ಪುಟ:ಅನ್ನಪೂರ್ಣಾ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಅನ್ನಪೂರ್ಣಾ

ಇಬ್ಬರ ಕಣ್ಣುಗಳಲ್ಲೂ ಹನಿ ಮೂಡಿತ್ತು.
ಮಗುವನ್ನು ಮುದ್ದಿಸಿ ಆನಂದ್ ವಾಪಸು ಹೊರಟ.
........ನಾಲ್ಕು ಗಂಟೆಗೆ__ವಾರಪತ್ರಿಕೆಯ ಕ್ರುಷ್ಣಯ್ಯ ಬಂದಾಗ ಪರಿ
ಸ್ಥಿತಿಗೆ ಕಳೆ ಏರಿತು !
ಹದಿನಾರು ವರ್ಷ ಪತ್ರಿಕೋದ್ಯೋಗಿಯಾದ್ದ ವಿಧುರ ಕ್ರುಷ್ಣಯ್ಯ
ನಿರುದ್ಯೋಗಿಯಾಗಿದ್ದರು! ಹದಿನಾರು ವರ್ಷದ ಹಟಯೋಗ, ಕರ್ಮ
ಯೋಗ....ಆ ಆದರ್ಶ ಜೀವಿ ತೆತ್ತ ಬೆಲೆಯೋ?__ಮಹಾತಾಯಿಯಾದ
ತನ್ನ ಪತ್ನಿ, ಹತ್ತು ವರ್ಷದ ಎಳೆಯ ಮಗುವೂಂದು, ಈ ಇಬ್ಬರ ಮರಣದ
ಅನಂತರವೂ ನಾಲ್ಕು ಮಕ್ಕಳು ಉಳಿದಿದ್ದರು. ಹಿರಿಯ ಇಂಜನಿಯರಿಂಗ್
ಮೊದಲ ವರ್ಷ ಓದುತ್ತಿದ್ದಾನೆ; ಮಗಳು ಮದುವೆಗೆ ಸಿದ್ಧಳಾಗಿ ಬೆಳೆದು
ನಿಂತಿದ್ದಾಳೆ....
ಕ್ರುಷ್ಣಯ್ಯ ಇಷ್ಟು ವರ್ಷ ಪತ್ರಿಕೋದ್ಯಮದ ಬಾವುಟ ಹಾರಿಸಿದ್ದೇ
ಹಾರಿಸಿದ್ದು. ಸಂಪಾದನೆ?__ನರೆತ ತಲೆಗೂದಲು ತೀರಾ ಬಿಳಿ ! ಜತೆಗೆ
ಗೂರಲು ಕೆಮ್ಮು....ಈಗ ವಿಸ್ತಾರವಾದ ರಾಜಬೀದಿಯಲ್ಲಿ ಸ್ವತಂತ್ರನಾಗಿ
ನೇರವಾಗಿ ನಡೆಯಬಹುದು. ಮೂಗೇ ಇಲ್ಲದ ಬೀದಿನಾಯಿಯ ಹಾಗೆ.
ವಿಧುರ ಕ್ರುಷ್ಣಯ್ಯ ಹೇಳುತ್ತಿದ್ದಾರೆ: " ಸಾರ್ ಪತ್ರಿಕೋದ್ಯೋಗಿ
ಕ್ರುಷ್ಣಯ್ಯನವರ ಶೋಚನೀಯ ನಿಧನ; ಅವರ ಜನಪ್ರೀಯ ವಾರಪತ್ರಿಕೆ
ಯನ್ನು ಜನರ ಬದಲು ಬೇರೆ ಯಾರೋ ಮಹಾನುಭಾವರು ಕೊಂಡು
ಕೊಂಡರು ; ಕ್ರುಷ್ಣಯ್ಯ ಹುತಾತ್ಮರು__ಎಂದು ಬರೀರಿ ಸಾರ್ !"
ಆನಂದ್ ಮೂಕನಂತೆ ಕುಳಿತ.
ಸಂಜೆ ಆನಂದ್, ಮಹಾದೇವ, ಕ್ರುಷ್ಣಯ್ಯ__ತಿರುಗಾಡುತ್ತ ಹೊರ
ಟರು....ಗೊತ್ತಿಲ್ಲದ, ಗುರಿಇಲ್ಲದ ತಿರುಗಾಟ.......ಕ್ರುಷ್ಣಯ್ಯ "ಖಾಕಿ
ಸಿಗರೇಟ್ " ನ್ನು ಹೊರತೆಗೆದರು. ಮಹಾದೇವನಿಗಾದರೋ ಕಡಿಮೆ ಪಕ್ಷಕ್ಕೆ
ಬರ್ಕ್ಲ ಬೇಕು....ಆದರೆ ಕೊಂಡುಕೊಳ್ಳಲು ಕಾಸಿಲ್ಲ....ಆನಂದನಿಗೆ ಅಂಥ
ಚಾಳಿಯಿಲ್ಲ.
ಸರ್ಕಲ್ಲಿನ ಹತ್ತಿರ ಕಾಶೀನಾಥನ ಭೇಟಿಯಾಯಿತು. ಸಂಗೀತ, ಚಲ
ಚ್ಚಿತ್ರ, ನ್ರುತ್ಯ, ರಾಜಕೀಯ, ಸಂಗೀತಶಿಕ್ಷಣ, ತತ್ವಜ್ಞನ, ಸಾಹಿತ್ಯ, ಬ್ಲಾಕ್