ಪುಟ:ಅನ್ನಪೂರ್ಣಾ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦

ಅನ್ನಪೂ‍ರ್ಣಾ



ಆ ರಾತ್ರೆ ತಾಯಿ ಬಳಿ ಬಂದು ಮಲಗಿದ್ದ ಮಗನ ಮೈದಡವಿದಳು.
ಆತ ಎಷ್ಟೋ ಹೋತ್ತು ಮಾತಾಡಲಿಲ್ಲ. ಮಗನ ತಲೆದಿಂಬನ್ನು
ತನ್ನ ಕಣ್ಣಿರಿನಿಂದ ತೋಯಿಸಿದಳು.ತುಂಬ ನೋಂದುಕೊಂಡಿತ್ತು ಹೆತ್ತ
ಆ ಕರುಳು.
ಕೊನೆಗೂ ತಾಯಿ ಕೇಳಿದಳು:
" ಯಾರನ್ನಾದರೂ ಪ್ರೀತಿಸ್ತಿದೀಯೇನೋ?"
ಆತ ಇಲ್ಲವೆನ್ನಲಿಲ
"ಅಂತೂ ನಾನು ಊಹಿಸಿದ್ದೇ ಸರಿಹೋಯಿತು ಅನ್ನು.ಅಯ್ಯೋ!"
ಎಂದಳಾಕೆ.
"ಅದೇ ಹುಡಗೀನೇನೋ?"
ಆತ ಮತಾಡಲಿಲ್ಲ.
"ಅಯ್ಯೋ ಪ್ರಾರಬ್ಧವೇ,ಹೀಗೂ ಆಗ़್ಹೊಯ್ತೇ!"
ಆಗುವುದೇನು-ಹೋಗುವುದೇನು? ಮಾಧು ತಂದೆ ಸುಮ್ಮನಿರುವರೆ?
ಅವರು ಗುರುಬಕ್ಷಸಿಂಗನನ್ನು ಕರೆದು ಅವಾಚ್ಯ ಬೈಗಳ ಮಳೆ ಸುರಿಸಿದರು:
"ಬಲೆಯಲ್ಲಿ ಕೆಡವೋದಕ್ಕೇನೊ ನೀನು ಹುಡುಗೀರ್ನ ಸಾಕ್ತಿರೋದು !"
ಗದ್ಗದ ಕಂಠದಿಂದ ಸಿಂಗ್ ಹೇಳಿದ:
"ಕ್ಷಮಿಸಿ; ನೋಯಿಸಬೇಡಿ ಮನಸ್ಸನ್ನ.ನನ್ನದೇ ತಪ್ಪು.ಹುಡುಗೀ
ದಲ್ಲ.ತಿಳಿಯಹೇಳ್ತೀನಿ ಆಕೆಗೆ."
ಆದರೆ ಆತ, ಒಡೆದ ಸೌದೆಯನ್ನು ಕೈಯಲ್ಲೆತ್ತಿಕೊಂಡು ಹೊಡೆಯುತ್ತ
ಮಗಳಿಗೆ ತಿಳಿಯ ಹೇಳಿದ. ...ಹಾಗೆ,ಅದೇ ಅರಳುತ್ತಿದ್ದ ಆ ಎರಡು ಮೊಗ್ಗೆಗಳೂ ಸಂಪ್ರ
ದಾಯದ ಕಟ್ಟು ಕಟ್ಟಳೆಯ ಮುಳ್ಳುಬೇಲಿಯೊಳಗೆ ಸಿಲುಕಿಕೊಂಡುವು.ಆ
ಮನಗಳನ್ನು ಮುರಿದರು;ಶರೀರಗಳನ್ನು ಜರ್ಜರಿತಗೊಳಿಸಿದರು.
ಅವರು ಪರಸ್ಪರರನ್ನು ಪ್ರೀತಿಸಿದ್ದು ಎಂಥ ಅಪರಾಧ!ಎಂಥ ಅಕ್ಷಮ್ಯ
ಅಪರಧ!ಸಮಾಜದ ಬುಡಕಟ್ಟೆ ಸಡಿಲಗೊಂಡು ಅಲ್ಲೋಲ
ಕಲ್ಲೋಲವಾಗುವ ಹಾಗೆ ಅವರು ನಡೆಯುವುದೇ?
"ಮನೆ ಬಿಟ್ಟುತೋಲಗು!" ಎಂದರು ತಂದೆ,ಮಗನಿಗೆ.