ಪುಟ:ಅರಮನೆ.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರೀತಿಯಲ್ಲಿ ಜಳಕ ಮಾಡಿ ಮುಖ ಮಯ್ಯಗೆಲ್ಲ ಘಮ ಘಮ ಪ್ರಸಾದನಗಳನ್ನು ಪೂಸಿಕೊಂಡನಲ್ಲದೆ ಯಿಶೇಷವಾದ ಸಮವಸ್ತರ ಧರಿಸಿಕೊಂಡು ತಾನು ತನ್ನ ಪ್ರತಿಬಿಂಬವ ನೋಡಿಕೊಳ್ಳುವ ಸಲುವಾಗಿ ನಿಲುಗನ್ನಡಿಯದುರು ನಿಲ್ಲುವುದಕ್ಕೂ, ಜೆನ್ನಿಫರಮ್ಮಳು ತನ್ನ ಸುಂದರ ಮುಖದಲ್ಲಿ ಕುದುರೆಡವು ಸಂಬಂಧೀ ರೋಮಾಂಚನವನ್ನು ತುಂಬಿಕೊಂಡಲ್ಲಿಗೆ ಬರುವುದಕ್ಕೂ ಸರಿಹೋಯಿತು. ತಾನು ತಳೆವ ನಿನ್ಹಾರವನ್ನು ಬದಲಿಸದ, ಮುಂದಕ್ಕಿಟ್ಟ ಹೆಜ್ಜೆಯನ್ನು ಹಿಂದಕ್ಕಿಡದ ಆಕೆಯನ್ನು ದೊರೆಯು ತನ್ನೊಂದಿಗೇ ಆಸ್ಥಾನಕ್ಕೆ ಕರೆದೊಯ್ದನು. ಅಲ್ಲಿ ಆಗಲೇ ಯಿದ್ದ ಕುದುರೆಡವ ನಿಯೋಗದೊಂದಿಗೆ ಆತನು... ತಮೂರ ದಯವವಾದ ಶ್ರೀಮದ್ ಪ್ರಸನ್ನ ವೆಂಕಟೇಶ್ವರ ಸ್ವಾಮಿಯು ಬಾಲಕನಾಗಿ ದರುಸನ ನೀಡಿರುವನೆಂದರೆ ಕಲೆಟ್ಟರು ಸಾಹೇಬ ಸಾಮಾನ್ಯ ಮನುಷ್ಯನಲ್ಲ.. ಆತನೊಳಗೆ ಸಪ್ತರ್ಷಿಗಳು ತಪಸ್ಸಿಗೆ ಕುಂತಿರಬೌದು? ಯಂದು ರಾಯದುಗ್ಗದ ಮಂದಿ ಅಂಥ ಬರಪೀಡಿತ ಸಂಕಟ ತಾಪತ್ರಯಗಳ ನಡುವೆ ಥಾಮಸು ಮನೋನನ್ನು ಕೊಂಡಾಡುತಿರುವಾಗ್ಗೆ, ಸದರಿ ದುರದ ರಾಜಪರಿವಾರದವರ ಕುಟುಂಬ ಕಲಹ ಯದ್ದು ಹೊಡೆದಾಡುತಿರುವಾಗ್ಗೆ ರಾಯದುಗ್ಗ ಸೀಮೆಯ ನೆತ್ತಿ ಮ್ಯಾಲಿದ್ದ ಆಗಸವು ವಂದಾರ ಮೋಡದ ತುಂಡಿಲ್ಲದೆ ಬಿಕೋ ಅಂತಿರುವಾಗ್ಗೆ, ಸದರೀ ಕಥಾನಕದ ಯರಡನೆಯ ನಾಯಕನಾಗಿದ್ದ ಕಿಟ್ಟರು ಸಾಹೇಬನು ಬಳ್ಳಾರಿಯ ಕಛೇರಿಯೊಳಗ ಕೂಕಂಡು ಕಡತಗಳನ್ನು ತಂದೊಂದಾಗಿ ಆತನ ಕಣ್ಣೂಳಗ 'ರೆಡ್ಡಿಲೋ ರೆಡ್ಡಿರಾ' ಯಂದು ಬಿರುದಾಂಕಿತವಾದ ಗಡೇಕಲ್ಲು ಬೊಬ್ಬಿಲಿ ನಾಗಿರೆಡ್ಡಿಂಯು ತೇಲುತ ಮುಳುಗತಲಿದ್ದನು. ತನ್ನಷ್ಟಕ್ಕೆ ತಾನು ಬಡವರ ಬಂಧು, ಶ್ರೀಮಂತರ ಪಾಲಿಗೆ ಸಿವು ಸಪ್ರವಆದ೦ಥ ರಡ್ಡಿಂರನ್ನು ರಾಬಿನ್ ಹುಡ್ಡಿಗೆ ಹೋಲಿಸಿಕೊಳ್ಳುತಲಿದ್ದನು. ಹಂಗs ಯಲ್ಲಾಪ್ರಕೊರಚರಟ್ಟಿಯ ಜೋರಾಗ್ರೇಸರನ್ನು ನೆನಪು ಮಾಡಿಕೊಳ್ಳದಿರಲಿಲ್ಲ ತಾನು, ಕಡತಗಳ ಪರಿಶೀಲನಾನಂತರ ತಾನು ಸದರಿ ಪಟ್ಟಣಕ್ಕೆ ಮಕುಟಪ್ರಾಯದ ರೀತಿಯಲ್ಲಿರುವ ಕಾರಾಗ್ರುಹಕ್ಕೆ ಭೆಟ್ಟಿ ನೀಡ ಬೇಕಿರುವುದು, ಅದರ ಆಡಳಿತಾಧಿಕಾರಿಯಾದ ಮಾಕನು ತನ್ನನ್ನು ಕರೆದೊಯ್ಯಲಕೆಂದೇ ಹೊರಗಡೆ ಕಾಯುತ್ತ ಕೂತಿರುವನು.. ಅತ್ತ ಕೂಡ್ಲಿಗೆ ಪಟ್ಟಣದೊಳಗಿದ್ದ ತಿಲ್ಲಾನ ತಾಯಕ್ಕೆ ತನ್ನ ಮಗಳು ಚಿನ್ನಸಾನಿ ಮತ್ತೆ ಮ↑ಗಿ ಆದುದನ್ನು ಖುದ್ದನೋಡಿ 'ದೇವರೇ ನೀನು