ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ಯುವನ ಯಾಮಿನೀ ವಿನೋದ ಎಂಬ, ಕಳ್ಳರುಬಂದರೆಂದು ತಿಳಿದು, ತನ್ನ ದಾದಿಯರೊಡನೆ ತಪ್ಪಿಸಿಕೊಂಡು ಹೋಗಿ, ಅರಮನೆಯನ್ನು ಸೇರಿರಬಹುದು, ರಾಜಪುತ್ರನೂ, ಅದೇರೀತಿಯಾಗಿ ಮಾಡಿರಬಹುದೆಂಬುವುದಕ್ಕೆ ಸಂದೇಹವೇ ಇಲ್ಲ. ಆದರೆ ನೀನು ತಂದಿದ್ದ ಸ್ನೇಹಿತರ ಪದಾರ್ಥಗಳು ಹೋದುದಕ್ಕಾಗಿ, ವ್ಯಸನ ಪಡಬೇಕಾಗಿದೆ. ಅಸಾಧ್ಯವಾದ ಕಾರ್ಯಕ್ಕಾರುತಾನೆ ಏನುಮಾಡಬಲ್ಲರು. ಅವರವರ ಸಾಮಾನುಗಳಿಗೆ ತಕ್ಕ ಬೆಲೆಯನ್ನು ನೀನು ಹಿಂದಿರುಗಿ ಕೊಡುವದಾದರೆ ನಿನಗಾವ ತೊಂದರೆಯೂ ಇಲ್ಲ. ದೇವರು ನಿನಗೆ ತಕ್ಕ ಅನುಕೂಲವನ್ನು ಕೊಟ್ಸ್ ಇರುವನು. ಆದುದರಿಂದ ಯೋಚಿಸಿ ಪ್ರಯೋಜನವಿಲ್ಲ. ಆಕಳ್ಳರು ಈ ಊರಲ್ಲಿ ಬಹುಮಂದಿಗಳ ಮನೆಯನ್ನು ನುಗ್ಗಿ ಸರಸ್ವವನ್ನು ದೋಚಿ ಕಂಡುಹೋಗಿರುವ ವಾರ್ತೆಯು ಸರ್ವರಿಗೂ ತಿಳಿದೇ ಇರುವುದು. ಆದು ದರಿಂದ ನೀನು ಭಯಪಡಬೇಕಾದ ಅಗತ್ಯವಿಲ್ಲ. ಆದರೆ ಆ ಕಳ್ಳರು ನಮ್ಮ ಪ್ರಾಣಗಳನ್ನು ತೆಗೆದುಕೊಂಡುಹೋಗ ಲಿಲ್ಲವಲ್ಲಾ ! ಎಂದು ಹೇಳಿದನು. ಬೆಳಗಾದಕೂಡಲೆ ವರ್ತಕನು ತನ್ನ ಮನೆಯ ಒಡೆದುಹೋದ ಬಾಗಿಲುಗಳನ್ನು ಸರಿಮಾಡಿಸಿ, ತಾನು ವಾಸ ಮಾಡುವ ಮನೆಗೆ ಬಂದು ಆಹಾ ! ಇರ್ಬತಿಹರನು ನನಗಿಂತಲೂ, ಬುದ್ಧಿ ವಂತನಾದುದರಿಂದ, ಇಂತಹ ಅಸಾಧ್ಯವಾದ ಕಾರ್ಯದಲ್ಲಿ ಪ್ರವರ್ತಿಸಿ, ಕಮ್ಮಗಳನ್ನು ಅನುಭವಿಸಲಾರದೆ, ತಪ್ಪಿಸಿಕೊಂಡನು. ಇಂತಹ ಕೃತ್ಯ ದಿ ಒಳಹೊಕ್ಕಿರುವ, ನನ್ನ ಪ್ರಾಣವು ಹೋಗುವದೆಂದತಿಶಯವೇ ? ಎಂದು ಚಿಂತಿಸುತ್ತಿದ್ದನು. ಹಿಂಗ ರತ್ನ ವಡಿವಾವಾರಿಯ ಮನೆಯಲ್ಲಿ ಕಳ್ಳರು ದೋಚಿಕೊಂಡರೆಂಬ ವರ್ತಮಾನವು ಆ ಊರಿ ಹರಡಿಕೊ ಳ್ಳಲು, ಸ್ನೇಹಿತರೆಲ್ಲರೂ ತಂಡತಂಡವಾಗಿ ಬಂದು, ಆತನಿಗೆ ಸಮಾಧಾನ ಗಳನ್ನು ಹೇಳಿ ಹೋಗುತ್ತಾ ಇದ್ದರು. ರತ್ನಪಡಿವಾಹಾರಿಯಾದರೆ ಅವರ ದಯಾರಸವನ್ನು ಕೊಂಡಾಡುತ್ತಾ, ವಂದನೆಗಳನ್ನು ಸಮರ್ಪಿಸಿ, ಅವರನ್ನು ಕಳುಹಿಸಿಕೊಟ್ಟನು. ಆದರೆ ಬಂದು ಮಾತನಾಡಿದ ತನ್ನ ಸೈಹಿತರಾರು. ರಾಣಿಯ ಅಥವಾ ರಾಜಪುತ ನ ವಾರ್ಹಿಯನ್ನೇನೂ ಹೇಳ ದಿದುದರಿಂದ, ಅವರಿಬ್ಬರೂ ಸುಖವಾಗಿ ತಂತಮ್ಮ ಮನೆಗಳನ್ನು ಸೇರಿ ೬೦ಡರೆಂದುತಿಳಿದು, ತಾನು ಸೃಸಮಾನೆಸನಾಗಿದ್ದನು, ಸ್ನೇಹಿತರು