ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಬದಲಾಗಿರುವೆಯಲ್ಲಾ ! ಎಂದು ಹೇಳಿ ಅಳುವುದಕ್ಕೆ ಮೊದಲುಮಡಿದರು. ನಾನು ಅತ್ಯಂತನಾದ ವ್ಯಸನವನ್ನು ಹೊಂ ನನ್ನ ತಮ್ಮನಿಗೂ, ತಂಗಿಗೂ ಉಂಟಾದ ದುರವಸೆಯನ್ನು ನೋಡಿ, ಅಳುತ್ತಾ ಆ ಭಯಂಕರವಾದ ಳವನ್ನು ತೊರೆದು, ಬಾಗಿಲಿಗೆಬಂದು ಮೊದಲಿದ್ದಂತೆ ಕಲ್ಲನ್ನು ಮುಚ್ಚಿ ಮಣ್ಯನ್ನು ಹಾಕಿ, ಈ ಕೂರಕೃತ್ಯವನ್ನು ರಹಸ್ಯವಾಗಿಡಬೇಕೆಂದು, ಮುಂದೆ ಸಾಗಿದೆವು. ಯಾರಿಗೂ ತಿಳಿಯದಂತೆ ನಾವು ಪಟ್ಟಣವನ್ನು ಸೇ ರಿದ ಕೂಡಲೆ ಘೋರವಾದ ರಣಭೇರಿಯಧನಿಯು ಕೇಳಬಂದಿತು. ಅತ್ಯಂ ತವಾದ ಧೂಳೆದು ಆಕಾಶವನ್ನು ಮುಚ್ಚಿಕೊಂಡಿತು. ಇದರಿಂದ ಯಾ ರೂ ಪರರಾಜನು ದಂಡೆತ್ತಿ ಬಂದಿರಬಹುದೆಂದುಕೊಂಡೆವು. ನನ್ನ ತಂದೆ ಯ ರಾಜ್ಯವನ್ನು ಮೋಸದಿಂದ ಎತ್ತಿಹಾಕಿ ಕೂರತನದಿಂದ ನನ್ನನ್ನು ದಂಡಿಸುವಂತೆ ಆಜ್ಞಾಪಿಸಿದ ಮಂತ್ರಿ ಯ ತಾನೇ ರಾಜನಾಗಿರುವುದರಿಂದ ನನ್ನ ಚಿಕ್ಕಪ್ಪನ ರಾಜ್ಯವನ್ನು ಆಕ ಮಿಸಬೇಕೆಂದು, ಹೆಚ್ಚಾದ ದಂಡ ನ್ನು ಕೂಡಿಕೊಂಡು ಬಂದಿದ್ದನು. ಆಗ ನನ್ನ ಚಿಕ್ಕಪ್ಪನಬಳಿಯಲ್ಲಿ, ಕಾವಲಿಗಾಗಿದ್ದ ಭಟರುಗಳ ಹೊರತು ಮತ್ತಾರೂ ಇರಲಿಲ್ಲವಾದುದರಿಂದ ಅವರು ಶತ್ರುಗಳನ್ನು ಜಯಿಸಲಾರದೆ ಹೋದರು. ಶತ್ರುಗಳು ಪಟ್ಟಣ ಕ್ಕೆ ಮುತ್ತಿಗೆಹಾಕಿದಕೂಡಲೆ, ಕೊಟ್ಯಬಾಗಿಲು, ಧಾರಾಳವಾಗಿ ತೆರೆದು ಕೊಂಡುದರಿಂದ ಹಗೆಗಳು ಪಟ್ಟಣವನ್ನು ಹೊಕ್ಕು ಬಂದರು. ರಾಜನು ತನ್ನ ಪರಾಕ ಮನುಸಾರವಾಗಿ ಯುದ್ಧ ಮೂಡಿ, ಸತ್ತುಹೋದನು. ನನಾದ ಶಕ್ತಿ ಇದ್ದ ವರೆಗೂ ಜಗಳವಾಡಿ, ಬಳಿಕ ಬಲವಂ ತರಲ್ಲಿ ಹೊಡೆದಾಡುವುದು ಯುಕ್ತವಲ್ಲವೆಂದು ತಿಳಿದು ನನ್ನ ಪ್ರಾಣವನ್ನು ಆಸಿಕೊಳ್ಳುವುದಕ್ಕಾಗಿ ಯೋಚಿಸಿ, ಆ ಶತು ರಾಜನ ಕಾವಲುಗಾರರಲ್ಲಿ, ನನಗೆ ನಂಬಿಕೆಯುಂಟಾಗಿರುವ, ಒಬ್ಬ ಮನುಷ್ಯನನ್ನು ಸೇರಿ ಪ್ರಾಣ ವನ್ನು ಉಳಿಸಿಕೊಂಡೆನು. ಹೀಗೆ ದುಃಖವನ್ನೂ, ದೌರ್ಭಾಗ್ಯವನ್ನು, ಹೊಂದಿದ ನಾನು ಒಂದುವಾರವನ್ನು ಯೋಚಿಸಿದೆನು. ಅದು ಹೊರತು ನನ್ನ ಪ್ರಾಣವನ್ನುಳಿಸಿಕೊಳ್ಳುವುದಕ್ಕೆ ಮತ್ತಾವ ಉಪಾಯವೂ ಇರಲಿಲ್ಲ. ಗಡ್ಡವನ್ನು ಕಣ್ಣು ಹುಬ್ಬುಗಳನ್ನು ಬೋಳಿಸಿ, ಸನ್ಯಾಸಿಯ ವೇಷವ ನ್ನು ಹಾಕಿಕೊಂಡು, ಮೆಲ್ಲಮೆಲ್ಲಗೆ ನನ್ನ ಚಿಕ್ಕಪ್ಪನ ರಾಜ್ಯವನ್ನು ಬಿಟ್ಟು ಹೊರಟನು. ಅಲ್ಲಿಂದ ಹೊರಟು ಪರಾಕ ವಶಾಲಿಯಾಗಿಯಾ, ಕೀರ್ತಿ