ಪುಟ:ಅಜಿತ ಕುಮಾರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

VI

ಮೋಸದ ಹಾಸು

ವಳಗಿರಿಗೆ ಹೋಗುವ ಮಾರ್ಗವು ಪರ್ವತಗಳಿಂದ ಇಡಿಕಿರಿದು
ಹೋಗಿತ್ತು. ಅಜಿತನು ಕೆಲ ಗಾವುದ ದೂರ ಹೋದ ಮೇಲೆ, ಒಂದು
ಕಡೆ, ದೀರ್ಘಾಕಾರನಾಗಿಯೂ ದೃಢಕಾಯನಾಗಿಯೂ ಇದ್ದ ಮನುಷ್ಯ
ನೊಬ್ಬನು ಬರುತಿದ್ದುದನ್ನು ಕಂಡನು. ಆತನು ಬಹು ಬೆಲೆಯುಳ್ಳ ಉಡು
ಪನ್ನು ಉಟ್ಟುಕೊಂಡಿದ್ದನು ; ಕೈಗೆ ಕಂಕಣಗಳೂ ಕುತ್ತಿಗೆಗೆ ರತ್ನ
ಮಾಲಿಕೆಗಳೂ ಇದ್ದುವು.

ಆ ವ್ಯಕ್ತಿಯು ಹತ್ತಿರ ಬರುತ್ತಲೆ ಅಜಿತನನ್ನು ವಂದಿಸಿ, ಆತನಿಗೆ
ಹಸ್ತಲಾಘವವನ್ನು ಕೊಟ್ಟು, “ಅಯ್ಯಾ, ತಾವು ಈ ಪರ್ವತಪ್ರಾಂತಕ್ಕೆ
ಬಂದುದರಿಂದ ನನಗೆ ಪರಮಾನಂದವಾಯಿತು. ಅತಿಥಿ ಸತ್ಕಾರಕ್ಕಿಂತಲೂ
ಶ್ರೇಷ್ಠವಾದುದು ಬೇರೇನಿದೆ ? ತುಂಬ ಬಳಲಿರುವಂತೆ ಕಾಣಿಸುತ್ತೀರಿ ;
ನಮ್ಮ ಅರಮನೆಗೆ ಬಂದು ಕೊಂಚ ವಿಶ್ರಮಿಸಿಕೊಳ್ಳೋಣಾಗಲಿ” ಎಂದು
ಹೇಳಿದನು.

ಅದಕ್ಕೆ ಅಜಿತನು “ಅಯ್ಯಾ, ನಾನೂ ಧನ್ಯನಾದೆನು. ಆದರೆ
ನನಗೆ ತ್ವರೆಯಾಗಿ ಧವಳಗಿರಿಗೆ ಹೋಗಬೇಕಾಗಿದೆ. ಆದುದರಿಂದ
ನನ್ನನ್ನು ಕ್ಷಮಿಸೋಣಾಗಲಿ,” ಎಂದು ವಿನಯಪೂರ್ವಕವಾಗಿ ಹೇಳಿದನು.

ಆಗ ಅಪರಿಚಿತ ವ್ಯಕ್ತಿಯು “ಓಹೋ! ಹಾಗಾದರೆ ತಾವು ಹಾದಿ
ತಪ್ಪಿ, ಬಹು ದೂರ ಬಂದಿರಿ. ಇಂದು ಧವಳಗಿರಿಯನ್ನು ಸೇರುವುದಕ್ಕೆ
ಸಾಧ್ಯವಿಲ್ಲ. ಬೆಟ್ಟಗಳ ನಡುವೆ ಹಲವು ಗಾವುದ ನಡೆಯಬೇಕಾಗಿದೆ;
ಮಾರ್ಗವೂ ಚೆನ್ನಾಗಿಲ್ಲ. ಅಲ್ಲಲ್ಲಿ ಹಳ್ಳತಿಟ್ಟೆಗಳೂ ಇರುವುದರಿಂದ,