ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

రao ಯವನ ಯಾಮಿನೀ ವಿನೋದ ವಿಂಬ, ವಾಗಿ, ನೀಗಿಕೊಂಡೆನೆಂದು ಹೇಳುವುದಕ್ಕಾಗಿ, ಇನ್ನು ಇಲ್ಲಿಗೆ ಬಂದೆಯಾ ? ಎಂದು, ತಾನು ಕಣ್ಣೀರನ್ನು ಸುರಿಸುತ್ತಾ, ಪ್ರಿಯನಾಯಕಾ ! ನೀನು ಹೀಗೆ ಹಂಬಲಿಸುತ್ತಿರುವುದು, ನನ್ನ ವ್ಯಸನವನ್ನು ಇನ್ನೂ ಹೆಚ್ಚು ಮಾಡು ವುದೆಂದು ನುಡಿದಳು, ನಾನು ನಿಜವಾದ ಸಂಗತಿಯನ್ನು ಆಕೆಯಸಂಗಡ ಹೇಳಬಾರದೆಂದು ಗೊತ್ತುಮಾಡಿಕೊಂಡಿದ್ದನು. ಆದರೆ ಸಾಯಂಕಾಲ ವಾಗುತ್ತದೆ, ಭೋಜನವು ಸಿದ್ಧವಾದುದರಿಂದ, ನಾನು ಎಡದ ಕೈಯ್ಯಿ ಊಟಮಾಡುವುದೆಂದು ಗೊತ್ತುಮಾಡಿಕೊಂಡೆನು. ಅನಂತರ ಬಾಲಿಕಾ ಮುಣಿಯುಬಂದು, ಭೋಜನಕ್ಕೆ ದಯಮಾಡಬೇಕೆನಲು, ನನಗೆ ಹಸಿವಿಲ್ಲ ಎಂದು ಹೇಳಿಬಿಟ್ಟೆನು. ಆಗ ಆ ಬಾಲಿಕಾಮಣಿಯು ನನಗೆ ತಿಳಿಯಬಾರ ದೆಂದು ನೀನು ಮುಚ್ಚಿಕೊಂಡಿರುವ ವಿಷಯವನ್ನು ನನಗೆ ತಿಳರ್ಯಡಿಸಿ ದರೆ, ನಿನಗೆ ಹಸಿವಾದೀತು. ನೀನು ಹಸಿವಿಲ್ಲವೆಂದು ಹೇಳುವುದು, ಅಧರ ದಿಂದಲೆ ಎಂದು, ನಾನು ನಿಸ್ಸಂದೇಹವಾಗಿ ಹೇಳುವೆನೆನಲು, ಸಿಯೋ ! ನಾನು ಇಲ್ಲಿಂದಮುಂದೆ ದೃಢಪಡಿಸಿಕೊಳ್ಳಬೇಕಾದುದೇನು ? ಎನಲು, ಆಕೆ ಒಂದು ಬಟ್ಟಲುತುಂಬ ಸಾರಾಯಿಯನ್ನು ತೆಗೆದುಕೊಂಡುಬಂದು ಇದನ್ನು ಕುಡಿ ಎಂದು ಕೇಳಲು, ನಾನು ಅದನ್ನು ಎಡಗೈಯಿಂದ ತೆಗೆದುಕೊಂಡನು ಎಂದು ಹೇಳಿ, ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದ್ದು ಪುನಹ ಹೇಳಲಾರಂಭಿಸಿದಳು. ೧೩೯ ನೆಯ ರಾತ್ರಿ ಕಥೆ. ನಹರಜಾದಿಯು ಸುಲ್ತಾನನನ್ನು ಕುರಿತು ಇಂತಂದಳು :ನಾನು ಎಡದ ಕೈಯಿಂದ ಆ ಬಟ್ಟಲನ್ನು ತೆಗೆದುಕೊಂಡಕೂಡಲೆ, ಕಣ್ಣ ನಲ್ಲಿ ನೀರು ಧಾರಾಳವಾಗಿ ಸುರಿಯುತ್ತಿರುವುದನ್ನು ಕಂಡು, ಆ ಬಾಲಿಕಾ ಮಣಿಯು, ಓ ಮೋಹನಾಂಗಾ ! ನೀನು ಇನ್ನೊಂದು ಕಠಿಣವಾಗಿ, ವ್ಯಸನದಡುತ್ತಿರುವುದಕ್ಕೆ ಕಾರಣವೇನೆಂದುಕೇಳಿ, ನಿನ್ನ ಬಲಗೈಯ್ಯ ನೋಕೆ ನೀಡಲಾರೆ ? ಸಾರಾಯಿಯನ್ನು ಎಡಗೈಯಲ್ಲಿ ತೆಗೆದುಕೊಳ್ಳಲು ಕಾರಣವೇನೆಸಿಲು, ನಾನು, ನಾ ! ನನ್ನ ಮುದ್ದಿನಮುಮ್ಮೆದೆ. ನನ್ನ ಕೈಗೆ ನೋವು ಕಂಡಿರುವುದರಿಂದ ಕಟ್ಟುಹಾಕಿ ಕಟ್ಟಿಕೊಂಡಿರುವೆನು. ಅದನ್ನು ಈಗ ಬಿಚ್ಕ ಡದೆಂದು ಹೇಳಿ, ಸಾರಾಯಿಯನ್ನು ಕುಡಿದುದರಿಂದ ಒಟ್