ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 443 - ಅ. xxii. ಕಾಷ್ಟೆರಣುಭಿರಿಶ್ವ ಸಂಧುಕ್ಷಿತ ಇವಾನಲಃ || ಹೃತದೋಷಪ್ರಮಾಣೇನ ಸದಾಹಾರವಿಧಿಃ ಸ್ಮೃತಃ | (ಸು. 588.) ಸ್ನೇಹವನ್ನು ಕುಡಿದವನ, ವಾಂತಿ ಮಾಡಿಸಿಕೊಂಡವನ, ವಿರೇಚನ ಮಾಡಿಸಿಕೊಂಡವನ, ರಕ್ತ ತೆಗಿಸಿಕೊಂಡವನ ಮತ್ತು ನಿರೂಪಣ ಮಾಡಿಸಿಕೊಂಡವನ ಕಾಯಾಗ್ನಿಯು ಮಂದ ವಾಗಿರುತ್ತದೆ. ಅಲ್ಪ ವಾದ ಅಗ್ನಿಯು ದೊಡ್ಡವುಗಳಾದ ಹೆಚ್ಚು ಕಟ್ಟಿಗೆಗಳಿಂದ ಮುಚ್ಚಲ್ಪಟ್ಟರೆ ಹ್ಯಾಗೋ, ಹಾಗೆ ಗುರುವಾದ ಆಹಾರವನ್ನು ಅತಿಯಾಗಿ ಸೇವಿಸುವದರಿಂದ ಕಾಯಾಗ್ನಿಯು ಶಾಂತವಾಗುತ್ತದೆ; ಮತ್ತು ಚೂರುಮಾಡಲ್ಪಟ್ಟ ಅಲ್ಪವಾದ ಕಟ್ಟಿಗೆಗಳನ್ನು ಹಾಕಿ ಊದಿದ ಬೆಂಕಿಯಂತೆ, ಲಘುವಾದ ಮತ್ತು ಅಲ್ಪ ವಾದ ಆಹಾರಗಳನ್ನು ಉಪಯೋಗಿಸುವದರಿಂದ ಕಾಯಾಗ್ನಿಯು ವೃದ್ದಿಯಾಗುತ್ತದೆ. ಆದ್ದರಿಂದ ಆಹಾರವಿಧಿಯು ಯಾವಾಗಲೂ ತೆಗೆದಂಧ ದೋಷಗಳ ಪ್ರಮಾಣಕ್ಕೆ ಅನುಸರಿಸಿರತಕ್ಕದ್ದಾಗಿ ಹೇಳಲ್ಪಟ್ಟಿದೆ. 46. ನಾತ್ಯುಚ್ಛಿತಂ ನಾಷ್ಯತಿನೀಚಪಾದಂ ಸಪಾದಪೀರಂ ಶಯನಂ ಪ್ರಶಸ್ತಂ | ವಸ್ತಿ ಕಾಲದ ವಸ್ತಿ ಕಾಲದ ಕ . ಪ್ರಧಾನಮೃದ್ವಾರಣೋಪಪನ್ನಂ ಪ್ರಾಕ್ ಶೀರ್ಷಕಂ ಶುಕ್ಲ ಪಟೋತ್ತರೀಯಂ || . or ಪ್ರಶಸ್ತ ಶಯನ ಲಕ್ಷಣ (ಚ, 878.) ನಿರೂಹ ತೆಗೆದುಕೊಳ್ಳುವವರಿಗೆ ಅತಿಎತ್ತರವಲ್ಲದ, ಅತಿತಗ್ಗಲ್ಲದ ಮತ್ತು ಪಾದಪೀರ ಗಳುಳ್ಳ ಮಂಚವು ಪ್ರಶಸ್ತ, ಮೇಲೆ ಹಾಸುವ ವಸ್ತ್ರವು ದಪ್ಪವಾಗಿಯೂ ಮೃದುವಾಗಿಯೂ ಇರಬೇಕು; ಹೊದ್ದು ಕೊಳ್ಳುವರೆ ಬಿಳೇ ವಸ್ತ್ರವಿರಬೇಕು; ಮತ್ತು ತಲೆಭಾಗವು ಪೂರ್ವಕ್ಕಿರ ಬೇಕು. ತೆ 47. ನಾನಂ ಪ್ರಣಯೇತೋಹಂ ಸ ಹೈಭಿಷ್ಯಂದಯೇದ್ದು ದಂ | ಹಸಿ ಸ್ನೇಹ ಸಾವಶೇಷಂ ಚ ಕುರ್ವೀತ ವಾಯುಃ ಶೇಷೇ ಹಿ ತಿಷ್ಠತಿ 11 ಅನುವಾಸನೆಗೆ ನ ಚೈವ ಗುದಕ೦ರಾಭ್ಯಾಂ ದದ್ಯಾತೋಹಮನಂತರಂ | ಅಯುಕ್ತ.

  • ಉಭಯಸ್ಮಾತೃಮಂ ಗಚ್ಛನ್ ವಾಯ್ಸಗೀನ್ ದೂಷಯೇತ್ಸಮಂ 11 (ಚ. 884.) ವಸ್ತಿಗೆ ಯಾವ ಸ್ನೇಹವನ್ನಾದರೂ ಹಸಿಯಾಗಿ ಉಪಯೋಗಿಸಬಾರದು. ಅದು ಆಸನ ದಲ್ಲಿ ತಡೆಯನ್ನುಂಟುಮಾಡುವದು ಮತ್ತು ವಾಯುವು ಅಂಧಾ ಸ್ನೇಹದ ಅಂಶವನ್ನು ಒಳಗೆ ಉಳಿಸುವದು. ಹಾಗೆ ಶೇಷ ಉಳಿದಾಗ್ಗೆ, ಗುದದಿಂದಲೂ, ಕ೦ರದಿಂದಲೂ ಪುನಃ ಸ್ನೇಹವನ್ನು ಕೊಡಲೇ ಬಾರದು. ಎರಡು ಕಡೆಗಳಿಂದಲೂ ಸಮನಾಗಿ ಹೋಗಿ ಸೇರುವ ಸ್ನೇಹವು

ವಾಯುಗಳನ್ನೂ ಅಗ್ನಿಗಳನ್ನೂ ಪೂರ್ಣವಾಗಿ ಕೆಡಿಸುವದು. 48. ಷಟ್ಸಪ್ತತಿಃ ಸಮಾಸೇನ ವ್ಯಾಪದಃ ಪರಿಕೀರ್ತಿತಾಃ | ವಸ್ತಿದೋಷಗಳ ಸಂಖ್ಯೆ (ಸು. 563) ವಸ್ತಿ ವಿಧಾನದಲ್ಲಿ ವ್ಯತ್ಯಾಸವಾಗುವದರಿಂದ ಎಪ್ಪತ್ತಾರು ಉಪದ್ರವಗಳು ಸಂಭವಿಸು ಇವೆ. 56*