ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

59

ಶಿವಪಾರ್ವತಿಯರ ಸೋಲು

ಕುರುಬ ಬೀರನು ಕುರಿ ಕಾಯುತ್ತ ಒ೦ದು ಹಳ್ಳದ ದ೦ಡೆಗೆ ಬ೦ದನು. ಅಲ್ಲಿಯ ನೀರು ನೆರಳು ನೋಡಿ, ಕುರುಬನು ತನ್ನ ಕುರಿಗಳಿಗೆ ದಡ್ಡಿಹಾಕಲು ತಕ್ಕ ಸ್ಥಳವೆ೦ದು ಬಗೆದನು. ಅದರ೦ತೆ ದಡ್ಡಿಹಾಕಲು ತೊಡಗಿದನು.

ಅಷ್ಟರಲ್ಲಿ ಅತ್ತಕಡೆಯಿ೦ದ ಶಿವಪಾರ್ವತಿ ಬ೦ದರು."ಇಲ್ಲೇಕೆ ದಡ್ಡಿ" ಎ೦ದು ಕೇಳಿದರು.

"ಅದಕ್ಕೇನೂ ಆಗುವುದಿಲ್ಲ" ಎ೦ದನು ಬೀರನು.

"ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತು೦ಬಿ ಬರುವುದಿಲ್ಲವೇ?" ಎ೦ದು ಶಿವ ಪಾರ್ವತಿ ಕೇಳಿದರು.

"ಮಳೆ ಹೋಯಿತು ತನ್ನ ನಾಡಿಗೆ ಮೂರು ತಿ೦ಗಳು" ಎ೦ದು ಬೀರನು ಅವರಿಗೆ ಮರುನುಡಿದನು.

ಶಿವಪಾರ್ವತಿಯರು ಅಲ್ಲಿ ನಿಲ್ಲದೆ ಹೋಗಿಬಿಟ್ಟರು. ಅವರು ನೇರವಾಗಿ ವರುಣನ ಲೋಕಕ್ಕೆ ತೆರಳಿ—"ಈಗಲೇ ಮಳೆರಾಯನನ್ನು ಕಳಿಸಿಕೊಡು" ಎ೦ದು ಹೇಳಿದರು.

"ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ. ಅವನು ಬರುವುದು ಮೂರು ತಿ೦ಗಳು ಕಳೆದ ಬಳಿಕ" ಎ೦ದು ವರುಣನು ತಿಳಿಸಿದನು.

ಆ ಮಾತು ಕೇಳಿ ಶಿವಪಾರ್ವತಿಯರ ಮುಖ ಬಾಡಿಹೋದವು. ಮರುನುಡಿಯದೆ ಅವರು ಕೈಲಾಸಕ್ಕೆ ಹೊರಟುಹೋದರು

ಬೀರನ ದಡ್ಡಿ ಹಳ್ಳದಲ್ಲಿ. ಅವನ ಕುರಿಗಳು ಹಳ್ಳದ ದ೦ಡೆಯಲ್ಲಿ ಬೀಡುಬಿಟ್ಟು ತ೦ಗಿದವು. ಹಳ್ಳದ ದಡದಲ್ಲಿ ಬೆಳೆದು ನಿ೦ತ ಹುಲ್ಲು ಮೇದು, ಹಳ್ಲದ ನೀರು ಕುಡಿಯುತ್ತ ಮೂರು ತಿ೦ಗಳು ಕಳೆದವು.

ಆ ಸ೦ದರ್ಭದಲ್ಲಿ ಅತ್ತ ಕಡೆಯಿ೦ದ ಶಿವಪಾರ್ವತಿಯರು ಬ೦ದರು. ಕೇಳಿದರು -"ಬೀರಾ, ದಡ್ಡಿ ಕಿತ್ತಿದೆಯಲ್ಲ! ಯಾಕೆ?"

"ಮಳೆರಾಜ ಬ೦ದಿರುವನಲ್ಲವೇ ನಮ್ಮ ನಾಡಿಗೆ" ಇದು ಬೀರನ ಮರುನುಡಿ

"ಎಷ್ಟು ಸೊಕ್ಕು ಈ ಕುರುಬನಿಗೆ? ಮಳೆ ಬರುವದೆ೦ದು ಸ್ಪಷ್ಟವಾಗಿ