ ನರಸಮ್ಮನು ಕ್ರುದ್ಭಳಾಗಿ ನುಡಿದಳು.

ಪಂಡಿತರು ಸುಮ್ಮನಾದರು. ನೈವೇದ್ಯ ವೈಶ್ವದೇವಗಳಾದ ಬಳಿಕ ಶಿಷ್ಯರು ಪುಸ್ತಕಗಳನ್ನು ತೆಗೆದುಕೊಂಡು ಪಾರ ಹೇಳಿಸಿಕೊಳ್ಳಲಿಕ್ಕೆ ಸಿದ್ಧರಾಗಿ ಕುಳಿತರು. ಆದರೂ ಪ್ರದ್ಯುಮ್ನನು ಬರಲಿಲ್ಲ. ಪಂಡಿತರು ಚಿಂತಾಕುಲರಾಗಿ "ಮಹಿದಾಸ, ಪ್ರದ್ಯುಮ್ನನು ತನ್ನ ಸ್ನೇಹಿತನಾದ ವಿಜಯೀಂದ್ರನ ಮನೆಗೆ ಹೋಗಿರಬಹುದು, ನೋಡಿಕೊಂಡು ಬಾ" ಎಂದು ಓರ್ವ ಶಿಷ್ಯನಿಗೆ ಆಜ್ಞಾಪಿಸಿದರು. ಪ್ರದ್ಯುಮ್ನನು ವಿಜಯೀಂದ್ರನ ಮನೆಯಲ್ಲಿ ಭೋಜನ ತೀರಿಸಿಕೊಂಡು ಅವನೊಡನೆ ಎಲ್ಲಿಯೋ ಹೊರಗೆ ಹೋದನೆಂಬ ವರ್ತಮಾನವನ್ನು ಮಹಿದಾಸನು ತಂದನು. ಏನೋ ವ್ಯತ್ಯಾಸವಿರಬಹುದೆಂದು ನೆನಿಸಿ ಪಂಡಿತರು ವಿಷಣ್ಣಕಾಗಿ ಹಾಗೂ ಹೀಗೂ ಪಾಠಪ್ರವಚನ ಭೋಜನಾದಿಗಳನ್ನು ತೀರಿಸಿಕೊಂಡವರೇ ವಿಜಯೀಂದ್ರನ ಮನೆಗೆ ಹೋದರು. ತೇಜಸ್ವಿಗಳಾದ ಆ ಮಹಾಮಹೋಪಾಧ್ಯಾಯರು ಹೀಗೆ ತನ್ನ ಮನೆಗೆ ನಡೆದು ಬಂದಿರುವದನ್ನು ಕಂಡು ವಿಜಯೀಂದ್ರನು ಚಕಿತನಾಗಿ "ಮಹಾ ಸ್ವಾಮಿಯವರು ಹೀಗೆ ನನ್ನಂಥ ಅಲ್ಪನ ಮನೆಗೆ ದಯಮಾಡಿದ ಕಾರಣವೇನು ?" ಎಂದು ವಿಜಯೀಂದ್ರನು ವಿನಯದಿಂದ ನಮಸ್ಕರಿಸಿ ಬೆಸಗೊಂಡನು.

"ವಿಜಯೀಂದ್ರ, ನಮ್ಮ ಪ್ರದ್ಯುಮ್ನ ಸಮಾಚಾರವೇನು ? ಇಂದು ನಿಮ್ಮಲ್ಲಿ ಯಾಕೆ ಭೋಜನ ಮಾಡಿದನು ? ಈಗೆಲ್ಲಿರುವನು ?" ಮುಂತಾದ ಅನೇಕ ಪ್ರಶ್ನಗಳನ್ನು ಪಂಡಿತರು ಕೇಳಿದರು.

"ಮಹಾತ್ಮರ ಮುಂದೆ ಸುಳ್ಳಾಡುವದು ಸರಿಯಲ್ಲ. ನರಸಮ್ಮನವರು ಪ್ರದ್ಯುಮ್ನನಿಗೆ ನಿತ್ಯದಲ್ಲಿಯ ಕಿಟಿಕಿಟ ಮಾಡುತ್ತಿರುವರು. ಪ್ರದ್ಯುಮ್ನನೆಂದೇ ಅದನ್ನೆಲ್ಲ ಸಹಿಸುತ್ತೆ ಬಂದನು. ಈವತ್ತಿನ ದಿವಸವಂತ ಅವರು ಪ್ರದ್ಯುಮ್ಮನಿಗೆ ಮಾಡಿದ ಅನುರ್ಯಾದೆಯನ್ನು ನೋಡಿ ನನಗೆ ಕೂಡ ಅತಿಶಯವಾದ ಖೇದವಾಯಿತು."

"ಏನಾಯಿತು ವಿಜಯೀಂದ್ರ ? ಎಂದು ವಿದ್ಯಾಧೀಶರು ವ್ಯಾಕುಲರಾಗಿ ಕೇಳಿದರು.

"ಉತ್ತಮ ತರಗತಿಯಲ್ಲಿ ಬೀ. ಏ. ಪರೀಕ್ಷೆ ಕೊಟ್ಟವನೂ ಶ್ರೀಮಂತರೂ, ಪ್ರತಿಷ್ಠಿತರ ಆದವರ ಮಗನೂ ಆದ ಪ್ರದ್ಯುಮ್ನನಿಗೆ ನಿಷ್ಕಾರಣವಾಗಿ ಮಾಡಿದ ಅಪಮಾನದ ಶಹನವಾದೀತೇ?" ಸಂಪೂರ್ಣ-ಕಥಗಳು << ಆದದ್ದಾದರೂ ಏನು ಹೇಳಬಾರದೆ ? ” ಪ್ರಾತಃಕಾಲದಲ್ಲಿ ನಾನೂ ಪ್ರದ್ಯುಮ್ಮನೂ ತಮ್ಮ ಮನೆಯಲ್ಲಿ ಕಾಫಿ ಮಾಡಿದೆವು ಪ್ರದ್ಯುಮ್ಮ ನು ಒಳಗಿನಿಂದ ಹಾಲು ತರುತ್ತಿರುವಾಗ “ಯಾರನ್ನು ಕೇಳಿ ಹಾಲು ತೆಗೆದುಕೊಂಡೆ ? ' ಎಂದು ನರಸಮ್ಮನವರು ಗದ್ದ ರಿಸಿ ನುಡಿದವರೇ ಪ್ರದ್ಯುಮ್ಮನ ಕೈಯಲ್ಲಿಯ ಹಾಲಿನ ಪಾತ್ರೆಯನ್ನು ಕಾಲಿ ಲೊದ್ದು ಕೆಡವಿದರು. ಪಾಪ, ಪ್ರದ್ಯುಮ್ಮ ನು ಹಾಗೆಯೇ ಎದ್ದವನೇ ನನ್ನ ಮನೆಗೆ ಬಂದು ಭೋಜನ ತೀರಿಸಿಕೊಂಡ ಬಳಿಕ, ಅವನು ಕಲಕತ್ತೆಗೆ ಹೋಗುವ ಸಿದ್ಧತೆ ಮಾಡಿಕೊಳ್ಳುವ ಹವಣಿಕೆಯಲ್ಲಿರುವನು.” ಈ ಸಮಾಚಾರವನ್ನು ಕೇಳಿ ಪರಮ ಸಾತ್ವಿಕರೂ ಪುತ್ರ ಪತ್ನಲರ ಆದ ಆ ಮಹಾಮಹೋಪಾಧ್ಯಾಯರ ಕಣ್ಣುಗಳಲ್ಲಿ ದುಃಖವಿಶುಗಳೊ ಬಂದವು. 44 ವಿಜಯಾ೦ದ್ರ, ಹೇಗಾದರೂ ಮಾಡಿ ಪ್ರದ್ಯುಮ್ಮ ನನ್ನು ನಮ್ಮ ಮನೆಗೆ ಕರೆದುಕೊಂಡು ಬಾ, ನಾವು ನಾಲ್ಕು ಸಮಾಧಾನದ ಮಾತು ಕೇಳಿ ಆ ಮಗುವನ್ನು ಒಡಂಬಡಿಸುವೆವು ( ತನ್ನ ಆಜ್ಞೆಯನ್ನು ಅವನಿಗೆ ತಿಳಿಸುವನು. ನನ್ನ ಮಾತಿಗೆ ಅವನು ತಮ್ಮ ಮನೆತನಕ ಬರುವನೋ ಇಲ್ಲವೋ ಹೇಳಲಾಗದು. ಪ್ರದ್ಯುಮ್ಮನು ಅತಿ ಶಯವಾಗಿ ಸಂತಪ್ಪನಾಗಿರುವನು.” ಏನೇ ಆಗಲಿ, ನಮ್ಮನ್ನು ಕಾಣದೆ ಕಲಕತ್ತೆಗೆ ಹೋಗಬೇಸದಂದು ಅವನಿಗೆ ನೀನು ಹೇಳುವಿಯಷ್ಟೆ?” ಎಂದು ಮಗನ ಮೇಲಿನ ವ್ಯಾಮೋಹ ಕ್ಯಾಗಿ ವಿದ್ಯಾಧೀಶರು ದಿನಕಂತೆ ಕೇಳಿದರು. ಮೂರನೆಯ ಪ್ರಹರವು ಮೂಾರಿ ಹೋಗಿದ್ದರೂ ಬೇಸಿಗೆಯ ಬಿಸಿಲಿನ ಪ್ರಖರತೆಯು ಎಳ್ಳಷ್ಟಾದರೂ ಕಡಿಮೆಯಾಗಿದ್ದಿಲ್ಲ.weavedಪುರ ಪಟ್ಟಣದ ರೇಲ್ವೆ ಸ್ಟೇಶನದ ಅಂಗಣದಲ್ಲಿ ಆಧಿಕಾರಿಗಳು ಒಳ್ಳೆ ಜೋಕೆಯಾಗಿ ಬೆಳೆ ಸಿದ ವೃಕ್ಷಗಳ ಛಾಯೆಯಲ್ಲಿದ್ದ ಬೆಂಚಿನ ಮೇಲೆ ಉದ್ವಿಗ್ನನಾದ ತರುಣ ನೋತ್ವನ ಹಣೆಗೆ ಕೈಯಿಟ್ಟುಕೊಂಡು ಕುಳಿತಿದ್ದನು. ಅವನು ಪ್ರದ್ಯುಮ್ಮನೇ ರಸಸಂಪನ್ನನೂ ದೃಢಾಂಗನ ತರುಣನೂ ಆಗಿರುವ ಪ್ರದ್ಯುಮ್ನನು ಮನಸ್ಸಿನ ಉದ್ಯೋಗಕ್ಕಾಗಿಯ ಬಿಸಿಲಿನ ತಾಪಕ್ಕಾಗಿಯೂ ಪ್ರಸ್ತನಾಗಿ ಕಲಿ ಅಲಿಪ್ತ ವಾದ ಪ್ರಮಸಂಯೋಗ 45 ಹಿಡುಕೊಂಡು ಕುಳಿತಿದ್ದನು ಪ್ರದ್ಯುಮ್ಮನು ಎಂಟು ವರುಷದವನಿರುವಾಗಲೇ ಅವನ ತಾಯಿಯು ತೀರಿಕೊಂಡಿದ್ದಳು ಆಪ್ತ ಬುದ್ಧನಾದ ಆ ಪೋರನಿಗೆ ಮಾತೃ ವಿಯೋಗದ ದುಃಖುವೆಲ್ಲಿ? ಯಾರು ಏನು ಆಡಿದರೂ ಅದರ ವ್ಯತ್ಯಾ ಸವು ಅವನಿಗಿಲ್ಲ ಒಳ್ಳೆ ಕೂಳು ನೀಡಿದರೂ ಅದು ಅವನಿಗೆ ಸ್ವಾದಿಷ್ಟವೇ, ಕೆಟ್ಟ ಕೂಳು ನೀಡಿದರೂ ಸ್ವಾದಿಷ್ಟವೇ ಮಲತಾಯಿಯು ಕ್ರುದ್ಧಳಾಗಿ ನಾಲ್ಕು ಪಟ್ಟು ಹೊಡೆದರ ಅದರ ಲಕ್ಷ್ಯ ಆವನಿಗಿಲ್ಲ ತಂದೆಯವರು ಪ್ರೇಮದಿಂದ ಅವನನ್ನು ಮುದ್ದಿ ಸಿದ್ಧರ ಸ್ವಾರಸ್ಯವೂ ಅವನಿಗೆ ತಿಳಿಯುತ್ತಿ ದಿಲ್ಲ. ಈ ದಿವಸ ಮಾತ್ರ ವಿಶ್ವವಿದ್ಯಾಲಯದ ಪದವೀಧರನಾದ ಪ್ರದ್ಯುಮ್ಮ ನಿಗೆ ಹಡೆದ ತಾಯಿಯ ನೆನಪಾಗಿ ಅವನು ಕಣ್ಣು ತುಂಬಾ ನೀರು ತಂದನು. ಅನೇಕರಿಗೆ ಆಶ್ರಯವನ್ನು ಕೊಡಲು ಸಮರ್ಥನಾಗಿದ್ದ ಆ ತರುಣನು ತಾಯಿ ಇಲ್ಲದ್ದಕ್ಕಾಗಿ ತಾನು ನಿರಾಶ್ರಿತನಾದೆನೆಂದು ವ್ಯಸನಪಟ್ಟನು ತಂದೆ ಯ ವರು ವಿದ್ಯಾದಾತೃಗಳು, ಮಮತಾಳುಗಳು, ತನ್ನ ಭೀಷ್ಠೆಯನ್ನು ಯಥೇಷ್ಟ ವಾಗಿ ಪೂರೈಸುವರು ಸರಿ; ಆದರೆ ತಾಯಿಲ್ಲದವನಿಗೆ ಗೃಹಸುಖವಿಲ್ಲ ಪ್ರದ್ಯು ಮನು ಹೀಗೆ ವಿಚಾರದಲ್ಲಿ ನಿಮಗ್ನನಾಗಿರುವಾಗ ವಿದ್ಯಾಧೀಶ ಪಂಡಿತ ರು ಅಫಿ ತರಾತುರಿಯಿಂದ ಮಗನನ್ನು ಹುಡುಕು ಹುಡುಕುತ್ತ ಅವನೆದುರಿನಲ್ಲಿ ಬಂದು ನಿಂತರು. ಪಿಶಾಪುರ ದೃಷ್ಟಿ ಹೊಂದಿದ ಕೂಡಲೆ ಈರ್ವರ ಕಣ್ಣು ಗಳಲ್ಲಿಯ ಅಶ್ರುಗಳು ತುಂಬಿ ಬಂದವು. ಪ್ರದ್ಯುಮ್ಮ ನು ಕಟನೆ ತನ್ನ ಸ್ಥಾನವನ್ನು ಬಿಟ್ಟಿದ್ದು ತಂದೆಯವರ ಕಾಲೆರಗಿ ಅಧೋಮುಖನಾಗಿ ನಿಂತು ಕೊಂಡನು, ವಿದ್ಯಾಧೀಶರು ಮಗನಿಗೆ ಮನೆಗೆ ಬಂದು ಎಷ್ಟು ಸರಿಯಾಗಿ ಹೇಳಿದರೂ ಪ್ರದ್ಯುಮ್ನನು ಮಾತಾಡದೆ ಸುಮ್ಮನೆ ನಿಂತುಕೊಂಡನು 45 ಆಗಲಿ, ಇದೊಂದು ನವದಿಂದ ನೀನು ದೇಶಸಂಚು ಮಾಡಿದೆ ಯಾದರೆ ನಿನಗೆ ಜಗತ್ತಿನ ಅನುಭವವು ಹೆಚ್ಚು ಬರುವದು. ಆದಷ್ಟು ಬೇಗನೆ ಮರಳಿ ಊರಿಗೆ ಬಾ, ನಿನ್ನ ಲಗ್ನ ಮಾಡಿ ನಿನ್ನನ್ನು ಪ್ರತ್ಯೇಕ ವಾಗಿ ಇಡುತ್ತೇವೆ. ನೀನು ಸಂಸಾರ ಸುಖದಲ್ಲಿದ್ದದ್ದು ಕಂಡರೆ ಸಾಕು ಸಹಸ್ರ ರೂಪಾಯಿಗಳ ನೋಟು ತೆಗೆದುಕೊ, ಮತ್ತೆ ಕೇಳಿದರೆ ಪತ್ರ ಬರೆ, ಕಳಿಸಿಕೊಡುತ್ತೇವೆ. ನೀನು ಪರಮ ಸದ್ಗುಣಿಯುತ, ನಿರ್ವ್ಯಸನಿಯ, ವಿನೀತನೂ, ಸ್ವಕುಲಾಚಾರಗಳ ಅಭಿಮಾನಿಯೂ ಆಗಿರುವದರಿಂದ ನೀನೆಲ್ಲಿಗೆ ಸಂಪೂರ್ಣ-ಕಥಗಳು ಹೋದರೂ ಮಾನ್ಯನೇ ಆಗುವಿ. ನಿನ್ನ ವಿಷಯವಾಗಿ ನಮಗೆ ಆಲೋಚನವಿಲ್ಲ, ವೃದ್ಧಾಪ್ಯದಲ್ಲಿ ನೀನಿಲ್ಲದೆ ನಮ್ಮ ಗತಿಯೇನಾಗುವದೊ ಕಾಣೆವು ತಿಳಿದ ವನೇ ಇರುವಿ ಹೆಚ್ಚಿಗೇನು ಹೇಳೋಣ? ” ಎಂದು ನುಡಿದು ವರ್ಚಸ್ವಿಗಳಾದ ಆ ಪಂಡಿತರು ಮತ್ತೆ ಕಣ್ಣಿಗೆ ನೀರು ತಂದರು, ತೀರ್ಥರೂಪರ ನಿಃಸೀಮವಾದ ವಾತ್ಸಲ್ಯವನ್ನು ಕಂಡು ಪ್ರದ್ಯುಮ್ಮ ನ ಅಂತಃಕರಣವಾದರೂ ಉಕ್ಕೇರಿ ಬಂದಿತು. *ರವು ಬಿಗಿದದ್ದರಿಂದ ಅವನ ಬಾಯಿಯಿಂದ ಮಾತುಗಳೇ ಹೊಘಚಲೊಲ್ಲವು, ಪಳಪಳನೆ ಉದುರುತ್ತಿರುವ ಕಣ್ಣೀರಿನ ದೊಡ್ಡ ದೊಡ್ಡ ಹನಿಗಳೇ ಅವನ ಉತ್ತರಗಳಾದವು

  • ಪ್ರದ್ಯುಮ್ಮ, ಯೋಚಿಸಬೇಡ ನಾವು ಸಂತೋಷದಿಂದ ನಿನಗೆ

ಸಂಚಾರಕ್ಕೆ ಹೋಗಲು ಅಪ್ಪಣೆ ಕೊಡುತ್ತೇವೆ. ಸದ್ಯಕ್ಕೆ ವಷ೯ರುತಿಂಗಳ ನೀ ನು ಯಥಾ ಸುಖವಾಗಿ ತಿರುಗಾಡಿ ಬರುವದೇ ವಿಹಿತವು ಕೂ{h ಭಾ ಎಂದು ಹೇಳಿ ತಂದೆಯವರು ಮಗನನ್ನು ಹರಿಸಿದರು, ಈ ಪ್ರದ್ಯುಮ್ಮ ವಂಡಿ, ಮುಂಬಯಿ ಪ್ರೊಫೆಸರ್ ಎಸ್‌ಯಿಟನ್ ಮಂಟ ಸಾಹೇಬರು ನಿಮ್ಮ ವಿಷಯವಾಗಿ ಒಳ್ಳೆ ಗೌರವದ ಅಭಿಪ್ರಾಯ ವನ್ನು ತಳೆದದ್ದು ಆಶ್ಚರ್ಯವಲ್ಲ, ನೀವು ನನ್ನ ಬಳಿಯಲ್ಲಿ ಅರ್ಧಶಾಸ್ತ್ರವನ್ನು ಕಲಿಯಲಾರಂಭಿಸಿ ನಕ್ಕೇ ತಿಂಗಳುಗಳಾಗಿದ್ದರೂ ರೂ ಒಮ್ಮೊಮ್ಮೆ ನೀವು ಮಾಡುತ್ತಿರುವ ನೈಪುಣ್ಯದ ಪೂರ್ವಪಕ್ಷಗಳಿಗೆ ಸಮರ್ಪಕವಾದ ಉತ್ತರ ಗಳನ್ನು ಕೊಡಬೇಕಾದರೆ ನನಗೆ ಪರಿಶ್ರಮ ಮಾಡಬೇಕಾಗುತ್ತದೆ. ಈಗ ನೀವು ಗಳಿಸಿಕೊಂಡಷ್ಟು ಜ್ಞಾನದಿಂದ ಅರ್ಥಶಾಸ್ತ್ರ ಪ್ರವೀಣರೆಂದು ನಿಮ್ಮನ್ನು ಕರೆಯಲು ಅಭ್ಯಂತರವಿಲ್ಲ. ಇನ್ನು ಮುಂದೆ ನಾನು ನಿಮಗೆ ಅರ್ಥಶಾಸ್ತ್ರದ ಗುರುವೂ ನೀವು ನನಗೆ ಸಂಸ್ಕೃತಾಧ್ಯಾಪಕರೂ ಆಗಿರತಕ್ಕದ್ದು, ನಿಮ್ಮ ತಂದೆಯವರು ಅದ್ವಿತೀಯರಾದ ಪಂಡಿತರೆಂದು ತರ್ಕವಾಗಿರದು ಹೇಳು ಆವರಲ್ಲಿ ಕಲಿತವರಾದ ನೀವು ಕೂಡ ಸಂಸ್ಕೃತದಲ್ಲಿ ಒಳ್ಳ ಗಟ್ಟಿಗರೆಂದು ನಮ್ಮ ಕಾಲೇಜದ ಶಾಸ್ತ್ರಿಗಳು ಒಪ್ಪಿಕೊಂಡಿದ್ದಾರೆ” ಎಂದು ಕಲಕತ್ತಾ ಕಾಲೇಜದ ಪ್ರಿನ್ಸಿಪಾಲರೆಂದರು. ಹೀಗೆ ಗುರುಶಿಷ್ಯರೀರ್ವರೂ ಪರಸ್ಪರರನ್ನು ಆಚರಿಸುತ್ತ ತಮ್ಮ ತಮ್ಮ ಬುವರು ಅಲಿಪ್ತ ವಾದ ಪ್ರೇಮಸಂಯೋಗ ವಾದ ವ್ಯಾಸಂಗಗಳನ್ನು ನಡಿಸುತ್ತೆ ಆನಂದದಲ್ಲಿದ್ದರು ಆದರೆ ಇನ್ನು ಮುಂದೆ ಪ್ರದ್ಯುಮ್ಮ ನ ಆಯುಷ್ಯ ಕ್ರಮದಲ್ಲಿ ವಿಲಕ್ಷಣವಾದ ಕ್ರಾಂತಿಯಾಗತಕ್ಕದ್ದಿತ್ತು, ತ್ರಿಗರ್ತ ಸಂಸ್ಥಾನಾಧಿಪತಿಗಳಾದ ಮಹಾರಾಜಾ ನಹುಷಸಿಂಹ ಬಹಾ ಧ್ವನವರು ಕಲಕತ್ತೆಗೆ ಬಂದಿದ್ದು ಹಿಂದುಸ್ಥಾನದಲ್ಲಿಯ ಇತಿಹಾಸ ಪ್ರಸಿದ್ಧ ಸ್ಥಳಗಳನ್ನೂ, ಪರಮ ರಮಣೀಯವಾಗಿರುವ ಬೇರೆ ಅನೇಕ ಸ್ಥಾನ ಗಳನ್ನೂ ನೋಡುವದಕ್ಕಾಗಿ ಅವರು ಸಕುಟುಂಬವಾಗಿ ಹೊರಡಬೇಕಾದ್ದರಿಂದ ಒಬ್ಬ ಚತುರನೂ, ವಿನೀತನೂ, ಕಾರ್ಯದಕ್ಷಮ್ಮ, ಒಳ್ಳೆ ವಿಶ್ವಾಸದವನ ಆಗಿರುವ ವ್ಯವಸ್ಥಾಪಕನ ಅವಶ್ಯಕತೆ ಅವರಿಗಿತ್ತು. ಕಲಕತ್ತಾ ಕಾಲೇಜಗ ಪ್ರಿನ್ಸಿಪಾಲರ ಬಳಿಗೆ ಹೋಗಿ ಮಹಾರಾಜರು ತಮಗೊಬ್ಬ ವ್ಯವಸ್ಥಾಪಕ ನನ್ನು ಗೊತ್ತು ಮಾಡಿಕೊಡಿರೆಂದು ಕೇಳಲಾಗಿ, ಅವರು ಪ್ರದ್ಯುಮ್ಮನ ಗುಣಾನುವಾದವನ್ನು ಬಹುಪರಿಯಾಗಿ ಮಾಡಿ ಅವನನ್ನು ಹೊರತುಪಡಿಸಿ ಇನ್ನೊಬ್ಬ ಯೋಗ್ಯನಾದ ವ್ಯವಸ್ಥಾಪಕನು ತಮಗೆ ಸಿಕ್ಕನೆಂದು ಪ್ರಿನ್ಸಿಪಾಲರು ಮಹಾರಾಜರಿಗೆ ಹೇಳಿದರು ಅನಾಯಾಸವಾಗಿ ದೇಶಸಂಚಾರ ಮಾಡುವ ಸುಖಕರವಾದ ಸಾಧನವು ತನಗೆ ಪ್ರಾಪ್ತವಾಗಿರಲು ಪ್ರದ್ಯುಮ್ಮನು ಸಂಡಲೆ ಒಪ್ಪಿಕೊಂಡು, ತ್ರಿಗರ್ತದ ಮುಖ್ಯ ಪಟ್ಟಣವಾದ ಶೃಂಗಾರಪುರಿಗೆ ಅವನು ಮಹಾರಾಜರೊಡನೆ ನಡೆದನು ಮಹಾರಾಜ ನಹುಷಸಿಂಹರ ಕುಟುಂಬದಲ್ಲಿ ಅವರ ರಾಣಿ ಯವರಾದ ಪ್ರಮಾದ ಹೃದಯಾದೇವಿಯಾ, ನವತರುಣಳಾದ ರಾಜಕುಮಾರಿ ಪ್ರೇಮ ಸುಂದರಿಯ, ಹನ್ನೆರಡು ವರುಷದ ಚಿಕ್ಕ ಯುವರಾಜನಾದ ರಘುವೀರ ಸಿಂಹನೂ ಹೀಗೆ ನಾಲ್ಕೆ ಜನರಿದ್ದರು. ಮಹಾರಾಜರಿಗೆ ಮಾತುಕಥೆಯಾಡುವಷ್ಟು ಮಾತ್ರಕ್ಕೆ ಇಂಗ್ಲಿಷ ಬರು ಇದ್ದರೂ ಅವರು ಬಹುಶ್ರು, ಒಳ್ಳೇ ವ್ಯವಹಾರಜ್ಞಾನಿಗಳೂ, ಉದಾರ ವಾದ ಮನಸ್ಸಿನವರು, ವಿದ್ಯಾಭಿಮಾನಿಗಳ ಆಗಿದ್ದರು. ರಾಣಿಯವರ ವಿಚಾರಗಳುಳ್ಳವರೂ, ಆದರಶೀಲರೂ ಹಿಂದೀ ಭಾಷೆಯಲ್ಲಿ ಓದು ಬರೆಯಲು ಬಲ್ಲವರೂ ಆಗಿದ್ದರು. ಕುಮಾರಿ ಪ್ರೇಮಸುಂದರಿಗೆ ಅವಳ ತೀಕ್ಷ್ಮವಾದ ಬುದ್ಧಿಗೆ ಉಚಿತ ದರೂ ಸುಸಂಸ್ಕೃತ

ಸಂಪೂರ್ಣ+ಕಥೆಗಳು ಪಾದ ತಕ್ಷಣವು ದೊರೆತಿತ್ತು. ಅಮೃತರಂಜನರಾಯನೆಂಬ ಪಂಡಿತನ ಮಗ ಘದ ಉರದಾರಂಜನೀ ಎಂಬ ವಿದುಷಿ ಯು ಪ್ರೇಮಸುಂದರಿಗೆ ಶಿಕ್ಷಕ ಇಾಗಿದ್ದು ಅವಳ ಕೈಯಲ್ಲಿ ಆ ರಾಜಕುಮಾರಿಯು ಇಂಗ್ಲಿಶ್, ಸಂಸ್ಕೃತ ಭಾಷೆಗಳ ಜ್ಞಾನವನ್ನು ಚನ್ನಾಗಿ ಮಾಡಿಕೊಂಡಿರುವದಲ್ಲದೆ ಗಾಯನ, ಚಿತ್ರ ಕಲೆಗಳನ್ನೂ ಇತಿಹಾಸ ನೀತಿಗಳನ್ನಾದರೂ ಚನ್ನಾಗಿ ಹೇಳಿಸಿಕೊಂಡಿದ್ದಳು, ಪ್ರೇಮ ಸುಂದ) ಕು ನಿಪುಣೆಯ ವಿನೋದಿನಿಯ ವಾತಾಪಿ ಗಳಲ್ಲಿ ಭಕ್ತಿಯುಳ್ಳ ' ಆಗಿದ್ದಳು. ಹೀಗೆ ಐಶ್ವರ್ಯಮಂಡಿತರ ವಿದ್ಯಾವಿಭೂಷಿ ಆಗಿ ಏವ ಆ ರಾಜಕುಟುಂ೩ 'ದರೊಡನೆ ದೇಶ ಸಂಚಾರವನ್ನು ಮಾಡಿ : ದಂಧ ಅಭ್ಯ ಭಾಭವು ಪ್ರದ್ಯುಮ್ಮ ನಿಗೆ ದೊರಕಿದ್ದು, ಪ್ರಸನ್ನ ಫಂಥ ಘನವಿದes ನಾವ ವ್ಯವಸ್ಥಾಪಕನ ಸಮಾಗಮದಿಂದ ರಾಜರ ಸಂಚಾರವ ಮೌಕರ್ಯ ವುಳ್ಳದ ಜ್ಞಾನ ಸಂದಗಳನ್ನೀಯುವದಾಗಿ ಆಬಿ ತಿಂದರಲ್ಲಿ ಸಂದೇಹವಿಲ್ಲ ಇವರು ಅಯೋಧ್ಯಾ, ಪಾಟಲೀ ಪುತ್ರ, ಕೌಶಾಂಬೀ, ಹಸ್ಸಿ ಒಪುರ, ಪ್ರತಿಷ್ಠಾನ ಮುಂತಾದ ನಾಮಶೇಷಗಳಾದ ಪ್ರಾಚೀನ ಕೆ.ಜಧಾನಿಗಳಲ್ಲಿದ್ದ ಸ್ಥಳಗಳನ್ನೂ, ದಿಲ್ಲಿ ಆಗ್ರಾ ಮುಂತಾದ ಗತ ವೈಭವಗದ ಏಜಧಾನಿಗಳ ಅವಶೇಷವಾದ ಸೌಂದರ್ಯಗಳನ್ನೂ, ಗಯಾ, ಕಾತೀ, ಮಥುರಾ ಮುಂತಾದ ಪವಿತ್ರವಾದ ಕ್ಷೇತ್ರಗಳನ್ನೂ, ಬಂಗಾಲ, ಕಾಶ್ಮೀರ ಮುಂತಾದ ಸೃಷ್ಟಿ ಸೌಂದರ್ಯಪೂರಿತವಾದ ದೇಶಗಳನ್ನೂ ನೋಡುತ್ತ ಸಾವಕಾಶವಾಗಿ ನಡೆದಿ ದ್ದರು ಹೋದ ಹೋದ ಸ್ಥಳದ ಇತಿಹಾಸವನ್ನೂ, ಅಲ್ಲಿಯ ವಳಚೆಳೆಗಳ ಸಂಗತಿಗಳನ್ನೂ, ಜನರ ನಡೆನುಡಿಗಳ ಪ್ರಗತಿಗಳನ್ನೂ ಪ್ರದ್ಯುಮ್ಮನು ಮೊದಲೇ ಸಂಕಲಿಸಿ ಇಟ್ಟು ನಾಳಿನ ಊರಿನ ಸಾಮಾನ್ಯವಾದ ವರ್ಣನೆ ಯನ್ನು ಇಂದೆಯೇ ತನ್ನ ಯಜಮಾನರ ಕುಟುಂಬದವರಿಗೆ “ಇಡುತ್ತಿದ್ದ ಮ. ತಾಜಮಹಾಲಿನಂಥ ಅತಿ ರಮಣೀಯವಾದ ಮಹಾಮಂದಿರದ ಶೋಭೆ ಯನ್ನು ಅವಲೋಕಿಸುವಾಗ ಆಗ, ಪ್ರಯಾಗದಂಥ ಮಹಾನದಿಗಳ ಸಂಗ ಮದ ಆ೮ ಕಿಕವಾದ ನೋಟವನ್ನು ನೋಡುವಾಗಳಾಗಲಿ, ಅಶೋಕ ಚಕ್ರ + * ಅಲಿಪ್ತ ವಾದ ಪ್ರೇಮಸಂಯೋಗ 2 ವರ್ತಿಯ ಶಿಲಾಶಾಸನಗಳನ್ನು ಒಡೆದು ಓದುವಾಗಲಾಗಲಿ ಪ್ರೇಮಸುಂದ ರಿಯು ಪ್ರದ್ಯುಮ್ನನ ಸಮಾಜದಲ್ಲಿ ನಿಂತು ಅನೇಕ ಪ್ರಶ್ನೆಗಳನ್ನು ಮಾಡಿ ತನ್ನ ಜಿಜ್ಞಾಸೆಯನ್ನು ತೃಪ್ತಿ ಪಡಿಸಿಕೊಳ್ಳುತ್ತಿದ್ದಳು ಆಯಾ ಸ್ಥಳಗಳ ವತ್ಥನೆ ಯನ್ನು ಪೂರ್ವ ಕವಿಗಳಾದ ಕಾಳಿದಾಸ ಪ್ರಕೃತಿಗಳು ಮಾ ' ದ್ದಾಗಿದ್ದರೆ ಪ್ರದ್ಯುಮ್ಮ ನು ಸಮಯೋಚಿತವಾಗಿ ಆ vಾವ್ಯಗಳಲ್ಲಿಯು ಶ್ಲೋಳಗಳನ್ನು ಉದಹರಿಸಿ ಬಹು ರಮ್ಯವಾಗಿ ವರ್ಣಿಸುತ್ತಿದ್ದನು ಇತಿಹಾಸಕಾರರ ಗ್ರಂಥ ಗಳಲ್ಲಿ ಅವತರಣಿಕೆಗಳನ್ನು ಪ್ರ ಸ೦ಗೆ ಗುಸಾರವಾಗಿ ಐವನು ಓದಿನೇಳು ಆದ್ದನು. ಅಲ್ಲಲ್ಲಿ ಮೊದಲು ಆಳಿ.: ತ ದ ರುಜರ ಚಿತ್ರಗ ಎಳ್ಳ, ಪುಸ್ತಕ ಗಳನ್ನು ತೆರೆದು ಅಕಬರ, ಜಹಂಗೀತ, ನೂರಜಹನ, ಶಿವಾಜಿ ತೊಡಕ ಮಲ್ಲ, ಜಯಸಿಂಹ ಮುಂತಾದ ಮಹಾತ್ಮರ ಚಿತ್ರಗಳನ್ನು ತೋರಿಸಿ ಅವರವರ ಜೀವನಚರಿತ್ರಗಳನ್ನು ಸಂಕ್ಷಿಪ್ರವಾಗಿ ಹೇಳುವನು ಪ್ರದ್ಯುಮ್ಮನ ಜ್ಞಾನಭಂಡಾರವನ್ನೂ, ಅವನ ವಾಕ್ಯಾಶುವನ್ನೂ, ಅವನ ಏನಯವನ, ತಾರುಣ್ಯದ ಪ್ರಭೆಯಿಂದ ಕೂಡಿದ : ವನ ಸುಂದರ ವಾದ ಮುಖದ ವರ್ಚಸ್ವವನ್ನೂ ಕಂಡು ಅಬಲೆಯಾದ ಪ್ರೇರಸುಂದರಿಯು ಆಗಾಗ್ಗೆ ಕೌತುಕಪಡುವಳು. ಈ ಆವಲೋಕನಾರ್ಧಿಗಳ ಮೇಳ ಯು ಆm ಪಟ್ಟಣದಲ್ಲಿರುವ ಅಕಬರನ ದಿವಾನ್ ಈ ಆಮ್ ವೆಂಬ ಮಂದಿರದಲ್ಲಿ ನಿಂತು ನೋಡುತ್ತಲೂ ಮಾತಾಡುತ್ತಲೂ ಇರುವಾಗ ಪ್ರೇಮಸುಂದ), ಪ್ರದಾ ಮೃ ನನ್ನು ಕುರಿತು ಈ ಹಂಡಿಜೀ, ಈ ಸುದಿರದಲ್ಲಿ ನಿಮ್ಮ ಸೈು ಭಯ?ಬರ ಬಾದಶಹರು ಕಂಡದ್ದಾಗಿದ್ದರೆ ಅವಳು ನಿಶ್ಚಯವಾಗಿ ನಿಮ್ಮನ್ನು ತಮ್ಮ ವಜೀರನನ್ನಾಗಿ ಮಾಡಿಕೊಳ್ಳುತ್ತಿದ್ದರು, ” ಎಂದು ನುಡಿದು ವಿನೋದ ಮಾಡಿವಳು. ಈ ಚಮತ್ತು ವಿವಾದ ಕಲ್ಪನೆಗೆ ಎಲ್ಲರೂ ನಕ್ಕಳು. ಹೀಗೆ ಪ್ರದ್ಯುಮ್ಮನು ಆ ರಾಜಮನೆತನದವರಿಗೆಲ್ಲರಿಗೂ ಬೇಕಾದವನೂ, ಅವರ ಆದರಕ್ಕೆ ಪಾತ್ರನ, ಅವರ ವಿಶ್ವ ಸಂಧಾನನೂ ಆಗಿದ್ದರಿಂದ ಅವನು ಕಣ್ಣು ಮುತೆಯಾದರೆ ಅವರ ಮನಸ್ಸಿಗೆ ಸಮಾಧಾನವಿರುತ್ತಿಲ್ಲ, ಪ್ರವಾಸವು ತೀರಿದ ಬಳಿಕ ರಾಜು ನಡುಷಸಿಂಹರು ಪ್ರದ್ಯುಮ್ಮ ನನ್ನು “ಅತ್ಯಾಗ್ರಹದಿಂದ ತಮ್ಮ ಕಾರ್ಯದರ್ಶಿಯನ್ನಾಗಿ ಮಾಡಿ ಇಟ್ಟುಕೊಂಡರು. ತಿಂಗಳು ಐನೂರು ರೂಪಾಯಿಯ ಸಂಬಳವುಳ್ಳ ಉದ್ಯೋಗವನ್ನು ಬಿಟ್ಟು ಸಂಪೂರ್ಥಿಕಗಳು ಕೊಡುವದೂ, ರಾಜಕುಟುಂಬದವರೆಲ್ಲರೂ ತನ್ನ ಮೇಲೆ ಮಾಡುತ್ತಿರುವ ಮಮತೆಯನ್ನು ನೆನೆದು, ಅವರ ಮಾತು ಮರಿಯುವದೂ ಸುಮ್ಮನಿಂದ ಆಗಲಿಲ್ಲ. ಇತ್ತ ತಂದೆಯವರಾದ ವಿದ್ಯಾಧೀಶರು ಆಗ್ರಹದೊಂದಿಗೆ ಮಗನಿಗೆ ಊರಿಗೆ ಬಾರೆಂದು ಬರೆಯುತ್ತಿದ್ದರು. ಪ್ರದ್ಯುಮ್ಮ ನ ವಿವಾಹವನ್ನು ಮಾಡುವ ಕರ್ತವ್ಯದ ಭಾರವು ಅವರ ಮೇಲೆ ದುಃಸಹವಾಗಿ ಕುಳಿ ಇದ್ದರಿಂದ ಅವರು ಅನೇಕ ಜನ ವಧುಗಳ ಭಾವಚಿತ್ರಗಳನ್ನು ತೆಗಿಸಿ ಪ್ರದ್ಯುಮ್ಮನೆ ಒಪ್ಪಿಗೆಗಾಗಿ ಕಳಿಸುತ್ತಿದರು. ಆದರೆ ಪ್ರಗತಿ ಮಾರ್ಗಾನುಗಾಮಿಯಾವ ಪ್ರದ್ಯುಮ್ಮ ನು ತನ್ನ ವಿವಾಹದ ಭಾರವು ಕೇವಲ ತನ್ನ ತಂದೆಯವರ ಮೇಲೆ ಎಳ್ಳರ್ಷ ಇರಬ ಆ ಕಾರ್ಯವು ಕೇವಲ ತನ್ನದೇ ಎಂದ, ಅದನ್ನು ತನ್ನ ಇಷ್ಟವಿದಗ ತುನು ನೆರವೇರಿಸತಕ್ಕವನೆಂದೂ ಅಭಿಪ್ರಾಯವನ್ನು ತಿಳಿಸಿದ್ದನು. ಆದ** ತಂದೆಮಕ್ಕಳ ನಡುವೆ ಆಂಚೆಘಂತಿಗಳ ದ್ವಾರವಾಗಿ ವಾಗ್ಯುದ್ಧವು ನಡೆದು ಕಡೆಗೆ ವಿದ್ಯಾಧೀಶರೇ ಸೋತವರಾಗಿ ಮಗನೊಡನೆ ಒಪ್ಪಂದ ಮಾಡಿ cಡರು ಶೃಂಗಾರಪುರದ ಅರಮನೆಯ ಉಪ್ಪರಿಗೆಯ ಒಂದು ಭಾಗದಲ್ಲಿ ಅಕ್ಕ ಜರ್ಶಿಯಾದ ಪ್ರದ್ಯುಮ್ಮನ ಕಚೇರಿಯಾಗತಕ್ಕದ್ದಾಯಿತು. ಅನಲಸನ, ದಕ್ಷನೂ, ಚತುರನ ಆದ ಆ ನವತರು ಏನಿಗೆ ಕಾರ್ಯಭಾರದ ಬೇಸರ ವೆಷ್ಟು ಮಾತ್ರವೂ ಆಗಿರಲಿಲ್ಲ, ಬರೆಬರೆಯುವಾಗ ಅವನು ಉಳಹದಿಂದ ಒಮ್ಮೊಮ್ಮೆ ಮಧುರವಾದ ರಾಗ ಮಾಡುವನು. ಒಂದು ಪ್ರಕರಣವನ್ನು ಬರೆದು ಮುಗಿಸಿದ ಕೂಡಲೆ 44 ನಿಮಗಪ್ಪಣೆ ! ” ಎಂದು ಈ ಪ್ರಕರಣವನ್ನು ಒತ್ತಟ್ಟಿಗಿರಿಸಿಬಿಡುತ್ತಿದ್ದನು. ದಿನಾಲು ಒಂದು ಪ್ರಹರ ಮಾತ್ರ ದುಡಿಬಾ ಯಿತು, ಪ್ರದ್ಯುಮ್ಮ ನ ಕೆಲಸವು ಮುಗಿದುಹೋಗುತ್ತಿತ್ತು. ಉಳಿದ ವೇಳೆಯಲ್ಲಿ ಅವನು ಕಾವ್ಯ, ನಾಟಕಗಳನ್ನು ಓದುವದರಲ್ಲಿಯ, ವರ್ಗಮಾನಪತ್ರಗಳನ್ನು ನಿರೀಕ್ಷಿಸುವದರಲ್ಲಿಯ, ಹಾಡಿ ಬಾರಿಸುವದರಲ್ಲಿ ನಿರತನಾಗಿ ದ್ದನು. ಆದರೂ ರಾಣಿಯವರು ಒಂದು ಕೆಲಸವನ್ನು ಹೇಳಿದರೆ ಸಿದ್ಧನೇ; ಮಹಾರಾಜರೊಡನೆ ಆಲೋಚನೆಗೈಯುವದರಲ್ಲಿ ಅವನು ತಕ್ಷರನೇ. ಪ್ರೇಮಸುಂದರಿಯ ಅವಳ ಅಧ್ಯಾಪಕಳಾದ ಶಾರದಾದbಜನಿಯು ತಮ್ಮ ತಮ್ಮ ವ್ಯಾಸಂಗಗಳಲ್ಲಿ ಆಗಾಗ್ಗೆ ಪ್ರದ್ಯುಮ್ನ ಅಭಿಪ್ರಾಯವನ್ನು ಅಲಿಪ್ತ ವಾದ ಪ್ರೇಮಸಂಯೋಗ ಕೇಳಿಕೊಳ್ಳುತ್ತಿದ್ದರು. ಗಾನಗಳ ಸ್ವರಸಂಯೋಗದಲ್ಲಿ ಆ ಗುರುಶಿಷ್ಯರಲ್ಲಿ ಮತಭೇದ ಬಂದಾಗ ಪ್ರದ್ಯುಮ್ಮನೇ ನಿರ್ಣಯವನ್ನು ಕೊಡುವನು. ಹೀಗಾಗಿ ಯಾವ ಮಾತಿನಲ್ಲಿಯಾಗಲಿ, ಯಾವ ವಿಷಯದಲ್ಲಿಯಾಗಲಿ ಆ ಅರಮನೆ ಯಲ್ಲಿ ಪ್ರದ್ಯುಮ್ನ ಅಭಿಪ್ರಾಯ ವೇ ಪ್ರಮಾಣವಾಗಿತ್ತು, ಪ್ರದ್ಯುಮ್ಮ ನ ವಿದ್ಯಾಚಾತುರ್ಯಗಳನ್ನು ಕಂಡು, ಪ್ರೇಮ ಸುಂದರಿಗೆ ಕೌತುಕವಾಗಿತ್ತು ಆವನ ವಿನ ಯಶಾಲೀನತೆ ಸೌಜನ್ಯಗಳನ್ನು ಕಂಡು ಆದರವೂ ಅವನ ಚತುರೋಕ್ತಿಗಳನ್ನು ಕೇಳಿ ವಿನೋದವೂ, ಅವನ ಅಪ್ರತಿಮ ವಾದ ಸೌಂದರ್ಯವನ್ನು ಕಂಡು ಹರ್ಷವೂ ಆ ನವತರುಣಿಗೆ ಆಗುತ್ತಿರು ವದು ಸಹಜವೇ, ಆದರೆ ಬರಬರುತ್ತೆ ಪ್ರದ್ಯುಮ್ಮ ನನ್ನು ತಾನು ಬಹಳೊ ತಿನ ವರೆಗೆ ಕಾಣದಿದ್ದರೆ ಅವಳ ಜೀವಕ್ಕೆ ಸಮಾಧಾನವಾಗದಂತಾಯಿತು. ಕೊಳ್ಳತಕ್ಕ ದುಕೂಲಗಳ ಜರತಾರಿಯನ್ನು ಪರೀಕ್ಷಿಸುವದಕ್ಕಾಗಲಿ, ತಾನು ತೆಗೆದಿದ್ದ ಚಿತ್ರ ಪಟದಲ್ಲಿಯ ದೋಷಗಳನ್ನು ತೋರಿಸಿಕೊಡುವದಕ್ಕಾಗಲಿ, ಇನ್ನೊಂದು ನವಕ್ಕಾಗಲಿ, ಪ್ರೇಮ ಸುಂದರಿಯು ಪ್ರದ್ಯುಮ್ಮನನ್ನು ತನ ಬಳಿಗೆ ಕರೆಸಿಕೊಂಡು ಅವನೊಡನೆ ನಾಲ್ಕು ಮಾತಾಡಿ ಕಳಿಸಿಕೊಡುತ್ತಿದ್ದಳು, ಇವೆಲ್ಲ ಪ್ರೇಮಸಮುದ್ಗತಿಯ ಚಿನ್ಮಗಳೇನು ? ಇನ್ನು ಹೇಳಲಾಗದು. ಕಾಲ್ಪನಿಕವಾದ ಸಮಾಜಸ್ಥಿತಿಯ ಅತಿ ಶ್ರೇಷ್ಠವಾದ ಇರುವಿಕೆಯಲ್ಲಿ ವಿಹಾರ ಮಾಡುತ್ತಿರುವವನಾದ ಪ್ರದ್ಯುಮ್ಮ ನ ಮನಸ್ಸಿನಲ್ಲಿ ಅನಂಗನ ಸಂಚಾರವು ಸಹಸಾ ಆಗುವಂತಿಲ್ಲವೆಂದಿಷ್ಟು ಮಾತ್ರ ಹೇಳಲು ನಾವು ಸಮರ್ಥರಿರುತ್ತೇವೆ. ಈ ಪ್ರಕಾರವಾಗಿ ಕೆಲವು ದಿವಸಗಳು ಕಳೆದವು. ಬರಬರುತ್ತೆ ಪ್ರದ್ಯುಮ್ಮನನ್ನು ಕಂಡರೆ ಪ್ರೇಮ ಸುಂದರಿಯ ಮನಸ್ಸಿನಲ್ಲಿ ಲಜ್ಜೆಯು, ಮಃಖವಲ್ಲಿ ಈಷತ್ ಮಂದಹಾಸವೂ, ಅವನನ್ನು ಮಾತಾಡಿಸಲು ಹೃದಯ ದಲ್ಲಿ ಆಧೈರ್ಯವೂ ಕೊರಭಾರಂಭಿಸಿದವು ಆದರೆ ಈ ಹೆಚ್ಚು ಕಡಿಮೆಗೆ ೪ಾಗಿರುವದನ್ನಾಗಲಿ, ಅನೇಕ ಉಂಟಾದವೆಂಬದರ ಕಾರಣಗಳ ವಿಚಾರವತಿ ಗಳಿ ಕಲ್ಪ ಮಾತೃಷ್ಟಿಯಲ್ಲಿ ನಡೆದಾಡುವ ಪ್ರದಮ್ಮ ನ ಅವಲೋಕನದಲ್ಲಿ ಬರಲಿಲ್ಲ ಪ್ರದ್ಯುಮ್ಮನ ಗೌರವರ್ಣದ ಕಾಂತಿಯ, ಸೌಷ್ಟವವುಳ್ಳ ಅವನ ದೇಹದ ಜಾರ್ಥ್ಯವೂ, ನಯನ ಮನೋಹರವಾಗಿರುವ ಅವನ ಸುಂದರವಾದ ಪುಟ:ತೊಳೆದ ಮುತ್ತು.pdf/೪೮ ಪುಟ:ತೊಳೆದ ಮುತ್ತು.pdf/೪೯ ಪುಟ:ತೊಳೆದ ಮುತ್ತು.pdf/೫೦ ಪುಟ:ತೊಳೆದ ಮುತ್ತು.pdf/೫೧ ಪುಟ:ತೊಳೆದ ಮುತ್ತು.pdf/೫೨ ಪುಟ:ತೊಳೆದ ಮುತ್ತು.pdf/೫೩ ಪುಟ:ತೊಳೆದ ಮುತ್ತು.pdf/೫೪ ಪುಟ:ತೊಳೆದ ಮುತ್ತು.pdf/೫೫ ಪುಟ:ತೊಳೆದ ಮುತ್ತು.pdf/೫೬ ಪುಟ:ತೊಳೆದ ಮುತ್ತು.pdf/೫೭ ಪುಟ:ತೊಳೆದ ಮುತ್ತು.pdf/೫೮ ಪುಟ:ತೊಳೆದ ಮುತ್ತು.pdf/೫೯ ಪುಟ:ತೊಳೆದ ಮುತ್ತು.pdf/೬೦ ಪುಟ:ತೊಳೆದ ಮುತ್ತು.pdf/೬೧ ಪುಟ:ತೊಳೆದ ಮುತ್ತು.pdf/೬೨ ಪುಟ:ತೊಳೆದ ಮುತ್ತು.pdf/೬೩ ಪುಟ:ತೊಳೆದ ಮುತ್ತು.pdf/೬೪ ಪುಟ:ತೊಳೆದ ಮುತ್ತು.pdf/೬೫ ಪುಟ:ತೊಳೆದ ಮುತ್ತು.pdf/೬೬ ಪುಟ:ತೊಳೆದ ಮುತ್ತು.pdf/೬೭ ಪುಟ:ತೊಳೆದ ಮುತ್ತು.pdf/೬೮ ಪುಟ:ತೊಳೆದ ಮುತ್ತು.pdf/೬೯ ಪುಟ:ತೊಳೆದ ಮುತ್ತು.pdf/೭೦ ಪುಟ:ತೊಳೆದ ಮುತ್ತು.pdf/೭೧ ಪುಟ:ತೊಳೆದ ಮುತ್ತು.pdf/೭೨ ಪುಟ:ತೊಳೆದ ಮುತ್ತು.pdf/೭೩ ಪುಟ:ತೊಳೆದ ಮುತ್ತು.pdf/೭೪ ಪುಟ:ತೊಳೆದ ಮುತ್ತು.pdf/೭೫ ಪುಟ:ತೊಳೆದ ಮುತ್ತು.pdf/೭೬ ಪುಟ:ತೊಳೆದ ಮುತ್ತು.pdf/೭೭ ಪುಟ:ತೊಳೆದ ಮುತ್ತು.pdf/೭೮ ಪುಟ:ತೊಳೆದ ಮುತ್ತು.pdf/೭೯ ಪುಟ:ತೊಳೆದ ಮುತ್ತು.pdf/೮೦ ಪುಟ:ತೊಳೆದ ಮುತ್ತು.pdf/೮೧ ಪುಟ:ತೊಳೆದ ಮುತ್ತು.pdf/೮೨ ಪುಟ:ತೊಳೆದ ಮುತ್ತು.pdf/೮೩ ಪುಟ:ತೊಳೆದ ಮುತ್ತು.pdf/೮೪ ಪುಟ:ತೊಳೆದ ಮುತ್ತು.pdf/೮೫ ಪುಟ:ತೊಳೆದ ಮುತ್ತು.pdf/೮೬ ಪುಟ:ತೊಳೆದ ಮುತ್ತು.pdf/೮೭ ಪುಟ:ತೊಳೆದ ಮುತ್ತು.pdf/೮೮ ಪುಟ:ತೊಳೆದ ಮುತ್ತು.pdf/೮೯ ಪುಟ:ತೊಳೆದ ಮುತ್ತು.pdf/೯೦ ಪುಟ:ತೊಳೆದ ಮುತ್ತು.pdf/೯೧ ಪುಟ:ತೊಳೆದ ಮುತ್ತು.pdf/೯೨ ಪುಟ:ತೊಳೆದ ಮುತ್ತು.pdf/೯೩ ಪುಟ:ತೊಳೆದ ಮುತ್ತು.pdf/೯೪ ಪುಟ:ತೊಳೆದ ಮುತ್ತು.pdf/೯೫ ಪುಟ:ತೊಳೆದ ಮುತ್ತು.pdf/೯೬ ಪುಟ:ತೊಳೆದ ಮುತ್ತು.pdf/೯೭ ಪುಟ:ತೊಳೆದ ಮುತ್ತು.pdf/೯೮ ಪುಟ:ತೊಳೆದ ಮುತ್ತು.pdf/೯೯ ಪುಟ:ತೊಳೆದ ಮುತ್ತು.pdf/೧೦೦ ಪುಟ:ತೊಳೆದ ಮುತ್ತು.pdf/೧೦೧ ಪುಟ:ತೊಳೆದ ಮುತ್ತು.pdf/೧೦೨ ಪುಟ:ತೊಳೆದ ಮುತ್ತು.pdf/೧೦೩ ಪುಟ:ತೊಳೆದ ಮುತ್ತು.pdf/೧೦೪ ಪುಟ:ತೊಳೆದ ಮುತ್ತು.pdf/೧೦೫ ಪುಟ:ತೊಳೆದ ಮುತ್ತು.pdf/೧೦೬ ಪುಟ:ತೊಳೆದ ಮುತ್ತು.pdf/೧೦೭ ಪುಟ:ತೊಳೆದ ಮುತ್ತು.pdf/೧೦೮ ಪುಟ:ತೊಳೆದ ಮುತ್ತು.pdf/೧೦೯ ಪುಟ:ತೊಳೆದ ಮುತ್ತು.pdf/೧೧೦ ಪುಟ:ತೊಳೆದ ಮುತ್ತು.pdf/೧೧೧ ಪುಟ:ತೊಳೆದ ಮುತ್ತು.pdf/೧೧೨ ಪುಟ:ತೊಳೆದ ಮುತ್ತು.pdf/೧೧೩ ಪುಟ:ತೊಳೆದ ಮುತ್ತು.pdf/೧೧೪ ಪುಟ:ತೊಳೆದ ಮುತ್ತು.pdf/೧೧೫ ಪುಟ:ತೊಳೆದ ಮುತ್ತು.pdf/೧೧೬ ಪುಟ:ತೊಳೆದ ಮುತ್ತು.pdf/೧೧೭ ಪುಟ:ತೊಳೆದ ಮುತ್ತು.pdf/೧೧೮ ಪುಟ:ತೊಳೆದ ಮುತ್ತು.pdf/೧೧೯ ಪುಟ:ತೊಳೆದ ಮುತ್ತು.pdf/೧೨೦ ಪುಟ:ತೊಳೆದ ಮುತ್ತು.pdf/೧೨೧ ಪುಟ:ತೊಳೆದ ಮುತ್ತು.pdf/೧೨೨ ಪುಟ:ತೊಳೆದ ಮುತ್ತು.pdf/೧೨೩ ಪುಟ:ತೊಳೆದ ಮುತ್ತು.pdf/೧೨೪ ಪುಟ:ತೊಳೆದ ಮುತ್ತು.pdf/೧೨೫ ಪುಟ:ತೊಳೆದ ಮುತ್ತು.pdf/೧೨೬ ಪುಟ:ತೊಳೆದ ಮುತ್ತು.pdf/೧೨೭ ಪುಟ:ತೊಳೆದ ಮುತ್ತು.pdf/೧೨೮ ಪುಟ:ತೊಳೆದ ಮುತ್ತು.pdf/೧೨೯ ಪುಟ:ತೊಳೆದ ಮುತ್ತು.pdf/೧೩೦ ಪುಟ:ತೊಳೆದ ಮುತ್ತು.pdf/೧೩೧ ಪುಟ:ತೊಳೆದ ಮುತ್ತು.pdf/೧೩೨ ಪುಟ:ತೊಳೆದ ಮುತ್ತು.pdf/೧೩೩ ಪುಟ:ತೊಳೆದ ಮುತ್ತು.pdf/೧೩೪ ಪುಟ:ತೊಳೆದ ಮುತ್ತು.pdf/೧೩೫ ಪುಟ:ತೊಳೆದ ಮುತ್ತು.pdf/೧೩೬ ಪುಟ:ತೊಳೆದ ಮುತ್ತು.pdf/೧೩೭ ಪುಟ:ತೊಳೆದ ಮುತ್ತು.pdf/೧೩೮ ಪುಟ:ತೊಳೆದ ಮುತ್ತು.pdf/೧೩೯ ಪುಟ:ತೊಳೆದ ಮುತ್ತು.pdf/೧೪೦ ಪುಟ:ತೊಳೆದ ಮುತ್ತು.pdf/೧೪೧ ಪುಟ:ತೊಳೆದ ಮುತ್ತು.pdf/೧೪೨ ಪುಟ:ತೊಳೆದ ಮುತ್ತು.pdf/೧೪೩ ಪುಟ:ತೊಳೆದ ಮುತ್ತು.pdf/೧೪೪ ಪುಟ:ತೊಳೆದ ಮುತ್ತು.pdf/೧೪೫ ಪುಟ:ತೊಳೆದ ಮುತ್ತು.pdf/೧೪೬ ಪುಟ:ತೊಳೆದ ಮುತ್ತು.pdf/೧೪೭ ಅನ್ಯಳೊರ್ವಳು ಅದೇ ವ್ರತವನ್ನು ಮಾಡಿದರೆ, ಆ ದೇವನು ಗಿರಿರಾಯ ನನ್ನೊಯ್ದು ಅನ್ಯಳ ಸ್ವಾಧೀನ ಮಾಡಿದನೇ! ನಾ ಮಾಡಿದ ಕರ್ಮ ಬಲವಂತನಾದರೆ, ನೀ ಮಾಡುವದೇನೋ ಸರಿಯೇ' ಎಂದು ಹರಿದಾಸರು ಹೇಳಿದ್ದು ಸಟಿಯೇ ?

ಕರ್ಮಧರ್ಮ ಸಂಯೋಗದಿಂದೆ ಗಿರಿರಾಯನಿದ್ದ ಊರಿಗೆ ಡೊಂಬರಾಟ ಬಂದಿತು ಅವರಲ್ಲಿ ಓರ್ವ ಮೋಹನಾಂಗಿಯಾದ ಯುವತಿಯ ಬಹು ಚಮತ್ಕಾರವಾದ ಆಟಗಳನ್ನುಡಿ ತೋರಿಸುತ್ತಿದ್ದಳಾದ್ದರಿಂಜೆ ಆ ಡೊಂಬರಾಡಂಬರಕ್ಕೆ ಬಹುಜನರು ಮೊಣಹಿತರಾಗಿದ್ದರು. ಮಾನಪ್ಪನ ಗಿರಿರಾಯರ ಮನೆಗೆ ಬಂದು ಭಯರೇ, ಆ ಡೊಂಬನಿಯ ಆಟವನ್ನು ತಾವು ನೋಡದಿದ್ದರೆ ಹುಟ್ಟಿದ್ದು ಆಸಾರ್ಥವಾದಂತಾಗುವದೆಂದು ಹೇಳಿದನು ಕೇಳುವದೇನು ? ಆಟಕ್ಕೆ ಪ್ರಾರಂಭವಾಯಿತು ಹದಿನಾರು ವಗ್ರದ ಪ್ರಾಯದವಳಾದ ಆ ಚೊಂಬ ಸುಂದರಿಯು ಪಟ್ಟೆ, ಸೀತಾಂಬರವನ್ನು, ತಲೆಗೆ ಚಿತ್ರಮಯವಾದ ಜರದ ಟೊಪ್ಪಿಗೆಯನ್ನಿಟ್ಟು, ಅಂಥದಲ್ಲಿ ಹಿಡಿದಿರುವ ಹಗ್ಗದ ಮೇಲೆ ಇಟ್ಟಿರುವ ಹರಿವಾಣದಲ್ಲಿ ತನ್ನ ಕಾಲುಗಳನ್ನಿಟ್ಟು, ಹರಿವಾಣವನ್ನು ಸರಿಸುತ್ತೆ ತಳ್ಳಿ ಈಚೆಯ ತುದಿಯಿಂದ ಆಚೆಳು ತುದಿಗೆ ಹೋಗುತ್ತಿರುವಾಗ ನಭಾರಿಣಿಯಾದ ಊರ್ವಶಿಯಂತೆ ಕಂಡಳು, ಹಾಗೆ ನಡೆದಿರುವ ಈ ಒಯ್ಯಾರೆಯು ತನ್ನ ತೂಕವನ್ನು ಹಿಡಿದಿರುವವರಲ್ಲಿ ತದೇಕಚ್ಛಾನಳಾಗಿದ್ದರೂ ಆಗಾಗ ಘ ತೀವ್ರವಿಂದ ಕಟಾಕ್ಷದಿಂದ ಗಿರಿ ರಾಯನನ್ನು ನೋಡುತ್ತಿರಲು ಆ ಹಚ್ಚನು ಅವಳ ಮೋಹಪಾರ್ಶಲ್ಲಿ ಸಂಪೂರ್ಣವಾಗಿ ಸಿಕ್ಕನು.

ತಾರೆಯ ಪ್ರಾಯಶ್ಚಿತ್ತಕಗಿಯೇ ತಾನು ಆ ಡೊಂಬರ ಮೋಹಳವಾಚೆ ಬೊಂಬೆಯನ್ನು ವಶಮಾಡಿಕೊಳ್ಳವನೆಂದು ಹೇಳಿ ಗಿರಿಯನು ಬಳ್ಳಾರಿಯಲ್ಲಿಯ ಬಂಗಲೆಗಳನ್ನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ತಂದು ಅವಳೊಡನೆ ದುರ್ಶ್ಯಾಷಶವನ ಮಾಡಲಾರಂಭಿಸಿದನು. ಹರಕೆ ಹೊತ್ತು ಹಡೆದ ಮಗನು ಈ ರೀತಿ ದುಮಗಿಯಾಗಿ ಹಿರಿಯರ ಹೆಸರಿಗೆ ಜೀರಿನಂಥ ಕಲಂಕವನ್ನು ತಂದದ್ದಲ್ಲದೆ, ಮನೆಯ ಸಂಪತ್ತು ಈಡಾಡಿ ಸುಕುಮಾರಿಯಾದ ತನ್ನ ಸೊಸೆಯ ಸೌಖ್ಯಲತೆಗೆ ಬೆಂಕಿ ನಲ್ಲಾ ಎಂಬ ವ್ಯಸನದಿಂದ ಗಿರಿರಾಯನ ಕಾಯಿಯು ಹೃದ್ರೋಗವನ್ನು ತಗೆಲಿಸಿಕೊಂಡು ಸತ್ತು ಹೋದಳು. ಗಿರಿರಾಯನಿಗೆ ಇದೊಂದು ಹಿತವ ಆಯಿತು. ಆದರೆ ಪಾಹ, ವಿಶಾಲಾಕ್ಷಿಗೆ ಕಟ್ಟಡವಿಯಲ್ಲಿ ಕಣ್ಣು ಕಟ್ಟಿ ಬಿಟ್ಟಂತಾಯಿತು ಡೊಂಬತಿಯು ಮನೆಯಲ್ಲಿಯೇ ಬಂದು ಕುಳಿತಳು. ಎಲ್ಲ ಕಾರಭಾರವೂ ಅವಳ ಕೈಸೇರಿಹೋಯಿತು.

ವಿಶಾಲಾಕ್ಷಿಗೆ ತೀವ್ರವಾದ ಮಾನಹಾನಿಯ ವೇದನೆಯ ಬಿತ್ತು ತನ್ನ ದೇವಶಿಯಾದ ಪತಿಯ ಕವಾರ್ಗಿಯಾಗಿ ಕೆಟ್ಟು ಹೋಗುತ್ತಿರುವದನ್ನು ಅವಳು ಕಣ್ಣಿಲಿ ನೋಡಲಾರಳು. ಸಂಸಾರದ ಸುಖವಂತ ಅವಳಿಗೆ ಚಿಕ್ಕದಿನಲ್ಲಿಯೇ ಇಲ್ಲದಂತಾಯಿತು, ಅಸ್ಸರೆಯರಿಗಿಂತಲೂ ಮಿಗಿಲಾಗಿರುವ ಆ ನವಪರಿಣಿಯು ವ್ಯಸನಾತಿರೇಕದಿಂದ ಸೊರಗಿ ಕಡ್ಡಿ ಯಾದಳು, ಶಶಿಬಿಂಬದಂತಿ ಮನೋಹರವಾಗಿರುವ ಅವಳ ಮುಖವು ಹುಚ್ಚಿಟ್ಟು ಸುರಿಯಿತು. ಪತಿವ್ರತೆಯ ಧರ್ಮಶೀಲರೂ ಆಗಿರುವ ಆ ಸತಿಯ ನಿತ್ಯದಲ್ಲಿಯೂ ಬೊಗಸೆ ಬೊಗಸೆ ಕಣ್ಣೀರು ಸುರಿಸಿ ದೇವರಿಗೆ ಎಷ್ಟು ಸರಿಯಾಗಿ ಪ್ರಾರ್ಥಿಸಿದರೂ ಆ ನಿರ್ಗುಣನಾದ ಪರಮಾತ್ಮನಿಗೆ ಕರುಣೆ ಬರಲಿಲ್ಲ ಅವರ ಈ ಕುಲಾಂಗನೆಯು ಪತಿಯ ಆಜ್ಞೆಯನ್ನು ಬೊಗಸೆಯೊಡ್ಡಿ ಅಂಗೀಕರಿಸಿ ಸಮಾಧಾನದಿಂದಲೂ, ವಿನಯದಿಂದಲೂ ಹೇಳಿದಷ್ಟು ಕೆಲಸ ಮಾಡಿಕೊಂಡು ಇದ್ದಳು. ಅಮ್ಮಾ, ವಿಶಾಲಾಕ್ಷಿ, ನಿನ್ನ ವಾರ್ತೆಯನ್ನು ಕೇಳಿಯೇ ದುಃಖದಿಂದ ನಮ್ಮ ಗಂಟಲು ಬಿಗಿದುಬರ ೬ರಲು, ನೀನು ನಿನ್ನ ಪುಣ್ಯದ ಬಲದಿಂದಲೇ ಅವನ್ನೆಲ್ಲ ಸಹಿಸುತ್ತಿರುವಿಯಲ್ಲವೆ ?

ಇರಲಿ. ಗಿರಿರಾಯನು ಕಡೆಗೆ ತನ್ನ ಉಂಬಳಿಯ ಚಿನ್ನೂರು ಗ್ರಾಮವನ್ನು ಮದರಾಸಿನಲ್ಲಿಯ ಓರ್ವ ವರ್ತಕನಿಗೆ ಮಾರಿಕೊಂಡು ಊರು ಬಿಟ್ಟು ಹೊರಟಿದ್ದು ನಡೆದನು, ಇಂದು ನಾಳೆ ಊರಿಗೆ ಮರಳಿ ಬರುವನೆಂದು ವಿಶಾಲಾಕ್ಷಿಗೆ ಸುಳ್ಳು ಹೇಳಿ ಹೋದ ಗಿರಿರಾಯನು ಮರಳಿ ಬರಲೇ ಇಲ್ಲ.

ವರುಷಾರು ತಿಂಗಳುಗಳಲ್ಲಿಯೇ ಮನೆ ಮಾರಿದ ಹಣವೆಲ್ಲ ಹಾರಿ ಹೋಯಿತು. ಸರಕಾರದಿಂದ ತಿಂಗಳು ಇನ್ನೂರು ರೂಪಾಯಿ ಬರುವದನ್ನು ಅವನು ಆ ಡೊಂಬತಿಯ ಸ್ವಾಧೀನ ಮಾಡುವನಹಿ, ಅವಳು ಅದರಲ್ಲಿ ಹತ್ತು ರೂಪಾಯಿಗಳನ್ನು ಓರ್ವ ಅಡುಗಲಜ್ಜಿಗೆ ಕೊಟ್ಟು ಗಿರಿರಾಯನಿಗೆ 093 ಸಂಪೂರ್ಣ ಕಥೆಗಳು ಕೂಳು ಹಾಕಲು ಹೇಳಿ ಉಳಿದ ಹಣವನ್ನು ತನ್ನ ಸ್ಟೇಚ್ಛೆಯಿಂದ ವೆಚ್ಚ ಮಾಡುವಳು ಧನಹೀನನೂ ಅರ್ಥಾತ್ ತೇಜೋಹೀನನೂ ಆಗಿರುವ 18 ರಾಯನನ್ನು ಆ ಜಾತಿಗಾರತಿಯು ಪ್ರೀತಿಸದಾದಳು, ಆದರೂ ಆ ಮಧನು ಆ ಪಾಪ ಕರ್ಮಣೆಯ ಬಾಗಿಲಲ್ಲಿ ನಾಯಿ ಬಿದ್ದ೦ತ ಕಾದುಕೊಂಡು ಬಿದ್ದಿರುವನು, 14 ಇಲ್ಲಿ ನೋಡಬನ್ನಿರಿ : ಗಿರಿರಾಯನು ಒಂದು ಧರ್ಮಶಾಲೆಯಲ್ಲಿ ಹರಕು ಹಾಸಿನ ಮೇಲೆ ಮೇಹರೋಗದ ವೇದನೆಯಿಂದ ಎಥಿತನಾಗಿ ಹೊರಳಾಡುತ್ತಿರುವನು. ಅವನಿಗೆ ನೀರಡಿಕೆಯಾಗಿದೆ, ಬಾಯಿಯಲ್ಲಿ ನಾಲ್ಕು ಕಾಳು ನೀರು ಹಾಕುವವರಿಲ್ಲ. ತನ್ನ ಹೆಂಡತಿಯ ಸದುಣಗಳನ್ನೂ ಅವಳ ಪತಿಸೇವಾತತ್ಪರತೆಯನ್ನು ನೆನೆದು ವಿಶಾಲಾಕ್ಷಿ ! ವಿಶಾ ಆಕ್ಷೇ! ” ಎಂದು ಕೂಗಿ ಆಕ್ರನ.. ಆ ಸಮಯದಲ್ಲಿ ವಿಶಾಲಾಕ್ಷಿಯು ತನ್ನ ಪತಿಗೆ ಹಿತವಾಗಲೆಂದು ನೆಪಿಸಿ ತಿರುಪತಿಯ ವೆಂಕಟೇಶ್ವರನ ವಂದೆ ಇಳಿಯೊದ್ದಿಯನ್ನು ಟ್ಟು ಕೊಂಡು ಪ್ರಾಣಾಚಾರಿಯಾಗಿ ಬಿಟ್ಟಿದ್ದಳು, ಮದರಾಸಿನಲ್ಲಿ ಕೂಗುತ್ತಿರುವ ಗಂಡನ ಸೊಲ್ಲ, ಗಿರಿಯಲ್ಲಿ ಮುಗಿದ ವಿಶಾಲಾಕ್ಷಿ ಕಿವಿದೆರೆಗೆ ಬಿದ್ದಿತು. ಭಯ ಗ್ರಳಗಿ ಆ ಮಹಾ ಸತಿಯು ಕಪ್ಪರಿಸಿಕೊಂಡಿದ್ದು ನೋಡುತ್ತಾಳೆ, ಜಗ ನ್ಮಾತೆಯಾದ ಲಕ್ಷ್ಮೀದೇವಿಯು ಧಾವಿಸಿ ಬಂದು ಅವಳನ್ನು ಗಟ್ಟಿಯಾಗಿ ಮಗುವೆ, ಈ ಜನ್ಮದ ಸುಖವನ್ನು ನೀನು ಪರಮಾತ್ಮ ನಲ್ಲಿ ಬೇಡಿಕೊಂಡು ಬರಲ್ಲ, ಯತ್ನವೇನಿದೆ ? ಮುಂದಿನ ಜನ್ಮದಲ್ಲಿ ನಿನಗೆ ಅಖಂಡವಾದ ಸೌಭಾಗ್ಯವನ್ನೂ ಸಂಪತ್ತನ್ನೂ ಕೊಟ್ಟ ಬಳಿಕ ನಿನಗೆ ಮೋಕ್ಷವನ್ನು ಕೊಡುವೆನು, ” ಎಂದು ಹೇಳಿ ಲಕ್ಷ್ಮೀದೇವಿಯು ವಿಶಾಲಾ ಓದು ಪರಮ ಪವಿತ್ರವಾದ ಆತ್ಮವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಳು. ಇತ್ತ ಗಿರಿರಾಯನು ನೀರು ನೀರೆಂದು ಜೇಶಿಗನಂತ ಪ್ರಣಬಿಟ್ಟನು. ಅಪ್ಪಿಕೊಂಡಳು. C ದುರಾಶಾ ದುರ್ವಿಪಾಕ “ಒಳ್ಳೇದು, ಅವನನ್ನು ಒಳಗೆ ಬರಹೇಳ” ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನ- ಆಢತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು, ಬಾಗಿಲಲ್ಲಿ ನಿಂತಿದ್ದ ವೃದ್ಧಿ ಗುಮಾಸ್ತನು, ನಿಂತಲ್ಲಿಯೇ ಅನುಮಾನಿಸಿ ದಂತೆ ಮಾಡಿ, ಹಿಂದು ಮುಂದೆ ನೋಡಹತ್ತಿದನು ( ನಿಜವಾಗಿ ಕೇಳಿದರೆ, ನೀವು ಈಗ ಅವನ ಭೆಟ್ಟಿಯನ್ನೇ ತಕ್ಕೊಳ್ಳ ಬಾರದು ಎಂದು ತೋರುತ್ತದೆ ?” ಎಂದು ಆ ಗುಮಾಸ್ತನಿ ಅಂದನು ಬೆಟ್ಟ ಆಗಬಾರದೆ ? ಅದೇಕೆ ? * ಎಂದು ಪ್ರೇಮಚಂದನು ಯಾವದೋ ಹುಂಡಿಯನ್ನು ಒಂದು ಸಹಿ ಮಾಡ ಮಾಡುತ್ತ ಕೇಳಿದನು; 14 ನನಗಂತು ಅವನನ್ನು ಕಾಣದಿರುವದಕ್ಕೆ ಕಾರಣವನ್ನೂ ತೋರುವದಿಲ್ಲ.” 44 ಇರಲಿ, ಆದರೂ ... ಅವನು ತುಸುಮಟ್ಟಿಗೆ ರೇಗಿಸಿದ್ದಂತೆ ತೋರು ಇದೆ, ಯಾವಾಗಲಾದರೂ ಒಂದಿಲ್ಲೊಂದು ತಕರಾರಿನ ಸುದ್ದಿಯನ್ನಂತೂ ಅವನು ಆಡಲಿಲ್ಲವೆಂದು ನಾವಂದ ಕಂಡಿದ್ದೇವೆ ? ಅವನ ದುಃಖಗಳೆಲ್ಲವೂ ಕೇವಲ ಕಲ್ಪನಾಜಣ್ಯವೆಂಬುವದಂತೂ ನಿಮಗೆ ಗೊತ್ತೇ ಇದೆ ?? ಪ್ರೇಮಚಂದನು ಮtಂಬಯಿಯಲ್ಲಿಯದೊಂದು ಪ್ರಖ್ಯಾತವಾದ ಗಿರಣಿಯಲ್ಲಿಯ ಪಾಲುಗಾರನು. ಈ ಸಂಘವು - ಪ್ರೇಮಚಂದ ಗಾಯ ಚಂದ ಮತ್ತು ಸಸ್ಟ್ ' ಎಂಬ ಹೆಸರಿನಿಂದ ಪ್ರಸಿದ್ಧವಿತ್ತು, ಈ ಕಂಪನಿ ಯವರ ವಶದಲ್ಲಿ ನಾಲ್ಕೆಂಟು ಗಿರಣಿಗಳು ಇದ್ದವು ತನ್ನ ಗುಮಾಸ್ತನ ಮಾತು ಕೇಳಿ ಪ್ರೇಮಚಂದನು ಮುಗುಳುನಗೆ ನಕ್ಕನು ಈ ಕಲೆಯು ಅವನ ಆಯುಷ್ಯದೊಳಗಿನ ಐವತ್ತು ವರ್ಷಗಳ ಕಳೆಯನ್ನು ಹಿಮ್ಮೆಟ್ಟಿಸಿಕು, ಜನ್ಮ ಬೆಲ್ಲವೂ ವ್ಯಾಪಾರದ ವಿಶೇಷವಾದ ಚಾತುರ್ಯದಲ್ಲಿ ಕಳೆದವನ ನಗೆಯೇ ಆದು, ಅದರಲ್ಲಿ ಮನೋಭಾವವು ಮೇಲು ಮಳೆಯೇ ಕಾಣುತ್ತಿತ್ತೆಂದರೆ ಚಾತುರ್ಯದ ಲಕಲೇಶವಾದರೂ ಅಲ್ಲಿ ಹೇಗೆ ಕಂಡುಕೊಳ್ಳಬೇಕು ? ಮತ್ತೂ ಸಾವು ಎಂದಿನಿಂದ ನಮ್ಮಲ್ಲಿಯ ನೌಕರರ ತಕರಾರು 699 ಸಂಪೂರ್ಣ+ಕಥೆಗಳು ಗಳನ್ನು ಕೇಳಿಲ್ಲ?” ಎಂದು ಪ್ರೇಪುಚುವನು ಸ ವ ಶಾಶವಾಗಿ ನುಡಿದನು. 4 ಆಗಾಗ ಹೇಳುವವರ ಮಾತುಗಳನ್ನೆಲ್ಲ ಧರ್ನಿಚುರು ಕೇಳೇ ಕೇಳುತ್ತಿ ರುವದುಂಟು' ಎಂ ಡು ಆ ಮುದುಕನು ಅಂದನು, 41 ಆವತೆ ಯಶೋಧರನ ಆ ಗಂಟುಮೂತಿ ತುನ್ನೇ ನಾನು ನೋಡಲೆರೆ ಈಗ ಒಳಗೆ ಬಂದು ಮನಸ್ಸಿಗೆ ಬಂದಂತೆ ಅವನು ಮಾತನಾಡಲಿಕ್ಕಿಲ್ಲೆಂದು ನಾನೇನು ಹೇಳ ಛಾರೆ ೫ ಪ್ರೇಮಚಂದನು ನಕ್ಕನು. ( ಇದು ಅವರನ್ನು ಒಳಗಂತ ಬರ ಗೋಡು, ಹೂ, ಏನೂ ಅಡ್ಡಿ ಇಲ್ಲ, ಅವನು ಒಳ ಬರಲಿ ” ಎಂದು ಗುಮಾಸ್ತನಿಗೆ ಹೊರಗೆ ಹೋಗಲಪ್ಪಣೆ ಮಾಡಿದಂತೆ ಕ್ರೇಮಚ೦ದನು ಕೈ ಸನ್ನೆ ಮಾಡಿದನು 24 ಯಾಕಾಗವಲ್ಲದು” ಎಂದು ಅಂದ ತೆ ತಲೆ ಅಲ್ಲಾಡಿಸಿ ಗುಮಾಸ್ತನು, ಸರಾಫ ಕೂಡುವ ಸ್ಥಳದ ಮಗ್ಗಲಿಗಿದ್ದ ಬಿಗಿಲದಿಂದ ಹೊರಬಿದ್ದನು. ಇನ್ನೊಂದು ಕ್ಷಣದಲ್ಲಿ ಯಶೋಧನ ಪ್ರೇಮಚಂದನ ಕೋಣೆಯ ಬಾಗಿಲು ತೆರೆದು ಒಳಗೆ ಬಂದನು. ಯಶೋಧನು ಸಧಣ ಎತ್ತರವಾದ ಆಳು; ಎಲೆಕಟ್ಟು, ಇಷ್ಟು ಆಗಲಾದದ್ದಲ್ಲದಿದ್ದರಣ ಮೈ- ಕೈಗಳು ಹೂದಿಕಟ್ಟಾಗಿ ದ್ದೆವು. ಮತ್ತು ನವತ್ತೆರಡು ವರ್ಷದ ವಯಸ್ಸು. ಮುಖಚರ್ಯದ ಮೇಲಿಂದಲೂ ಔದಾಸೀನ್ಯಪೂರ್ಣವಾದ ಅವನ ಒಳನಟ್ಟ ಕಣ್ಣುಗಳ ಮೇಲಿಂದಲೂ, ತಲೆತುಂಬ ಇದ್ದ ಆ ಅರ್ಧಮರ್ಧ ಜಡೆಗಟ್ಟಿದ ಕೂದಲು ಗಳಿಂದಲೂ, ಮಲಿನವಾದ ಕಲ್ಲುಗಳು, ಆ ತರಿದ ಭಯ, ಇರಬೇಕಾ ದ್ದರಕಿಂತಲೂ ಸ್ವಲ್ಪು ಕೆಳಗೆ ಹಾಯ್ದು ಗದ್ದವೂ ಇವೆಲ್ಲವುಗಳನ್ನು ನೋಡು ವವರಿಗೆ ಅವನೇನೋ ಬುದ್ಧಿವಂತ 'ನಿರಬೇಕೆಂದು ತರ್ಕವಾಗುವಂತಿತ್ತು. ಆ ಬಾಗಿಲವನ್ನ ಮುಚ್ಚಿದವನೇ ಯಶೋಧರನು ಅದಕ್ಕೆ ಬೆನ್ನು ಕಟ್ಟು ನಿಂತುಕೊಂಡನು, ಎಂದೂ ಓಡಭಾರದವನು ಹೊಗಟeಡಿಯು ತನ್ನನ್ನು ಬಿಟ್ಟು ಮುಂದಕ್ಕೆ ಸಾಗಿ ಹಿಂದು ಒಳ್ಳೇ ಅವಸರದಿಂದ ಕೈಕಾಲು ಸಡಿಯ ಬಿಟ್ಟು ಓಡೋಡಿ ಹ್ಯಾಗೋ ಆ ಬಂಡಿಯನ್ನು ಮುಟ್ಟಿದವನಂತೆ ಇವನು ದೀರ್ಘ ಶ್ವಾಸ ಬಿಡುತ್ತಿದ್ದನು. ಹೊರಗೆ ಬಿಟ್ಟ ಉಸಿರು ಒಳಜಗ್ಗುವಾಗ ಅವನ ಕೈಬೆರಳುಗಳು ನಡುಗಿ ಒಳಸೇದಿಕೊಳ್ಳುತ್ತಿದ್ದವು. ಜುಳಾ ದರ್ನಿಶಕ CON 1ಜಯಗೋಪಾಳ, ಯಶೋಧರಾ, ಕೂತುಕ ” ಎಂದು ಪ್ರೇಮ ಚಂದನು ಮಧರನನ್ನು ನೋಡಿ, ಒಂದೆರಡು ನೋಟಗಳಲ್ಲಿಯೇ ಅವನ ಮನದಿಂಗಿತವನ್ನು ತಿಳಿದುಬಂಡವನಂತೆ ತನ್ನ ಆಸನದಲ್ಲಿ ಒಳ್ಳೆ ಸುಖ ಪೂರ್ಣವಾಗಿ ಕುಳಿತುಘಟಡನು. 14 ಏನೂ ಅಟ್ಟಬಲ್ಲ, ಶೇಟಜೀ, ಆದರೆ ನಾನು ನಿಂತುಕೊಂಡೇ ಮಾತಾಡಕನ್ನುತ್ತೇನೆ ನಿನ್ನ ಮನಸಿಟ್ಟ ಐತೆ ಮಾಡುxv vas ಒಳ್ಳೇದು, ನನ್ನ ಬೆಟ್ಟಿಯು ನಿನಗೇಕೆ ಬೇಕಯುಗ ? ಭಿಥ ಕಲಸವಾದರೂ ಯಾವದು? ಉಳಿದ ಜನರಂತ ನಿನ್ನ ಗೋಜಿಗೆ ಹೊಚdಲ್ಲಿ ಅದು ತೋರುತ್ತದೆ. 3 Lace un .

46

  • ಶಿಕಳಾರಿ>

ಪ್ರೇಮಚಂದ ತಿರುಗಿ ಮಾತಾಡುವದಕ್ಕೆ ತುಸು ತಡವಾಯಿತು, ಆಗಲಿ, ಹೊರಬೀಳಲಿ; ನೀನು ಎಷಶ್ಚಿ ಆಂಜಬೇಡ, ಏನೂ ಹೇಳಬೇಕೆಂದೆಮ್ಮ ಅಹುದೋ ಅಲ್ಲವೋ ? " ಯಶೋಧರನ, ಮೈ ಕೈಗಳನ್ನು ನಿದ್ದೆಯೊಳಗಿಂದ ಎದ್ದವನಂತೆ ನಿಂತಲ್ಲಿಯೋ ಕಿಚ ಸಾವರಿಸಿಕೊಂಡನು 44 ಅಹುದು, ನನ್ನದೊಂದು ಮಾತು ತಮಗೆ ತಿಳಿಸತಕ್ಕದ್ದಿತ್ತು. ಆಯಿತು--- ನೀವು ತಾವಾಗಲೂ ಅನ್ನುವಂತೆ ಅದನ್ನು ಎಂದೇ ಕರೆಯಿರಿ, ಬಹಳೇನು ? ನನ್ನನ್ನು ನೀವು ನೆಟ್ಟಗೆ ಇಟ್ಟು ಕೊಳ್ಳುವ ದಿಲ್ಲ ಸರಿ ” ಎ೦ದು ಯಶೋಧರನು ಜಡವಾದ ಸ್ವರದಿಂದ ನುಡಿ ನನು. 14 ನಿಜವಾಗಿಯೇ ? ಯಾವ ಬಗೆಯದ ? ಹಿನು ಶೋಧಿಸಿದ ಆ ಹೊಸ ಯಂತ್ರದ ಸಂಬಂಧದಿಂದ, * ಸಾಗಲಿ, ಯಶೋಧರಾ, ನಿನ್ನ ಮಾತು ಮುಗಿಸು ಅನ್ನುವದನ್ನೆಲ್ಲ ಒಮ್ಮೆ ಹೇಳಿಯೇಬಿಡು,

  • ನೀವು ನನ್ನ * ಶೋಧದಿಂದ ' ಇಪ್ಪತ್ತು ಸಾವಿರ ರೂಪಾಯಿಗಳನ್ನು

ಗಳಿಸಿಕೊಂಡದ್ದು ಈ ಮೊದಲೇ ಪ್ರೇಮಚಂದನ ಮೋರಿಯು ಒಮ್ಮೆಲೆ ಕಂಪಾಯಿತು, ನಾನೇ ಒಡೆಯನಲ್ಲ ? ಅದೆಲ್ಲವೂ ನನ್ನ ಕೆಲಸ, * 33 44 ಅದಕ್ಕೆಲ್ಲ 044 ಸಂಪೂಗಳಿಕೆಗಳು 16 46 ಆದರೆ ಆ ಮಂತ್ರವನ್ನು ಶೋಧಿಸಿದವನು ನಾನು, ಪ್ರೇಮಚ೦ದರೆ* ನನಗೆ ಬಂದ ಲಾಭದ ಲೆಕ್ಕವ ನಿನಗೆಲ್ಲಿಂದ ಸಿಕ್ಕಿತು ? ಈ ಪ್ರಶ್ನೆ ವನ್ನು ನಾನು ಕೇಳಬಹುದಲ್ಲವ ? " ಆ ಲೆಕ್ಕವನ್ನು ನಾನು ನನ್ನಷ್ಟಕ್ಕೆ ಮಾಡಿಕೊಂಡೆನು. ಅದಕ್ಕೆ ಹತ್ತುವ ಸಾಹಿತ್ಯ ಸಂಗ್ರಹದ ಬೆಲೆ, ಅದನ್ನು ಮಾಡುವದಕ್ಕೆ ಬೇಕಾಗುವ ಶ್ರಮದ ಬೆಲೆ, ಈಗ ಅದನ್ನು ಮಾರುವ ಕ್ರು ಇವಲ್ಲವುಗಳನ್ನು ಅರಿತವ ನಾದ್ದರಿಂದ, ನಿಮ್ಮ ಲಾಭದ ಲೆಕ್ಕವು ತಿಳಿಯದೆ ? ಇದೆಲ್ಲದರ ಮೇಲಿಂದ ನೀವು ನನ್ನನ್ನು ಒಳಿತಾಗಿ ಇಟ್ಟು ತಿಂಡಿತ್ತೆಂಬದು ಮೇಲೆಯೇ ತೋರುತ್ತಿದೆ. ನನಗೆ ' ನ್ಯಾಯದಾನ ' ಮಾಡುವಿರೆಂಬದೇ ನನ್ನ ಬಯಕೆ, ನಾನು ನ್ಯಾಯವನ್ನ ಸೇಕ್ಷಿಸುವೆನು, ಪ್ರೇಮಚಂದ್ರ ”

  • ನ್ಯಾಯವೇಕರದು ? ಹಣವೇ ಬೇನ್ಯ ಬಾಗದೆ ?” ಎಂದು ನಯಾ

ಶೀತನಾದ ಪ್ರೇಮಚಂದನು ಉತ್ತೇಜಿತವಾದ ಸ್ವರದಿಂದ ಸ್ವಲ್ಪ ಸಿಟ್ಟು ತಾಳಿರ್ದ ನಂತೆ ಕೇಳಿದಳು, “ ಇರಲಿ, ಯಶೋಧರಾ, ನೀನು ನನ್ನನ್ನು ಈ ಮರು ವರುಷಗಳಿಂದ ಮಾತ್ರ ಬಲ್ಲಿಯಷ್ಟೆ ? ಆದರೆ ಕಳೆದ ಹದಿದು ವರುಷಗಳಿಂದಲೂ ನಾನು ನನ್ನ ಕಾರಖಾನೆಗಳಲ್ಲಿದ್ದ ನೌಕರರನ್ನು 'ನ್ಯಾಯ ದಿಂದಲೇ ನಡೆಯಿಸಿಕೊಳ್ಳುತ್ತೇನೆ, ಅವರು ತಮ್ಮ ತಕರಾರುಗಳನ್ನು ಬೇಕಾ ದಾಗ ನನ್ನ ಮುಂದೆ ಹೇಳಬೇಕೆಂದು ನಾನು ಅವರೆಲ್ಲರಿಗೂ ಆಗಾಗ ತಿಳಿದು ¥ನೆ, ಸಕಾರಣವಾದಂಥವುಗಳನ್ನೆಲ್ಲ ನ್ಯಾಯದೃಷ್ಟಿಯಿಂದಲೇ ನೋಡುತ್ತಿರು ವೆನೆಂಬದು ಎಲ್ಲರಿಗೂ ಗೊತ್ತಿದ್ದ ಮಾತು, ಇನ್ನು ಈ ನಿಯುಡಾನ'ದ ಕಾರ್ಯವು ನನ್ನಿಂದ ಡಗೆ ಮಾರುಗಂಡಿರುವದೆಂಬದನ್ನು ನಾನೇನು ಹೇಳಲಿ? ಆದರೂ ಯಜಮಾನ ಸೇವಳದಲ್ಲಿಯ ಸಂಬಂಧಗಳು ಈ ಹದಿನೈದು ವರುಷ ಗಳಲ್ಲಿ ಕ್ಷೇಮದಿಂದಿರುತ್ತವೆ. ನಮ್ಮ ಸಂಘದ ಮುಖ್ಯ ಪಾಲುಗಾರನೆಂದು ಕಾರ್ಯವಾಹಕತನವು ನನ್ನ ಮೇಲೆಯೇ ಇರುವಳು. ಎಲ್ಲಕ ನಾನೇ ಭಾಧ್ಯಸ್ಥನಂತಿದ್ದುದರಿಂದ ಸರಿತೊರಿದಾಗಿ ಸೇವಳಕು ಬೇಡುವ ಅನುಶಲ ಗಳನ್ನು ನಾನು ಆಗಾಗ ಮಾಡಿಕೊಡುತ್ತಲೇ ಬಂದಿರುವನು, ಯಾವದೊಂದು

  • ಲಿಮಿಟೆಡ್ 1 ಕಂಪನಿಯ ಪಾಲುಗಾರನಾಗಿದ್ದೆನಾದರೆ ಆ ಮಾತು ಬೇರೆ

ಯಾಗುತ್ತಿತ್ತು. ನನ್ನ ಜನರ~ ಅವರಲ್ಲಿ ಎಷ್ಟೋ ಜನರಾದರೂ ಈ & ಪುರಾಶಾ ಭುರ್ವಿಘಾತ 092 ಸಂಗತಿಯನ್ನು ನಿನಗೆ ಅಂಜಿಕಿಲ್ಲದೆ ಹೇಳಿಯಾರು.” ಪ್ರೇಮಚಂದನು ಸ್ವಲ್ಪು ತಡೆದು ಯಶೋಧರನನ್ನು ದಿಟ್ಟಿಸಿ ನೋಡಿದನು. ಯಶೋಧರನು ಶೇಕರಿಸಿ ಗಂಟಲು ಸಡಿಲು ಮಾಡಿಕೊಂಡಳು, 14 ಇದೆಲ್ಲವೂ ನಿಜವಿರುವದು ಶೇಟಜೀ, ” ಎಂದು ಉದಾಸೀನತೆಯಿಂದ ಅಂದನು. 44 ಆದರೆ, ನಿನ್ನ ಸುಧಾರಿಸಿದ ಯಂತ್ರವು " ಬಹಳ ಛದು! ಈ ಕ್ಷಣಕ್ಕೆ ನಿನ್ನ ಯಂತ್ರವನ್ನು ಚಿಕಿತ್ಸೆಸುವ... ಆದರೂ ಅದು ನನ್ನ ಯಂತ್ರವೆಂಟಿ ಕ್ಷಣಹೊತ್ತು ತಿಳಿದುಕೊಳ್ಳತಕ್ಕದ್ದೆಂಬ ದನ್ನು ಮಾತ್ರ ಮರೆಯಬೇಡ, ೫ ಶೋಧಕನು ಇದನ್ನು ಕೇಳಿ ಬಾಯಿತೆರೆದನು; ಆದರೆ ಏನೂ ಮಾತಾಡ ಲಾರದೆ, ನಡೆದುಕೊಂಡು ಸುಮ್ಮನೇ ನಿಂತದ್ದನ್ನು ಕಂಡು ಯಜಮಾನನು ನ ಆಮೆ ಆಗಿದಿನಿ, 4 ಆ ಯಂತ್ರದ ಚಿಕ್ಕ ಇತಿಹಾಸವೇ ಇಲ್ಲಿ ಇರುವುದು ನೋಡು * ಎದು ಅವನ ಎದುರಿನಲ್ಲಿದ್ದ ಕಪಾಟಿನೊಳಗಿಂದ ಒಂದು ಸಣ್ಣ ನೋಟ ಬುಳ್ಳನ್ನು ತೆಗೆದನು. “ಒಳ್ಳ, ಕೇಳಬೇಕೆಂದು ಕೇಳುತ್ತೇನೆ ತಾವು ಮೂರು ವರುಷದ ಕೆಳಗೆ ಇಲ್ಲಿಗೆ ಬಂದಾಗ ತಮಗೆ ಸಂಬಳವೆಷ್ಟು ಸಿಗುತ್ತಿತ್ತು ? ವಾರಕ್ಕೆ ಹದಿನೈದು ರೂಪಾಯಿಗಳೇ ಅಲ್ಲವೆ?” ಯಶೋಧರನು ಗೋಣುಹಾಕಿದನು, “ ಸರಿಯಾಗಿರುವದಷ್ಟೆ ನಮ್ಮಲ್ಲಿ ಒಂದು ವರುಷ ಮಟ್ಟಿಗಿದ್ದ ನಂತರ, ನೀವು ಒಂದು ದಿನ ನನ್ನ ಹತ್ತರ... " ಪ್ರೇಮಚಂದನು ಮೊದಲನೆಯ ಪುಟವನ್ನು ನೋಡಿ, << ಹದಿನಾರನೆಯ ಫೆಬ್ರುವರಿಯ ದಿವಸ... ಜಿಹುದುಸುಧಾರಿಸಿದ ಯಂತ್ರ 'ದ ಕಲ್ಪನೆಯು ಹೇಳ ಬೇಕೆಂದು ಒಂದಿಯಷ್ಟ, ಅದಕ್ಕೆ ಒಪ್ಪಿಕೊಂಡು, ನಿನ್ನ ನ್ನು ದಿನದ ಕೆಲಸದಿಂದ ಬಿಡಿಸಿ, ನಿನ್ನ ಶೋಧಕ್ಕೆ ಮಾರ್ತ ಸ್ವರೂಪವನ್ನು ಕೂಡಲಪ್ಪಣೆ ಕೊಟ್ಟಿದ್ದಾ ಹತ್ತನಯ ಮುದ ದಿನ ನೀನೊಂದು ಮಾದರಿಯನ್ನು ಮಾಡಿ ಕೊಟ್ಟಿ, ಮುಂದೆ ಒಂದು ತಿಂಗಳಾಥ ಮೇಲೆ, ನಿನ್ನ ಶೋಧ'ವನ ಮಾರತಕ್ಕೊಂಡು ಅದಕ್ಕೆ ಪ್ರತಿಫಲವಾಗಿ ( ಸ್ವವಿತ್ವ'ದ ಹಣವನ್ನು ಕೂಡಲು ನಾನು ಒಪ್ಪಿಕೊಂಡೆನು. ಅದಕ್ಕೆ ನೀನು ಸ್ವಾಮಿತ್ವವನ್ನು ಒಳ್ಳೆ ಸಂದು ಹೇಳಿ, ಒಮ್ಮೆಯೇ ಎಷ್ಟಾದರೊಂದು ( ರಕದು “ಕೊಡಿರೆಂದು ಪುಟ:ತೊಳೆದ ಮುತ್ತು.pdf/೧೫೬ ಮುಳಾಶಾ ಭುರ್ವಿ ಖಕ • ನನ್ನ ನಾನು ನಿನ್ನನ್ನು ಇದಕ್ಕಾಗಿ ದೂಷಿಸುವದಿಲ್ಲ ನಿನ್ನ ತಲೆಯಲ್ಲಿ ಈಗ ಸದ್ಯ ಇನ್ನೂ ಕೆಲವು ಶೋಭಗಳು ಇದ್ದಿರುವದರಲ್ಲಿಯ ಸಂಶಯವಿಲ್ಲ. ಅದಿರಲಿ, ನಾವೆಲ್ಲರೂ ಸ್ವಪ್ನ ಸೃಷ್ಟಿಯಲ್ಲಿ ಈಸಾಡುತ್ತಿರುವದೇನೋ ನಿಜ ನನಗ ಎಷ್ಟೋ ಬಗೆಯ ಸ್ವಪ್ನ ಸಾಮ್ರಾಜ್ಯದಲ್ಲಿ ಆಧಿಪತ್ಯವು ಸಿಕ್ಕಿದೆ; ನಾನೂ ಎಷ್ಟೋ ಸೈಜ್ಞಗಳ ಒಡೆಯನಾಗಿದ್ದೇನೆ.” ವಿಚಾರ ಮಾಡವಾಡುತ್ತಲೇ ಪ್ರೇಮಚಂದಿನ ನಕ್ಕನು ಇದರಲ್ಲಿ ಉದಾಸೀನತೆಯೂ ಇದ್ದಿರಿ ? ಯಶೋಧರನು ನಿಂತಲ್ಲಿ ಕಾಲು ಎತ್ತಿಡಹತ್ತಿದನು. ಕೆಲಸದಲ್ಲಿ ನಾನು ನೈಪುಣ್ಯವನ್ನು ತೋರಿಸಲಿಲ್ಲೆಂಬ ಆರೋಪಕ್ಕೆ ಮಾತ್ರ ನನ್ನ ಸಮ್ಮತಿಯಿಲ್ಲವೆಂದು ನಾನು ಹೇಳಬೇಕೆನ್ನುಹೈನೆ >ಂದು ಉರಿಮೋರೆ ಯಿಂದ ಜೋಧರನು ನುಡಿದನು. 4 ಏನೇ ಇರಲಿ, ನನ್ನ ಯಂತ್ರ, ಏಂವ ನೀನು ಇಪ್ಪತ್ತು ಸಾವಿರವನ್ನ ಏಕತಾ ಬಕ್ಕಣದಲ್ಲಿ ಹ ಕೆ ಕೊಂಡಿಯಷ್ಟೆ? ನನಗೆ ಅದರ ಇಪ್ಪತ್ತನೆಯ ಪಾಲು ಕೂಡ ಸಿಗಬಾರದೆಂದರೆ ? * ಪ್ರೇಮಚಂದನು ತನ್ನ ಎದುರಿನಲ್ಲಿದ್ದ ನೋಟಬುಕ್ಕು ನೋಡಿ ನಿಟ್ಟು ಸಿರಿಟ್ಟಳು. - ನಾನು ನಿನ್ನ ಕೂಡ ಮಾಡಿದ ವ್ಯವಹಾರದಲ್ಲಿಯು ನನ್ನ ಗುಣಾವಗುಣಗಳನ್ನು ಈಗ ನೋಡಿ ಕೊಳ್ಳುತ್ತ ಕಾಡುವದಿಲ್ಲ ಕಂಡಿಯಾ, ಆದರೆ, ನನ್ನ ವ್ಯವಹಾರವನ್ನೆ ಇದಕ್ಕೂ ವಿಸ್ತಾರವಾಗಿ ಹೇಳಬೇನ್ನುತ್ತೇನೆ, ಇಲ್ಲಿ ಕೇಳಿತಿ; ನಿನ್ನ ಯಂತ್ರದ ಮೇಲೆ ನನಗೆ ದೊರೆತ ಆಭಕಾ ನೀನು ಕಟ್ಟಿದ ಅನುಮಾನಕ ವಾಹದಂತರವಿಲ್ಲ. ನಿಜವಾಗಿ ಹೇಳಬೇಕಾದರೆ, ನಿನ್ನ ಎಣಿಕೆಯಕಿಗೆ ತಲಣ, ಓಂ ಭಡು ಸಾವಿರ ರೂಪಾಯಿಗಳಿಂದ ಹೆಚ್ಚು ಈ ಯಂತ್ರವನ್ನು ಮಾರ್ಕೆಟಿನಲ್ಲಿ ಮಾರಲಿಕ್ಕಿರುವದಕ್ಕೂ ಮುಂಚಿತವಾಗಿ ಅದಕ್ಕೆ ತಗಲಿದ ವೆಚ್ಚದ ಲೆಕ್ಕವನ್ನು ನೀವು ಮಾಡಿದಂತೆ ಕಾಣುವದಿಲ್ಲ. ಇಕ, ಇವೇ ಆ ಲೆಕ್ಕದ ಆಕೆಗಳು, ಅದರ ಪೇಟೆಂಟು ತೆಗೆದುಕೊಳ್ಳಲಿಕ್ಕೆ ಅಂದರೆ ಬೆಳಿಗ್ಗೆ ಶನಕ್ಕೆ ೧೭೦೦ ರೂಪಾಯಿಗಳು~ ಆಣೆ ಪೈಗಳನ್ನು ನಾನು ಹೇಳುವದಿಲ್ಲ, ಹೊಸ ಯಂತ್ಯಸಾಮಗ್ರಿಯು ೬೦೦೧; ಉಳಿದ ವೆಚ್ಚ ೩೯೦೦, ಒಟ್ಟಿಗೆ ೧೨೬ ೧೦, ಇಷ್ಟೆಲ್ಲವೂ ಒಂದು ಯಂತ್ರವು ಮಾರುವದಕ್ಕಿಂತಲೂ ಮೊದಲು ವೆಚ್ಚ ಮಾಡಬೇಕಾಯಿತು, ಇದರ ಮೇಲೆ ಲಾಭ-ಲುಕನ ಮಾತು ನನ್ನ ಮೇಲೆಯೇ ಉಳಿಯಿತಲ್ಲವೆ?* ಆಗಿರುವೆವು. OO ಸಂಘF+ಕಥೇಗಳು ಯಶೋಧರನ ಹೌಚಾಳಿದನು, ಈ ಒಳ್ಳೇದು, ಅದೆಲ್ಲವೂ ಈಗ ತೀರಿ ಹೋಗಿ, ಈಗ ನೀನು ಏನು ಮಾಡಬೇಕಾಗಿದೆ ? ಲಾಭ ಸಣ”ನ್ನೆಲೆ ಸುತ್ತ ಕೂಡುವದೊಂದೇ ಕೆಲಸವಲ್ಲವೆ ? ಹಾಗd ವರ ಷೆ Aಂದಕ್ಕೆ ನಿಘ ಛಭ ವು ಇಪ್ಪತ್ತು ಸಾಏರವನ್ನು ವಿರಬಾರದೆಂದು ಎಲ್ಲಿ ಹೇಳಿ ? ' ಎ೦ದು ಅವನು ಒಳ್ಳೆ ಸೊಕ್ಕಿನಿಂದ ಗದರಿಸಿ ಮಡಿದನು. ( ಲಾಭವು ಇದಕ್ಕೂ ಹೆಚ್ಚಾಗಲಿ, ಆದಿರಲಿ, ಅದೆಲ್ಲವೂ . 34 ಧರಿಸಿ, ನನ್ನನ್ನೇ ಕೂಡಿದೆ. ಇದರಲ್ಲಿ ನಿಮ್ಮ ಸಂಬಂಧವೇನು ? ಆದರೆ ನನ್ನ ಲುತನ ಕಾಲವು ಮುಗಿದುಹೋಗಿದೆಯಂದು ಮಾ … ನೀನು 'ಸ ಬೇಡ. ಜಗತ್ತಿನಲ್ಲಿ ನಿನಗಿಂತಲೂ ಮೇಲಾದ ಧ ನೀರ:೬, ಇಬ್ಬಕ ಬಹುದು, ನೀನೊಬ್ಬನೇ ಒಬ್ಬನಲ್ಲ, ನಿನ್ನ ಮುಂತ್ರವನ್ನು ಉಪಯುಕ್ತತೆ ಯಲ್ಲಿಯೂ ಮತ್ತುಳಿದ ಅಂತರ್ಬಹ್ಮಾಂಗಗಳಲ್ಲಿಯು, ಮೊಟ್ಟೆ ಮಾರು ವಂಧ ಹೊಸ ಯಂತ್ರವನ್ನು ಇನ್ನು ಮುಂದೆ ಯಾವನೊಬ್ಬನು ಶೋಧಿಸಿ ತೆಗೆಯಬಾರದೆಂಬದಂತೂ ನಿಜವಲ್ಲ. ಈ ದಲಿ, ಇನ್ನು ನಾಲ್ಕು ವರುಷ ಗಳ ತನಕ ನಿನಗಂತೂ ವಾದಕ್ಕೆ ಗೊತ್ತುವ ಡಿದ ಹಣವು ಮುಟ್ಟಿ ಮುಟ್ಟು ವದು. * ಪ್ರೇಮಚಂದನು ತನ್ನ ತಿಜೋರಿಯನ್ನು ಲಕ್ಷ ಕೊಟ್ಟು ನೋಡಿ ಈ ಯಶೋಧರಾ, ನಾನು ಹೇಳಹಳ್ಳವೆಲ್ಲ ಮುಗಿದಾಯಿತು, ನಿನ್ನ ಮನಸು ಕೀಳುತನಕ್ಕಿಳಿದಿರುವದನ್ನು ಕಂಡು ಮಾತ್ರ ಬಹಳ ವಿಷಾದವಾಗುತ್ತದೆ. ನಾವು ಈ ವ್ಯವಹಾರವನ್ನು ಮಾಡಿದಾಗ ನೀನು ಒಳ್ಳೆ ಸಂತೋಷದಲ್ಲಿದ್ದ ಕಾಣುತ್ತಿದ್ದೀಯಲ್ಲ.”

  • ಛೇ, ಛೇ, ಆದೇ ಮೂರ್ಖತನಕ್ಕಾಗಿಯ, ಈಗ ನಾನು ಕಷ್ಟ

ಬಡುತ್ತಿರುವೆನಲ್ಲ ! ಆದರೆ ಧನವಂತರು ಹುಟ್ಟು ಬಡವರಾದ ಗುಣವಂತರ ಲಾಭವನ್ನು ಹೀಗೆಯೇ ಅನ್ಯಾಯದಿಂದ ಎಷ್ಟು ದಿನ ತೆಗೆದುಕೊಳ್ಳ...?”

  • ಇನ್ನು ಸಾಕು,

ನೀನು ಮೂರ್ಖನಿಪ್ಪಜ್ಜಿ ಸಕ್ಕ'ವೆಂದು ಮಲ್ಲನ ಅಂದವನೇ ಪ್ರೇಮಚಂದನು ಎದ್ದು ನಿಂತನು. " ನಿನ್ನ ಮುಖಕ್ಕೆ ನೀನೇ ಕಾರಣನೆಂಬದನ್ನು ಇನ್ನಾದರೂ ತಿಳಿದು, ಇನ್ನು ಮೇಲೆ ಈ ದುಃಖವನ್ನು ಪೋಷಿಸಬೇಡ, ತನ್ನ ಜೀವಿತವಲ್ಲ ವಿಷಮಯವಾಗುವದರೊಳ ಕಾಗಿಯೇ ಎಚ್ಚರಾಗು, ನೀನಿನ್ನು ಬೇಕಾದರೆ ನಿನ್ನ ಕೆಲಸಕ್ಕೆ ಹೋಗು.. ಪುರಾಶಾ ಜುರ್ವಿ ಖಾಕ A ಯಿಂದ ಇಟ್ಟ ಮುಖ್ಯ ಇಲ್ಲದಿದ್ದರೆ ನಿನ್ನ ಶೋಧಕ ಬುದ್ಧಿಯನ್ನೆ ಹಿಂಬಾಲಿಸು, ನಿನ್ನ ಶೋಧಗಳಿಂದ ನೀನು ಧನವಂತನಾದರೆ ನನಗೆಷ್ಟೋ ವಿಷಾದವಿಲ್ಲ, ಆದರೆ ಎರಡಕ ಯವರಲ್ಲಿ ಯಕ್ಕಿಂಚಿತ್ತಾದರೂ ವಿಶ್ವಾಸವನ್ನಿಡಲಿಕ್ಕೆ ಪ್ರಯತ್ನಿಸು, ಕ್ಷಣ ಹೊತ್ತು ನಿನ್ನ ಯಂತ್ರಶೋಧಕ್ಕೆ ಅರದಾಳು ಹತ್ತಿತ್ತೆಂದು ತಿಳಿ....” ನಿನ್ನಷ್ಟು ಆದಾಯವಿದ್ದವನಿಗೆ ಈ ನಷ್ಟದಿಂದೇನಾದೀತು ? ಆದರೆ ದೇವರಾಣೆ ಇನ್ನು ಮುಂದೆ ನನ್ನ ಶೋಧಗಳ ಲಾಭವು ನಿನಗೆಂದಿಗೂ ದೊರೆ ಯಲಾರದು ” ಎಂದು ಅಂದವನ ಬಶೋಧನಹಿಂದಿರುಗಿ ಮನೆಯ ಹಾದೀ ಹಿಡಿದನು. ಪ್ರೇಮಚಂದನು ಆ ನೋಟಬುಕ್ಕನ್ನು ವ್ಯವಸ್ಥೆಯ ಗುಮಾಸ್ತನಾದ ಗುಲಾಬಚಂದನನ್ನು ಕರೆಯುವದಕ್ಕಾಗಿ ಗಂಟೆಯನ್ನು ಬಾರಿಸಿದನು. ಗುಲಾಬಚಂದನು ಒಳಗೆ ಬರಬರುತ್ತಲೇ “ ನಾನು ಹೇಳಿ ದಂತೆಯೇ ಅವನು ಮಾತಾಡಿದ್ದಾ ನಾದೀತು. ಅವನ ತಲೆಯ ಹಾಳಾ ಆಗ ನಿಮ್ಮ ತಾಳ್ಮೆಯು ಮಿಗಿಲಾದದ್ದು. ಕಾರಖಾನೆಯಲ್ಲಿಯ ಉಳಿದ ಜನರ ಮಾತು ಬೇರೆ. ವ್ಯಾಪಾರದ ಮೂಲತತ್ವಗಳನ್ನು ಲವ ಮಾತ್ರವೂ ಅರಿಯದ ಈ ಅರೆಹುಚ್ಚನ ಮಾತು ಬೇರೆ, ಇನ್ನು ಇವನಲ್ಲಿ ಕನಿಕರಬರುವದಾದರೂ ಎಲ್ಲಿಯ ವರೆಗೆ ? ಒ೦ದು ಕೊಟ್ಟರೆ, ಮತ್ತೊಂದು ದೊರೆಯಬೇಕೆಂದು ಅವನು ನಾಳೆಯ ಕೇಳದಿರುವನೆ ? ಹತ್ತು ರೂಪಾಯಿ ಗಳ ಸಂಬಳವು ಸಿಕ್ಕ ಕೂಡಲೆ ಅದಕ್ಕೆ ಇಪ್ಪತ್ತಾಗತಕ್ಕದ್ದೆಂದು ಅವನು ಮರು ಗದೇ ಎಂದಿಗೂ ಇರು, ಈ ಬಿಸಿಲು ದುರೆಯ ಬೆನ್ನು ಬಿದ್ದವನನ್ನು' ನಾವೆ ಇಂತ ಬೆನ್ನಟ್ಟುವದು ? ” ಎಂದಂದನು.

  • ನೀರನ್ನು ನದೆಲ್ಲವೂ ನಿಜವು, ಯಶೋಧರನು ಮೊದಲು ಅತ್ಯಾಶೆ

ಯುಳ್ಳವನಂತೆ ಕಾಣಿಸಿದನೆ? ??? ಇದಕ್ಕೆ ಆಶೆಬುರುಕತನವೆನ್ನುವದಕ್ಕಿಂತಲೂ, ಒಣಹಮ್ಮರ ಯಂದೇ ಅನ್ನಬೇಕು. ತಲೆಗಳಿತನ~~ -ಯಾಕೆ, ಇದೇ ಮೂರು ವರುಷಗಳಾಚೆಗೆ ಇವನೇ ಇಲ್ಲವೆ ಏನಾದರೂ ಕೆಲಸ ಕೊಡಿರೆಂದು ಅಂಗಲಾಚಿ ಹೇಳಿಕೊಳಕ್ಕೆ ನಮ್ಮ ಬಾಕಿಲಲ್ಲಿ ಬಿದ್ದವನು? ಆದರೆ ಈಗ ಇವನೇ ಇಡೀ ಸೃಷ್ಟಿಗೆ ಪ್ರಸಿದ್ಧ ನಾದ ಪ್ರಥನು ಪರಿಶೋಧಕನಂತೆ ! ಹಣೇಬರಹ # 66 . 3 ಸಂಪೂರ್ಣ-ಕಥೆಗಳು ಸರಿ, ೫ ( ಅ೦ದರೇನು, ಅವನಲ್ಲಿ ಘಧ್ಯವೇನೂ ಇಲ್ಲೆನ್ನು ವಿಯಾ ? ಗುಣವಂತೆ ನಿದ್ದದ್ದು ನಿಜವು ಆದರೆ ...೨ ( ಅವನ ಗುಣಗಳಿಗೇನೂ ಕೊರತೆಯಿಲ್ಲ, ಶೇಟಜೀ ಆದರೆ ಮನುಷ್ಯನು ಈ ಸರಿಯಾಗಿ ನಿಚ್ಚಣಿಕೆಯನ್ನೇ ಹಕ್ಕಿದರೆ, ಅವನು ನನ್ನ ಜೀವಕ್ಕೂ ಮುಳುವು ಎರಡನೇಯವರಿಗತ ಶುದ್ಧ ಕಲಸಿ, ನೀವು ಬೇಕಾದ್ದು ಹೇಳಿರಿ, ಇನ್ನೊಂದು ಕೆಲ ದಿನಗಳಲ್ಲಿಯೇ, ಅವನ ಬಾತಿಗೆ ಭಾರದಣಗುವನು ಈಗ ಅವನ ಸೆಕ್ಯಾಳಿತನವು ಸಾಕುಬೇಕಾಗಿದೆ. ? ಗುಲಾಬಚಂದನು ತುಸು ವಿಚಾರಮಾಡಿ ಅಂದದ್ದು : 11 ಅದಿರಲಿ, ನೀವಿನ್ನೂ ಅವನಿಗೆ ಅವನ ಸ್ವಾಮಿತ್ವದ ಹಣವನ್ನು ಸಲ್ಲಿಸಬೇಕೆ ಎನಲೇ ಮಾಡಿಲವಿ ರಲ್ಲ ! ಅವನ ಹೆಸರಿಗೆ ನಾಲ್ಕು ಸಾವಿರ ರೂಪಾಯಿಗಳು ಬರೆದಿಟ್ಟಿರುವವು, ಇದೆಲ್ಲವೂ ಅಂತರಂಗದ ಲೆಕ್ಕವಾದರೇನಾಯಿತು ? ಅವನಿಗೆ ಸಲ್ಲತಕ್ಕದ್ದು ಸಲ್ಲತಕ್ಕದ್ದಿದ್ದರೆ ಸಲ್ಲಿಸು, ಬೇಡವೇಕೆ ? ” ಎಂದು ಪ್ರೇಮಚಂದ. ನಂದನು ( ಆಹಹ! ಈ ಸುದ್ದಿ ತಗಲಿದ ಕೂತರೆ, ಅವನು ಹೆರೆಯಚ್ಚಿದ ಹಾವಿನಂತಾಗುವ ನಿಜ ಇದು ಎಟುಸಾವಿರಮಟ್ಟಿಗೇಕಿಲ್ಲೆ೧ಟದಾಗಿ ಅವನು ಬಳಲುವನ ಭಿಡನು, 2 24 ಹೇಗೇ ಅಗಲಿ, ಆವನ ಬೆತಂದು ಸಾಕಿ ತಡೆಯೋಣ, ಈ ಉಳಿಯು ಬಿಸಿ ಆರಿದ ನಂತರವಾದರೆ, ಅವನು ಎಚ್ಚಳಗೊಂಡ ನು, ಏನೇ ಇರಲಿ, ಈಗ ಐದು ನಿಮಿಷಗಳಾಚೆ ಅವನ ಉದ್ಧಟತನವನ್ನು ಕಂಡು, ಆವನ ಪರಲು ಕಡಿದುಕೊಳ್ಳಬೇಕೆಂದೆನಿಸಿತ್ತು. ಇವನ ಅರ್ಧ ಪಾಂಡಿತ್ಯದ ಆಶ೦ಕಾರದ ಬಿರಿನುಡಿಗಳಿಗಿಂತಲೂ ಅಜ್ಞಾನಾಂಧಕಾರದಲ್ಲಿದ್ದ ನಮ್ಮ ಕೂಲಿಗಾರರು ಕುಳಿ ಗಳಂತಾಚರಿಸುವದೇ ಒಳಿತೆನಿಸಿತು. ಕೈಲಾದಷ್ಟು ಕೈಕೆಳಗಿನವರ ಕಲ್ಯಾಣ ಚಿಂತನೆಯ ನನ್ನ ಜೀವನ ಸರ್ವಸ್ವವೆಂದು ನಾನು ತಿಳಿಯುತ್ತೇನೆ” ಎಂದು ಕರ್ತವ್ಯಪರಾಯಣನಾದ ಪ್ರೇಮಚಂದನಂದನು

  • ಆಗಲಿ, ಧನಿದು 'ಇಚ್ಛೆ ! ಉಳಿದ ಕೆಲಸವನ್ನು ನೋಡಿಕೊಳ್ಳ

ಬೇಕು ?” ಎಂದು ಇನ್ನೂ ಎಷ್ಟೋ ಕಾಗದಗಳನ್ನು ಗುಲಾಬಚಂದನು ಅವನ ಮುಂದಿಟ್ಟು, ಬಾಗಿಲತನಕ ಹೋಗಿ, ಇನ್ನೊಂದು ಮಾತು ಕೇಳತಕ್ಕದ್ದಿದೆ, ಪುಟ:ತೊಳೆದ ಮುತ್ತು.pdf/೧೬೧ ಸಂಪೂರ್ಣ-ಕಥಃಳು ಗಳಲ್ಲದೆ, ಅವನ ಅರ್ಧಾಂಗಿಯಾಲಲಿ9ನೇವಿಯು ಪರಲೋಕವನ್ನು ಪಡದಳು ಮುಂದೆ ಒಂದು ವರುಷ ಹೊಗಳಿಲ್ಲ, ಏಷ ಧನವನ್ನು ಸಂಪಾ ದಿಸಿ ಮಗನ ಸೌಭಾಗ್ಯವನ್ನು ನಿರೀಕ್ಷಿಸಿ ಆನಂದrಳ್ಳುತ್ತಲಿದ್ದ ತ೦ದೆಯು ತೀರಿಕೊಂಡನು. ಇವೆರದೇ ಅನಾಹನಗಳಿಂದ ಪ್ರಳ ಪುಚಂದನಿಗೆ ಜಗತ್ತಿ ನಲ್ಲಿಯ ಬಾಳ್ವೆಯ ಒಲ್ಲದಾಗಿತ್ತು. ಆದರೂ ದಿನಗಳೆದಂತೆ ಸುಖವನ್ನು ನುಂಗಿ ಮರೆಮಾಡುತ್ತ ಬಂದಿದ್ದ ಸು. ನಂತರ ಕೆಲವು ದಿನಗಳಲ್ಲಿಯೇ ಇವರ ವಶಕ್ಕಿದ್ದ ಕಾಖಾನೆಗಳಲ್ಲಿ ಒಂದರೊಳಗೆ, ಒಂದುದಿನ ' ಒಂದು ಅಪಘಾತವಾದದ್ದೇ ಪ್ರೇಮ ಚಂದನ ಸ್ಥಿತಿಯು ಹೆಚ್ಚೆಚ್ಚು ಸುಧಾರಿಸಿ, ಅವನಲ್ಲಿ ಪ್ರಸ್ತುತಕ್ಕಿದ್ದ ಭೂತದಯೆ, ಕಾರುಣ್ಯ, ಕೈಕೆಳಗಿನವರ ಮೇಲೆ ಮಮತೆ, ವ್ಯಾಪಾರ ವ್ಯವಹಾರಗಳಲ್ಲಿ ಅಳುಕದಂಥ ಧೈರ್ಯ ಮುಂತಾದ ಗುಣಗಳ ವಿಕಾಸವಾಗಲಿಕ್ಕೆ ಕಾರಣ ವಾಯಿತಂದು ಅನ್ನಲಿಕ್ಕೆ ಅಡ್ಡಿಯಿಲ್ಲ ಗಿರಣಿಗೆ ಆದಿಶಕ್ತಿಯಾದಂಧ ಪ್ರಧಾನ ಗತಿ ಚಕ್ರವೇ ಒಂದು ದಿವಸ ಒಡೆದು ಚಪ್ಪಾಡಿಯಾಗಿ, ಇವನ ಕಣ್ಣೆದುರಿನಲ್ಲಿ ಇಬ್ಬರು ನಿಂತಲ್ಲಿಯೇ ನುಚ್ಚು ನೂರಾದರು, ಎಷ್ಟೋ ಜನರಿಗೆ ಗಾಯತಗಲಿ ಮಿತಿಮೀರಿದ ನಷ್ಟವಾಯಿತು, ದುಃಖದ ಪೆಟ್ಟು ತಿಂದವನಾದ ಪ್ರೇಮಚ೦ವನಿಗೆ ಇಷ್ಟೆ ಹಣದ ನಷ್ಟವು ಇದಕ್ಕೂ ಒಂದು ವರುಷ ಮಟ್ಟಿಗೆ ಮೊದಲು ತಗಲಿದ್ದಾದರೆ, ಅವನು ನೆಲಹಿಡಿದು ಮಲಗಿಕೊಳ್ಳುತ್ತಿದ್ದನು. ಆದರೆ ಈಗ ಈ ಅಪಘಾತದಲ್ಲಿ ಪುಡಿದು ಗಾಯಗೊಂದಿ, ಆನೇಕ ಅನರ್ಥ ಗಳಿಗೊಳಗಾದ ತನ್ನ ಸೇವಕ ಜನರ ಗೋಳಾಟವು, ಇವನನ್ನು ಪೂರ್ಣ ವಾಗಿ ಎಚ್ಚರಗೊಳಿಸಿ ಜಗತ್ತಿನಲ್ಲಿಯು ಭಾಳುವೆ ಎಂದರೇನೆಂಬುದರ ಪಾಠ ವನ್ನು ಕಲಿಸಿತು. ಇದುವರೆಗೆ, ಏನೋ ಒಂದು ದೊಡ್ಡ ಚಕ್ರದ ಸಣ್ಣ ಸಣ್ಣ ಭಾಗಗಳಿಂದು ತನ್ನ ಜನರನ್ನು ಸ್ವಲ್ಪ ಅಲಕ್ಷದಿಂದ ನಡೆಯಿಸುತ್ತಿದ್ದವನು, ನನ್ನ ಜೀವದಷ್ಟೇ ಮಹತ್ವವು ಕಡಿಮೆ ಬೆಲೆಬಾಳುವ ಪ್ರಾಣಿಗಳಿಗೂ ಇರುವವೆಂದು ಇವನಿಗೆ ತತ್ಕ್ಷಣಕ್ಕೆ ತಿಳಿದುಬಂದಿತು. ತನ್ನ ನೌಕರರ ಜೀವನವೇ ತನ್ನ ಮುಖ್ಯಾಧಾರವೆಂಬದು ಅವನ ಮನವರಿಕೆಯಾಯಿತು. ವ್ಯಾಪಾರ ವ್ಯವಹಾರಗಳಲ್ಲಿ ಕೇವಲ ದ್ರವ್ಯ ಸಂಪಾದನೆಯ ಭರದಲ್ಲಿ, ಆ ದ್ರವ್ಯಾರ್ಜನೆಯ ಸಾಧನಗಳಾದ ತನ್ನ ಆಳುಗಳನ್ನು ಒಂದೇ ದಿನ ರಕ್ಷ + ಹುರಾಅಗಿ ದುರ್ನಿಪಾಳ ಹಿಂಡುವಂತೆ ಧುದಿಸಿಕೊಂಡು ಜೀರ್ಣಿ ಮಾಡಬಾರದೆಂಬುದು ಅವನಿಗೆ ಕಂಡಿತು. ಅಂದಿನಿಂದ ಅವನು ಯಧಾಯೋಗ್ಯನಾದ ಧುಜಮಾನನ ಗುಣ ಗಳನ್ನು ಹೊಂದಿದನು. ದಡ್ಡತನ.cಬರೆ ಸಂಭಾವಿಕ ಲಕ್ಷಣವೆಂದು ತಿಳಿದು ಕೊಳ್ಳದೆ, ಚ `ಣರಲ್ಲಿ ತಪ್ಪುಗಾರರನ್ನು ತಡವಿಲ್ಲದೆ ಕ್ಷಮಿಸಹತ್ತಿದನು ಮನಮುಟ್ಟ ಕೆಲಸ ಮಾಡುವವನು ಕೆಲಸದಲ್ಲಿ ತಡ ಮಾಡಿದರೂ, ತಿನವೇ ಏಕಾಗಲಿಲ್ಲವೆಂದು ತಲ್ಲಣಿಸುತ್ತಿಲ್ಲಪ್ರತಿಯೊಬ್ಬನಿಗೂ ತನ್ನ ಜಾಣತನ ವನ್ನು ತೋರಿಸಿಕೊಳ್ಳುವ ಸಮಯಗಳನ್ನು ಆಗಾಗ ತಂದುಕೊಡುತ್ತಿದ್ದನು. ಒಮ್ಮೆಯಲ್ಲದೆ ನೂರಾರು ಸಾರೆ, ಅವರ ಪ್ರಯತ್ನಗಳ ಪ್ರಯೋಜನವು ಎಲ್ಲದ ನಿದರ್ಶನಕ್ಕೆ ಬರುವಂತೆ, ವೇಳೆಯನ್ನರಿತು ಇಂಥವರ ಬೆನ್ನು ಚಪ್ಪರಿಸುವನು, ಇದರಿಂದ ಒಳ್ಳೆಯವನೆಂದು ಹಗಲೆಲ್ಲ ತಪ್ಪು ಮಾಡುತ್ತ, ಕೆಲಸಕ್ಕೆ ತಪ್ಪಿಸುವ ಮೈಗಳ್ಳರನ್ನು ಮೇಯಿಸಿ ಪುಷ್ಟ ಮಾಡುತ್ತಿದ್ದನೆಂಬದನ್ನು ಮಾತ್ರ ತಿಳಿಯು ಕೂಡದು. ಒಂದು ರೀತಿಯಿಂದ ಪ್ರೇಮಚಂದನು ನಿರಂಕುಶ ಪ್ರಭುವು ಎಲ್ಲ ಮಾತುಗಳು ತನ್ನ ಕಿವಿಮುಟ್ಟದೆ ತನ್ನ ನಿರ್ಣಯಕ್ಕೊಳಪಡದೆ, ತನ್ನ ಕೈಲೇಖ ವಿಲ್ಲದೆ ಹೊರಬೀಳಬಾರದೆಂದು ಅವನು ಆಗ್ರಹ ಕೊಡುತ್ತಿದ್ದನು. ತಾನು ಒಳ್ಳಿ ನ್ಯಾಯವಂತನೆಂಬ ಬಗ್ಗೆ ಅವನಿಗೆ ಒಳ್ಳೆ ಅಭಿಮಾನವಿತ್ತು. ವಾರದಲ್ಲಿ ಕೆಲವೊಂದು ವೇಳೆಯನ್ನು ಗೊತ್ತು ವಡಿಸಿ, ಆಗ ತಮಗೇನೊಂದು ತಿಳಿಸುವ ದಿದ್ದರೆ ತಿಳಿಸತಕ್ಕದ್ದೆಂದು ಸಣ್ಣ ದೊಡ್ಡ ಕೆಲಸಗಾರರಿಗೆ ಹೇಳಿಟ್ಟಿದ್ದನು. ಈ ಕಾಲಕ್ಕೆ ಪ್ರೇಮಚಂದನಿಗೆ ತಮಗೆ ಬೇಕಾದ ಬೇಡಿಕೆಗಳನ್ನಾಗಲಿ, ಹೇಳಿಕೆ ಕೇಳಿಕೆಗಳನ್ನಾಗಲಿ ಹೇಳಿಕೊಳವ ಸ್ವಾತಂತ್ರ್ಯವು ಎಲ್ಲರಿಗೂ ಇತ್ತು. ಅಂದರೆ ಈಗ ಎಲ್ಲರೂ ತಮ್ಮ ತಕರಾರು 'ಗಳನ್ನು ಹೇಳಿಕೊಳ್ಳಬಹುದು. ಹೀಗಾದುದರಿಂದ ಸುಮ್ಮನೇ ಕಮಗೆ ಅನ್ಯಾಯವಾಗಿದೆಯೆಂಬ ಕಲ್ಪನೆಗೆ ಬಲಿಬಿದ್ದು ದುಮುದುಮು ಉರಿಯುತ್ತಿದ್ದು ಈ ತಕರಾರುಗಳ ಜ್ವಾಲೆಯು ಡಿನವೊಂದಕ್ಕೆ ದಟ್ಟಿ ಕೊಂಡಿಟ್ಟಿದ್ದರಿಂದ ಹೆಚ್ಚೆಚ್ಚು ಪ್ರಖರವಾಗುತ್ತ ಸಾಗಿ, ಒಮ್ಮೆಲೆ ವಡವಾಗ್ನಿಯಂತೆ ಪ್ರಜ್ವಲಿಸಿ, ಸುತ್ತು ಮುತ್ತುಲಿನ ಪ್ರದೇಶವನ್ನೆಲ್ಲ 'ಸುಟ್ಟು ಬೂದಿಮಾಡಲವಕಾಶವು ಈ ಪ್ರೇಮಚಂದನ ಕಾರಖಾನೆಗಳಲ್ಲಿ ಇದ್ದಿಲ್ಲ, ಮರುನಾಲ್ಕು ಸಾವಿರ ನೌಕರರಲ್ಲಿ ಅನ್ಯಾಯದ ಭ್ರಾಂತಿಗೆ ಬಿದ್ದ ಪುಟ:ತೊಳೆದ ಮುತ್ತು.pdf/೧೬೪ ಪುಟ:ತೊಳೆದ ಮುತ್ತು.pdf/೧೬೫ ಪುಟ:ತೊಳೆದ ಮುತ್ತು.pdf/೧೬೬ ಪುಟ:ತೊಳೆದ ಮುತ್ತು.pdf/೧೬೭ ಪುಟ:ತೊಳೆದ ಮುತ್ತು.pdf/೧೬೮ ಪುಟ:ತೊಳೆದ ಮುತ್ತು.pdf/೧೬೯ ಪುಟ:ತೊಳೆದ ಮುತ್ತು.pdf/೧೭೦ ಪುಟ:ತೊಳೆದ ಮುತ್ತು.pdf/೧೭೧ ಪುಟ:ತೊಳೆದ ಮುತ್ತು.pdf/೧೭೨ ಪುಟ:ತೊಳೆದ ಮುತ್ತು.pdf/೧೭೩ ಪುಟ:ತೊಳೆದ ಮುತ್ತು.pdf/೧೭೪ ಪುಟ:ತೊಳೆದ ಮುತ್ತು.pdf/೧೭೫ ಪುಟ:ತೊಳೆದ ಮುತ್ತು.pdf/೧೭೬ ಪುಟ:ತೊಳೆದ ಮುತ್ತು.pdf/೧೭೭ ಪುಟ:ತೊಳೆದ ಮುತ್ತು.pdf/೧೭೮ ಪುಟ:ತೊಳೆದ ಮುತ್ತು.pdf/೧೭೯ ಪುಟ:ತೊಳೆದ ಮುತ್ತು.pdf/೧೮೦