ಪುಟ:ಅನುಭವಸಾರವು.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ನೇ ಸೂತ್ರ- ಜೀವಂಗವಸ್ಥಾತ್ರಯನಿರೂರ್ಪಣ. ಜೇವನೆಡೆಯಾಟದಿಂದೇನಹುದದೆಲ್ಲಮಂ | ದೇವಪೇಳೆನಗೆಂದೂಕೊರೆದನಂದು | ೧ ತಿ ಬಳಕಲಾಗುರುಪಾದ ನ೪ನಕ್ಕೆ ನಮಿಸಿನಿ | ರ್ಮಳರಪಕರುಣಿ ಸೆನುತೆ ಕೈಮುಗಿವುತಂ 1 ಬೆಳಸಿಬಿಸಿದನುಸೂನು | • ಗುರುವೆ ಜೀವಾತ್ಮ ನಾಸರಸಿಜದೊಳೆಂತುಸಂ ! ಚರಿಪನದಕೇನುಕಾ ರಣವದಂನೀನೆ 1 ಕರ್ರುದಿಂದೊರೆವುದೆನಗೋಲು | ಎನೆಕೇಳುವತ್ಸಬೇವನು ಕರವಶದಿನಾ | ತನುಮಧ್ಯಕಮಲದಲ್ಲಿ ಸು ೪ವಂತನಗೆ | ಮನವರಥವಾಗಲದನೇರಿ | ವರಭಕ್ತಿ ಕ್ಷುಧೆಕೊಸದುರಿತಲೀಲಾಗಮನ | ಸುರತಧನದಾಸೆಗಳು ಪೂರ್ವಎಂದುಶ್ರುತಿ | ಯಿರಲೆಂಟುದಳದಗತಿಯಕ್ಕು ೩ 8 ೪ನೇ ಸೂತ್ರ-ಜೀವನಿಗವಸ್ಥಾತ್ರಯನಿರೂಪಣೆ. ಜೀವನಸಂಚಾರದಿಂದ ಏನೇನಾಗುತ್ತದೋ ಅದೆಲ್ಲವನ್ನೂ ನನಗೆ ತಿಳಿಸೆಂದು ಶಿಷ್ಯನು ಕೇಳಲಾಗಿ ಗುರುವು ಆಗ ಹೇಳಿದನು. ೧ ಅನಂತರದಲ್ಲಿ ಶಿಷ್ಯನು ಗುರುವಿನ ಪಾದಕಮಲಕ್ಕೆ ನಮಸ್ಕರಿಸಿ- ಎಲೈ ನಿರ್ಮಲ ಮೂರ್ತಿಯೇ, ದಯಮಾಡು ಎನುತ್ತಾ ಕೈಗಳನ್ನು ಜೋಡಿಸಿ, ಪ್ರೀತಿಪೂರ್ವಕವಾ ಗಿ ಅರಿಕೆಮಾಡಿದನು. ಎಲೈ ಗುರುವೇ, ಜೀವಾತ್ಮನು ಆ ಹೃದಯಕಮಲದಲ್ಲಿ ಹೇಗೆ ಸಂಚರಿಸುತ್ತಾನೆ ? ಅದಕ್ಕೆ ಕಾರಣವೇನು ? ಈ ಸಂಗತಿಯನ್ನು ದಯೆಯಿಂದ ನನಗೆ ಬೋಧಿಸಬೇಕು. ೩ ಹೀಗೆ ಕೇಳಲಾಗಿ (ಗುರುವು ಹೇಳುತ್ತಾನೆ.) ಎಲೈ ಮಗನೇ, ಜೀವನು ಕರಾಧೀನ ನಾಗಿ ಆ ಹೃದಯಕಮಲದಲ್ಲಿ ಮನಸ್ಸೆ ತನಗೆ ರಥವಾಗಲಾಗಿ ಅದನ್ನು ಹತ್ತಿ ಸಂಚರಿಸುತ್ತಾನೆ. ಪೂರ್ವೆ, ಎಂದು ಶ್ರುತಿಯಿರಲಾಗಿ, ಜೀವನು ಆ ಹೃದಯ ಕಮಲದ ಎಂಟು ದಳಗ ಇಲ್ಲಿ ಸಂಚರಿಸುವಾಗ ಕ್ರಮವಾಗಿ ಪೂರ್ವದಳ ಮೊದಲುಗೊಂಡು ಭಕ್ತಿ, ಹಸಿವು, ಸಿಟ್ಟು, ಪಾಪಬುದ್ದಿ, ಆಟ, ಸಂಚಾರ, ಸ್ತ್ರೀಸಂಗ, ಹಣದಾಸೆ, ಇವುಗಳುಂಟಾಗುತ್ತವೆ. ಶ್ರುತಿ- ಪೂರ್ವಭಕ್ತಿ ಕುಧಾಗ್ನೆಯೆಯಾಖ್ಯಿಕೊಪಸ್ತು ನಿಕೃತ್ | ಪಾಪಧೀರ್ವಾರುಣೆ ಲೀಲಾವಾಯವ್ಯಾಂಗಮನಂತಥಾ || ಉತ್ತರೆಸುರತಂಜೈವಧನಕಾಂಕ್ಷಾ ತಥಾಪರೆ ||