ದ್ದಾರೆ. ರೇಡಿಯೋ ದಿಲ್ಲೀ ಕೇಂದ್ರದಿಂದ ಆಶಾವಾದದ 'ಆಯೇಗಾ ಆಯೇಗಾ'
ಅಮರಗೀತವನ್ನು ಮಿಡಿಯುತ್ತಿದೆ.
ಶಿರಿನ್ ದಿಂಬಿಗೊರಗಿ ಕುಳಿತು ಕುಳಿತು, ಕಿಟಿಕಿಯಾಚೆ ದೂರ ದೂರ ನೋಡು
ತ್ತಿದ್ದಾಳೆ. ಇನ್ನೇನು ತಾಯಿ ಊಟವೆತ್ತಿಕೊಂಡು ಬರುವ ಹೊತ್ತು-
ಫರ್ಹಾದ್ ನನ್ನು ಕಳೆದುಕೊಂಡ ಶೀರಿನ್ ಬದುಕಿ ಉಳಿದಿದ್ದಾಳೆ.
ವೈಧವ್ಯ ಪ್ರಾಪ್ತವಾಗಿದೆ ಆಕೆಗೆ.
ವೈಧವ್ಯ. ವೈಧವ್ಯವೆಂದರೆ?
ಮಾಧವನ ಮಧುರ ನೆನಪೊಂದರ ಹೊರತು ಬೇರೇನೂ ಉಳಿಯಲೇ
ಇಲ್ಲವೆ ಆಕೆಯ ಪಾಲಿಗೆ?
... ಹದಿನೇಳರ ವಯಸ್ಸಿನಲ್ಲಿಯೇ ಮುಕ್ತಾಯ ಸಾಧ್ಯವೆ?
. ..ಆ ಬಾಹುಗಳು ಮತ್ತೆ ಬಲಿಷ್ಠವಾಗುವವು. ಆ ಹೃದಯ ಮತ್ತೆ
ತುಂಬಿಕೊಳ್ಳುವುದು. ಮುಖವರಳುವುದು ಮತ್ತೊಮ್ಮೆ.
ಮತ್ತೊಮ್ಮೆ ಶೀತಲಗಾಳಿಗೆ ಮುಖವೊಡ್ಡಿ ಆಕೆ ಮುಂಗುರಳನ್ನು ನೇವ
ರಿಸದೆ ಇದ್ದಾಳೆ? ಅರಳುವ ಚೆಂಗುಲಾಬಿಯನ್ನು ಮತ್ತೊಮ್ಮೆ ಆಘ್ರಾಣಿಸಿ
ಆಕೆ ಎದೆಯುಬ್ಬಿಸಲಾರಳೆ.
. . .ಇಂಥ ನಿಷ್ಠರ ನಿಯಮ ದಿಗ್ಭಂಧನವಿಲ್ಲದ ಸಮಾಜ ಇದ್ದೀತು
ಎಲ್ಲಿಯೋ. ಅಲ್ಲಾಗದಿದ್ದರೆ ಇಂಥ ಸ್ಥಿತಿ ಒದಗುತ್ತಿತ್ತೆ?
... ವಿಶಾಲವಾದುದು ಈ ಪ್ರಪಂಚ. ಅದರಲ್ಲಿ ಎಳೆಯ ಶಿರಿನ್ ಗೆ ಜಾಗ
ವಿಲ್ಲ ಎನ್ನುವವರು ಯಾರು? ಆ ಹಿರಿಯ ಹೃದಯದಲ್ಲಿ ಪ್ರೀತಿಗೆ-ಪ್ರೇಮಕ್ಕೆ
ಮತ್ತೆ ಸ್ಥಾನವಿಲ್ಲ ಎನ್ನುವವರು ಯಾರು?
ಆದರೆ ಮಾಧುವಿನ ಸಹಸ್ರ ನೆನಪು ಆಕೆಯನ್ನಾವರಿಸಿದೆ. ಆರನ ನೆನಪಿ
ಗಾಗಿ ಬದುಕಬೇಕು. ಆ ಕ್ರೂರ ಘಟನೆಗೆ ಸಾಕ್ಷ್ಯವಾಗಿ ಉಳಿಯಬೇಕು.
ಮೈಮರೆಯುತ್ತಿದೆ ಆಕೆಗೆ. ಗತಕಾಲದ ನೆನಪುಗಳು ಭವಿಷ್ಯತ್ತಿನ
ಕಲ್ಪನೆಗಳೊಡನೆ ಲೀನಗೊಳ್ಳುವುದು ಆಗಲೇ.
ಆಕೆ ತನ್ಮಯಳಾಗಿದ್ದಾಳೆ.
ವಿಧವೆಯಲ್ಲ ಆಕೆ-ಸುಮಂಗಲೆ ಶಿರಿನ್!
----------