ಪುಟ:ಕಂಬನಿ-ಗೌರಮ್ಮ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

••ಶ್ರೀಮತಿ ಗೌರಮ್ಮನವರು ಕ್ರಿ. ಶ. ೧೯೧೨ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಹುಟ್ಟಿದರು. ಇವರ ತಂದೆ ಶ್ರೀ ಎನ್. ಎಸ್. ರಾಮಯ್ಯನವರು ಮಡಿಕೇರಿಯಲ್ಲಿ ವಕೀಲರಾಗಿದ್ದರು. ಶ್ರೀಮತಿಯವರು ಅವರ ಕನಿಷ್ಠ ಪುತ್ರಿ. ಕ್ರಿ. ಶ. ೧೯೨೫ರಲ್ಲಿ ಶುಂಠಿಕೊಪ್ಪದ ಶ್ರೀ ಬಿ. ಟಿ. ಗೋಪಾಲಕೃಷ್ಣಯ್ಯನವರೊಡನೆ ವಿವಾಹವಾಯಿತು. ಕ್ರಿ. ಶ. ೧೯೩೧ರಲ್ಲಿ ಇವರಿಗೆ ಗಂಡು ಸಂತಾನವಾಯಿತು, ಅದೇ ಮಗು ವಸಂತಕುಮಾರ (ಬೇಬಿ). ಚಿಕ್ಕಂದಿನಲ್ಲಿ ಮಡಿಕೇರಿ ಕಾನ್ವೆಂಟಿನಲ್ಲಿಯೂ ಮದುವೆಯಾದ ಮೇಲೆ ಮಡಿಕೇರಿ ಹಾಯಸ್ಕೂಲಿನಲ್ಲಿಯೂ V form ನ ವರೆಗೆ ವಿದ್ಯಾಭ್ಯಾಸವಾಗಿತ್ತು. ಕ್ರಿ. ಶ. ೧೯೩೬ರಲ್ಲಿ ಹಿಂದೀ ಅಭ್ಯಾಸಮಾಡಿ 'ವಿಶಾರದ' ಪರೀಕ್ಷೆಯಲ್ಲಿ ಮೊದಲನೆಯ ತರಗತಿಯಲ್ಲಿ ತೇರ್ಗಡೆ ಹೊಂದಿದ್ದರು.

ತಾ. ೧೩-೪-೧೯೩೯ನೆಯ ದಿವಸ ತಮ್ಮ ಮನೆಯ ಬಳಿಯ ಹರದೂರ ಹೊಳೆಯಲ್ಲಿ ಈಸು ಕಲಿಯುತ್ತಿರುವಾಗ ಕೈಸೋತು ಮುಳುಗಿ ಮೃತರಾದರು. ••