ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦d ಯವನ ಯಾಮಿನೀ ವಿನೋದ ಎಂಬ, ೨೨ ನೆಯ ರಾತಿ ) ಕಥೆ. ರಾಜಕುಮಾರನಾದ ಕಮರಲುಜಮಾನನು ತನ್ನ ಪ್ರಯಾಣವು ನಿಂತುಹೋದುದರಿಂದ ಬಹಳವಾದ ವ್ಯಸನವನ್ನು ಹೊಂದಿ, ವತ್ತೊಂದು ಸಾರಿ ಹಡಗು ಬರುವವರಿಗೂ ಈ ತೋಟವನ್ನು ಗುತಿಗೆಮಾಡಿಕೊಂಡು ಜೀವಿಸುತ್ತಿರಬೇಕೆಂದು ಗೊತ್ತುಮಾಡಿ, ಯಜಮಾನನಬಳಿಗೆ ಹೋಗಿ, ಹಾಗೆಯೇ ಆತನ ದಯೆಯನ್ನು ಸಂಪಾದಿಸಿಕೊಂಡು ವಸನವನ್ನು ಅನು ಭವಿಸುತ್ತಾ ಇರುತ್ತಿದ್ದನು. ಆದರೆ ಆ ಹಡಗು ದೈವಾನುಗ್ರಹದಿಂದ ಅನುಕೂಲವಾದ ಘಳಿಯು ಬೀಸುತ್ತಿದ್ದುದರಿಂದ ಸುಖವಾಗಿ ಇಬಿನಿ ದೀಪವನ್ನು ಸೇರಿತು. ಅಲ್ಲಿನ ಹೊಸ ರಾಜ, ರಾಣಿಯ, ಕಮರಲು ಜಮಾನನನ್ನು ಪತ್ತೆ ಮಾಡಬೇಕೆಂಬ ಅಭಿಲಾಷೆಯುಳ್ಳವರಾಗಿ ಸಮುದ್ರ ತೀರದಲ್ಲಿ ಬರುತ್ತಿರುವ ಹಡಗನ್ನು ನೋಡಿ, ಆ ಹಡಗಿನ ಯಜಮಾನನನ್ನು ಕರೆಸಿ ಮಾತನಾಡಲು ಪ್ರಯತ್ನ ಮಾಡಿ ತನು, ಸನಾ ಹಗಳೆಲ್ಲವನ್ನು ನೆರ ವೇರಿಸಿಕೊಂಡವರಾದರು. ಸ್ವಲ್ಪಹೊತ್ತಿಗೆ ಹಡಗು ರೇವಿನಲ್ಲಿ ಬಂದು ನಿಂತಕೂಡಲೇ ರಾಜನು ತನ್ನಾ ಮಂತ್ರಿ ಗಳ ಮುಖದಿಂದ ಹಡಗಿನ ಸರ ದಾರನನ್ನು ಬರಮಾಡಿ, ಅಯಾ ! ಈ ಹಡಗು ಎಲ್ಲಿಂದ ಬಂದಿತು ? ಆ ದೇಶದಲ್ಲಿ ವಿಶೇಷಸಂಗತಿಗಳೇನು ? ವ್ಯಾಪಾರಸ್ಥರು ಯಾವ ಯಾವ ಸರ ಕುಗಳನ್ನು ಮಾರುವುದಕ್ಕೆ ತಂದಿರುವರು ? ನಿನ್ನ ಹಡಗಿನ ಪ್ರಯಾಣಿ ಕರಲ್ಲಿ ಉತ್ತಮಗುಣಿಗಳಾದ ಯಾವ ಮಾನವಶಿಖಾಮಣಿಗಳೆದರೂ ಇರು ವರೇ ಎಂದು ಪ್ರಶ್ನೆ ಮಾಡಲು ಹಡದಿನ ಸರದಾರನು ರಾಜನು ಕೇಳಿದ ಪ್ರಶ್ನೆಗಳಿಗೆ ಪ್ರತ್ಯುತ್ತರವನ್ನು ಸರಿಯಾಗಿ ಹೇಳಿ ನಂತರ ತನ್ನ ಹಡಗು ವಿಗ್ರಹಾರಾಧಕರ ಪುರದಿಂದ ಬಂದಿತೆಂದೂ ಅಲ್ಲಿನ ಉತ್ತಮಸರಕುಗಳಾದ ಬಣ್ಣದ ಬಟ್ಟೆಗಳೂ, ಸಾದಾ ವಸ್ತ್ರಗಳೂ, ಹಣ್ಣುಗಳು, ಮೊದಲಾದ ವುಗಳನು ನನ್ನ ಹಡಗಿನಲ್ಲಿ ಇರುವುವೆಂದೂ ನುಡಿದನು. ನುತರ ನಾನು ಕುದುರೆಯನ್ನು ಹತ್ತಿ ವುತ ಹವಾಗಿ ಹಡಗನ್ನು ನೋಡಬೇಕೆಂದು ತಿಳಿದು, ರೇವನ್ನು ಸೇರಿಬಂದು, ಹಡಗನ್ನು ಪರೀಕ್ಷಿಸಿ ಕಮರಳುದವಾನನು ಬಾರದಿರುವುದನ್ನು ಕಂಡು, ಬಹಳವಾಗಿ ವ್ಯಸನಾ ಕಾಂತರಾಗಿ ಅಲ್ಲಿರುವ ಉತ್ತಮವಾದ ಹಣ್ಣುಗಳನ್ನು ಕೊಂಡುಕೊಳ್ಳ ಬೇಕಂದು ಹಡಗಿನ ಯಜವನನನ್ನು ಕುರಿತು, ಅಯಾ ! ಈ ಹಣ್ಣು