ಪುಟ:ಅರಮನೆ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦ ಅರಮನೆ ಬಯಟಲೆ ಅವನಿಗೆ ಯಲ್ಲು ಕೂರಿಗೆ ಜಮೀನನ್ನು ಮಂಜೂರು ಮಾಡಿದನು. ಆಗ ಅವನ ಹೆಂಡತಿ ಯೇಳು ತಿಂಗಳ ಬಸುರಿಯಿದ್ದಳಲ್ಲ.. “ಅಯ್ಯಾ ದೊರೆಯ. ನಿನ್ನಿಂದ ನಾನು ವುದ್ದಾರವಾದೆನು. ಗಂಡುಕೂಸು ಹುಟ್ಟಿದಲ್ಲಿ.. ಅದಕ್ಕೆ ನಿನ್ನ ಹೆಸರನ್ನು ಯಿಡುತ್ತೇನೆ.. ಆಗ್ಗೆ ನೀನು ತೊಟ್ಟಿಲ ಕಾರಕ್ಕೆ ಬಂದು ನನ್ನ ಮಗನಿಗೆ ಆಸುರವಾದ ಮಾಡಬೇಕು” ಯಂದು ಯಿನಂತಿ ಮಾಡಿಕೊಂಡನು. ಅದರಂತೆ ಮುಂದೊಂದಿನ ಅವನಿಗೆ ಗಂಡು ಕೂಸಾತು. ಆ ಕೂಡಲೆ ಕತ್ತೆಯೊಂದನ್ನು ಬಾಡಿಗೆ ಪಡೆದು ಅದರ ಮ್ಯಾಲ ಕುಂತು ಕಡಪ ಪಟ್ಟಣವ ತಲುಪಿ ಸಾಹೇಬನಿಗೆ ಸಾಂಪ್ರತು ಸುದ್ದಿ ಮುಟ್ಟಿಸಿದನು.. ಕೊಟ್ಟ ಮಾತಿನಂತೆ ಥಾಮಸು ಮನೋ ಸಾಹೇಬನು ರಾಚೋಟಿಯ ಆ ಬಡ ಕಿಷ್ಯನ ಮಗನ ತೊಟ್ಟಿಲು ಕಾವ್ಯದಲ್ಲಿ ಪಾಲ್ಗೊಂಡಿರುವಾಗ್ಗೆ... ಅಯ್ಯೋರು ಆ ಕೂಸಿಗೆ ಮನೋಪ್ಪನೆಂದು ನಾಮಕರಣ ಮಾಡುತ್ತಿರುವಾಗ್ಗೆ... ಗೂಢಾಚಾರರಾದ ಗುತ್ತೆಪ್ಪ ಮತ್ತಾತನ ಸೋದರರು ನೀಡಿದ ಪತ್ತರವನ್ನು ಮೋದಿಸಿ ಕೆಂಡಮಂಡಲ ವಾದ ಜರಿಮಲೆಯ ಜಗದಪ್ಪ ನಾಯಕನು ನಿಚ್ಚಾಪುರದ ಬಾಲಪ್ಪನಾಯಕನನ್ನು ಮಿತ್ರದ್ರೋಹಿ, ಪರಮ ಘಾತಕ, ಅಮವಾಸೆ ವಳಗಾಗಿ ನಿನ್ನ ರುಂಡವನ್ನು ಚೆಂಡಾಡಿ ತಂದು ಜರಿಮಲೆಯ ಅಗಸೆ ಬಾಗಿಲಿಗೆ ಕಟ್ಟಿಸುವೆನೆಂದು ಘೋರ ಸಪಥ ಮಾಡುತ್ತಿರುವಾಗ್ಗೆ.... ತಾಸುಗಳ ಪರಂತರ ವಂದರ ಮ್ಯಾಲೊಂದು ಪ್ರಶ್ನೆಗಳನ್ನು ಹಾಕಿ ಯಿಚಾರಿಸಿದ ನಂತರ ಜೋನ್ನಗಿರಿಯ ರಾಜನಾದ ಕದಿರೆಪ್ಪನಾಯಕನು ಮದ್ದಿಕೇರಿಯ ಸಂತರಸ್ತರನ್ನು ತನ್ನ ಸಯ್ಯಕ್ಕೆ ಸೇರಿಕೊಳ್ಳುತ್ತಿರುವಾಗ್ಗೆ..... ಯಿತ್ತ ಕುದುರೆಡವು ಪಟ್ಟಣದ ಅರಮನೇಲಿದ್ದ ರಾಜಮಾತೆ ಭಮ್ರಮಾಂಬೆಯ ಕಳುವಿದ್ದ ವಂದೆಲ್ಲು ಮಂದಿ ಸಕರು ಥಳಗೇರಿಯಿಂದ ಹೊತ್ತು ತಂದ ಯಿದ್ಯಾಮಾನಗಳನ್ನು ಕಿವಿಯಾರೆ ಕೇಳಿ ತಿಳಿದು ಭ್ರಮಾಧೀನಳಾಗಿ ರೆಟ್ಟೇಲಿರದಿದ್ದ ರವುಸವನ್ನು ವಡಲೊಳಗೆ ತಂದುಕೊಂಡು ಯಲವೋ.. ಮೋಬಯ್ಯನೇ... ರಾಜಾಗ್ನಿಯನ್ನು ದಿಕ್ಕರಿಸಿದೆಯಾ... ಮೂರು ತಲೆಮಾರು ದುಡಿದರೂ ತೀರದಷ್ಟಿರೋ ಸಾಲದ ರುಣವನ್ನು ಮರೆತೆಯಾ? ನಿನ್ನ ಯಕಃಶ್ಚಿತ್ ವಿ ಳಗೆ ಸಾಂಬವಿ ಹೆಕೆಂಡಿರುವಳೆ೦ದು ಕಪಟ ನಾಟಕವನ್ನಾರಂಭಿಸಿರುವೆಯಾ.. ನಿನಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ನೋಡುತ್ತಿರು. ಮತ್ತೆ ನಿನ ಕ ಪಿಕದಾನಿ ಹಿಡಿಸದಿದ್ದರೆ ನಾನು ರಾಜ ಮಾತೆಯೇ ಅಲ್ಲ” ಯಂದು ಮನದೊಳಗೆ ಸಪಥ ಮಾಡುತ ಹೊರಗಡೆ ಕೇಳಿಸುವಂತೆ