ಪುಟ:ಅದ್ಭುತ ರಾಮಾಯಣ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಯಣ ( \r 3w Y* * * * • • • • • • ಜನಿಸಲಿ, ಎಲೆ ಚಕ್ರವೇ ಮುನಿದವು ಅನ್ಯಥಾ ಆಗತಕ್ಕುದಲ್ಲ, ಹೋ ಗು ಮುನಿಶಾಪದಿಂದ ಬಂದ ತಮೋರಾಕಿದೆ, ನಾನು ರಾಮನಾದಾಗ ನೀನು ನನ್ನಲ್ಲಿಗೆ ಬಾ, ಈಗ ರಾಜನನ್ನು ಬಿಟ್ಟು ತೊಲಗು ! ಎಲ್ಕೆ ಮುನಿಗಳ ನಿಮ್ಮನ್ನೂ ಬಿಟ್ಟು ಹೋಗಲಿ, ಎಂದು ಹೇಳಿದನು. ಹೀಗೆ ಹೇ. ಳುತ್ತಲೇ ಆ ತಮಸ್ಸು ನಾಶವಾಯಿತು. ಭಕ್ತರಕಣನಾದ ನಾರಾಯಣ ನ ಆತ್ಮಾರ್ಥವಾದ ಚಕ್ರವು ಮೊದಲಿದ್ದಂತೆಯೇ ಇದ್ದಿತು, ಮುನಿಶ್ರೀ ಸ್ಥರು ಭಯವನ್ನು ಕಳೆದುಕೊಂಡು ಗೋವಿಂದನಿಗೆ ವಂದನೆಯನ್ನು ಗೈದು ಶೋಕದಿಂದ ತೃಪ್ತರಾಗಿ ಹೊರಟುಹೋಗುತ್ತ ಒಬ್ಬರಿಗೊಬ್ಬರು ಇನ್ನುಮೇಲೆ ನಾವು ಕನ್ಯಾಪರಿಗ್ರಹವನ್ನೆಂದಿಗೂ ಮಾಡಬಾರದು, ಎಂದು ಪ್ರತಿಜ್ಞೆ ಮಾಡಿಕೊಂಡು ಧ್ಯಾನಪರರಾಗಿ ಪೂವ್ವದಂತ ನಿಯಮದಲ್ಲಿದ್ದರು, ಆ ಅಂಬರೀಷರಾಜನು ಭೂಮಿಯನ್ನು ಪಾಲಿಸಿ ನೃತ್ಯ ಜ್ಞಾತಿಗಳೊಡನೆ ವಿಷ್ಣುಲೋಕದಲ್ಲಿ ವಾಸವಾಗಿದ್ದನು, ಅಂಬರೀಷನಿಗೂ ಆ ದೇವಮುನಿ ಗಳಿಬ್ಬರಿಗೂ ಗೌರವವುಂಟಾಗಲು ರಾಮನು ದಶರಥಪುತ್ರನಾಗಿ ಜನಿಸಿ ತಮಸ್ಸಿನಿಂದ ಲುಪ್ತವಾದ ಬುದ್ಧಿಯುಳ್ಳವನಾದನು. ಒಮ್ಮೊಮ್ಮೆ ಈ ರವಶದಿಂದ ಆತ್ಮಸ್ಕೃತಿಯೂ ಉಂಟಾಗುತ್ತಿತ್ತು, ಮಹಾಬಾಹುವಾ ದ ಶ್ರೀರಾಮನು ಪರಿಪೂರ್ಣಕಾಮನಾದರೂ ಅಪೂರ್ಣ ಕಾಮನಂತ ನಟಿಸುತ್ತಿದ್ದನು, ಪ್ರಭುಗಳ ಈ ವರ್ತನವು ಭಕ್ತಾನುಗ್ರಹಾರ್ಥವಲ್ಲದೆ ಬೇರೆಯಲ್ಲ. ಮಾಯೆಯನ್ನು ಮಾಡಿದುದರಿಂದ ಪರಮೇಶ್ವರನು ಮನ ಏಜನ್ಮವನ್ನೆತ್ತಬೇಕಾಯಿತು, ಆದಕಾರಣ ವಿದ್ವಾಂಸರು ರೋಷವ ನ್ನು ತಿಳಿದು ಮಾಯೆಯನ್ನು ಮಾಡಬಾರದು, ಎಲೆ ಮುನಿಯ | ಈ ರೀತಿಯಾಗಿ ರಾಮನ ಜನ್ಮಕ್ಕೆ ಕಾರಣವನ್ನು ಅಂಬರೀಷನ ಮಹಾತ್ಮ ಯನ್ನೂ ಹರಿಯ ಮಾಯೆಯನ್ನೂ ನಿನಗೆ ತಿಳಿಸಿರುವನು, ಆರಾದರೂ ಈ ಹರಿಯ ಮಾಯಾವಿತ್ವವನ್ನು ಕೇಳಿದರೂ ಸರಿಯೇ ಓದಿದರೂ ಸರಿ ಯೇ ಅವರು ಮಾಯಾರಹಿತರಾಗಿ ವಿಷ್ಣುಲೋಕವನ್ನೆ ದುವರು. ಅಲ್ಲದೆ ರಾಮನ ಜನ್ಮವನ್ನು ಯಾರು ಭಕ್ತಿಯಿಂದ ಕೇಳುತ್ತಾರೋ ಅಥವಾ ಪಠಿ ಸುತ್ತಾರೋ ಅವರೆಂದಿಗೂ ಯಮನಿಗೆ ಭಯಪಡಬೇಕಾದುದಿಲ್ಲ, ಅವರು ಪರಮೇಶ್ವರನ ಗೃಹಕ್ಕೆ ಅತಿಥಿಗಳಾಗುವರು, ನಾಲ್ಕನೆಯ ಅಧ್ಯಾಯವು ಮುಗಿದುದು,