ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೭೩೩ ಮೊದಲಿನಿಂದ ಕೊನೆಯವರಿಗೆ ಹೇಳಿದನಂತರದಲ್ಲಿ ರಾಣಿಯು ತನ್ನದೇಹ ನಾಂಗನಾದ ಆತನಿಗೆ ಸಂಭವಿಸಿದ ತೊಂದರೆಗಳನ್ನು ಕೇಳಿ, ಬಹಳವಾಗಿ ಚಿಂತಿಸುತ್ತ ಆತನನ್ನು ಕುರಿತು ರಾಜಪುತ್ರನೇ ! ನೀನು ಇಷ್ಟುದಿನಗಳ ಇರಿಗೂ, ಅಗಿ ಪೂಜಕರ ಮಂಡಲಿಯಲ್ಲಿ ಸಿಕ್ಕಿ ಬಹಳವಾದ ತೊಂದರೆಗಳ ನ್ನನುಭವಿಸಿದೆಯಾದುದರಿಂದ ಈಗ ಸಂತೋಷದಿಂದ ಭುಜಿಸೆಂದು ಆತನಿಗೆ ಬಹಳವಾದ ಉಪಚಾರದಿಂದ ಭೋಜನವನ್ನು ಮಾಡಿಸಿ, ಆರೋಗ್ಯ ರಕ್ಷಣೆ ಗಾಗಿ ಸ್ವಲ್ಪ ಸಾರಾಯಿನ್ನು ಸಹಾ ಮಾನ ಮಾಡಿಸಿದಳು. ನಂತರ ಆತನು ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮಲಗಿದ್ದು ನಂತರ ಎಚ್ಚರಿಕೆಯಾದುದರಿಂದ ಅಂತಃಪುರದಿಂದ ಹೊರಟು, ಅರಮನೆಗೆ ಸೇರಿ, ಉದ್ಯಾನವನದಬಳಿಗೆ ಬಂದು ಅದರಲ್ಲಿರುವ ಒಂದಾನೊಂದು ಸರೋ ವರದಬಳಿಯಲ್ಲಿ ಕುಳಿತುಕೊಂಡು ನಿದಿಸಿದನು, ಆದರೆ ಹಡಗಿನ ಯದ ಮಾನನಾದ ಬಹರಾಮನು ತನ್ನ ಹಡಗಿಗೆ ತಕ್ಕಂತೆ ಉತ್ತಮವಾದ ಸೀನೀ ರನ್ನು ತೆಗೆಸಿಕೊಂಡು ಬರುವಂತ ತನ್ನ ಚಾರಕರಿಗೆ ಹೇಳಿ, ದೇವರ ಪ್ರೀತಿ ಗಾಗಿ ಬಲಿಕೊಡಬೇಕೆಂದಿದ್ದ ಆ ಮುಸಲ್ಮಾನ ರಾಜಪುತ ನನ್ನು ಹೇಗಾ ದರಮಾಡಿ ಕರೆದುತರಬೇಕೆಂದು ತನ್ನ ಮುಖ್ಯಸ್ಥನಿಗೆ ಹೇಳಲು, ಆತನು ಹಾಗೆ ಆಗಲೆಂದು ನುಡಿದು ಉತ್ತಮಜಲವನ್ನು ಹೊಂದಿರುವ ರಾಣಿಯ ಉದ್ಯಾನವನದಬಳಿಯಲ್ಲಿರುವ ಒಂದಾನೊಂದು ಸರೋವರದಬಳಗ ಬ ದು, ಅಲ್ಲಿ ನಿದ್ದೆ ಮಾಡತ ಮಲಗಿರುವ ರಾಜಪುತ್ರನಾದ ಅಲಜಿಯಾದನನ್ನು ನೋಡಿ ಆತನು ನಿದ್ದೆ ಮಾಡಿ ಎದ್ದ ಕೂಡಲೇ ಕರೆದುಕೊಂಡು ಹೋಗಬೇ ಕಂದು ಕಾದುಕೊಂಡು ಕುಳಿತಿದ್ದು ನೀರನ್ನು ತುಂಬಿಕೊಂಡು ನಂತರ ವಿಚ್ಚತ ಅಂದೆಯಾದನನ್ನು ಹಡಗಿನಬಳಿಗೆ ಕರೆದುಕೊಂಡು ಹೋಗು ವುದಕ್ಕಾಗಿ ಗಾಡಿಯಮೇಲೆ ಕುಳ್ಳಿರಿಸಿಕೊಂಡು ಹೋಗಿ, ತಮ್ಮ ಯದ ಮಾನನಿಗೆ ಆ ವರ್ತಮಾನವನ್ನು ಹೇಳಲು, ಆತನು ಬಹುಸಂತೋಷದಿಂದ ಅವರುಗಳನ್ನು ಕೊಂಡಾಡಿ ತನ್ನ ಇಷ್ಟಾರ್ಥವು ನೆರವೇರಿದುದಕ್ಕಾಗಿ ತನನ್ನು ಸಸಂತೋಷ ಚಿತನಾಗಿ ಆತನನ್ನು ಹಡಗಿನಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣ ಹೊರಟನು. ಇಂತಂದು ನುಡಿದು ಪ್ರಹರಜಾದಿಯು ಬೆಳಗಾ ದುದನ್ನು ಕಂಡು ಕಥೆಯನ್ನು ನಿಲ್ಲಿಸಿ, ದುರಳ ಮರುದಿನ ಬೆಳಗಿನ ಜಾವ ದಲ್ಲಿ ಹೇಳಲಾರಂಭಿಸಿದಳು.