ಪುಟ:ಅನ್ನಪೂರ್ಣಾ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೪

ಅನ್ನಪೂರ್ಣ

ಆದರೆ ಆ ಸಾವಿನ ಒಪ್ಪಂದ.ಆ ಎರಡು ಹಿರಿಯ ಜೀವಿಗಳ ಮಹಾ
ಹಂಬಲಕ್ಕೆ ಕಿರಿಯ ಮುಕ್ತಾಯ...ಕಲ್ಲನ್ನು ಕರಗಿಸುವ,ಕತ್ತನ್ನು ಒತ್ತರಿಸುವ
ಉಗುಳು ನುಂಗಿಸುವ ಆ ಘಟನೆ.
ಶಿರಿನ್‍ಗೆ ಆಗ ಅದೊಂದು ತಿಳಿಯದು.ಸಾವು ಬದುಕುಗಳ ನಡುವೆ
ಗುಟುಕರಿಸುತ್ತಿದೆ ಅವಳ ಜೇವ. ಇ೦ಗದ ಆಸೆಯನ್ನು ಆ ಬೊಗಸೆಗಣ್ಣು
ಗಳು ಹೊರಸೊಸುತ್ತಿವೆ.
ಪ್ರಜ್ಙೆ ಮರಳಿಬರುತ್ತದೆ.
"ಇನ್ನು ಅಪಾಯವಿಲ್ಲ-!" ಎನ್ನುತ್ತಿದ್ದಾರೆ ಡಾಕ್ಟರು. ಲೇಡಿಡಾಕ್ಟರು
ಮುಗುಳ್ನಗುತ್ತಿದ್ದಾರೆ. ಸಾವಿನ ಒಪ್ಪಂದವನ್ನು ಮುರಿದುಹಾಕಿದರು,ಬದು
ಕಿನ ಆರಾಧಕರಾದ ಆ ಡಾಕ್ಟರು. ಒಂದು ಜೀವವನ್ನು ಅವರು ಉಳಿಸಿದ
ಹಾಗಾಯಿತು.
ಶಿರಿನ್ ಬಲು ನಿಧಾನವಾಗಿ ಚೇತರಿಸಿಕೊಂಡಳು.ಆಕೆಗೆ ಮುಕ್ತಿ
ಬೆಕಿತ್ತು.ಆದರೆ ಅದನ್ನು ಎಲ್ಲರೂ ಸೇರಿ ನಿರಾಕರಿಸಿದ್ದರು. ಎಂಥ
ಪಿತೂರಿ!ಒಳಸಂಚು! ಆಕೆಯ ಮನಸ್ಸು ಕಹಿಯಾಗಿತ್ತು.ಡಾಕ್ಟರಿಗೆ ಆಕೆ
ಕೃತಜ್ಙತೆ ಅರ್ಪಿಸಲಿಲ್ಲ.
ಮಧು?ಮಧು? ಮತ್ತೆ ಜೀವ ಆತನಿಗಾಗಿ ಹಂಬಲಿಸುತ್ತಿತ್ತು.
ಎಲ್ಲಿ ಆತ?ಎಲ್ಲಿ?
ಯಾರೊಬ್ಬರೂ ಉತ್ತರ ಕೊಡರು. ಹಿರಿಯರನ್ನಾಕೆ ಬಾಯ್ಬಿಟ್ಟು
ಕೇಳಲಿಲ್ಲ. ಚಿಕ್ಕ ತಂಗಿಯೊಡನೆ ಆಕೆ " ಮಾಮಾ ಎಲ್ಲಿ?" ಎಂದಾಗ
ಉತ್ತರ ಬರಲಿಲ್ಲ.
ಆದರೂ ಆ ಕಣ್ಣುಗಳ ನೋಟ ಅತ್ತಿತ್ತ ಹುಡುಕುತ್ತ ಅಲೆಯಿತು.
ಮೂರನೆಯ ದಿನ ಮಾಧವನ ತಾಯಿ ಬಂದರು.ರಾತ್ರೆಯೆಲ್ಲವೂ
ನಿದ್ದೆ ಬಿಟ್ಟು ಕುಳಿತಿದ್ದ ಶಿರಿನ್‌ಳ ತಾಯಿಯನ್ನು ಕಂಡು ಅವರು ಹೇಳಿದರು:
"ಅಕ್ಕಾ,ನೇವು ಹೋಗಿ ಬನ್ನಿ.....ಸ್ನಾನ ಊಟ ಮುಗಿಸ್ಕೊಂಡು ಬನ್ನಿ.
ನಾನಿರ್ತೀನಿ..."
"ಅಕ್ಕಾ!"
ಮತ್ತೆ ಆ ಗೋಳೋ ಅಳು. ಶಿರಿನ್ ನಿಶ್ಚಲನೋಟದಿಂದ ಇದನ್ನು