ಪುಟ:ಅನ್ನಪೂರ್ಣಾ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

ದೆ ಕ್ಯಾಮಶಿಶು ಸಾರ್! ಯಾಕೆ-ಯಾಕೆ ಹಾಗೆ ನೋಡುತ್ತಿದ್ದೀರಿ ? ಇಲ್ಲಿ ಇದ್ದೇನೆ ! ಯಾಕೆ ಬರಿಯಾದೀ ? ಕಾಣಿಸಲಿಲ್ಲವೆಂದೆ ? ಓಹೋ !.. ಕಣ್ಣಿಗೆ ಕಾಣಲಾರದ ಪ್ರೇತ ನಾನು. ನೀವಾದರೋ ಕಣ್ಣಿದ್ದೂ ರುಡರು, ಬಾಳಿನ ಸಂಕಲೆಯಲ್ಲಿ ಬಂಧಿತರಾಗಿ ಒದ್ದಾಡುತ್ತಿರುವ ಪರ ತ್ರರು ನೀವು. ನಾನಾದರೋ ವಿಮುಕ್ತ ಜೀವ......... - ಕೋಲಾರದ ಕೊರಕಲು ಬೀದಿಯಿಂದ ಬಂದಿದ್ದೇನೆ. . ಕಾಲರಾ ಗಲಿ ಸತ್ತು ಬಂಧನದಿಂದ ಪಾರಾಗಿ ಬಂದಿದ್ದೇನೆ. | ಯಾಕೆ ತಲೆಬಾಗಿಸಿದಿರಿ ? ಮುಖ ಮುದುಡಿತು ಯಾಕೆ ? ಯಾಕೆ ಕಂಪನ? ಹೆದರದಿರಿ. ಅಹಿಂಸೆಯ ಆರಾಧಕ ನಾನು, ನಿಮ್ಮ ವೈ ಕಟ್ಟಲಾರೆ. ಬೆಂಗಳೂರಿಗೆ ಬಂದಿರುವವನು ನಾನೊಬ್ಬನೇ-ಒಬ್ಬಂಟಿಗ. ಆದರೆ ನ್ನ ಸಂಗಾತಿಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಈಗ ಅವರೆಲ್ಲ ನಾನಾ ಕುಗಳಲ್ಲಿ ಚೆದರಿ ಹೋಗಿದ್ದಾರೆ. ಬಹಳ ದಿನಗಳಿಂದ ಬೆಂಗಳೂರಿಗೆ ಬರಬೇಕೆಂಬ ಹಂಬಲವಿತ್ತು ತನಗೆ, ಬಿನ್ನಿ ಮಿಲ್ಲಿನಲ್ಲೋ ಮಿನರ್ವಾ ಮಿಲ್ಲಿನಲ್ಲಿ ಕೆಲಸ ಸಿಕ್ಕಿತೆಂಬ ಆಸೆಯಿತ್ತು. ನಾನು ಬೆಂಗಳೂರಿಗಂದೇ ಹೊರಟವನು. ಆದರೆ ಕೋಲಾರ ದಲ್ಲಿಯೇ ಎಲ್ಲವೂ ಇತ್ಯರ್ಥವಾಯಿತು. ದುಡಿಮೆಯ ಸಂಪಾದನೆಯ ಯಾವ ಗೋಳೂ ಇಲ್ಲದ ಸುಖ ನಾನು. ಎಲ್ಲಿಗೆ ಬೇಕಾದಲ್ಲಿಗೆ ವಾಯುವೇಗದಿಂದ ಸಾಗಬಲ್ಲ ಶ್ವೇಚ್ಛಾಚಾರಿ,