ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ವಿನಯವಾಗಿ ಬೇಡಿಕೊಂಡರೂ ರಾಜನು ಕೇಳದೆ ಹೋದುದರಿಂದ ದೇವರು ಆತನಿಗೂ ಶಿಕ್ಷೆಯನ್ನು ಮಾಡಿದನು. ಎಲೆ ಭೂತವೇ ನಿನಗೂ ಅದೇ ಗತಿಯುಂಟಾಗುವುದು, ನಾನು ಕೇಳಿಕೊಂಡವರು ನೀನು ನಡೆಸಿಕ ದರೆ, ನನಗೂ ನಿನ್ನ ಮೇಲೆ ದಯವುಂಟಾಗುತ್ತಿತ್ತಲ್ಲವ ? ನಿನ್ನ ಸೆರೆ ಯನ್ನು ಬಿಡಿಸಿದುದಕ್ಕಾಗಿ ನನಗೆ ನೀನುಮೂಡಬೇಕಾದ ಉಪಕಾರವನ್ನು ಮರೆತು ನನ್ನನ್ನು ಕೊಂದೇಕೊಲ್ಲಬೇಕೆಂದು ಹಟವನ್ನು ಮಾಡಿದೆಯಲ್ಲಾ! ಆದುದರಿಂದ ಸಮಯದಲ್ಲಿ ನಾನು ನಿನ್ನ ವಿಷಯದಲ್ಲಿ ಅಷ್ಟೊಂದು ಕಾಠಿ ಇವನ್ನು ತೋರಿಸಬೇಕಾದುದು ಆವಶ್ಯಕವೆಂದು ಹೇಳಿದನು. ಆಗ ಭೂತವು ಬೆಸ್ಕನನ್ನು ನೋಡಿ ಸಾವಿರಾ ! ಅಂದು ಈ ರಕ್ತವನ್ನು ನನ್ನ ವಿಷಯದಲ್ಲಿ ನೆನೆಯಬೇಡ ಅಪಕಾರಮಾಡಿದ ವರಿಗೂ ಕೂಡ ಉಪಕಾರವನ್ನು ಮಾಡುವುದೇ ಸುರುಷರ ಲಕ್ಷಣವೆಂ ದು ಶಾಸ್ತ್ರಗಳು ಮಾರೆಯಿಡುತ್ತಿರುವವು. ಆದುದರಿಂದ ದಯಮಾಡು, ಪೂರ್ವದಲ್ಲಿ ಇಮಾಮನೆಬುವನಿಗೂ, ಅತಿಕಾ ಎಂಬವನ ವಿಷಯದಲ್ಲಿ, ನಡೆಸಿದಂತೆ ನೀನುನನ್ನ ವಿಷಯದಲ್ಲಿ ನಡೆಸಬೇಕೆಂದು ಬೇಡಿಕೊಳ್ಳಲು, ಬೆಸ್ಟ್ ರವನು ಭೂತವೇ ! ಇಮಾಮನು ಅಟಕಾ ಎಂಬುವನಿಗೆ ಏನುಮಾಡಿದನೋ ಅದನ್ನು ಹೇಳು ಕೇಳಬೇಕೆಂದುನುಡಿಯಲು, ಸವಿಾ ! ಆಕಥೆಯನ್ನು ನೀವು ಕೇಳಬೇಕೆಂದಿದ್ದರೆ ದಯವಿಟ್ಟು ನನ್ನನ್ನು ಹೊರಗೆಬಿಟ್ಟರೆ ವಿಶ ದವಾಗಿ ಹೇಳುವೆನು ಇಲ್ಲದಿದ್ದರೆ ಈ ಸೆರೆಯಲ್ಲಿ ಸಿಕ್ಕಿಕೊಂಡಿರುವಾಗ ಕಥೆ ಯನ್ನು ಹೇಳಲು ಸಾಧ್ಯವಾಗಿರುವುದೆಂಬುದನ್ನು ನೀವು ಕಾಣಿರಾ ! ಎಂ ದು ನುಡಿಯಲು, ಬೆನ್ನು, ಆ ವಿಷಯವನ್ನು ಮಾತ್ರ ಮರೆತು ಬಿಡು. ನೀನು ಕೂಡಲೆ ಸಮುರ್ದದ ತಳದಲ್ಲಿರವ ಾ ತಾಳಲೋಕವನ್ನು ಸೇರುವೆ ಎಂದು ನುಡಿದನು. ಭೂತವು ಅಯಾ ! ನೀನು ಹೇಳಿದಂತೆ ನಿನ್ನನ್ನು ಕೊಲ್ಲದೆ ಬಿಟ್ಟುಬಿಡುವೆನಲ್ಲದೆ ಹೆಚ್ಚಾದಭಾಗ್ಯವೂ ಬರುವಂತೆ ಮಾಡುವೆ ನೆಂದು ಹೇಳಿತು. ಆಗ ಬೆಸ್ತರವನು ತನ್ನ ದಾರಿದ ನನ್ನು ಹೋಗಲಾಡಿ ಸಿಕೊಳ್ಳಬೇಕೆಂದು, ಭೂತರಾಜಾ ! ನೀನು ಹಾಗೆಮಾಡುವುದೆ' ! ಸರಿಯಂ ದು ನಂಬಗೆ ತರುವಂತೆ ಭಗವಂತನಮೇಲೆ ಆಣೆಯನ್ನಿಟ್ಟು ನನಗೆ ನಂಬುಗೆಯನ್ನುಂಟುಮಾಡಿದರೆ ಆಗಬಹುದೆಂದು ಈಗ ಭಗವಂತನ ಹೆಸರ ನೈ : ಮಾಗಿಕೂಗಿ ಹೇಳಿದರೆ ಆಬಳಿಕ ನೀನು ತಪ್ಪುವುದಕ್ಕೂ,