ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬಿ, ಯಾರೋ ಒಬ್ಬ ರೋಗಿಯನ್ನು ಕರೆದುಕೊಂಡುಬಂದು ಕಾದುಕೊಂಡಿರು ವರು. ನಿಮ್ಮ ದರ್ಶನಕ್ಕಾಗಿ, ಇದು ! ಇದೊಂದು ಮೊಹರೀ ನಾಣ್ಯ ವನ್ನು ತೆಗೆದುಕೊಟ್ಟರೆಂದು ತೋರಿಸಲು, ಆತನು ಬಹು ಸಂತುಮ್ಮನಾಗಿ ದೀಪವನ್ನು ತೆಗೆದುಕೊಂಡುಬರುವಂತ, ತನ್ನ ದಾದಿಗೆ ಹೇಳಿ, ತಾನು ಕತ್ತಲೆಯ ಬಾಗಿಲನ್ನು ತೆಗೆದುಕೊಂಡು ಹೊರಗೆ ಬರುತ್ತಾ, ಹಂತದ ಬಯಲ್ಲಿದ್ದ ಹಣವನ್ನು ತುಲ್ಲದು, ಓಹೋ ! ಇದೇನು ? ದೀಪ ! ದೀನ ! ಬೀಗ ತಾ ! ಎಂದು ಕೂಗುತ್ತ ಬೆಳಕು ಬಂದಬಳಕ ಸತ್ತುಹೋಗಿರುವ ಆ ಮನುಷ್ಯನನ್ನು ಕಂಡು ಅಯೋ ! ರೋಗವನ್ನು ವಾಸಿಮಾಡಿಕೊಳ್ಳ ಬೇಕೆಂದು, ನನ್ನ ಬಳಿಗೆ ಬಂದವನು, ನನ್ನ ಕಾಲಿನ ತುಳಿತದಿಂದ, ಸತ್ತು ಹೋದನಲ್ಲಾ ! ದೀರ್ಘದರ್ಶಿಗಳನ್ನು, ಗುರುಗಳನ್ನೂ, ಧಾವಿಸುತ್ತ ನನ್ನನ್ನು ಉದ್ಧರಿಸಿ, ಅಪವಾದದಿಂದ ಕಾಪಾಡಿರೆಂದು ಬೇಡಿಕೊಂಡನು. ಅಯ್ಯೋ ! ನಾನೇ ಈತನನ್ನು ಕ .ದೆನೆಂದು ಈ ಊರಿನವರೆಲ್ಲಾ ಆಡಿ ಕೊಳ್ಳುವರಲ್ಲಾ ಎಂದು, ಅಳುತ್ತಿದ್ದನು. ಬಳಿಕ ದುಃಖಪಡುವುದರಿಂದ ಪ್ರಯೋಜನವಿಲ್ಲವೆಂದು ತಿಳಿದು, ಜನರು ಇದನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ, ಮರೆಮಾಚ ಬೇಕಂದು ಬಗಿಲನ್ನು ತೆರೆದು, ಆ ಶವವನ್ನು ಮನೆ ಯೊಳಕ್ಕೆ ತೆಗೆದುಕೊಂಡುಹೋಗಿ, ತನ್ನ ಹೆಂಡತಿಗೆ ತೋರಿಸಿದನು. ಆಕೆ ಬಹಳ ವ್ಯಸನಾಕಾಂತಳಾಗಿ, ಅಯೋ ! ಇದೇನು ಈ ದುರವಸ್ಥೆ ? ಇವನು ಹೇಗೆ ಸತ್ಯನು ? ನಮ್ಮ ಪ್ರಾಣಗಳೇ ಹೊಗವಹಾಗಾಯಿತಲ್ಲಾ ! ಮುಂದೆ ಮಾಡತಕ್ಕದೆನು ? ಈತನು ಹೇಗೆ ಸತ್ಯನೂ ಅದನ್ನು ಹೇಳೆ ನಲು, ಅದನ್ನು ಕೇಳುವುದರಿಂದ ಪ್ರಯೋಜನವಿಲ್ಲ. ಈಗ ಮುಂದೆ ನಾವು ಮಾಡಬೇಕಾಗಿರುವುದನ್ನು ಮುಖ್ಯವಾಗಿ ಯೋಚಿಸಬೇಕಂದನು, ಮಕರ ಜಿದಿಯು ಇಂತಂದು ನುಡಿವುದರ ಅರುಣೋದಯವಾಗಲು, ಕಥೆ ಯನ್ನು ನಿಲ್ಲಿಸಿ ಮರುದಿನ ಬೆಳಗಿನಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೧೨೪ ನೆಯ ತ್ರಿ ಕಥೆ, ವಹರಜಾದಿಯ ಸುಲ್ತಾನರನ್ನು ಕುರಿತು, ಇಂತಂದಳು :ಮೈದನು ಆ ಹಣವನ್ನು ಹೇಗೆ ಮಾಡಿದರೆ ತಮಗೆ ಬರುವ ಅಪವಾದವು ತಪ್ಪುವದೆಂದು ಯೋಚಿಸುತ್ತಿದ್ದರೂ, ಆತನಿಗೆ ಯಾವ ಆಲೋಚನೆಯ ತೋರಲಿಲ್ಲ. ಆದರೆ ಸಮಯಾನುಸಾರವಾಗಿ ಯುಕ್ತಿಯನ್ನು ಕಂಡು