ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೬ ಅಬಲಾ ಸಚ್ಚರಿತ್ರ ರತ್ನ ಮಾಲೆ. : ೩೨, ಅಕ್ಕ ಮಹಾದೇವಿ.-ಈ ವೈರಾಗ್ಯಶೀಲೆಯು ಕ್ರಿ.ಶ. ೧೨ ನೆಯ ಶತಾಬ್ದ ದಲ್ಲಿದ್ದಂತೆ ತಿಳಿಯಬರುತ್ತದೆ. ಈಕೆಯ ತಾಯಿಯ ಹೆಸರು ಸುಗತಿ, ತಂದೆಯ ಹೆಸರು ವಿಮಲನು. ಇವರ ನಿವಾಸಸ್ಥಳವು ಕರ್ಣಾಟಕ ದಲ್ಲಿರುವ ಯುಡತಡಿ ' ಎಂಬ ಗ್ರಾಮ, ಇವರು ಲಿಂಗಬಲಿಜಿಗಳು, ಈಕೆಯು ಬಾಲ್ಯದಿಂದಲು ಶಿವಭಕ್ತಳಾಗಿದ್ದಳು, ಈಕೆಯು ವಿಶೇಷ ಸೌಂದರ್ಯವತಿ ಯಾದುದರಿಂದ ಆ ದೇಶದರಾಜನು ಈಕೆಯನ್ನು ಮೋಹಿಸಿ ವಿವಾಹ ಮಾಡಿ ಕೊಳ್ಳಲೆಣಿಸಿದನು. ಆದರೆ ಅಕ್ಕ ಮಹಾದೇವಿಯು ಭಕ್ತಿಯೇ ಮುಕ್ತಿ ಸಾಧನ ವಾದುದೆಂದು ರಾಣಿಯ ಪದವಿಯನ್ನು ಸಹ ಧಿಕ್ಕರಿಸಿ ಅವಿವಾಹಿತೆಯಾಗಿರಲು ನಿಶ್ಚಯಿಸಿಕೊಂಡು, ರಾಜನಿಗೆ ಹೆದರದೆ ಆತನನ್ನು ತಿರಸ್ಕರಿಸಿ ಆ ರಾಜ್ಯದಲ್ಲಿ ಇರಬಾರದೆಂದು ಅಲ್ಲಿಂದ ಹೊರಟು, ಸರ್ವಸಂಗರಹಿತಳಾಗಿ ಲಿಂಗಮತ ಹಸದ ಬಸವನ ಸಭೆಗೆ ಬಂದು ಅಲ್ಲಿ ನಲ್ಲಮಪ್ರಭುವೆಂಬ ಮಹಾನುಭಾವ ನಿಂದ ಜ್ಞಾನೋಪದೇಶವನ್ನು ಪಡೆದಳು ಈಕೆಯು ಮದುವೆಯನ್ನು ಮಾಡಿ ಕೊಳ್ಳದೆ, ಶೈವ ಮತವನ್ನು ಸ್ಥಾಪಿಸುವುದರಲ್ಲಿ ಬಸವಣ್ಣನಿಗೆ ಬಹಳ ಸಹಾಯ ವನ್ನು ಮಾಡಿದಳು, ಈಕೆಯ ದೃಢನಿಶ್ಚಯವನ್ನೂ , ಭಕ್ತಿಯನ್ನೂ, ಜ್ಞಾನ ವನ್ನೂ, ಸತ್ವಗುಣವನ್ನೂ ಕಂಡು ಜನರು ಅಕ್ಕಮಹಾದೇವಿಯು ಪಾರ್ವತಿಯ ಸಾತ್ವಿಕಾಂಶ ಸಂಭೂತಳೆಂದು ನಂಬಿದ್ದರು. ೩೩, ತ್ರಿಪುರಾಧೀಶ್ವರನ ಪತ್ನಿ.-ಭರತವರ್ಷಕ್ಕೆ ಪೂರ್ವದಿಕ್ಕಿನಲ್ಲಿ ಪ್ರಾಚೀನಕಾಲದಿಂದಲು ಒಂದು ರಾಜ್ಯವಿದೆ. ಈ ರಾಜ್ಯವು ಅತಿ ಪ್ರಾಚೀನ ಕಾಲದಿಂದ ವರ್ತಮಾನಕಾಲದವರೆಗೂ ಸ್ವದೇಶ ಪ್ರಭುಗಳ ಪಾಲನೆಯಲ್ಲಿಯೇ ಇದೆ. ಇದರ ಹೆಸರು ತ್ರಿಪುರ (ಟಿಪಾರಾ), ಈ ರಾಜ್ಯಾಧಿಪತಿಯ ಪತ್ನಿಯೇ ಈ ಚರಿತ್ರೆ ನಾಯಕಿಯು, ೬೬೦ ವರ್ಷಗಳ ಕೆಳಗೆ ಆ ರಾಜ್ಯವನ್ನು ಮಹಾರಾಜಾ ಚೇಥಮ್ಯಾ ಎ೦ಬ ದೊರೆಯು ಆಳುತಲಿದ್ದನು. ಆಗ ಆ ರಾಜ್ಯದಲ್ಲಿ ಹೀರಾವಂತ ನೆಂಬ ಒಬ್ಬ ಧನಿಕನು ವಾಸಮಾಡುತಲಿದ್ದನು. ಆತನ ಬ೦ಗಾಳಾ ರಾಜನಬಳಿ ಯಲ್ಲಿ ಒಂದು ದೊಡ್ಡ ಅಧಿಕಾರದಲ್ಲಿದ್ದು ಪರಾಕ್ರಮವಂತನೆಂದು ಹೆಸರುಹೊಂದಿ ದನು. ಈ ಹೀರಾವಂತನು ಒಂದು ಸಲ ತ್ರಿಪುರಾಧೀಶ್ವರನನ್ನು ಅವಮಾನ ಗೊಳಿಸಿದನು, ಅದರಿಂದ ಆ ರಾಜನು ಬಹಳ ಆಗ್ರಹಗೊಂಡು ಆತನ ಮೇಲೆ ತನ್ನ ಸೇನಾನಾಯಕರನ್ನು ವಿಪುಲ ಸೈನ್ಯ ಸಹಿತವಾಗಿ ಕಳುಹಿಸಿದನು. ಈ ಸೈನ್ಯವನ್ನು ನೋಡಿ ಹೀರಾವಂತನು ಭೀತನಾಗಿ ವಂಗದೇಶಾಧಿಪತಿಯ ಸಹಾಯವನ್ನು ಕೇಳಲು, ಆತನು ತ್ರಿಪುರಾಧೀಶನ ಸೈನ್ಯಕ್ಕೆರಡರಷ್ಟು ಸೈನ್ಯವನ್ನು ಕೊಟ್ಟನು. ಹೀರಾವಂತನು ಚೇಥವಾ ಸೈನ್ಯಗಳು ಬರುವುದರೊಳಗಾಗಿಯೇ ತನ್ನ ಸೈನ್ಯಗಳನ್ನು ತೆಗೆದು ಕೊಂಡು ತ್ರಿಪುರರಾಜ್ಯವನ್ನು ಸವಿಾಪಿಸಿದನು. ತ್ರಿಪುರರಾಜನು ಹೀರಾವಂತನ ಸೈನ್ಯಗಳು ತನ್ನ ಸೈನ್ಯಕ್ಕಿಂತಲು ಅಧಿಕವಾಗಿರುವುದನ್ನು ನೋಡಿ ಯುದ್ಧ