ಅಜಿತ ಕುಮಾರ.
೫
ಕೂಡಲೆ ಅಜಿತನು, ಕಲ್ಲಿನ ಬಳಿಗೆ ಹೋಗಿ, ಅದರ ಬುಡಕ್ಕೆ ಕೈ
ತುರುಕಿ, ಎತ್ತುವುದಕ್ಕೆ ಯತ್ನಿಸಿದನು; ಕೊಂಚ ಅಲುಗಾಡಿದಂತಾಯಿತು.
ಆಗ ಅವನು ಮನಸ್ಸಿನಲ್ಲಿ ಉಬ್ಬಿ, “ನನ್ನ ಎದೆ ಬಿರಿದುಹೋದರೂ ಚಿಂತೆಯಿಲ್ಲ ! ಇದನ್ನು ಮಾತ್ರ ಎತ್ತದೆ ಬಿಡೆನು !” ಎಂದಂದುಕೊಂಡು ಕಸುವಿನಿಂದ ಕುಸುಕಿಬಿಟ್ಟನು. ದೊಪ್ಪನೆ ಕಲ್ಲು ಆಚೆಗೆ ಸಿಡಿದುಬಿಟ್ಟಿತು !
ಅದರ ಬುಡದಲ್ಲಿ ಒಂದು ಖಡ್ಗವೂ, ಚಿನ್ನದ ಒಂದು ಹಾವುಗೆಯ ಜೋಡೂ
ಇದ್ದುವು, ಕತ್ತಿಯ ಹಿಡಿಯು ಚಿನ್ನದ್ದು; ಎಲೆಯು ಕಂಚಿನದು, ಅಜಿತನು ಖಡ್ಗವನ್ನೂ ಪಾದುಕೆಗಳನ್ನೂ ಹಿಡಿದುಕೊಂಡು ಹುಲ್ಲೆಯ ಕರುವಿನಂತೆ ತಾಯ ಬಳಿಗೆ ಓಡಿಹೋದನು, ನೇತ್ರವತಿಯು ಅದನ್ನು ಕಂಡಳೊ
ಇಲ್ಲವೊ, ಅಷ್ಟರಲ್ಲಿ ಅವಳು ತಲೆತಗ್ಗಿಸಿ ಬಲು ಹೊತ್ತು ಅತ್ತಳು, ಅಜಿತನು ಆಶ್ಚರ್ಯದಿಂದ ನೋಡುತ್ತ ನಿಂತು, ತನಗೇನೂ ತಿಳಿಯದಿದ್ದರೂ,
ತಾನು ಕೂಡ ಅವಳೊಡನೆ ಅತ್ತುಬಿಟ್ಟನು. ಹೀಗೆ ಅತ್ತತ್ತು ಸಾಕಾದ
ಮೇಲೆ, ನೇತ್ರವತಿಯು ತಲೆಯೆತ್ತಿ ಬೆರಳನ್ನು ತುಟಿಯ ಮೇಲೆ ಇಟ್ಟು,
"ಮಗೂ ! ನೀನು ತಂದುದನ್ನು ವಸ್ತ್ರದೊಳಗೆ ಮುಚ್ಚಿಟ್ಟುಕೊ, ಈಗ
ನಾವು ಕಡಲ ದಡಕ್ಕೆ ಹೋಗೋಣ ಬಾ,” ಎಂದು ಹೇಳಿ ಅವನನ್ನು
ಕರೆದುಕೊಂಡು ಹೋದಳು, ಅವರು ದೇವಸ್ಥಾನದ ಪಾಗಾರವನ್ನು
ದಾಟಿ ನಾಲ್ಕು ಮಾರು ಮುಂದಕ್ಕೆ ಬರಲು, ಇದಿರಿಗೆ ನೀಲವಾಗಿ ಕಪ್ಪಾಗಿ
ಕಾಣುವ ಸಮುದ್ರವು ಕಂಗೊಳಿಸಿತು. ತೀರಕ್ಕೆ ಬರುತ್ತಲೇ ನೇತ್ರವತಿಯು "ನಮ್ಮ ಹಿಂದುಗಡೆ ಇರುವ ದೇಶವನ್ನು, ಮಗು, ಬಲ್ಲೆಯಷ್ಟೆ ?” ಎಂದು ಕೇಳಿದಳು.
ಅದಕ್ಕೆ ಅಜಿತನು “ ಹೌದು, ಅದೇ ನಾನು ಹುಟ್ಟಿ ಬೆಳೆದ ಊರು, ತಾರಾಂಗಣ ” ಎಂದು ಹೇಳಿದನು.
ನೇತ್ರವತಿ––“ ಇದು ಬಲು ಚಿಕ್ಕ ರಾಜ್ಯ ; ಮುಕ್ಕಾಲು ಮೂರು ವೀಸ ಮರಳುಕಾಡು, ಕೊರಕಲಾದ ಕಲ್ಲು ಮಣ್ಣು ! ಬೆಳೆ ಹುಲುಸಾಗಿ