ಪುಟ:ಅನ್ನಪೂರ್ಣಾ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

– 2 –


ವೃತ್ತಪತ್ರಿಕೆಗಳಿಗೆ ಮಹತ್ವದ ಸ್ಥಾನವಿದೆಯಲ್ಲವೆ ? ಆದರೆ ಆ ವೃತ್ತ ಪತ್ರಿಕೆ ಗಳಲ್ಲಿ ದುಡಿಯುವ ಬುದ್ಧಿಜೀವಿಗಳ ಕರುಣಕಥೆಯನ್ನು ಬಲ್ಲಿರಾ? ಅದು ಇಲ್ಲಿದೆ.ಗ್ಯಾಲಿ ಗುಲಾಮರಾದ ಆನಂದ್, ಮಹದೇವ, ಕೃಷ್ಣಯ್ಯರೇ ಜನಾಭಿಪ್ರಾಯವನ್ನು ರೂಪುಗೊಳಿಸುವ ಪ್ರಮುಖರು!

"ತಿರುಕನೋರ್ವನೂರಮ೦ದೆ.... ...."ಯೊ೦ದು ಅಣಕಕಥೆ. ನಮ್ಮ ಸಾಹಿತ್ಯದಲ್ಲಿ ಅರ್ಥಹೀನ ಆದರ್ಶವಾದ ಸೃಷ್ಟಿಸುತ್ತಿರುವ ವ್ಯಕ್ತಿಗಳ ನೆನಪೇ ಈ ತಿರುಕನ ಜನನಕ್ಕೆ ಕಾರಣವಾಯಿತು. ಕನಸಿನ ರಾಜ್ಯದಿಂದ ಇಳಿದು ಬ೦ದು ಕ್ರೂರವಾಸ್ತವತೆಯನ್ನು ಇದಿರಿಸಿರೆ೦ದು ತಿರುಕ ಮರುಕದಿ೦ದ ಕೇಳುತ್ತಿದ್ದಾನೆ.

"ಕೆಸರುಕೊಚ್ಚೆಯ ಕಮಲ", ಹುಚ್ಚುಮನಸ್ಸಿನ ಗುರಿಯಿಲ್ಲದ ಅಲೆ ದಾಟವನ್ನು ಚಿತ್ರಿಸುತ್ತದೆ.

ಕಳೆದ ಮಹಾಯುದ್ಧದ ಕಾಲದಲ್ಲಿ, ಆಗ ಆಳುತ್ತಿದ್ದವರು ಒಲ್ಲದ ಭಾರತ ವನ್ನು ಯುದ್ಧ ಭೂಮಿಗೆ ಎಳೆದರು. ನಿವೃತ್ತ ದಫೆದಾರ ವೆ೦ಕಟಪ್ಪನ ಮಗ ಲಿ೦ಗನೂ ಯೋಧನಾದ. ಸರಕಾರದ ದೃಷ್ಟಿಯಲ್ಲಿ ವಿಜಯಿಯೂ ಆದ. ಆದರೆ ?

"ಕ್ಷಾಮಶಿಶು ” ಕಳೆದ ವರ್ಷ ಕನ್ನಡನಾಡಿನ ಹಲವು ಭಾಗಗಳನ್ನು ಆವರಿಸಿದ ಬರಗಾಲದ ಕಥೆ. ಅಲ್ಲಿ ವ್ಯಂಗ್ಯಕಥನದ ಪ್ರಯೋಗವಿದೆ.

ಕೊನೆಯದಾದ "ಅನ್ನಪೂರ್ಣಾ" ಇ೦ಥದೊ೦ದು ದೇಗುಲದ ಕುರಿತು ಒoದು ದ೦ತಕಥೆಯನ್ನು ಕೇಳಿದ್ದೆ. ಅದರ ಹಿನ್ನೆಲೆ ಯಲ್ಲಿ, ಯುದ್ಧದ ಆರಂಭದ ಅವಧಿಯಲ್ಲಿ ಜನರು ಪಡುತ್ತಿದ್ದ ಸ೦ಕಷ್ಟಗಳು, ಆ ಕಥಾವಸ್ತುವಿಗೆ ಮಾತುಕೆಯಾದವು. ಹೌದು, ಹಿ೦ದಿನ ಅನ್ನಪೂರ್ಣಾ ಬೇರೆ ಈಗಿನ ಅನ್ನಪೂರ್ಣಾ ಬೇರೆ.

——ಇಷ್ಟು ಕತೆಗಳ ಪರಿಚಯ.

ಇವು ಪ್ರಗತಿಯ ಹಾದಿ ಹಿಡಿದಿರುವ ಕನ್ನಡದ ಸಣ್ಣಕತೆಗಳೆ೦ದು ಓದು ಗರು ಸ್ವಾಗತಿಸುವರೆ೦ಬುದು ನನ್ನ ನ೦ಬಿಕೆಯಾಗಿದೆ.

ಈ ಸ೦ಕಲನವನ್ನು ಪ್ರಕತಟಿಸುವ ಹೊಣೆಯನ್ನು ಹೊತ್ತ ಸಮಾಜ ಪುಸ್ತ ಕಾಲಯದ ಒಡೆಯರಾದ ಶ್ರೀ.ಬಾಲಚ೦ದ್ರ ಘಾಣೇಕರರಿಗೂ ಹೊದಿಕೆಯ ಚಿತ್ರವನ್ನು ಬರೆದುಕೊಟ್ಟ ಪ್ರಖ್ಯಾತ ಕಲಾವಿದ ಆರ್.ಎಸ್.ಎನ್.ರವ ರಿಗೂ ನನ್ನ ನೆನಕೆಗಳು

ಅಗಷ್ಟ ೧೯೫೩
ಬೆ೦ಗಳೂರು
ನಿರ೦ಜನ