ಪುಟ:ಅನ್ನಪೂರ್ಣಾ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸುಮಂಗಲೆ ಶಿರಿನ್

ಆದರು ಮೊಳಗುತ್ತಲೇ ಇದೆ ಮಂಗಳವಾದ್ಯ . ಎಷ್ಟು ಮಧುರ !
ನೂರು ಕೃಷ್ಣರು ನೂರು ದಿಕ್ಕುಗಳಿಂದ ಮುರಲಿ ನುಡಿಸಿದ ಹಾಗೆ ! ಆದಕ್ಕೆ
ಮಾರುಹೋಗಿ ಆಕೆ ಮುಗುಳ್ನಗುತ್ತಿದ್ದಾಳೆ....
ಕಾರಿರುಳು ಓಡುತ್ತಿದೆ....ಬರುತಲಿದ್ದಾಳೆ ಉಷೆ.
ಆದರೆ ಆ ತಾಯಿ ? ಅಯ್ಯೋ-ಅದೆಂಥ ರೋದನ ಒಮ್ಮೆಲೆ! ಯಾಕೆ
ಏನಾಯಿತು?
ಡಾಕ್ಟರ್ ಶಿರಿನ್ ಳನ್ನು ಪರೀಕ್ಷಿಸುತ್ತಿದ್ದಾಳೆ. ಲೇಡಿ ಡಾಕ್ಟರ್ ಹುಡುಗಿ
ತಾಯಿಯನ್ನು ಸಂತೈಸುತ್ತಿದ್ದಾರೆ. ಯಾರೋ ಮಿತ್ರರು ಆ ತಂದೆಯನ್ನು
ಕುರ್ಚಿಯ ಮೇಲೆ ಕುಳ್ಳಿರಿಸುತ್ತಿದ್ದಾರೆ. ಆ ಹುಡುಗಿಯರು " ಅಕ್ಕಾ-
ಪ್ರೇಮಕ್ಕಾ " ಎಂದು ಕರೆಯುತ್ತಿದ್ದಾರೆ. ಗಾಳಿ ಬಲವಾಗಿ ಬೀಸಿ ಆಸ್ಪತ್ರೆ
ಯೊಂದು ಗಾಜಿನ ಕಿಟಕಿಯನ್ನು ಅಪ್ಪಳಿಸುತ್ತಿದೆ.ಹೊರ ಆಂಗಳದಲ್ಲೊಂದು
ನಾಯಿ ಭೋ... ಎಂದು ಕೂಗುತ್ತಿದೆ.
****
ಜೀಲಂ ನದೀ ತಟದಿಂದ ಧಾವಿಸಿ ಬಂದ ಕುಟುಂಬ ಅದು. ಮತಾಂ
ಧತೆಯ ಮುಸುಕಿನಲ್ಲಿ ಪ್ರಾಣನೀಗಿದ ಹಿರಿಯ ಮಗನನ್ನು ಬಿಟ್ಟು ಆ ಸಿಂಧಿ
ತಾಯ್ತಂದೆಯರು, ಸಾಧ್ಯವಿದ್ದಷ್ಟುನ್ನು ಎತ್ತಿಕೊಂಡು, ಐವರು ಹೆಣ್ಣುಮಕ್ಕ
ಳೊಡನೆ ಇಳಿದು ಬಂದರು. ಮುಂಬಯಿಗೆ,ಅಲ್ಲಿಂದ ಪುಣೆಗೆ,ಮತ್ತೆ ಅಲ್ಲಿಂದ
ಕನ್ನಡದೇಶದ ರಾಜಧಾನಿಗೆ......ಅವರ ಪಯಣ ಬೆಳೆಯಿತು. ಎಂಥ ಅರ್ಥ
ಹೀನ ವಿನಿಯಮ ! ಉತ್ತರಕ್ಕೆ ಮುಸಲ್ಮಾನ ಕುಟುಂಬಗಳು; ದಕ್ಷಿಣಕ್ಕೆ
ಮುಸಲ್ಮಾನೇತರ ಕುಟುಂಬಗಳು. ದ್ವೇಷಗಳ ಉರಿವ ಕೊಳ್ಳಿಯನ್ನೆತ್ತಿ
ಕೊಂಡು ಅವರು ಸಾಗಿದರು. ಅತ್ಯಂತ ಕರಾಳವಾದೊಂದು ಅಧ್ಯಾಯವನ್ನು
ದೇಶ ಬರೆಯಿತು-
ಗುರುಬಕ್ಷಸಿಂಗ್ ತೀರ ಬಡವನಲ್ಲ. ಮಡದಿ ಮಕ್ಕಳ ಮೇಲಿದ್ದ
ವಸ್ತು-ಒಡವೆ ಆ ಕುಟುಂಬದ ಬೆಂಗಾವಲಿಗೆ ನಿಂತುವು. ಕನ್ನಡದೇಶವನ್ನ
ವರು ತಮ್ಮ ಪುನರ್ಜನ್ಮದ ತಾಯ್ನಾಡೆಂಡು ಬಗೆದರು. ಗುರುಬಕ್ಷಸಿಂಗ್
ಸಣ್ಣದೊಂದು ಬಟ್ಟೆಯಂಗಡಿ ತೆರೆದ. ಚಿಕ್ಕಮಕ್ಕಳೆರಡು ಶಾಲೆಗೆ ಹೋಗಿ
ಕನ್ನಡ ಹುಡುಗಿಯರಾದುವು.