ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೪ ಯವನ ಯಾಮಿನೀ ವಿನೋದ ಎಂಬ, ಮಹಿಮೆಯಿಂದ ಹೆಚ್ಚಿ ಹೋಗಿದ್ದಿತು. ಬಳಿಕ ಅದರಲ್ಲಿರುವ ಚೀಟಿಯನ್ನು ಕಂಡು, ಮಂತ್ರಿ )ಯು ಕೈಗೆ ತೆಗೆದುಕೊಂಡು, ಬದಾದೀನನ ತಂದೆ ಯಾದ, ನೌರೋದೀನನ ಹಡಗುಗಳಲ್ಲಿ ಮೊದಲು ಬರುವ ಸರಕುಗಳು ರೇವನ್ನು ಸೇರಿದಕೂಡಲೆ, ಯಾರಾದರೂ ಸರಿಯೇ ಅದನ್ನು ಹಿಸ್ಮಾಕನ ಸಾಧೀನಮಾಡಬೇಕು, ನಾನು ಆತನಿಂದ ಒಂದುಸಾವಿರ ಸರ್ಕಿಸುಗಳನ್ನು ತಗೆದುಕೊಂಡು, ಸರಕುಗಳನ್ನು ಮಾರಿರುವೆನೆಂದು ಬರೆದಿರುವುದನ್ನು ನೋಡಿದ ಕೂಡಲ, ಸಂಸದೀನ್ ಮಹಮದನು ಮೂರ್ಛಾಕಾಂತನಾದ ನೆಂದು ಹೇಳಿ, ನಹರಜಾದಿ ಕಥೆಯನ್ನು ನಿಲ್ಲಿಸಿ ಎಂದಿನಂತೆ ಬೆಳಗಿನ ಜಾವ ದರಿ ಹೇಳತೊಡಗಿದನು. ೧೪ ನೆಯ ರಾತಿ ) ಕಥೆ. ಸಹರಜಾದಿ ಸುಲ್ತಾನನ್ನು ನೋಡಿ, ಪ್ರಿಯರೇ ! ಗಯಫರನು, ಕಲೀಸರನ್ನು ಕುರಿತು, ಇಂತಂದು ಹೇಳತೊಡಗಿದನು :--ಬಳಕ ಮೂರ್ಛಾ ಕಾಂತನಾದ ಪಂಪುದೀನನು, ತನ್ನ ಮಗಳ ಕೈತೋಪಚಾರದಿಂದ ಎಚ್ಚತ್ತು ಕುಳಿತು, ಪುತಿ) ನೀನು ಹೇಳಿದ ಮಾತುಗಳನ್ನ ನಂಬತಕ್ಕವು ಗಳಾಗಿಲ್ಲ ಇದರ ಕಾರಣವನ್ನು ಕೇಳಿದರೆ ನೀನು ಆಶ್ರವನ್ನು ಹೊಂದುವೆ, ನಿನ್ನನ್ನು ಮದುವೆಮಾಡಿಕೊಂಡ ಪುರುಷನು, ನಿನ್ನ ಚಿಹ್ಮಪ್ಪನಾದ ನೌರೋ ದೀನಲ್ಲಿಯ ಕಮಾರನು, ಈ ಚೀಲದಲ್ಲಿರುವ ಒಂದುಸಾವಿರ ಸೆರ್ಕ್ಸಿಸು ಗಳನ್ನು ನೋಡಿದಕೂಡಲೆ, ಪೂರ್ವದಲ್ಲಿ ನನಗೂ ನನ್ನ ತಮ್ಮನಿಗೂ ನಡೆದ ಒಂದಾನೊಂದು ವಿವಾದವು ಜ್ಞಾಪಕಕ್ಕೆ ಬರುವುದು. ಈ ಹಣವು ನಿನಗೆ ಆತನು ಬಲುವಳಿಯಾಗಿ ಕೊಟ್ಟ ಹಣವೆಂದು, ಸಿಸ್ಸಂದೇಹವಾಗಿ ಹೇಳ ಬಲ್ಫ್ನು . ಇದೆಲ್ಲಕ್ಕೂ ಸರಶಕನಾದ ಭಗವಂತನದಯೆಯು ಈಗ ನಮ್ಮ ಅದ್ಯರೂಪವಾಗಿ ಪರಿಣಮಿಸಿದುದರಿಂದ, ನಾನು ಆತನನ್ನು ವಂದಿಸು ವೆನು. ಅಲ್ಲದೆ ಈ ಕಾರವು ಸರ್ವಶಕ್ತನಾದ ಭಗವಂತನ ಶಕ್ತಿಯನ್ನು ನಿದರ್ಶನಮಾಡಿ ತೋರಿಸುವುದೆಂದು ನುಡಿದು, ತನ್ನನುಜನ ಕೈಬರಹ ವನ್ನು ನೋಡಿ, ಹಲವುಬಾರಿ ಮುತ್ತಿಟ್ಟುಕೊಂಡು ಅಳುತ್ತಾ ಇದ್ದನು. ಸ್ವಲ್ಪ ಹೊತ್ತಿನಮೇಲೆ ಆ ಪುಸ್ತಕವನ್ನು ತೆಗೆದುನೋಡುವಲ್ಲಿ ನೆರೆ ದೀನನು ಬಾಲಸೂರನನ್ನು ಸೇರಿದ ದಿನವೂ, ಆತನಿಗೆ ವಿವಾಹ ಮುಹೂ