ಪುಟ:ಅಭಿನವದಶಕುಮಾರಚರಿತೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

even ": ಈ ಗ್ರಂಥಕರ್ತನಿಗೆ 23೦ಡರಾಜನೆಂದು ಹೆಸರು. ಈತನು ತಾ ರದ್ವಾಜಗೋತ್ರದ ಮಧುಸೂದನನೆಂಬ ಬ್ರಾಹ್ಮಣನ ಮಗನು. ಈತನ ತಾಯಿ ಮಲ್ಲವ್ವ ; ಪತ್ನಿ, ಲಕ್ಷ್ಮಿ, ಸರಸಕವಿಶ್ಚರ" ನೆಂಬವನು ಅಣ್ಣನೆಂದು ಹೇಳಿಕೊಳ್ಳುತ್ತಾನೆ. ಅಲ್ಲದೆ, ತಾನು " ಉದ್ದಂಡ ಮನೋ ಹರಪ್ರಚುರಶಿಸ್ಮ'" ಎಂದು ಹೇಳುತ್ತಾನೆ. ವಿಟ್ಠಲಪದಾಂಭೋಜಾತ ಶೃಂಗಂ” “ಹರಿಣಿ ದ ಪಂಕರುಹಮಧುವ್ರತರಿ ಎಂದು ಹೇಳಿಕೊ ಳ್ಳುವುದರಿಂದ, ಈತನು ವಿಷ್ಣುಭಕ್ತನೆಂದು ವ್ಯಕ್ತವಾಗುತ್ತದೆ. ಈತನು “ಪಂಡರೀರಾಮನಭಂಗವಿಟ್ಟಲಂ ಎಂದು ತನ್ನ ಇನ್ಮದೈವವನ್ನು ಸ್ತು ತಿಸಿರುವುದರಿಂದ, ಬಹುಶಃ ಪಂಡರಾಪ್ರರದವನೆಂದು ತೋರುತ್ತದೆ. ಈತ ನಿಗೆ (ಕವಿತಾವಿಲಾಸ,” ('ಕವಿರಾಜಣಿಖರ" ಎಂಬ ಬಿರುದುಗಳು ಇ ದ್ದಂತೆ ತೋರುತ್ತದೆ. ಈತನು ಯಾವ ಕಾಲದಲ್ಲಿದ್ದನೋ ನಿಶ್ಚಯಿಸಿ ಹೇಳಲಾಗುವುದಿಲ್ಲ. ಈ ಕವಿಯನ್ನು ಇತರ ಕವಿಗಳು ಯಾರೂ ಸ್ತುತಿಸಿರುವಂತೆ ಕಾಣುವು ದಿಲ್ಲ. ಈ ಗ್ರಂಥದಿಂದ ಉಧೃತವಾದ ಪದ್ಧಗಳ ಎಲ್ಲಿಯ ಉಯ ಹೃತವಾಗಿಲ್ಲ. ಆದರೂ ಈ ಗ್ರಂಥವು ನಾಗವರ್ಮನ (ಕಾದಂಬರಿ ಯನ್ನೂ, ನೇಮಿಚಂದ್ರನ ವಾಸವದತ್ತಾತ್ಸಾಯಾನುರೂಪವಾದ 'ಲೀಲಾ ವತಿ' ಯನ್ನೂ, ನೋಡಿ ಬರೆದಿರಬಹುದೆಂಬ ಊಹೆಗೆ ಅವಕಾಶವಿರುವು ಗರಿಂದಲೂ, ಈತನು ಕರ್ಣಾಟಕ ಪೂರಕವಿಗಳಲ್ಲಿ ಪಂಪ, ರ್ಪನ್ನ, ಚಂದ್ರ, ರುದ್ರಭಟ್ಟ- ಇವರುಗಳನ್ನು ಸ್ತುತಿಸಿರುವುದರಿಂದಲೂ, ಇನ ರುಗಳಲ್ಲಿ ಆಧುನಿಕನಾದ ರುದ್ರಭಟ್ಟನಿಗಿಂತಲೂ ಈಚೆಯವನಾಗಿರಬೇಕು. ತುನಿ