ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದುರ್ಗಾವತಿ.

ಭರತಖಂಡದ ಪುರಾಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿಯ ಯುದ್ಧವನ್ನು ಪೂರಯಿಸಿದಳು. ಆಗರ್ಭಶ್ರೀಮಂತೆಯಾದ ಜನಕನಂದನೆಯು ಪತಿವಿಯೋಗಕ್ಕಿಂತಲೂ ಅರಣ್ಯವಾಸನೇ ಮಧುರವೆಂದು ಭಾವಿಸಿ, 14 ವರ್ಷಗಳ ವರೆಗೆ ಗಟ್ಟಬೆಟ್ಟಗಳಲ್ಲಿ ಅಲೆದಳು. ಭಾರತ ಇತಿಹಾಸ ಕಾಲದಲ್ಲಿಯೂ ಸಂಯೋಗೀತಾ, ಪದ್ಮಿನಿ, ಕರ್ಮದೇವಿ ಮೊದಲಾದ ಅಸಂಖ್ಯಾತ ರಜಪುತ್ರ ವೀರ ರಮಣಿಯರು ಧರ್ಮಾ೦ಧರಾದ ಮುಸಲ್ಮಾನರನ್ನು ಯುದ್ಧದಲ್ಲಿ ಪ್ರತಿಭಟಿಸಿ, ತಮ್ಮ ಪತಿಗಳ ಆಪತ್ತು ವಿಪತ್ತುಗಳನ್ನು ಪರಿಹರಿಸುವುದಕ್ಕೆ ರಣರಂಗದಲ್ಲಿ ರಕ್ತವನ್ನು ಬಸಿದರು. ಆದರೂ ಪಾಶ್ಚಾತ್ಯ ನಾಗರಿಕತೆಯನ್ನು ಹೊಂದಿ, ಸರ್ವ ವಿಷಯಗಳಲ್ಲೂ ಪಾಶ್ಚಾತರೇ ನಮಗೆ ಬುದ್ಧಿ ಕಲಿಸುವರೆಂದು ನಂಬುವವರ ಈ ಪುರಾಣಗಳು ಕಲ್ಪಿತಕಥೆಗಳೆ೦ದೂ, ಈ ಪ್ರಾಣಸಿದ್ಧ ಸ್ತ್ರೀಯರು ಕವಿಸೃಷ್ಟಿಗಳೆ೦ದೂ ಅಲ್ಲಗಳೆವರು. ಅಷ್ಟೇಕೆ? ಸ್ಪಷ್ಟಾಕ್ಷಕಗಳಿ೦ದ ಅ೦ಕಿತವಾದ ಜೀಜಾಬಾಯಿ, ಅಹಲ್ಯಾಬಾಯಿ ಮೊದಲಾದ ಭಾರತ ಯುವತಿಯರ ಪ್ರಭಾವವು ಚರಿತ್ರಕಾರನ ಅತಿಶಯೋಕ್ತಿ ಎಂದು ಅವರು ಅನುಮಾನಿಸುವರು. ಜನರ ಕಟ್ಟು ಕಥೆಗಳನ್ನಾಗಲಿ, ಕವಿಯ ಬಣ್ಣ ಮಾತುಗಳನ್ನಾಗಲಿ ನಂಬಬೇಕೆಂದು ನಾವು ಪ್ರತಿಪಾದಿಸುವುದಿಲ್ಲ. ಪುರಾಣೋಕ್ತವಾದ ವಿಷಯಗಳು ಸಟೆಯಾದರೂ ಸತ್ಯವಾದರೂ ದೋಷವಿಲ್ಲ. ಆದರೆ ಪುರಾಣ ಕಥನಗಳು ಸುಳ್ಳೆಂದು ಮೊದಲಿಂದ ಹಿಡಿದು ಹೋಗಿ, ಇದರಿಂದ ಭಾರತ ಇತಿಹಾಸದ ಸ್ಥಿತಿಗತಿಯನ್ನು ಪ್ರಮಾಣಿಸುವುದು ಯೋಗ್ಯವಲ್ಲ. ಪಾತಿವ್ರತ್ಯ, ಧರ್ಮಪರಾಯಣತೆ, ರಣೋತ್ಸಾಹ ಮೊದಲಾದ ಗುಣಗಳು