ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೭೫) ಅರೇಬಿರ್ಯ ನೈಟ್ಸ್ ಕಥೆಗಳು, ೫೯೩ ದೌರ್ಭಾಗ್ಯವೇ ಸರಿ ! ಅಕಸ್ಮಾತ್ತಾಗಿ ನಮಗೆ ಸಂಭವಿಸಿದ ನನ್ಮಕ್ಕಾಗಿ ನಾವು ಯೋಚಿಸದ, ಧೈರ್ಯದಿಂದ ಸಹನೆಯನ್ನು ಹೊಂದಬೇಕಲ್ಲವೆ ? ಯಾವಾಗಲೂ ನಾವೀರ್ವರೂ ಮರ್ಮವಾಗಿಯೇ ಇರುವವು. ಆದರೆ ನಮ್ಮ ದೌರ್ಭಾಗ್ಯವನ್ನು ಚಿಂತಿಸುತ್ರ, ವ್ಯಸನ ಪಡದೆ ಮನೋನಿಶ್ಚಯವನ್ನು ಕೈಕೊಳ್ಳುವವನಾಗು. ನಮ್ಮ ಇಷ್ಟಾರ್ಥಗಳು ನೆರವೇರಬೇಕಾದರೆ, ಎಂದಿಗೂ ಸುಲಭವಲ್ಲ. ಬಹು ಕಷ್ಟಸಾಧ್ಯವಾಗಿಯೇ ಇರುವುದು. ಆದುದ ರಿಂದ ನಾವು ಧೈರ್ಯವನ್ನು ಬಿಡಬಾರದು. ನಮ್ಮ ಕೋರಿಕೆಗಳು ಕೈ ಗೂಡುವಂತೆ ಭಗವಂತನು ಸಹಾಯ ಮಾಡುವನು. ಎ ವಿವತ್ತು ಗಳು ಬಂದಾಗ, ನಮ್ಮ ಅಭಿದಾ ಯಗಳು ಸಫಲವಾಗಿ ನಾವು ಸುಖ ಸಂತೋಷಯುಕರಾಗುವೆವು. ಇದೇ ನನ್ನ ವಿಜ್ಞಾಪನೆ. ರಾಜಕುಮ ರನ, ರತ್ನ ಪತಿವ್ಯಾಪಾರಿಯೂ, ಮಾತನಾಡುತ್ತಿರುವಾಗ ದಾದಿಯ ಅರಮನೆಗೆ ಹೋಗಿ, ರಾಣಿಗೆ ಇರ್ಬ ಹರನು ಹೊರಟುಹೋದ ವತ' ಮಾನವನ್ನು ಹೇಳಲು, ಆಕ ಈ ಕಾಗದವನ್ನು ಬರೆದು ರಾಜಪುತ್ರ ) ಕೈಗೆ ಕೊಡುವಂತೆ ತನ್ನ ದಾದಿಯಕ್ಕೆಗೆ ಕೊಟ್ಟಳು, ಅವಳು ಅದನ್ನು ತಗೆದುಕೊಂಡುಬರುತ್ತಾ, ಆಲಸ್ಯದಿಂದ ದಾರಿ ಯಲ್ಲಿ ಅದನ್ನು ಕೆಡವಿದಳು. ರಡಿವಾಪಾರಿಯು ಅದನ್ನು ತೆಗೆದು ಕೊಂಡು ಓದಿನೋಡಿ, ದಾದಿಯು ಕಾಗದವನ್ನು ಹುಡುಕಿಕೊಳ್ಳುತಿರು ವುದನ್ನು ಕಂಡು, ಬೇಗನೆ ಮಡಿಸಿ ಜೇಬಿನಲ್ಲಿ ಹಾಕಿಕೊಂಡನು, ಅದನ್ನು ಕಂಡಕೂಡಲೆ, ದಾದಿಯು ಆತನಬಳಿಗೆ ಓಡಿಬಂದು, ಕಾಗದವನ್ನು ತನಗೆ ಕಟ್ಟುಬಿಡುವಂತೆ ಬೇಡಿಕೊಂಡಳು. ಆ ಮಾತುಗಳನ್ನು ಕೇಳದವ ನಂತೆ, ರತ ವಡಿವಾಪಾರಿಯು ತನ್ನ ಮನೆಯನ್ನು ಸೇರಿ ಹಿಂಬಾಲಿಸಿ ಬರುತ್ತಿರುವ ದಾದಿಯು ಬರಲೆಂಬಭಿಪ್ಪಾಯದಿಂದ ಬಾಗಿಲನ್ನು ಮುಚ್ಚಿ ಕೊಳ್ಳದೆ ಹೊರಟನು. ನಂತರ ದಾದಿಯು ಒಳಹೊಕ್ಕು ಆತನ ಕೊಠಡಿಗೆ ಹೋಗಿ ಅಯಾ! ನಿನಗೆ ದೊರೆತಿರುವ ಕಾಗದವು ನಿನಗೇತಕ್ಕೆ ? ಇಂಥ ವರು ಇಂಥವರಿಗೆ ಬರೆದಿರುವರೆಂಬ ಸಂಗತಿ ನಿನಗೆ ತಿಳಿದಿರುವದಲ್ಲ ! ಅಡಿ ಇಲ್ಲದೆ ಅದನ್ನು ನನ್ನ ಕೈಗೆ ಕೊಟ್ಟುಬಿಡು. ನೀನಿಟ್ಟುಕೊಳ್ಳುವುದಕ್ಕೆ ಯೋಗ್ಯವಾದುದಲ್ಲವೆಂದು ಸಾರಿಸುವನೆಂದಳು.ಅದಕ್ಕಾತನು ದಾದಿಯನ್ನು