ಪುಟ:ಅನ್ನಪೂರ್ಣಾ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಅನ್ನಪೂರ್ಣಾ

" ಅಮೇರಿಕನ್ ಇನ್ ಫರ್ಮೇಶನ್ ಸರ್ವೀಸಿನವರು, 'ಕನ್ನಡ ಸೆಕ್ಷನ್
ತೆರೀಬೇಕು, ನೀನೇ ಅರ್ಗನೈಸ್ ಮಾಡೂ'ಂತಾ ನನ್ನ ಕೆಳ್ಕೊಂಡಿದ್ದಾರೆ
ಸಂಬಳ ತಕ್ಕಮಟ್ಟಿಗಿದೆ. ಹಂಡ್ರಡ್ ಡಾಲರ್ಸ ಪರ್ ಮಂತ್__೫೦೦
ರೂಪಾಯಿ...."
ಕ್ರುಷ್ಣಯ್ಯ ನೊಂದಮನಸ್ಸಿನಿಂದ ಉಗುಳುನುಂಗಿಕೊಂಡರು. ಆನಂದ
ತಲೆಬಾಗಿದ. ದ್ರುಷ್ಟಿಪ್ಯಾಂಟಿನಕಡೆಗೆ ಮಾಸಿದ ಶೂಸಿನಕಡೆಗೆ ಹರಿಯಿತು
ಮಹಾದೇವ. ಹಾದು ಹೋಗುತ್ತಿದ್ದ ಸಿಂಧಿ ಹುಡುಗಿಯರಿಬ್ಬರನ್ನು
ನೋಡಿದ.
ದ್ರುಷ್ಟಿಯೂ ಆತ್ತ ತಿರುಗಿತು. ಆನಂದನ ಕೈಗಳ ಪ್ಯಾಂಟಿನ ಜೇಬುಗಳ
ಒಳಗಿದ್ದವು. ಎಡಗೈಬೆರಳುಗಳು ಲಟಿಕೆ ಮುರಿಯುತ್ತಿದ್ದವು. ಬಲಗೈ
ಜೇಬಿನಲ್ಲಿ ಆರೆಂಟಾಣೆಯಿತ್ತು. ಆದರೆ ಮನೆಗೆ ತರಕಾರಿ ಒಯ್ಯಬೇಕು
ಒಂದು ಕಸಬರಿಕೆ ಒಯ್ಯಬೇಕು. ಮಹಾದೇವನ ಮುಖವಾದರೋ ಅಳ
ಮೋರೆಯೇ. ಕಾಶೀನಾಥನ ಪರ್ಸಿನಲ್ಲಿ ರೂಪಾಯಿಗಳಿದ್ದುವು. ಆದರೆ
ಸಹೋದ್ಯೋಗಿಗಳಿಗೆ ತಿಂಡಿತೀರ್ಥ ಎಂದೂ ಕೊಟ್ಟವನಲ್ಲ ಆತ. ಮೇಲಾಗಿ
ಆ ಹಣ ವೆಚ್ಚಕ್ಕೆ ಬೇಕು.
ಕಾಲುಗಳು ಮುಂದೆ ಸಾಗಿದುವು; ಹೋಟೆಲು ಹಿಂದುಳಿಯಿತು.
× × × ×
....ರಾತ್ರೆ ಬಹಳ ಹೊತ್ತು ಆನಂದನಿಗೆ ನಿದ್ದೆಬರಲಿಲ್ಲ. ಮೈ ಕೈ
ನೋಯುತ್ತಿತ್ತು. ಹ್ರುದಯ ಮಿಡಿಯುತ್ತಿತ್ತು. ಮನಸ್ಸು ಸಿಡಿಯುತ್ತಿತ್ತು....
" ಥೂ " ಎಂದುಕೊಂಡನಾತ.... " ಎಂಥ ಜೀವನ !"
.... ಚಲಪತಿರಾಯರು ಭಾಷಣ ಕೊಡಬಹುದು__ಪತ್ತಿಕೋದ್ಯೋಗಿ
ಗಳೆಲ್ಲ ಟ್ರೇಡ್ ಯೂನಿಯನ್ ತಳಹದಿಯ. ಮೇಲೆ ಸಂಘಟಿತರಾಗಬೇಕು_
ಎಂದು. ಆದರೆ ವಾಸ್ತವಾಂಶವೇನು ? ಕ್ರೂರ ಸತ್ಯವೇನು?
....ನಾಳೆ ತಾರೆಗೆ ತಿಳಿಸಬೇಕು ಅತ್ತೆ ಮನೆಯವರು ಏನುಬೇಕಾ
ದರೂ ತಿಳಿದುಕೊಳ್ಳಲಿ, ತಾರೆಯನ್ನು ಈ ಸಲವೂ ಹೆರಿಗೆಗೆ ಮೊದಲಮಗುವಿ