ಅನ್ನಪೂರ್ಣಾ
೭೫
ಉತ್ತರ ಬರಲಿಲ್ಲ ಆ ಪ್ರಶ್ನೆಗೆ.
* * * * * *
ಮರುದಿನ ಮುಂಜಾನೆಯ ಪೂಜೆಯ ಹೊತ್ತಿಗೂ ಆ ಭಿಕ್ಷುಕರು ಅಲ್ಲೇ
ಇದ್ದರು.
ಮುಂಜಾನೆಯ ಕರೆ ಬಂದಾಗ ಅವರಲ್ಲೊಬ್ಬ ಹಿರಿಯ ಮುಂದೆ
ಹೋಗಿ ನಿಂತ.
ಅರ್ಚಕ ಸಿಟ್ಟುಗೊಂಡು "ಏನು?" ಎಂದ.
"ಕರೆದಿರಿ. ಬಂದಿದ್ದೇವೆ."
"ಹುಂ,ಈಗ ಆ ಪದ್ಧತಿ ಇಲ್ಲ-ಗೊತ್ತಿಲ್ಲವೆ?"
"ಏನು? ಅನ್ನಪೂರ್ಣೆ ಈಗ ಅನ್ನದಾನ ಮಾಡುವುದಿಲ್ಲವೇ?"
ಅರ್ಚಕನು ಔಡುಗಚ್ಚಿದ,ಅಷ್ಟೆ!
ಆ ಬಡಪಾಯಿ ಸ್ವರವೇರಿಸಿ ನುಡಿದ:"ಯಾಕೆ ಮತ್ತೆ ಈ ಸೋಗು?"
ಅನ್ನಪೂರ್ಣೆ ಒಳಗಣ್ಣಿನಿಂದ ತನ್ನ ಆ ಮಕ್ಕಳನ್ನೂ ನೋಡಿ ನಗುತ್ತಿ
ದ್ದಂತೆ ತೋರಿತು.
ಅರ್ಚಕ ಅರಚಿಕೊಂಡ.
"ಷಂಡ! ನಾಸ್ತಿಕ! ದೇವಿಯನ್ನು ಅವಮಾನಿಸಿ ನರಕಕ್ಕೆ ಹೋಗು
ತ್ತಿದ್ದೀಯೇ"
* * * * * *
"ಢಣ್ ಢಣ್" ಎಂದು ದೇಗುಲದ ಘಂಟೆಯ ಸ್ವರ ಕೇಳಿಸಿತು.
ಅರ್ಚಕ ಮಹಾಶಯ ಗರ್ಭಗುಡಿಯ ಹೊರದ್ವಾರದಲ್ಲಿ ನಿಂತು ಕೂಗಿ
ಹೇಳಿದ:"ಉಣ್ಣಲಿಕ್ಕಿದಾರೆಯೇ? ಇನ್ನೂ ಉಣ್ಣಲಿಕ್ಕಿದ್ದಾರೆಯೇ?"
ಪ್ರಾತಃಕಾಲದ ಅಶಾಂತತೆಯ ಆ ವಾತಾವರಣದಲ್ಲೂ ಅರ್ಚಕನ
ಕರ್ಣ ಕಠೋರ ಕರೆ ಕೇಳಿಸಿತು.
ನಡು ಹಗಲಲ್ಲಿಯೂ ಅದೇ ಕರೆ.
ಸಂಜೆ ಪುನಃ ಅದೇ ಕರ್ಕಶ ಕರೆ.
ನಡುವಿರುಳಲ್ಲಿಯೂ ಆ ಕರೆಯೇ.
___________________